ಅಂಕಣ
ಹಗಲು ಇರುಳಿನ ಬಲೆಯೊಳಗೆ ಕಾಣಿಸುವ ದಲಿತ ಕಾವ್ಯ
ಭಾರತದಲ್ಲಿ ವ್ಯಕ್ತಿಗತ ಕಥನವಾಗಿರುವ ಚರಿತ್ರೆ ಸಮಷ್ಟಿ ಸಂಕಥನವಾಗಿರುವ ಇತಿಹಾಸಗಳು ಪ್ರಭುತ್ವದ ಪಡಿಯಚ್ಚುಗಳಾಗಿವೆ. ಆರಂಭದಿಂದಲೂ ಅಗ್ರಹಾರ ಸಂಸ್ಕೃತಿಯ ವಶದಲ್ಲಿರುವ ಅಕ್ಷರಗಳು ಕೆಲವು ಶೂದ್ರ ಸಮುದಾಯಗಳನ್ನು ಚರಿತ್ರೆಯಿಂದ ದೂರವೇ ಉಳಿಸಿದವು. ಇದರಲ್ಲಿ ದಲಿತರದೇ ಸಿಂಹಪಾಲು ಎನ್ನಬಹುದು. ಹೀಗಾಗಿ ಪಾರಂಪರಿಕ ಚರಿತ್ರೆಯಲ್ಲಿ ದಲಿತ ಚರಿತ್ರೆಯು ಮೊದಲಿನಿಂದಲೂ ಮೌನ ಚರಿತ್ರೆ. ಇದು ಮಾತನಾಡಿದ್ದೇ ಅಪರೂಪ. ಹೌದು ಈ ನಾಡಿನ ಮೇಲೆ ನೂರಾರು ಪ್ರಭುತ್ವಗಳಿಗೆ ಹೆಗಲಾದ ದಲಿತರಿಗೆ ತಮ್ಮದೇ ಆದ ಒಂದು ಚರಿತ್ರೆಯು ಇರಲಿಲ್ಲವೆಂದರೆ ಅಚ್ಚರಿಯೂ ಆಗುತ್ತದಲ್ಲವೇ? ದಲಿತರದು ಮೂಲತಃ ಮೌಖಿಕ ಚರಿತ್ರೆ ಮಾತು…