Browsing: ಅಂಕಣ

ಅಂಕಣ

ಸಂಭೋಳಿ-ಜನ ಕನ್ನಡಿಯ ಲೋಕ ಕಥನ

ಸಂಭೋಳಿ-ಜನ ಕನ್ನಡಿಯ ಲೋಕ ಕಥನ  ಆತ್ಮ ಕಥನಗಳೆಂದರೆ ಕಳೆದ ನೆನಪುಗಳ ಕಟ್ಟಿಟ್ಟ ಬುತ್ತಿ. ತನ್ನ ತನ್ನ ಸಮುದಾಯದ ಬದುಕಿನ ನೆನಪುಗಳ ಬಳುವಳಿಯನ್ನು ಪಡೆದು ಮುನ್ನೆಡೆದವರ ಸಿಂಹಾವಲೋಕನಗಳು. ಕನ್ನಡ ದಲಿತ ಕಥನಗಳ ಬದುಕ ಬಳುವಳಿಯಾದರೂ ಏನು? ಎಂಬ ಪ್ರಶ್ನೆ ಕೇಳಿಕೊಂಡರೆ ಅವು ನಗೆಯ ಲೇಪನ ಹೊದ್ದ ನೋವು ವಸರುವ ಚಿತ್ರಗಳು.ದಲಿತ ಕಥನಗಳು ಕಾಂಕ್ರೇಟ್‌ ಕಾಡು ಕಾಣದ ಹಳ್ಳಿಗಳ ಒಡಲಾಳದ ಕರುಳ ಸದ್ದುಗಳು.    ನೆನಪು ಬಿಚ್ಚಿಟ್ಟ ಆ ಬಟ್ಟೆಗಳಲ್ಲಿ ಅನ್ನದ ಉಂಡೆಗಳಿಲ್ಲ. ಬದಲಿಗೆ ಸುಟ್ಟು ಇದ್ದಿಲಾದ ಅನುಭವಗಳು ಕಾಣುತ್ತವೆ. ಕೇರಿಗಳೆಂಬ ಅಲಕ್ಷಿತ…

ಮಣೆಗಾರ-ಜಾತಿಯ ಹಂಗು ದಾಟಿದ ಶೋಷಕ ಜಗತ್ತು

ಮಣೆಗಾರ-ಜಾತಿಯ ಹಂಗು ದಾಟಿದ ಶೋಷಕ ಜಗತ್ತು ಇತರ ಪ್ರಕಾರಗಳಲ್ಲಿ ಹೊಸ ಬೆಳೆಗಳು ಕಾಣಿಸಿಕೊಂಡಂತೆ ಆತ್ಮಕಥೆಗಳ ವಿಚಾರಕ್ಕೆ ಬಂದರೂ ಹೊಸತುಗಳ ಪರ್ವ ಶುರುವಾಗಿದ್ದು( ಘಟನೆ,ಭಾಷೆ ಹಾಗೂ ತಾಂತ್ರಿಕ ವಿಧಾನಗಳು) ದಲಿತ ಆತ್ಮಕಥನಗಳಲ್ಲಿ ಎನ್ನಬಹುದು. ಬೆಳಕಿನ ಲೋಕ ಕಾಣದ ಅನುಭವವನ್ನು ದಲಿತರ ಕತ್ತಲ ಲೋಕ ಕನ್ನಡಕ್ಕೆ ತಂದು ಕೊಟ್ಟಿದೆ.ಆದರೆ ಉಳಿದ ಪ್ರಕಾರಗಳಿಗೆ ಸಿಕ್ಕಂತೆ ದಲಿತ ಆತ್ಮಕಥನಗಳಿಗೆ ಸಿಕ್ಕ ಮಾನ್ಯತೆಗಳು ಕಡಿಮೆಯೇ ಎನ್ನಬೇಕು. “ ಕನ್ನಡದ ದಲಿತ ಆತ್ಮಕಥನಗಳು ಮರಾಠಿಯಷ್ಟು ದಟ್ಟ ಅನುಭವಗಳನ್ನು ಹೊಂದಿಲ್ಲ” ಎಂಬ ವಿಮರ್ಶಕರ ಮೂಗು ಮುರಿಯುವಿಕೆಯನ್ನ ಮೀರಿ…

ಸಕ್ರಜ್ಜಿ ಬದುಕಿನ ನೈಜತೆಯ ಕಥೆ…!

