Girl in a jacket

Daily Archives: February 24, 2022

ಸಾಮಾಜಿಕ ನ್ಯಾಯ ಪರಿಕಲ್ಪನೆ ಆರಂಭವಾಗಿದ್ದು ಬಸವಣ್ಣನ ಕಾಲದಿಂದ; ರಘುಮೂರ್ತಿ

ಚಳ್ಳಕೆರೆ, ಫೆ,24:ಸಾಮಾಜಿಕ ನ್ಯಾಯದ ಪರಿಕಲ್ಪನೆ 12ನೇ ಶತಮಾನದ ಬಸವಣ್ಣನವರಿಂದ ಲು ಪ್ರಾರಂಭವಾಗಿದೆ ಎಂದು ತಹಶಿಲ್ದಾರ ರಘುಮೂರ್ತಿ ಹೇಳಿದರು. ಚಳ್ಳಕೆರೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಸಾಮಾಜಿಕ ಪರಿಕಲ್ಪನೆಯ ದಿನಾಚರಣೆಯ ಪ್ರಾಸ್ತಾವಿಕವಾಗಿ ಮಾತನಾಡಿ ಬಸವಣ್ಣನವರಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ವರೆಗೂ ಸಮಾಜದಲ್ಲಿ ಇವತ್ತು ಸಮಾನತೆಯ ಬಗ್ಗೆ ಜಾಗೃತಿ ಉಂಟು ಮಾಡಿದರು ಸಮಾಜದಲ್ಲಿ ಶೇಕಡ ನೂರರಷ್ಟು ಪರಿವರ್ತನೆ ಕಾಣದಿರುವುದು ತುಂಬಾ ವಿಷಾದದ ಸಂಗತಿ ಎಂದರು. ಕಾರ್ಲ್ ಮಾರ್ಕ್ಸ್ ಮಾರ್ಟಿನ್ ಲೂಥರ್ ಕಿಂಗ್ ದಯಾನಂದ ಸರಸ್ವತಿ ಸ್ವಾಮಿ ವಿವೇಕಾನಂದ ಜ್ಯೋತಿ…

ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ

ಮಾಸ್ಕೋ, ಫೆ, 24: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದ್ದಾರೆ. ಉಕ್ರೇನ್‌ನಲ್ಲಿ ಐದು ಬಾರಿ ಸ್ಫೋಟಕ ಶಬ್ದ ಕೇಳಿಬಂದಿದೆ. ರಷ್ಯಾ ಜೊತೆಗಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರ ಪೂರ್ವ ಉಕ್ರೇನ್ ನಲ್ಲಿ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಮುಚ್ಚಿದೆ. ರಷ್ಯಾದ ವಾಯುಯಾನ ಅಧಿಕಾರಿಗಳು ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು “ಅಪಾಯಕಾರಿ ಪ್ರದೇಶಗಳು” ಎಂದು ಘೋಷಿಸಿದ್ದಾರೆ. ಪುಟಿನ್ ಭೇಟಿಯಾದ ಖಾನ್: ಪಾಕಿಸ್ತಾನಕ್ಕೆ ಅಮೆರಿಕಾ ಎಚ್ಚರಿಕೆ…

ನಿರ್ದೇಶನ, ಸಾಹಿತ್ಯರಚನೆ, ಅಭಿನಯ ಕ್ಷೇತ್ರಗಳ ಸಾಧಕಜಿ.ವಿ.ಅಯ್ಯರ್

ನಿರ್ದೇಶನ, ಸಾಹಿತ್ಯರಚನೆ, ಅಭಿನಯ ಕ್ಷೇತ್ರಗಳ ಸಾಧಕಜಿ.ವಿ.ಅಯ್ಯರ್ ವಿಶ್ವದ ಪ್ರಥಮ ಸಂಸ್ಕೃತಚಿತ್ರ ರೂಪಿಸಿದ ಗಣಪತಿಅಯ್ಯರ್ ವೆಂಕರಮಣಅಯ್ಯರ್ ೧೯೧೭ರ ಸೆಪ್ಟೆಂಬರ್ ೩ರಂದು ಜನಿಸಿದರು.ಓದಿಗೆ ವಿರಾಮ ಹಾಕಿ ಹತ್ತನೆ ವಯಸ್ಸಿನಲ್ಲಿ ಮನೆ ಬಿಟ್ಟುಗುಬ್ಬಿ ಕಂಪನಿಗೆ ಬಂದರೆಅಲ್ಲಿದೊರೆತದ್ದು ಪರಿಚಾರಕನ ಕೆಲಸ.ಮೂರು ವರ್ಷ ಈ ಕಾಯಕ.ಬಿಡುವಿನ ವೇಳೆಯಲ್ಲಿ ಪರದೆ ಬರೆಯುವಕಲಾವಿದನ ಬಳಿ ನಿಂತು ಕುಳಿತು ನೋಡಿಕುಂಚಕಲೆಯನ್ನುಕರಗತ ಮಾಡಿಕೊಂಡರು.ಪೋಸ್ಟರ್ ಬರೆಯುವ ಉಪ ವೃತ್ತಿ ಕೊಂಚ ದಿವಸ. ಚಲನಚಿತ್ರದಲ್ಲಿ ಅವಕಾಶ ಅರಸಿ ಪುಣೆಗೆ ಬಂದರೆಅಲ್ಲಿದೊರೆತದ್ದು ಹೋಟೆಲ್ ಮಾಣಿ ಕೆಲಸ. ೧೯೩೨ರಲ್ಲಿ ನಂಜನಗೂಡಿಗೆ ಹಿಂದಿರುಗಿದರು. ಯಂತ್ರಕಟ್ಟುವತಂತ್ರ ವಿದ್ಯೆ, ಬಡಗಿ…

