Girl in a jacket

Daily Archives: December 10, 2021

ಕಂಪನಿಗಳಿಗೆ ಸಾಮಾಜಿಕ ಒಳಗೊಳ್ಳುವಿಕೆ ದೃಷ್ಟಿಕೋನ ಮುಖ್ಯ: ಅಶ್ವತ್ಥನಾರಾಯಣ

ಬೆಂಗಳೂರು,ಡಿ,10:  ಕೇವಲ ವಾಣಿಜ್ಯ ಲಾಭದ ದೃಷ್ಟಿಯಿಂದ ಕಂಪನಿಗಳನ್ನು ನಡೆಸುವುದರ ಬದಲು ಸಮಾಜದ ಪ್ರತಿಯೊಬ್ಬರನ್ನೂ ಒಳಗೊಳ್ಳುವಂತಹ ದೃಷ್ಟಿಕೋನವು ಉದ್ಯಮಗಳಲ್ಲಿ ಬೇರೂರಬೇಕಾಗಿದೆ. ಇದರಿಂದ ಮಾತ್ರ ಸಮಾಜವು ಪ್ರಗತಿ ಸಾಧಿಸಬಲ್ಲದು ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ. ನಗರದ ಖಾಸಗಿ ಹೋಟೆಲಿನಲ್ಲಿ ಶುಕ್ರವಾರ ನಡೆದ 12ನೇ ಸಿಎಸ್ಆರ್ ನಾಯಕತ್ವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಯೂನಿಕಾರ್ನ್ ಕಂಪನಿಗಳಲ್ಲಿ ಶೇ.60ರಷ್ಟು ರಾಜ್ಯದಲ್ಲೇ ಇದ್ದು, ಇವು ಈಗ ಸಾಮಾಜಿಕ ವಲಯಗಳತ್ತಲೂ ಗಮನ ಹರಿಸುತ್ತಿರುವುದು ಸ್ವಾಗತಾರ್ಹ…

ಯುವ ಸಬಲೀಕರಣ, ಮಹಿಳಾ ಉದ್ಯಮಶೀಲತೆ ಗುರಿ: `ಕೋಡ್ ಉನ್ನತಿ’ ಉಪಕ್ರಮಕ್ಕೆ ಚಾಲನೆ

ಬೆಂಗಳೂರು,ಡಿ,10: ರಾಜ್ಯದಲ್ಲಿ ಯುವಜನ ಸಬಲೀಕರಣ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಸಾಧಿಸುವ ಮಹತ್ವಾಕಾಂಕ್ಷೆಯುಳ್ಳ `ಕೋಡ್ ಉನ್ನತಿ’ ಉಪಕ್ರಮಕ್ಕೆ ಐಟಿ, ಬಿಟಿ ಮತ್ತು ಕೌಶಲ್ಯ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ, ಯೋಜನೆಯ ಅಂಗವಾಗಿ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ ಡಿಪಿ), ಎಸ್ ಎ ಪಿ ಲ್ಯಾಬ್, ಕೌಶಲ್ಯಾಭಿವೃದ್ಧಿ ಮತ್ತು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಒಡಂಬಡಿಕೆಗೆ ಸಹಿ ಹಾಕಿದವು. ಇದರ ಅಂಗವಾಗಿ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು,…