ಸಕ್ರಜ್ಜಿ ಬದುಕಿನ ನೈಜತೆಯ ಕಥೆ…! ಆಗಷ್ಟೇ ನಾಚುತ್ತಲೇ ದಾಂಗುಡಿಯಿಡುತ್ತಿದ್ದ ಚಳಿಗಾಲದ ದಿನವೊಂದರ ಚುಂಚುಂ ಮುಂಜಾನೆ. ಹೊರಗೆ ಇನ್ನೂ ಮಬ್ಬುಗತ್ತಲು ಕವಿದಿತ್ತು. ರಾತ್ರಿ ಎಂಟರ ವೇಳೆಗೆ, ಎಂದಿಗಿಂತ ಮುಂಚಿತವಾಗಿಯೇ ಹಾಸಿಗೆ ಸೇರಿದವನು, ಬೆಳಿಗ್ಗೆ ಐದರ ವೇಳೆಗೇ ಎಚ್ಚರವಾಗಲು, ಮತ್ತೆ ನಿದ್ದೆ ಬಾರದೆ, ಕಣ್ಣು ಬಿಟ್ಟುಕೊಂಡೇ ಹಾಸಿಗೆಯ ಮೇಲೆ ಬಿದ್ದುಕೊಂಡು ಹೊರಳಾಡುತ್ತಿದ್ದೆ. ಹೊರಗೆ ಹಕ್ಕಿಗಳು “ವಿಪರೀತ” ಎನ್ನುವ ಮಟ್ಟಕ್ಕೆ ತಮ್ಮ “ಚಿಲಿಪಿಲಿ” ಗಾನದ, ಪ್ರಾತಃಕಾಲದ ಉದಯರಾಗವನ್ನು, ಅದಾಗಲೇ ಶುರುವಿಟ್ಟುಕೊಂಡು, ಆಲಾಪದ ತಾರಕಕ್ಕೇರಿದ್ದವು. ನನಗಿಂತ ಎರಡು ತಾಸುಗಳ ಮುಂಚೆಯೇ ಎದ್ದಿದ್ದ…

ಸೋನಿಯಾಗೆ ಧೃತರಾಷ್ಟ್ರ ಪ್ರೇಮದ ಕುರುಡು

ಸ್ವಾತಂತ್ರ್ಯ ಬಂದ ಬಳಿಕ ಸತತ ಐವತ್ತು ವರ್ಷ ಕೇಂದ್ರ ಮತ್ತು ರಾಜ್ಯಗಳನ್ನಾಳಿದ ಕಾಂಗ್ರೆಸ್ಸು ಈಗ ಶೋಚನೀಯ ಹಂತಕ್ಕೆ ಬಂದಿದೆ. ಏಐಸಿಸಿ ಹೊಂದಿರುವ ಅಗಾಧ ಸಂಪತ್ತಿನ ಒಡೆತನವನ್ನು ಬಿಟ್ಟುಕೊಡುವುದಕ್ಕೆ ಸೋನಿಯಾ ಅಂಡ್ ಚಿಲ್ಡೃನ್ಸ್ ಸಿದ್ಧವಿಲ್ಲ. ಪ್ರಧಾನಿ ಪಟ್ಟವನ್ನಾದರೂ “ತ್ಯಾಗ” ಮಾಡಬಹುದು ಆದರೆ ಏಐಸಿಸಿ ಅಧ್ಯಕ್ಷ ಸ್ಥಾನವನ್ನಲ್ಲ ಎಂದು ಕೂತಿರುವ ಸೋನಿಯಾ, ಧೃತರಾಷ್ಟ್ರ ಪ್ರೇಮದ ಅಮಲಿನಲ್ಲಿ ಕರುಡಾಗಿದ್ದಾರೆ. ಸೋನಿಯಾಗೆ ಧೃತರಾಷ್ಟ್ರ ಪ್ರೇಮದ ಕುರುಡು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು, ಸಂವಿಧಾನದ ಆಶಯದಂತೆ ಎಲ್ಲರನ್ನೂ ಒಳಗೊಂಡ ಭಾರತ ವಿಕಾಸವಾಗಬೇಕು. “ಸರ್ವ ಜನಾಂಗದ ಶಾಂತಿಯ…

