ಅಂಕಣ
ಮನುಷ್ಯ ಮಾಡಲೇ ಬೇಕಾದ ಅಪರಾಧ ಪ್ರೇಮ; ಬೋದಿಲೇರ್
“ ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು ಅದೊಂದೇ.. ಒಂದೇ ಪರಿಹಾರ ಸಮಸ್ಯೆಗೆ ಏನನ್ನು ಕುಡಿಯುವುದು? ವೈನ್,ಕಾವ್ಯ,ಋಜುತ್ವ.. ಯಾವುದನ್ನಾದರೂ ಕುಡಿಯುತ್ತಿರಬೇಕು…” ಲಂಕೇಶ್ ಎಂಬ ವಿಸ್ಮಯದ ಬೆರಳಿಡಿದು ಕನ್ನಡಿಗರ ಮನದ ಅಂಗಳಕ್ಕೆ ಮೊದಲು ಇಳಿದ ಲೇಖಕ ಬೋದಿಲೇರ್. ಇಂಗ್ಲೀಷ್ ಸಾಹಿತ್ಯದಲ್ಲಿ ವಿಕ್ಷಿಪ್ತ ಬರಹಗಾರರ ಒಂದು ಪರಂಪರೆಯೇ ಇದೆ. ಅಂತಹ ಗಂಡು ಹೆಣ್ಣೆನ್ನದ ಕಪ್ಪು ಮುಖದ ಅನೇಕ ಸಾಹಿತಿಗಳನ್ನು ಯೋಗಪ್ಪನವರ್ ಅವರು ರೂಪಕ ಎಂಬ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಈ ಸಾಲಿನಲ್ಲಿ ಜಡಗೊಂಡ ಓದುಗನನ್ನು ಬೆಚ್ಚಿಬೀಳಿಸಲೆಂದೇ ಬರೆದ ಲೇಖಕ ಬೋದಿಲೇರ್. “ ಮನುಷ್ಯ…