Girl in a jacket

Daily Archives: February 20, 2022

ತುಂಗಾ ತಟ ಕಾಶಿ ಮಾದರಿಯಲ್ಲಿ ಅಭಿವೃದ್ಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹರಿಹರ,ಫೆ,20: ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ದೇವಸ್ಥಾನವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿದ್ದಾರೆ. ಮುಂಚೆ ಹೋದಾಗ ದೇವಸ್ಥಾನ ಎಲ್ಲಿದೆ ಎಂದು ಹುಡುಕಬೇಕಿತ್ತು. ಇಂದು ಎಲ್ಲಾ ಘಾಟ್‍ಗಳನ್ನು ಸ್ವಚ್ಛಗೊಳಿಸಿ, ದೇವಸ್ಥಾನವನ್ನು ಭವ್ಯವಾಗಿ ಕಾಣುವಂತೆ ಮಾಡಿ ಗಂಗಾ ಆರತಿ ಮಾಡುತ್ತಿದ್ದಾರೆ. ಅದೇ ರೀತಿ ದಕ್ಷಿಣದಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ವೈಭವವಾಗಿ ನಡೆಯಬೇಕೆಂದು ನಮ್ಮೆಲ್ಲರ ಬಯಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಶ್ರೀ ವಚನಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.…

ಹರಿಹರದಲ್ಲಿ ತುಂಗಾ ಆರತಿ: ಉತ್ತಮ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿ ಅಭಿವೃದ್ಧಿ;ಸಿಎಂ ಬೊಮ್ಮಾಯಿ

ಹರಿಹರ, ಫೆ,20: ಹರಿಹರ ಕ್ಷೇತ್ರದ ತುಂಗಭದ್ರಾ ನದಿ ತಟದಲ್ಲಿ 108 ಯೋಗ ಮಂಟಪಗಳನ್ನು ನಿರ್ಮಿಸಿ ಉತ್ತರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿಯನ್ನು ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇದು ಉತ್ತಮ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿ ಅಭಿವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಹರಿಹರದ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಶ್ರೀ ವಚನಾನಂದ ಜಗದ್ಗುರುಗಳು ತುಂಗಾರತಿ ಕಾರ್ಯಕ್ರಮ ಏರ್ಪಡಿಸಲು ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡು ಉತ್ತಮ ವಾತಾವರಣ ನಿರ್ಮಿಸಿದ್ದಾರೆ. ಪ್ರತಿನಿತ್ಯ ತುಂಗ ಭದ್ರೆಯ ಪೂಜೆ ನಡೆಯಲು ಅನುಕೂಲ…

ತ್ರಿಪದಿಗಳ ಮೂಲಕ ಜನಸಮೂಹಕ್ಕೆ ಅರಿವು ಮೂಡಿಸಿದ ಸರ್ಜಜ್ಞ: ರಘುಮೂರ್ತಿ

ಚಳ್ಳಕೆರೆ, ಫೆ,20:ಸರ್ವಜ್ಞ ತನ್ನ ತ್ರಿಪದಿ ಎಂಬ ಮೂರು ಸಾಲುಗಳ ಮೂಲಕ ಬದುಕಿನ ಒಳಿತ ಕೆಡುಕುಗಳ ಬಗ್ಗೆ ಮನಮುಟ್ಟುವಂತೆ ಹೇಳಿರುವುದನ್ನು ಮುನ್ನೂರು ಸಾಲುಗಳಲ್ಲಿ ಹೇಳಬಹುದಾದ–ಬರೆಯಬಹುದಾದ ಅರ್ಥವನ್ನು ತುಂಬಿದ್ದಾರೆ ಎಂದು ತಹಶೀಲ್ದರ್ ಎನ್. ರಘುಮೂರ್ತಿ ಹೇಳಿದರು . ನಗರದ ತಾಲ್ಲೂಕು ಕಚೇರಿಯ ಸಭಾಗಂಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ಮತ್ತು ಕುಂಬಾರ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞ ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲುಸುವುದರ ಮೂಲಕ ಕಾರ್ಯಕ್ರಮ ಚಾಲನೆ…