ಬೃಹತ್ ಶಿಲಾಯುಗದ ಪ್ರಸಿದ್ಧ ತಾಣ ಹಿರೇಬೆನಕಲ್ಲು

ಬೃಹತ್ ಶಿಲಾಯುಗದ ಪ್ರಸಿದ್ಧ ತಾಣ ಹಿರೇಬೆನಕಲ್ಲು ಹಿರೇಬೆನಕಲ್ಲು ಪ್ರಾಗಿತಿಹಾಸ ಕಾಲದ ಅದರಲ್ಲೂ ಬೃಹತ್ ಶಿಲಾಯುಗದ ಪ್ರಸಿದ್ಧ ನೆಲೆ. ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆನಕಲ್ಲು ಗ್ರಾಮದ ದಕ್ಷಿಣಕ್ಕೆ ನಾಲ್ಕು ಕಿ.ಮೀ ದೂರದ ಬೆಟ್ಟಗಳ ಸಾಲಿನಲ್ಲಿದೆ. ಕರ್ನಾಟಕದ ಮಟ್ಟಿಗೆ ಇದು ಪ್ರಾಚೀನ ಮಾನವನ ಅತ್ಯಂತ ಅಪರೂಪದ ವಸತಿಯ ತಾಣ. ತುಂಗಭದ್ರಾ ನದಿಯ ಎಡದಂಡೆಯಲ್ಲಿ ಕಣಶಿಲೆಯ ಬೃಹತ್ ಬಂಡೆಗಲ್ಲುಗಳ ಬೆಟ್ಟಶ್ರೇಣಿಗಳಿದ್ದು, ಈ ಬೆಟ್ಟಸಾಲುಗಳಲ್ಲಿರುವ ಅನೇಕ ಗುಡ್ಡಗಳು ಪ್ರಾಗಿತಿಹಾಸ ಕಾಲದ ಮಾನವ ವಾಸದ ನೆಲೆಗಳಾಗಿವೆ. ಅವುಗಳಲ್ಲಿ ಹಿರೇಬೆನಕಲ್ಲು ಬಳಿಯಿರುವ, ಸ್ಥಳೀಯವಾಗಿ…

ಹೀಗೂ ಕಸ ಗುಡಿಸಬಹುದೆ?

ಐದು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ದೂಳೀಪಟವಾಗಿರುವ ಕಾಂಗ್ರೆಸ್ ತಪ್ಪುಗಳಿಂದ ಪಾಠ ಕಲಿಯುವುದಕ್ಕೂ ಎಳ್ಳುನೀರು ಬಿಟ್ಟಿದೆ. ಸೋಲಿಗೆ ಯಾರು ಕಾರಣ ಏನು ಕಾರಣ ಎನ್ನುವುದರ ಆತ್ಮಾವಲೋಕನ ಅದಕ್ಕೆ ಬೇಕಾಗಿಲ್ಲ. ಈ ಹಿಂದಿನ ಚುನಾವಣೆಗಳಲ್ಲಿ ಸೋಲಿಗೆ ಕಾರಣರಾದವರೆ ಈ ಬಾರಿಯ ಸೋಲಿಗೂ ಕಾರಣವಾಗಿರುವುದು ಮತ್ತು ಸೋನಿಯಾ ಗಾಂಧಿ ಪಟಾಲಮ್ಮು ಆರೋಪಿಯಾಗಿರುವುದು ಆಕಸ್ಮಿಕವೂ ಅಲ್ಲ; ಕಾಕತಾಳಿಯವೂ ಅಲ್ಲ. ಹೀಗೂ ಕಸ ಗುಡಿಸಬಹುದೆ? ಕಸ ಗುಡಿಸುವುದು ಎಂದರೆ ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿರುವವರು ಪಂಜಾಬ್ ವಿಧಾನ ಸಭಾ ಚುನಾವಣಾ ಫಲಿತಾಂಶವನ್ನು…

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು  ಪೆನುಗೊಂಡ

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು  ಪೆನುಗೊಂಡ ಹಂಪೆಯನ್ನು ಅನೇಕ ವರ್ಷಗಳಿಂದ ನೋಡಿದ ನನಗೆ ವಿಜಯನಗರ ಸಾಮ್ರಾಜ್ಯದ ಇತರೆ ರಾಜಧಾನಿಗಳನ್ನು ನೋಡುವ, ಹಂಪೆಯ ಕಲ್ಲಿನ ರಥವನ್ನು ನೋಡಿದ ಮೇಲೆ ತಾಡಪತ್ರಿಯ ರಥವನ್ನು ನೋಡಲೇಬೇಕೆನ್ನುವ ತವಕ ತುಂಬಾ ಹಿಂದೆಯೇ ಇತ್ತು. ಆದರೆ ಅದು ಸಾಧ್ಯವಾದದ್ದು ಕಳೆದ ವಾರವಷ್ಟೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಗಳಾಗಿ ಆನೆಗೊಂದಿ, ಹಂಪೆಗಳಲ್ಲದೆ ಪೆನುಗೊಂಡ, ಚಂದ್ರಗಿರಿ, ವೆಲ್ಲೂರುಗಳೂ ಆಡಳಿತದ ರಾಜಧಾನಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಿವೆ. ಇದಕ್ಕೆ ಆಯಾ ಕಾಲಘಟ್ಟಗಳಲ್ಲಾದ ರಾಜಕೀಯ ಅಸ್ತಿರತೆ, ಸಂಘರ್ಷ, ಪ್ರತಿರೋಧ, ಸ್ಥಾನಪಲ್ಲಟಗಳೂ ಕಾರಣವೆನ್ನಿ. ಈ…

