Girl in a jacket

Daily Archives: December 17, 2021

ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ನಿಧನ

ಬೆಂಗಳೂರು, ಡಿ,16: ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ (98) ಇಂದು (ಶುಕ್ರವಾರ)ಸಂಜೆ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಡಿ.10ರಂದು ಕೋಲಾರದ  ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ಇದೇ ಫೆಬ್ರವರಿಯಲ್ಲಿ ಜಾಲಪ್ಪ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದು, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಆದ್ದರಿಂದ ಸತತ ಎರಡು ಗಂಟೆಗಳ ಕಾಲ ಶಸ್ತ್ರ ಚಿಕತ್ಸೆ ಮಾಡಲಾಗಿತ್ತು. ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿದ್ದ ಜಾಲಪ್ಪ 4 ಬಾರಿ…

ಬಿ.ಸಿ.ರಾಮಚಂದ್ರಶರ್ಮರ ಸಾಹಿತ್ಯ ಮಗ್ಗಲುಗಳ ಪರಿಚಯ

– ತುರುವನೂರು ಮಂಜುನಾಥ ಬಿ.ಸಿ.ರಾಮಚಂದ್ರ ಶರ್ಮರ ಸಾಹಿತ್ಯ ಮಗ್ಗಲುಗಳ ಪರಿಚಯ ಆಧುನಿಕಕನ್ನಡ ಕಾವ್ಯ ಚರಿತ್ರೆಯಲ್ಲಿ ಪ್ರಮುಖ ಹೆಸರು ಡಾ.ಬಿ.ಸಿ.ರಾಮಚಂದ್ರ ಶರ್ಮ ಅವರು ತಮ್ಮ ನವ್ಯಕಾಲಘಟ್ಟದಲ್ಲಿ ಸಾಹಿತ್ಯ ಮತ್ತು ಹೊಸ ಚಿಂತನೆಗಳಿಗೆ ಹೇಗೆ ಹೊರೆಹಚ್ಚಿದರು ಎನ್ನುವುದು ಬಹುತೇಕ ಈಗಿನ ಯುವ ಸಾಹಿತಿಗಳಿಗೆ ಪರಿಚಯವಿಲ್ಲ. ಅವರ ಕುರಿತು ಹಲವಾರು ಕವಿಗಳು ಸಾಹಿತಿಗಳು ಬಿಡಿ ಬರಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ ಅದರಲ್ಲಿ ನನಗೆ ಒಂದಿಷ್ಟು ಮುಖ್ಯವಾಗಿದ್ದು ಮತ್ತು ಅವರ ಸಾಹಿತ್ಯ ಕುರಿತು ಸಮಗ್ರವಲ್ಲದಿದ್ದರು ಪರಿಚಯ ದೃಷ್ಟಿಯಲ್ಲಿ ಡಾ.ನರಹರಿ ಬಾಲಸುಬ್ರಮಣ್ಯ ಅವರು ಬರೆದಿರುವುದು…

ಆಧುನಿಕ ಭಾರತದ ಪಿತಾಮಹ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ : ಸಿಎಂ

ಬೆಳಗಾವಿ ಡಿ,17: ಡಾ: ಬಿ.ಆರ್. ಅಂಬೇಡ್ಕರ್ ಆಧುನಿಕ ಭಾರತದ ಪಿತಾಮಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿಯ ಸುವರ್ಣ ಸೌಧ ಮುಂಭಾಗದಲ್ಲಿರುವ ಬಸ್ತವಾಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಅವರಿಂದಾಗಿ ನಾವು ಇಂದು ವಿಧಾನ ಸಭೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನ ರಚನೆ, ಗಣತಂತ್ರ ತರದೇಹೋಗಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ, ಕಾನೂನು ಸುವ್ಯವಸ್ಥೆ, ಶಾಂತಿ ಸಮೃದ್ಧಿ ಇರುತ್ತಿರಲಿಲ್ಲ ಎಂದರು. ಅವರು ರಚಿಸಿರುವ ಸಂವಿಧಾನ ಬಹಳ ಉತ್ಕೃಷ್ಟವಾಗಿರುವಂಥದ್ದು.…

23ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ: ಡಾ. ಅಶ್ವತ್ಥನಾರಾಯಣ

ಬೆಳಗಾವಿ,ಡಿ,16: ಇಲ್ಲಿನ ಉದ್ಯಮ್ ಬಾಗ್ ನಲ್ಲಿ ಇರುವ ಗೋಗಟೆ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರಂದು ಉದ್ಯೋಗ ಮೇಳ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಜಿಲ್ಲೆಯ ಸಚಿವರು ಮತ್ತು ಜನಪ್ರತಿನಿಧಿಗಳ ಜತೆ ಶುಕ್ರವಾರ ಇಲ್ಲಿನ ಸುವರ್ಣ ಸೌಧದಲ್ಲಿ ಸಭೆ ನಡೆಸಿದ ಅವರು, ಈ ವಿಚಾರ ತಿಳಿಸಿದರು. ಓಲಾ, ಎಚ್ಪಿ ಸೇರಿದಂತೆ 34 ಕಂಪನಿಗಳು…

ಭೂ ಮಾಫಿಯಾಕ್ಕೆ ನಲುಗಿದ ಪಶ್ಚಿಮಘಟ್ಟ

Writing;ಪರಶಿವ ಧನಗೂರು ಭೂ ಮಾಫಿಯಾಕ್ಕೆ ನಲುಗಿದೆ ಪಶ್ಚಿಮ ಘಟ್ಟ ಭೂಮಿಮೇಲಿನ ಮನುಷ್ಯರ ನೆಮ್ಮದಿಯ ಬದುಕಿಗೇ ನೇರವಾಗಿ ಕಾರಣವಾಗಿರುವ ಕೆಲವು ಭೂ ಭಾಗಗಳಲ್ಲಿ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಗಳು ಕೂಡ ಪ್ರಮುಖವಾಗಿವೆ. ಜೀವವೈವಿಧ್ಯತೆ ಯಿಂದ ತುಂಬಿ ಕಂಗೊಳಿಸುತ್ತಾ, ಲಕ್ಷಾಂತರ ಸೂಕ್ಷ್ಮಾಣು ಜೀವಿಗಳಿಗೆ, ಸಾವಿರಾರು ಪ್ರಾಣಿ ಪಕ್ಷಿ ಪ್ರಭೇದಗಳಿಗೆ, ಆಸರೆಯಾಗಿ ಪರಿಸರ ಸಮತೋಲನವನ್ನು ವಾತಾವರಣದಲ್ಲಿ ಸರಿದೂಗಿಸುತ್ತಾ, ಮಳೆಮಾರುತಗಳನ್ನು ಸೆಳೆಯುತ್ತಾ ಆಹಾರ ಸರಪಳಿಯ ಕೊಂಡಿಯನ್ನು ಸುಸ್ಥಿತಿಯಲ್ಲಿಟ್ಟು, ರೈತರ ಜೀವನಾಡಿಯಾಗಿ ಇಂದು ಕರ್ನಾಟಕದ ವಿಶಾಲ ಮಲೆನಾಡು, ಪಶ್ಚಿಮ ಘಟ್ಟ…

ಅಶೋಕನನ್ನು ನೆಲೆಗೊಳಿಸಿದ ಸ್ಥಳ ಬ್ರಹ್ಮಗಿರಿ

ಅಶೋಕನನ್ನು ನೆಲೆಗೊಳಿಸಿದ ಸ್ಥಳ ಬ್ರಹ್ಮಗಿರಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿರುವ ಬ್ರಹ್ಮಗಿರಿಯು ಕರ್ನಾಟಕದ ಪ್ರಸಿದ್ಧ ಪ್ರಾಗೈತಿಹಾಸಿಕ ಮತ್ತು ಚಾರಿತ್ರಿಕ ಸ್ಥಳ. ಮೊಳಕಾಲ್ಮೂರು ತಾಲೂಕು ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಗೆ ಶಿಖರದಂತೆ ಕಂಡುಬಂದರೆ ಬ್ರಹ್ಮಗಿರಿಯು ಚಿತ್ರದುರ್ಗ ಜಿಲ್ಲೆಗಲ್ಲದೆ ಕರ್ನಾಟಕದ ಚರಿತ್ರೆಗೆ ಕಳಸಪ್ರಾಯವಾಗಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಇಲ್ಲಿ ನಡೆದ ಉತ್ಖನನವು ಕರ್ನಾಟಕದ ಪ್ರಾಚೀನ ಚರಿತ್ರೆಯನ್ನು ಪ್ರಪ್ರಥಮವಾಗಿ ವೈeನಿಕ ದೃಷ್ಟಿಕೋನದಿಂದ ರಚಿಸಲು ಅನೇಕ ಸಾಧ್ಯತೆಗಳನ್ನು ಸೃಷ್ಟಿಸಿತೆಂದೇ ಹೇಳಬಹುದು. ಭಾರತ ಪ್ರಸಿದ್ಧ ಶಾಂತಿಪ್ರಿಯ ಅರಸ ಅಶೋಕನ ಕಾಲದ ಶಾಸನದಲ್ಲಿ ಉಲ್ಲೇಖಿಸುವಂತೆ ಇಸಿಲಾವೆಂದೇ ಖ್ಯಾತಿಹೊಂದಿದ ಬ್ರಹ್ಮಗಿರಿ ಬೆಟ್ಟಪರಿಸರದಲ್ಲಿ…