ಮಹಿಳಾ ಸಬಲೀಕರಣ ಮತ್ತು ಹಿಜಾಬ್

ಮಹಿಳಾ ಸಬಲೀಕರಣ ಮತ್ತು ಹಿಜಾಬ್ ಮಾನಸ,ಬೆಂಗಳೂರು ತನ್ನ ವೈವಿಧ್ಯತೆ ಮತ್ತು ಜಾತ್ಯತೀತತೆಗಾಗಿ ಆಚರಿಸಲಾಗುವ ದೇಶದಲ್ಲಿ, ವೈಯಕ್ತಿಕ ಗುರುತನ್ನು ಜಾರಿಗೊಳಿಸುವುದು ಅಸಂಬದ್ಧ ಕಲ್ಪನೆಯಾಗಿದೆ. ವೈವಿಧ್ಯಮಯ ಪದದ ಅತ್ಯಂತ ವ್ಯಾಖ್ಯಾನವು “ವಿಭಿನ್ನ” ಅಥವಾ “ವೈವಿಧ್ಯತೆಯನ್ನು ತೋರಿಸುವುದು”, ಅಂದರೆ ವೈವಿಧ್ಯಮಯವಾದ ಸಂಸ್ಕೃತಿಯು ಅದರ ಸದಸ್ಯರ ನಡುವಿನ ವ್ಯತ್ಯಾಸವನ್ನು ಆಚರಿಸುತ್ತದೆ. ಆದ್ದರಿಂದ, ವೈಯಕ್ತಿಕ ಸಂಸ್ಕೃತಿಯನ್ನು ಜಾರಿಗೊಳಿಸುವುದು ಅಥವಾ ಯಾವುದೇ ನಿರ್ದಿಷ್ಟ ಗುಂಪಿನ ವಿಶಿಷ್ಟ ಅಂಶಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಅಂತಹ ಸಮಾಜದ ವೈವಿಧ್ಯತೆಯ ಫ್ಯಾಬ್ರಿಕ್ ಮೇಲೆ ದಾಳಿ ಎಂದು ಹೇಳುವುದು ಸೂಕ್ತವಾಗಿದೆ. ಭಾರತದ…

‘ತನುಜಾ’ ಚಿತ್ರಕ್ಕೆ ಬಣ್ಣಹಚ್ಚಿದ ಬಿಎಸ್‌ವೈ

ಈ ಹಿಂದೆ ಅವರೇ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತನುಜಾ ಎಂಬ ಹೆಣ್ಣುಮಗಳು ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಪರೀಕ್ಷೆ ಬರೆಯಲು ಸುಮಾರು ೩೫೦ಕಿಮೀ ದೂರ ಪ್ರಯಾಣ ಮಾಡಿ ಬಂದು ಪರೀಕ್ಷೆ ಬರೆದಿದ್ದೆ ರೋಚಕತೆಯಿಂದ ಕೂಡಿದ್ದು, ಎಲ್ಲರ ಕುತೂಹಲ ಕೆರಳಿಸಿತು ಇದನ್ನೇ ಒನ್‌ಲೈನ್ ಸ್ಟೋರಿ ಆಗಿಸಿಕೊಂಡು ಸಾಮಾಜಿಕ ಕಳಕಳಿಯುಳ್ಳ ರಾಜ್ಯಪ್ರಶಸ್ತಿ…

ಲಚ್ಚಕ್ಕನ ನಿಸ್ವಾರ್ಥ ಸೇವಾಮನೋಭಾವದ ಮಾದರಿ ಗುಣಗಳು…

ಲಚ್ಚಕ್ಕನ ನಿಸ್ವಾರ್ಥ ಸೇವಾಮನೋಭಾವದ ಮಾದರಿ ಗುಣಗಳು… ರವಿವಾರದ ದಿನ ಬೆಳಿಗ್ಗೆ ಮನೆಯ ಮಧ್ಯದ ಹಾಲಿನಲ್ಲಿ ಕುಳಿತು, ಅದೇ ತಾನೆ ಏಕಾಂತಪ್ಪ ಮೇಷ್ಟ್ರ ಮಗ ಪೇಪರ್ ಏಜೆಂಟ್ ಉಮ್ಮಣ್ಣನನ್ನು ಕಾಡಿಬೇಡಿ ಎರುವಲು ಆಧಾರದ ಮೇಲೆ ಪಡೆದು ತಂದಿದ್ದ “ಚಂದಮಾಮ” ಮಾಸಿಕಪತ್ರಿಕೆಯನ್ನು ಓದುತ್ತಿದ್ದವನಿಗೆ, ಪಕ್ಕದ ಪಳತದ ರೂಮಿನಿಂದ ತೂರಿಬಂದ ಮಕ್ಕಳ ಕಿರುಚಾಟದಿಂದ, ಮುಂದಿನ ಒಂದು ಗಂಟೆಯೊಳಗಾಗಿ ಚಂದಮಾಮನನ್ನು ಹಿಂತಿರುಗಿಸಬೇಕಾದ ಸಮಯಾಭಾವದ ಅನಿವಾರ್ಯತೆಗೆ ಸಿಲುಕಿ ಏಕಾಗ್ರಚಿತ್ರದಿಂದ ಪತ್ರಿಕೆಯ ಗಂಭೀರ ಅಧ್ಯಯನದಲ್ಲಿ ತೊಡಗಿದ್ದವನಿಗೆ, ಭಂಗ ಉಂಟಾಗಲು, ಮೂಟೆಯಷ್ಟು ಅಸಮಾಧಾನವನ್ನು ಮನಸ್ಸಿನಲ್ಲಿ ಹೊತ್ತುಕೊಂಡೇ, ನನ್ನ…

Girl in a jacket