ಅಂಚೆಯಣ್ಣನ ನಿಸ್ವಾರ್ಥ ಸೇವೆಗೆ ಸಾಕ್ಷಿಯಾದ ಸೇವಾಮನೋಭಾವ

ಅಂಚೆಯಣ್ಣನ ನಿಸ್ವಾರ್ಥ ಸೇವೆಗೆ ಸಾಕ್ಷಿಯಾದ ಸೇವಾಮನೋಭಾವ ಅದು ೧೯೮೦ನೇ ಇಸವಿ ಮೇ ತಿಂಗಳ ಮೊದಲನೇ ವಾರ. ನಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿದು ಮೂರು ವಾರಗಳ ಮೇಲಾಗಿತ್ತು. ಮೇ ಹತ್ತರ ಒಳಗೆ ಫಲಿತಾಂಶ ಬರುವ ನಿರೀಕ್ಷೆಯೂ ಇತ್ತು. ಫಲಿತಾಂಶದ ನಿಖರ ದಿನಾಂಕವನ್ನು ಅಂದಿನ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಇನ್ನೂ ಪ್ರಕಟ ಮಾಡಿರಲಿಲ್ಲ. ಇಂದಿನ ಹಾಗೆ ಅಂತರ್ಜಾಲದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸುವ ಸವಲತ್ತು ಅಂದಿನ ದಿನಗಳಲ್ಲಿ ಉಪಲಬ್ಧವಿರಲಿಲ್ಲ. ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶಗಳನ್ನು ಪ್ರಕಟಿಸುವ, ಹಲವು ವರ್ಷಗಳ…

ಸಾಂಬಶಿವಶೆಟ್ಟಿ ಮತ್ತು ಸೈಕಲ್

ಸಾಂಬಶಿವಶೆಟ್ಟಿ ಮತ್ತು ಸೈಕಲ್ ಇತ್ತಿಚೆಗೆ ಶಾಲಾ ವೇಳೆಗಿಂತ ಒಂದು ಗಂಟೆ ಮುಂಚಿತವಾಗಿಯೇ ಮನೆಯನ್ನು ಬಿಡುವ ಅಭ್ಯಾಸವೊಂದನ್ನು ರೂಢಿ ಮಾಡಿಕೊಂಡಿದ್ದೆ. ನಾನಿನ್ನೂ ಆಗ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ. ಹತ್ತು ಗಂಟೆಗೆ ಶುರುವಾಗುವ ಶಾಲೆಗೆ ಬೆಳಿಗ್ಗೆ ಒಂಬತ್ತು ಗಂಟೆಗೇ ಮನೆ ತೊರೆಯುವ ನನ್ನ ಆತುರವನ್ನು ನೋಡಿ ಅವ್ವ “ಏನೋ, ಮಠದಲ್ಲಿ ಕಸ ಹೊಡೆಯಲು ಜವಾನ ಇಲ್ಲವೇ? ಇಷ್ಟು ಜಲ್ದಿ ಮಠಕ್ಕೆ ಹೋಗಿ ಏನು ಕಿಸಿಯುತ್ತೀಯಾ? ನಾನೇ ನಾಳೆ ಮಠಕ್ಕೆ ಬಂದು ನೆವ್ವಾರರ ಲೋಕಪ್ಪನನ್ನು ಕೇಳುತ್ತೇನೆ ತಾಳು”ಎಂದು…

ಮಲ್ಲಣ್ಣನ ಏಕಾಂಗಿ ಹೋರಾಟದ ಸಾಧನೆಯ ಹಾದಿ..

ಮಲ್ಲಣ್ಣ ನ ಏಕಾಂಗಿ ಹೋರಾಟದ ಸಾಧನೆಯ ಹಾದಿ… ಅಂದು ಸೆಪ್ಟೆಂಬರ್ ತಿಂಗಳ ಒಂದು ಶನಿವಾರ, ಮುಂಜಾನೆಯ ಒಪ್ಪತ್ತಿನ ಶಾಲೆಗೆ ಆತುರಾತುರದಲ್ಲಿ ತಯಾರಾಗಿ ಮನೆ ಬಿಟ್ಟವನು, ಊರಿನ ಮುಖ್ಯರಸ್ತೆಯ ಚಂದ್ರಮೌಳೇಶ್ವರ ದೇವಸ್ಥಾನದ ಮುಂದಿನಿಂದ ಸಾಗಿ, ಪೊಲೀಸ್ ಸ್ಟೇಷನ್ ಬಲಕ್ಕೆ ತಿರುಗಿ, ಊರ ಮುಖ್ಯರಸ್ತೆಯನ್ನು ಕುರುಬರ ಕೇರಿಗೆ ಜೋಡಿಸುತ್ತಿದ್ದ ವಿಶಾಲವಾದ ರಸ್ತೆಯಲ್ಲಿ ಮುನ್ನಡೆಯುತ್ತಾ, ರಸ್ತೆಯ ಬಲಬದಿಗೆ ಬರುತ್ತಿದ್ದ ಭದ್ರಪ್ಪಶೆಟ್ಟಿಯವರ ಅಂಗಡಿಯನ್ನು ದಾಟಿ, ಪಕ್ಕದಲ್ಲಿಯೇ ಇದ್ದ ಕುಂಬಾರ ಏಕಾಂತಮ್ಮನ ಹೋಟೆಲ್ ಸಮೀಪಿಸಲು, ಹೆಗಲಿಗೆ ನೇತು ಹಾಕಿದ ಸ್ಕೂಲ್ ಬ್ಯಾಗ್…

ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ!

ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ! ಹಾಡುವ ಪರಂಪರೆಯ ಮೂಲಕ ಆಧುನಿಕ ಕಾವ್ಯಕ್ಕೆ ಮತ್ತೊಂದು ಬಗೆಯ ಪ್ರೇರಣೆ ಕೊಟ್ಟವರು ತತ್ವಪದಕಾರರು. ಹಾಗೆ ನೋಡಿದರೆ ಶರೀಫರ ರಿವಾಯತ್ ಪದಗಳು ಲಾವಣಿ ಸಂಪ್ರದಾಯಕ್ಕೇ ಸೇರಿದವು.ಆಧುನಿಕ ಕಾವ್ಯಕ್ಕೇ ಭಾಷೆಯ ಬಳಕೆ ಕುರಿತು ಸೂಚನೆ ನೀಡಬಲ್ಲ ತತ್ವಪದಕಾರರು, ಪ್ರಾದೇಶಿಕ ವೈವಿಧ್ಯತೆಯನ್ನು ತಂದವರು. “ಬಯಲು ಆಲವಿಗೆ ನವಿಲು ಕುಣಿದು ನಿಂತು ತೈಲವಿಲ್ಲದ ಜ್ಯೋತಿ ಬೆಳಕು ಮದೀನದಿ” ಎನ್ನುವಾಗ ಇಲ್ಲಿ ಕುಣಿಯುವ ನವಿಲು ಹೊಸ ರೀತಿಯದು ಹೀಗೆ ಹೇಳುವ ಭಾಷೆಯೂ ಕೂಡ ಹೊಸ ಬಗೆಯದು. ಹೊಸ…

ಕುತೂಹಲದ ಕದನ ಕಾರಣ

ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತಿದೆ ರಾಜ್ಯದ ಮುಂದಿನ ಸಿಎಂ ಯಾರೆಂಬ ಚರ್ಚೆಯ ನಿರೀಕ್ಷಿತ ಫಲಿತ. ಡಿಕೆ ಶಿವಕುಮಾರ್ ಶತಾಯಗತಾಯ ಸಿಎಂ ಆಗುವ ಓಟ ಶುರುಮಾಡಿದ್ದಾರೆ. ಅವರನ್ನು ತಡೆದು ತಾವು ಮತ್ತೆ ಪೀಠಾಧಿಕಾರಿಯಾಗುವ ಛಲದಲ್ಲಿ ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ. ಇದೀಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಹೆಸರೂ ಓಡುತ್ತಿದೆ. ದಿಲ್ಲಿ ಹೈಕಮಾಂಡ್‌ನ ಮನವೊಲಿಕೆ ಎಂಬ ಚಾಲಾಕಿ ರಾಜಕೀಯದಲ್ಲಿ ಹರಿಪ್ರಸಾದ್ ಈ ಇಬ್ಬರಿಗಿಂತ ಮುಂದಿರುವುದು ಭವಿಷ್ಯದ ರಾಜಕೀಯವನ್ನು ಉಲ್ಟಾಪಲ್ಟಾ ಮಾಡಬಹುದೇ…? ಕುತೂಹಲದ ಕದನ ಕಾರಣ…

ಹಂಪೆಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮತ್ತು ಸಂಗೀತ ಕಂಬಗಳೂ…

ಹಂಪೆಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮತ್ತು ಸಂಗೀತ ಕಂಬಗಳೂ… ಹಂಪೆಯ ಅತ್ಯಂತ ಕಲಾತ್ಮಕ ಮತ್ತು ವೈಭವಯುತ ದೇಗುಲವೆಂದರೆ ಅದು ವಿಠಲ ದೇವಾಲಯವೇ ಆಗಿದೆ. ವಿಜಯನಗರ ಕಾಲದ ಕಲೆ, ವಾಸ್ತುಶಿಲ್ಪ, ಮೂರ್ತಿಶಿಲ್ಪವಲ್ಲದೆ ಸಂಗೀತ, ನೃತ್ಯಗಳಿಗೆ ಕೈಗನ್ನಡಿಯಾಗಿ ನಿಂತಿರುವ ದೇವಾಲಯವಿದು. ಹಂಪೆ ಎಂದಾಕ್ಷಣ ನೋಡಲೇ ಬೇಕಾದದ್ದು ಕಲ್ಲಿನ ರಥ. ಜಗತ್ತಿನ ಗಮನ ಸೆಳೆದು ವಿಶ್ವಪ್ರಸಿದ್ಧಿ ಪಡೆದ ವಾಸ್ತುವಿದು. ಇದು ವಿಜಯನಗರ ಅಥವಾ ಹಂಪೆಯ ಐಕಾನ್ ಎನ್ನುವಂತೆ ಚಿರಪರಿಚಿತವಾಗಿರುವುದು ಗಮನಾರ್ಹ. ಹಾಗೆಯೇ ಹಂಪೆಯ ಇತರ ದೇವಾಲಯಗಳಿಗಿಂತ ಅತ್ಯಂತ ಸುಂದರವಾಗಿ ಮತ್ತು…