ಹಲವು ಹೂಗಳ ಮಧುರ ಜೇನು ಡಿ.ವಿ.ಜಿ…

ಹಲವು ಹೂಗಳ ಮಧುರ ಜೇನು ಡಿ.ವಿ.ಜಿ… ಡಿವಿಜಿಯವರದು ಸಾಹಿತ್ಯ,ಸಂಗೀತ,ಸಂಸ್ಕೃತಿ,ಸಮಾಜಸೇವೆ ಹೀಗೆ ಹಲವು ರೂಪಗಳಲ್ಲಿ ಅರಳಿದ ಮೇರು ಪ್ರತಿಭೆ. ಬರೆದಂತೆಯೇ ಬದುಕಿದ ಮಹನೀಯರ ಕಾಲವದು.ಆ ಜೀವನ ಮೌಲ್ಯಗಳು ಇಂದಿನ ತಲೆಮಾರಿಗೆ ಹೇಗೆ ಅಗತ್ಯ ಎಂಬುದನ್ನ ಅವರ ಓದಿನ ಮೂಲಕವೂ ಮನಗಾಣಬಹುದಾಗಿದೆ. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ. ಕಗ್ಗದ ಈ ಸಾಲುಗಳು ಆಕಾಲದ ಸಾಮಾಜಿಕ ಮೌಲ್ಯಗಳನ್ನ ಹೇಳುವಂತೆಯೇ ಆ ಕಾಲದ ಜನರ ಜೀವನ ಕ್ರಮವನ್ನೂ…

ಗೌಡ್ರ ಕುಡಿ ವಿಧಾನ ಪರಿಷತ್ ಎಂಟ್ರಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಕುಡಿ, ಎಚ್.ಡಿ. ರೇವಣ್ಣ ಪುತ್ರ ಸೂರಜ್ ರೇವಣ್ಣ ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಗೌಡರ ಮನೆ ಮಗನೊಬ್ಬ ಎಂಎಲ್‌ಸಿ ಆಗುತ್ತಿರುವುದು ಇದೇ ಮೊದಲು. ದೇವೇಗೌಡರು ರಾಜ್ಯಸಭೆ ಸದಸ್ಯರು. ಅವರ ಇಬ್ಬರು ಮಕ್ಕಳಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಮತ್ತು ಸೊಸೆ ಅನಿತಾ ಕುಮಾರಸ್ವಾಮಿ ವಿಧಾನ ಸಭೆ ಸದಸ್ಯರು. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯತ್ ಸದಸ್ಯರು. ರೇವಣ್ಣ ಮತ್ತು ಭವಾನಿ ಅವರ ಮೊದಲ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ…

ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ

ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯು ೨೦೨೪ರ ಲೋಕಸಭಾ ಚುನಾವಣೆಗೆ ಗೆಲುವಿನ ಮೆಟ್ಟಿಲು. ನರೇಂದ್ರ ಮೋದಿ- ಅಮಿತ್ ಶಾ ಪಾಲಿಗೆ ಸೆಮಿಫೈನಲ್. ಹಾಲಿ ಸೆಮಿಫೈನಲ್ ನಲ್ಲಿ ತೇರ್ಗಡೆಯಾದರೆ ೨೦೨೪ರ ಫೈನಲ್ ಸಲೀಸು. ದೇಶದಲ್ಲೇ ಅತಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು (೮೦) ಹೊಂದಿರುವ ಭಾರೀ ರಾಜ್ಯ ಉತ್ತರಪ್ರದೇಶ. ನೋಟು ರದ್ದು, ಕೋವಿಡ್ ಹೊಡೆತಗಳಿಗೆ ತತ್ತರಿಸಿದ ಜನಸಾಮಾನ್ಯರನ್ನು ಇದೀಗ ನಿರುದ್ಯೋಗ, ಬೆಲೆ ಏರಿಕೆ ಜೀವಂತ ಬೇಯಿಸುತ್ತಿವೆ. ಅವರ ಬದುಕುಗಳನ್ನು ಹಸನು ಮಾಡಲು ವಿಫಲವಾಗಿರುವ ಮೋದಿ-ಯೋಗಿ ಸರ್ಕಾರಗಳ…