ಕುತೂಹಲದ ಕದನ ಕಾರಣ

ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತಿದೆ ರಾಜ್ಯದ ಮುಂದಿನ ಸಿಎಂ ಯಾರೆಂಬ ಚರ್ಚೆಯ ನಿರೀಕ್ಷಿತ ಫಲಿತ. ಡಿಕೆ ಶಿವಕುಮಾರ್ ಶತಾಯಗತಾಯ ಸಿಎಂ ಆಗುವ ಓಟ ಶುರುಮಾಡಿದ್ದಾರೆ. ಅವರನ್ನು ತಡೆದು ತಾವು ಮತ್ತೆ ಪೀಠಾಧಿಕಾರಿಯಾಗುವ ಛಲದಲ್ಲಿ ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ. ಇದೀಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಹೆಸರೂ ಓಡುತ್ತಿದೆ. ದಿಲ್ಲಿ ಹೈಕಮಾಂಡ್‌ನ ಮನವೊಲಿಕೆ ಎಂಬ ಚಾಲಾಕಿ ರಾಜಕೀಯದಲ್ಲಿ ಹರಿಪ್ರಸಾದ್ ಈ ಇಬ್ಬರಿಗಿಂತ ಮುಂದಿರುವುದು ಭವಿಷ್ಯದ ರಾಜಕೀಯವನ್ನು ಉಲ್ಟಾಪಲ್ಟಾ ಮಾಡಬಹುದೇ…? ಕುತೂಹಲದ ಕದನ ಕಾರಣ…

ಹಂಪೆಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮತ್ತು ಸಂಗೀತ ಕಂಬಗಳೂ…

ಹಂಪೆಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮತ್ತು ಸಂಗೀತ ಕಂಬಗಳೂ… ಹಂಪೆಯ ಅತ್ಯಂತ ಕಲಾತ್ಮಕ ಮತ್ತು ವೈಭವಯುತ ದೇಗುಲವೆಂದರೆ ಅದು ವಿಠಲ ದೇವಾಲಯವೇ ಆಗಿದೆ. ವಿಜಯನಗರ ಕಾಲದ ಕಲೆ, ವಾಸ್ತುಶಿಲ್ಪ, ಮೂರ್ತಿಶಿಲ್ಪವಲ್ಲದೆ ಸಂಗೀತ, ನೃತ್ಯಗಳಿಗೆ ಕೈಗನ್ನಡಿಯಾಗಿ ನಿಂತಿರುವ ದೇವಾಲಯವಿದು. ಹಂಪೆ ಎಂದಾಕ್ಷಣ ನೋಡಲೇ ಬೇಕಾದದ್ದು ಕಲ್ಲಿನ ರಥ. ಜಗತ್ತಿನ ಗಮನ ಸೆಳೆದು ವಿಶ್ವಪ್ರಸಿದ್ಧಿ ಪಡೆದ ವಾಸ್ತುವಿದು. ಇದು ವಿಜಯನಗರ ಅಥವಾ ಹಂಪೆಯ ಐಕಾನ್ ಎನ್ನುವಂತೆ ಚಿರಪರಿಚಿತವಾಗಿರುವುದು ಗಮನಾರ್ಹ. ಹಾಗೆಯೇ ಹಂಪೆಯ ಇತರ ದೇವಾಲಯಗಳಿಗಿಂತ ಅತ್ಯಂತ ಸುಂದರವಾಗಿ ಮತ್ತು…