ಮೈಲಾರವೂ, ಪರಂಪರೆ ಮತ್ತು ಅಲ್ಲಿನ ಕಾರ್ಣೀಕವೂ

ಮೈಲಾರವೂ, ಪರಂಪರೆ ಮತ್ತು ಅಲ್ಲಿನ ಕಾರ್ಣೀಕವೂ ಕರ್ನಾಟಕದ ಪ್ರಸಿದ್ಧ ಜನಪದ ದೈವವಿರುವ ನೆಲೆಗಳಲ್ಲಿ ಮೈಲಾರ ಪ್ರಮುಖವಾದದ್ದು. ಇದು ಮೈಲಾರ ದೇವರು ಆದಿಮ ದೈವವೂ ಅಗಿದೆ. ಪಶುಪಾಲಕರ ಅದಿದೈವವಾದ ಇದು ವಿಜಯನಗರ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಮೈಲಾರದಲ್ಲಿದೆ. ಇದನ್ನು ಹಿರೇಮೈಲಾರವೆಂತಲೂ ಕರೆಯುತ್ತಿದ್ದು, ಇದೇ ಮೈಲಾರದೇವರ ಮೂಲನೆಲೆಯೆಂದೂ ಹೇಳುತ್ತಾರೆ. ಮೈಲಾರವೆಂಬುದು ಮೈಲಾರಿ, ಮೈಲಾಳಿ ಮಲ್ಲಯ್ಯ, ಮಲ್ಲೇಶ್ವರ, ಮಲುದೇವ, ಮಲ್ಲಾರ, ಮಲ್ಲಾರಿ, ಮಲ್ಲಿಕಾರ್ಜುನ ಮೊದಲಾದ ಹೆಸರುಗಳಿಂದ ನಾಡಿನಾದ್ಯಂತ ಆರಾಧನೆಗೊಳ್ಳುತ್ತದೆ. ಇದು ಕರ್ನಾಟಕದಲ್ಲಿ ಮೈಲಾರವೆಂಬ ಹೆಸರಿನ ಅನೇಕ ಕ್ಷೇತ್ರಗಳನ್ನು…

ಗುಹಾಲಯಗಳ ಆಗರ ಚಿತ್ರದುರ್ಗ ಕೋಟೆ ಪರಿಸರ

ಗುಹಾಲಯಗಳ ಆಗರ ಚಿತ್ರದುರ್ಗ ಕೋಟೆ ಪರಿಸರ ಚಿತ್ರದುರ್ಗವು ಪ್ರಸಿದ್ಧಿಯಾಗಿರುವುದು ಅಲ್ಲಿನ ಕೋಟೆಯಿಂದ. “ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಎಂಬ ಸಿನಿಮಾ ಹಾಡಿನಿಂದ ಹೆಚ್ಚು ಜನಮನ ಗಳಿಸಿದ ರಕ್ಷಣಾ ವಾಸ್ತುಶಿಲ್ಪವಿದು. ಈ ಕೋಟೆಯನ್ನು ನಿರ್ಮಿಸಿರುವುದು ಚಿನ್ಮೂಲಾದ್ರಿ ಬೆಟ್ಟಶ್ರೇಣಿಯಲ್ಲಿ. ಈ ಶ್ರೇಣಿಗಳೋ ಕಣಶಿಲೆಯ ಬೃಹತ್ ಬಂಡೆಗಲ್ಲುಗಳನ್ನು ಒಳಗೊಂಡ ಶಿಲಾಸ್ತೋಮಗಳೇ ಆಗಿವೆ. ಇಲ್ಲಿನ ಬಂಡೆಗಲ್ಲುಗಳಲ್ಲಿರುವ ಅನೇಕ ಸ್ವಾಭಾವಿಕ ಗುಹೆ-ಗಹ್ವರಗಳು ಪಾಗಿತಿಹಾಸ ಕಾಲದಿಂದಲೂ ಮಾನವನ ವಸತಿ ತಾಣಗಳಾಗಿ ಬಳಕೆಯಾಗಿವೆ. ಇಲ್ಲಿನ ಗುಹೆಗಳು ಹತ್ತಾರು ಜನ ವಾಸಮಾಡಬಹುದಾದಷ್ಟು ವಿಸ್ತಾರವಾದ ಆಶ್ರಯತಾಣಗಳು.…