ಮತಾಂತರ ನಿಷೇಧ ಎಂಬ ವಿಭಜನಕಾರಿ ರಾಜಕೀಯ

-ಸನತ್ ಕುಮಾರ ಬೆಳಗಲಿ ಮತಾಂತರ ನಿಷೇಧ ಎಂಬ ವಿಭಜನಕಾರಿ ರಾಜಕೀಯ ಕೇಂದ್ರದಲ್ಲಿ ಕಳೆದ ಏಳು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ವೈಫಲ್ಯ ಮುಚ್ಚಿ ಕೊಳ್ಳಲು ಭಾರತೀಯರನ್ನು ಕೋಮು ಆಧಾರದಲ್ಲಿ ವಿಭಜಿಸುವದು ಅನಿವಾರ್ಯವಾಗಿದೆ.೨೦೨೩ ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಅದು ಮಸಲತ್ತು ನಡೆಸಿದೆ. ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಗೂ ತನ್ನ ಹಗರಣಗಳನ್ನು ಮುಚ್ಚಿ ಕೊಳ್ಳಲು ಜನರನ್ನು ಜಾತಿ ,ಮತದ ಹೆಸರಿನಲ್ಲಿ ವಿಭಜಿಸಬೇಕಾಗಿದೆ.ಅದಕ್ಕಾಗಿ ಮತಾಂತರ…

ಪಂತುಲು ನಿರ್ಮಿಸಿದ ಸುಂದರ ಐತಿಹಾಸಿಕ ಚಿತ್ರ ಕಿತ್ತೂರು ಚೆನ್ನಮ್ಮ

ಪಂತುಲು ನಿರ್ಮಿಸಿದ ಸುಂದರ ಐತಿಹಾಸಿಕ ಚಿತ್ರ ಕಿತ್ತೂರು ಚೆನ್ನಮ್ಮ ‘ಕಿತ್ತೂರು ಚೆನ್ನಮ್ಮ‘ ಬಿ.ಆರ್.ಪಂತುಲು ತಮ್ಮ ‘ಪದ್ಮಿನಿ ಪಿಕ್ಚರ್ಸ್‘ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸಿದ ಕಪ್ಪು ಬಿಳುಪು ಐತಿಹಾಸಿಕ ಚಿತ್ರ. ೧೯೬೧ರಲ್ಲಿ ತೆರೆಗೆ ಬಂದಿತು. ರಾಜಕುಮಾರ್ ಮೊದಲ ಬಾರಿಗೆ ಪಂತುಲು ಚಿತ್ರದಲ್ಲಿ ಅಭಿನಯಿಸಿದರು. ‘ಕಿತ್ತೂರು ಚೆನ್ನಮ್ಮ‘ನ ಪಾತ್ರದಲ್ಲಿ ಬಿ.ಸರೋಜಾದೇವಿ ಅಭಿನಯ ನೀಡಿದ್ದರು. ಇನ್ನೂ ಹರೆಯದ ವಯಸ್ಸಿನಲ್ಲಿದ್ದರೂ ಸರೋಜಾದೇವಿಯವರು ಪ್ರೌಢ ವಯಸ್ಸಿನ, ಗಂಭೀರ ಗುಣಗಳನ್ನು ಹೊಂದಿದ್ದ ಚೆನ್ನಮ್ಮನ ಪಾತ್ರದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸಿದ್ದರು. ರಾಜಕುಮಾರ್ ಕಿತ್ತೂರಿನ ರಾಜ ಮಲ್ಲಸರ್ಜನಾಗಿ ಅಭಿನಯಿಸಿದ್ದು, ರುದ್ರಾಂಬೆಯಾಗಿ…

Girl in a jacket