ಮೈಲಾರವೂ, ಪರಂಪರೆ ಮತ್ತು ಅಲ್ಲಿನ ಕಾರ್ಣೀಕವೂ

ಮೈಲಾರವೂ, ಪರಂಪರೆ ಮತ್ತು ಅಲ್ಲಿನ ಕಾರ್ಣೀಕವೂ ಕರ್ನಾಟಕದ ಪ್ರಸಿದ್ಧ ಜನಪದ ದೈವವಿರುವ ನೆಲೆಗಳಲ್ಲಿ ಮೈಲಾರ ಪ್ರಮುಖವಾದದ್ದು. ಇದು ಮೈಲಾರ ದೇವರು ಆದಿಮ ದೈವವೂ ಅಗಿದೆ. ಪಶುಪಾಲಕರ ಅದಿದೈವವಾದ ಇದು ವಿಜಯನಗರ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಮೈಲಾರದಲ್ಲಿದೆ. ಇದನ್ನು ಹಿರೇಮೈಲಾರವೆಂತಲೂ ಕರೆಯುತ್ತಿದ್ದು, ಇದೇ ಮೈಲಾರದೇವರ ಮೂಲನೆಲೆಯೆಂದೂ ಹೇಳುತ್ತಾರೆ. ಮೈಲಾರವೆಂಬುದು ಮೈಲಾರಿ, ಮೈಲಾಳಿ ಮಲ್ಲಯ್ಯ, ಮಲ್ಲೇಶ್ವರ, ಮಲುದೇವ, ಮಲ್ಲಾರ, ಮಲ್ಲಾರಿ, ಮಲ್ಲಿಕಾರ್ಜುನ ಮೊದಲಾದ ಹೆಸರುಗಳಿಂದ ನಾಡಿನಾದ್ಯಂತ ಆರಾಧನೆಗೊಳ್ಳುತ್ತದೆ. ಇದು ಕರ್ನಾಟಕದಲ್ಲಿ ಮೈಲಾರವೆಂಬ ಹೆಸರಿನ ಅನೇಕ ಕ್ಷೇತ್ರಗಳನ್ನು…

ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್

ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್ ಉಡುಪಿಯ ಬಳಿ ಫಣಿಯಾಡು ಎಂಬಲ್ಲಿ ೧೯೨೭ರ ಜನವರಿ ೩ರಂದು ಜನಿಸಿದರು. ತಂದೆ ಶ್ರೀನಿವಾಸ ಫಣಿಯಾಡಿ, ತಾಯಿ ಭಾರತಿ, ತಂದೆ ಸ್ವಾತಂತ್ರ ಹೋರಾಟಗಾರರು ಹಾಗೂ ನಾಟಕ ರಚನೆಕಾರರು. ಬಾಲ್ಯವನ್ನು ತಮ್ಮ ಊರಿನಲ್ಲಿಯೇ ಕಳೆದ ವಾದಿರಾಜ್ ಮದರಾಸಿಗೆ ತೆರಳಿದರು. ಅಲ್ಲಿ ಕೊಂಚ ಕಾಲ ಇದ್ದು ಪುನಃ ತನ್ನೂರಿಗ ಬಂದು ತಮ್ಮ ತಂದೆ ರಚಿಸಿದ್ದ ಕೆಲವು ನಾಟಕಗಳಲ್ಲಿ ಅಭಿನಯಿಸುವ (ಮೂಲಕ ಕಲಾರಂಗಕ್ಕೆ ಕಾಲಿರಿಸಿದರು.೧೯೫೬ರಲ್ಲಿ ತೆರೆಗೆ ಬಂದ ’ಕೋಕಿಲವಾಣಿ’ ಚಿತ್ರದ…

ಗುಹಾಲಯಗಳ ಆಗರ ಚಿತ್ರದುರ್ಗ ಕೋಟೆ ಪರಿಸರ

ಗುಹಾಲಯಗಳ ಆಗರ ಚಿತ್ರದುರ್ಗ ಕೋಟೆ ಪರಿಸರ ಚಿತ್ರದುರ್ಗವು ಪ್ರಸಿದ್ಧಿಯಾಗಿರುವುದು ಅಲ್ಲಿನ ಕೋಟೆಯಿಂದ. “ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಎಂಬ ಸಿನಿಮಾ ಹಾಡಿನಿಂದ ಹೆಚ್ಚು ಜನಮನ ಗಳಿಸಿದ ರಕ್ಷಣಾ ವಾಸ್ತುಶಿಲ್ಪವಿದು. ಈ ಕೋಟೆಯನ್ನು ನಿರ್ಮಿಸಿರುವುದು ಚಿನ್ಮೂಲಾದ್ರಿ ಬೆಟ್ಟಶ್ರೇಣಿಯಲ್ಲಿ. ಈ ಶ್ರೇಣಿಗಳೋ ಕಣಶಿಲೆಯ ಬೃಹತ್ ಬಂಡೆಗಲ್ಲುಗಳನ್ನು ಒಳಗೊಂಡ ಶಿಲಾಸ್ತೋಮಗಳೇ ಆಗಿವೆ. ಇಲ್ಲಿನ ಬಂಡೆಗಲ್ಲುಗಳಲ್ಲಿರುವ ಅನೇಕ ಸ್ವಾಭಾವಿಕ ಗುಹೆ-ಗಹ್ವರಗಳು ಪಾಗಿತಿಹಾಸ ಕಾಲದಿಂದಲೂ ಮಾನವನ ವಸತಿ ತಾಣಗಳಾಗಿ ಬಳಕೆಯಾಗಿವೆ. ಇಲ್ಲಿನ ಗುಹೆಗಳು ಹತ್ತಾರು ಜನ ವಾಸಮಾಡಬಹುದಾದಷ್ಟು ವಿಸ್ತಾರವಾದ ಆಶ್ರಯತಾಣಗಳು.…

Girl in a jacket