ಲಚ್ಚಕ್ಕನ ನಿಸ್ವಾರ್ಥ ಸೇವಾಮನೋಭಾವದ ಮಾದರಿ ಗುಣಗಳು…

ಲಚ್ಚಕ್ಕನ ನಿಸ್ವಾರ್ಥ ಸೇವಾಮನೋಭಾವದ ಮಾದರಿ ಗುಣಗಳು… ರವಿವಾರದ ದಿನ ಬೆಳಿಗ್ಗೆ ಮನೆಯ ಮಧ್ಯದ ಹಾಲಿನಲ್ಲಿ ಕುಳಿತು, ಅದೇ ತಾನೆ ಏಕಾಂತಪ್ಪ ಮೇಷ್ಟ್ರ ಮಗ ಪೇಪರ್ ಏಜೆಂಟ್ ಉಮ್ಮಣ್ಣನನ್ನು ಕಾಡಿಬೇಡಿ ಎರುವಲು ಆಧಾರದ ಮೇಲೆ ಪಡೆದು ತಂದಿದ್ದ “ಚಂದಮಾಮ” ಮಾಸಿಕಪತ್ರಿಕೆಯನ್ನು ಓದುತ್ತಿದ್ದವನಿಗೆ, ಪಕ್ಕದ ಪಳತದ ರೂಮಿನಿಂದ ತೂರಿಬಂದ ಮಕ್ಕಳ ಕಿರುಚಾಟದಿಂದ, ಮುಂದಿನ ಒಂದು ಗಂಟೆಯೊಳಗಾಗಿ ಚಂದಮಾಮನನ್ನು ಹಿಂತಿರುಗಿಸಬೇಕಾದ ಸಮಯಾಭಾವದ ಅನಿವಾರ್ಯತೆಗೆ ಸಿಲುಕಿ ಏಕಾಗ್ರಚಿತ್ರದಿಂದ ಪತ್ರಿಕೆಯ ಗಂಭೀರ ಅಧ್ಯಯನದಲ್ಲಿ ತೊಡಗಿದ್ದವನಿಗೆ, ಭಂಗ ಉಂಟಾಗಲು, ಮೂಟೆಯಷ್ಟು ಅಸಮಾಧಾನವನ್ನು ಮನಸ್ಸಿನಲ್ಲಿ ಹೊತ್ತುಕೊಂಡೇ, ನನ್ನ…

ಗುಂಡಜ್ಜಿ ಎಂಬ ಅಬಲೆಯ ಜೀವಗಾಥೆಯ ಹೆಜ್ಜೆ ಗುರಿತು…

ಗುಂಡಜ್ಜಿ ಎಂಬ ಅಬಲೆಯ ಜೀವಗಾಥೆಯ ಹೆಜ್ಜೆ ಗುರಿತು… ಅದು ಎಪ್ಪತ್ತನೇ ದಶಕದ ಮಧ್ಯಭಾಗದ ಜುಲೈ ತಿಂಗಳ ಮಂಗಳವಾರದ ಒಂದು ದಿನ. ಎಂದಿನಂತೆ ಬೆಳಿಗ್ಗೆ ಒಂಬತ್ತರ ಸುಮಾರಿಗೆ ಶಾಲೆಗೆ ಹೊರಟು ನಿಂತಿದ್ದವನು ವಿರುಪಣ್ಣ ತಾತನ ಬರುವನ್ನು ಎದುರು ನೋಡುತ್ತಾ ಮನೆ ಬಾಗಿಲಿನಲ್ಲಿ ನಿಂತಿದ್ದೆ. ಬೆಳಿಗ್ಗೆ ನಾನು ಶಾಲೆಗೆ ಹೊರಡುವ ಸಮಯಕ್ಕೆ ಸರಿಯಾಗಿ ತಾತ ಚಂದ್ರಮೌಳೇಶ್ವರ ದೇವಸ್ಥಾನದ ತಮ್ಮ ನಿತ್ಯಪೂಜೆಯ ಸಲುವಾಗಿ ನಮ್ಮ ಮನೆಯ ಮುಂದೆ ಹಾದು ಹೋಗುತ್ತಿದ್ದ ಊರ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದದ್ದು ವರ್ಷಗಳಿಂದ ಚಾಲ್ತಿಯಲ್ಲಿದ್ದ ಪದ್ಧತಿ.…

ವಾಸುದೇವರೆಡ್ಡಿಯಂತ ಸಾವಿರಾರು ಸ್ವಯಂಸೇವಕರು ಕಟ್ಟಿದ ಮನೆಗೆ ಈಗ ಗೆದ್ದಲು ಹುಳುಗಳ ಕಾಟ..!

ವಾಸುದೇವರೆಡ್ಡಿಯಂತ ಸಾವಿರಾರು ಸ್ವಯಂಸೇವಕರು ಕಟ್ಟಿದ ಮನೆಗೆ ಈಗ ಗೆದ್ದಲು ಹುಳುಗಳ ಕಾಟ..! ಹೈಸ್ಕೂಲು ಮೈದಾನದಲ್ಲಿ ಗೆಳೆಯರೊಂದಿಗೆ ಸೇರಿ ಕ್ರಿಕೆಟ್ ಆಟ ಆಡುತ್ತಿದ್ದವನು ಸಹಪಾಠಿ ಪುರುಷೋತ್ತಮರೆಡ್ಡಿ ಬೌಂಡರಿ ಗೆರೆ ದಾಟಿಸಿ ಹೊಡೆದ ಚೆಂಡನ್ನು ಬೆನ್ನತ್ತಿ, ಕರೆಂಟ್ ಆಫೀಸಿನ ಮುಳ್ಳಿನ ತಂತಿಬೇಲಿಯನ್ನು ದಾಟಿ, ಅಲ್ಲಿದ್ದ ಮೊಣಕಾಲು ಎತ್ತರದ, ಒಣಗಿ ನಿಂತ ಹುಲ್ಲಿನ ಮಧ್ಯೆ ಹೆಚ್ಚು ಕಡಿಮೆ ಅದೇ ಬಣ್ಣದ ಟೆನಿಸ್ ಬಾಲ್ ಹುಡುಕುತ್ತಾ ಸುಮಾರು ಹೊತ್ತು ನಿಂತೆ. ಹತ್ತು ನಿಮಿಷಗಳ ತೀವ್ರ ಹುಡುಕಾಟದ ನಂತರ ಕೈಗೆ ಸಿಕ್ಕ ಚೆಂಡನ್ನು ಪಿಚ್…

ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು!

ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು! ಭಾರತೀಯರು ತಮ್ಮ ಮೂಲಭೂತ ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳಿಗಾಗಿ ಹೋರಾಡುತ್ತ ಬಂದ ಕಾರಣ ಸಮಯ ಪೋಲಾಯಿತಲ್ಲದೆ ದೇಶ ದುರ್ಬಲವಾಯಿತು ಎಂದಿದ್ದಾರೆ ಪ್ರಧಾನಮಂತ್ರಿ ಮೋದಿ. ಮೋದಿಯವರು ಮೂಲಭೂತ ಹಕ್ಕುಗಳಿಗೆ ಮೂಲಭೂತ ಕರ್ತವ್ಯಗಳನ್ನು ತಳುಕು ಹಾಕುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರಾಯಶಃ ಕಡೆಯ ಬಾರಿಯೂ ಅಲ್ಲ. ಈ ಹಿಂದೆಯೂ ಇಂತಹ ಮಾತುಗಳನ್ನು ಆಡಿರುವುದು ಉಂಟು. ಮೂಲಭೂತ ಹಕ್ಕುಗಳಿಂದ ದೇಶ ದುರ್ಬಲವಾಗಿಲ್ಲ. ಮೇಲು ಕೀಳುಗಳ, ಏಣಿಶ್ರೇಣಿಯ, ಕರ್ಮಸಿದ್ಧಾಂತದ, ಜಾತಿ ವ್ಯವಸ್ಥೆಯ ಯಥಾಸ್ಥಿತಿವಾದಿ ಅಸ್ತ್ರಗಳ ಅಡಿಪಾಯ…

 ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ

 ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ ಕುಕನೂರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಈ ಗ್ರಾಮವು ರಾಷ್ಟ್ರಕೂಟ ಅರಸರ ಕಾಲದಿಂದಲೂ ಧಾರ್ಮಿಕ, ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕವಾಗಿ ಪ್ರಸಿದ್ಧಿಯನ್ನು ಪಡೆದ ಸ್ಥಳ. ದಾಖಲೆಗಳನ್ವಯ ಇದೊಂದು ಪ್ರಾಚೀನ ಪಟ್ಟಣವೇ ಆಗಿದ್ದಿತು. ಕ್ರಿ.ಶ. ೧೧-೧೨ನೆಯ ಶತಮಾನದ ಹೊತ್ತಿಗೇ ನಲವತ್ತೆಂಟು ಕೇರಿಗಳನ್ನು ಒಳಗೊಂಡ ಪಟ್ಟಣವಾಗಿದ್ದಿತು. ಅಲ್ಲದೆ ಕುಕನೂರು ಒಂದು ಸಾವಿರ ಮಹಾಜನರನ್ನು ಒಳಗೊಂಡಿದ್ದ ಮಹಾಗ್ರಹಾರವೂ, ಪ್ರಾಚೀನ ಕಾಲದ ವಿದ್ಯಾಕೇಂದ್ರವೂ ಆಗಿದ್ದುದು ಶಾಸನಗಳಿಂದ ತಿಳಿಯುವುದು. ಇಲ್ಲಿರುವ ದೇವಾಲಯಗಳೋ…

1 2 3 10
error: Content is protected !!