ಭಾರತ-ಬಾಂಗ್ಲಾದೇಶ ದ್ವಿಪಕ್ಷೀಯ ಸಂಬಂಧಗಳಲ್ಲಿ  ಮೈಲಿಗಲ್ಲು

ಭಾರತ-ಬಾಂಗ್ಲಾದೇಶ ದ್ವಿಪಕ್ಷೀಯ ಸಂಬಂಧಗಳಲ್ಲಿ  ಮೈಲಿಗಲ್ಲು ಬರಹ;ಮಾನಸ,ಬೆಂಗಳೂರು ಬಾಂಗ್ಲಾದೇಶದ ಜನರಿಗೆ ಸ್ವಾತಂತ್ರ್ಯ ಮತ್ತು ಹೊಸ ದೇಶವನ್ನು ರಚಿಸುವ ಹೋರಾಟದ ಉದ್ದಕ್ಕೂ ಭಾರತೀಯ ಬೆಂಬಲವು ಅಚಲವಾಗಿತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸರ್ಕಾರದಿಂದ ಮಾತ್ರವಲ್ಲದೆ ದೇಶಾದ್ಯಂತದ ಜನರು ಮತ್ತು ಸಂಘಟನೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ. 6 ಡಿಸೆಂಬರ್ 1971 ರಂದು ಸಾರ್ವಭೌಮ ರಾಜ್ಯವಾಗಿ, ಬಾಂಗ್ಲಾದೇಶವು ಭಾರತದಿಂದ ತನ್ನ ಮೊದಲ ಮನ್ನಣೆಯನ್ನು ಪಡೆಯಿತು. ಈ ವರ್ಷ ಬಾಂಗ್ಲಾದೇಶದ ವಿಮೋಚನೆಯ 50 ನೇ ವಾರ್ಷಿಕೋತ್ಸವ ಮತ್ತು ಭಾರತದೊಂದಿಗೆ ಅದರ ರಾಜತಾಂತ್ರಿಕ ಸಂಬಂಧಗಳನ್ನು ಸ್ಮರಿಸುತ್ತದೆ. ಭಾರತ ಮತ್ತು…

ಕಾಳು ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ!

Writing- ಪರಶಿವ ಧನಗೂರು ಕಾಳು ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ! ದೇಶದಲ್ಲಿ ಕಡುಬಡವರು ಹೊಟ್ಟೆಹಸಿವಿನಿಂದ ನರಳಬಾರದೆಂದು, ಸರ್ಕಾರಗಳು ಉಚಿತವಾಗಿ ನೀಡುತ್ತಿರುವ ಪಡಿತರ ಯೋಜನೆಯ ಅನ್ನಭಾಗ್ಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೊರ ರಾಜ್ಯಗಳ ರೈಸ್ ಮಿಲ್ ಗಳಿಗೆ, ರೈಸ್ ಮಾರ್ಕೆಟ್ ಗಳಿಗೆ ಸಾಗಿಸುವ ದಂಧೆ ಈಗ ಹೆಚ್ಚು ರಾಜ್ಯಾದ್ಯಂತ ಸಕ್ರಿಯವಾಗಿದೆ. ಫಲಾನುಭವಿ ಗಳಿಂದ ಕಡಿಮೆ ಬೆಲೆಗೆ ಪಡೆದುಕೊಳ್ಳುವ ಕಾಳಸಂತೆಕೋರರು, ಅನ್ನಭಾಗ್ಯದ ಹಸಿವು ನೀಗಿಸಬೇಕಾದ ಅಕ್ಕಿಯನ್ನು ತಮ್ಮ ಸೀಕ್ರೆಟ್ ಗೋಡೌನ್ ಗಳಿಗೆ ಸಾಗಿಸಿ ಬಿಚ್ಚಿಟ್ಟ, ಆನಂತರ…

ಕೊಳೆಯ ತೊಳೆವವರು ಇಲ್ಲ ಬಾ…

ಕೊಳೆಯ ತೊಳೆವವರು ಇಲ್ಲ ಬಾ… ನೀರು ಜೀವ ಪೋಷಕ.ನೀರಿದ್ದಲ್ಲಿ ಜೀವಿಗಳ ಚಲನೆ ಇರುತ್ತದೆ. ಆದಿ ಮಾನವ ಅಲೆಮಾರಿಯಾಗಿ ಹಸಿರು ಮತ್ತು ನೀರನ್ನ ಅರಸುತ್ತಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಲೆಮಾರಿಯಾಗಿ ಹೊರಟು ಅವುಗಳ ತೀರದಲ್ಲಿ ನೆಲೆಯೂರಿ ನಿಂತ. ಅಲೆಮಾರಿಯಾದ ಮಾನವರು ತಳ ಊರಿದ ಜಾಗಗಳೆಲ್ಲಾ ಆನಂತರ ಊರು ಎಂದು ಕರೆಸಿಕೊಳ್ಳುತ್ತಾ ಬಂದವು.ಹಾಗಾಗಿ ಊರಿಗೆ ನೀರೇ ಮೂಲವಾಯಿತು. ನಮ್ಮ ನಾಗರೀಕ ಚರಿತ್ರೆಯನ್ನ ಸಿಂದೂ ಬಯಲಿನ ಚರಿತ್ರೆಯೆಂದೂ,ನಮ್ಮ ನಾಡ ಕಥನ ವಿಸ್ತಾರವನ್ನ ಕಾವೇರಿಯಿಂದ ಗೋದಾವರಿಯವರೆಗೆ,ನರ್ಮದೆಯವರೆಗೆ ಎಂದು ವಿಸ್ತರಿಸಿರುವುದನ್ನೂ ಕಾಣಬಹುದಾಗಿದೆ.ಈ ನಾಡಿನ…

ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು?

ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು? ವಿಶ್ವಗುರು’ವಿನ ಸ್ಥಾನಕ್ಕೆ ಏರಿರುವ ಭರತ ಖಂಡದಲ್ಲಿ ಮನುಷ್ಯರ ಮಲವನ್ನು ಬಳಿದು ಹೊತ್ತು ಸಾಗಿಸುವ ಮನುಷ್ಯರ ಸಂಖ್ಯೆ 58,098 ಎಂದು ಕೇಂದ್ರ ಸರ್ಕಾರ ಮೊನ್ನೆ ರಾಜ್ಯಸಭೆಯಲ್ಲಿ ಸಾರಿದೆ.. ಮಲ ಬಳಿವ ಮಾನವರು ಕೇವಲ 58 ಸಾವಿರವೇನು ಎಂದು ಸರ್ಕಾರ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಿದೆ. ಆದರೆ ಮಾನವ ಮಲ ಬಳಿಯುವ ‘ದಲಿತ ದರಿದ್ರರ’ ಕಷ್ಟ ಕಣ್ಣೀರು ಸಂಕಟ ಅವಮಾನಗಳ ಅಂದಾಜು ಸರ್ಕಾರಗಳಿಗೂ ಇಲ್ಲ, ಸಮಾಜಕ್ಕೂ ಇಲ್ಲ. ಇವುಗಳ ಆತ್ಮಸಾಕ್ಷಿಯ ಅವಸಾನವಾಗಿ ಶತಮಾನಗಳೇ ಉರುಳಿ ಹೋಗಿವೆ! ಒಳಗೆ…

ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಪರೂಪದ ಗುಹಾಂತರ ದೇವಾಲಯ

ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಪರೂಪದ ಗುಹಾಂತರ ದೇವಾಲಯ ದೇವಾಲಯಗಳನ್ನು ಸಾಮಾನ್ಯವಾಗಿ ಪ್ರತ್ಯೇಕವಾದ ಕಟ್ಟಡವುಳ್ಳ ದೇವಾಲಯ, ಸ್ವಾಭಾವಿಕ ಗುಹೆಗಳನ್ನು ಬಳಸಿ ನಿರ್ಮಿಸಿದ ಗುಹಾ ದೇವಾಲಯ(ಗುಹಾಲಯ) ಮತ್ತು ಬೆಟ್ಟವನ್ನು ಕತ್ತರಿಸಿ ಕಡೆಯಲಾದ ಗುಹಾಂತರ ದೇವಾಲಯ (ಖoಛಿಞಛಿuಣ ಖಿemಠಿಟe) ಎಂದು ಕರೆಯುತ್ತೇವೆ. ಇದಕ್ಕೆ ಕಟ್ಟಡ ಮಾದರಿಗೆ ಹಂಪೆಯ ವಿರೂಪಾಕ್ಷ ದೇವಾಲಯ, ಗುಹಾಲಯಕ್ಕೆ ಚಿತ್ರದುರ್ಗ ಬೆಟ್ಟದಲ್ಲಿರುವ ಸಂಪಿಗೆ ಸಿದ್ಧೇಶ್ವರ, ಗುಹಾಂತರ ದೇಗುಲಕ್ಕೆ ಬಾದಾಮಿಯ ಮಹಾವಿಷ್ಣು ದೇಗುಲಗಳನ್ನು ಉದಾಹರಿಸಬಹುದಾಗಿದೆ. ಚಿತ್ರದುರ್ಗ ಜಿಲ್ಲೆಯು ಕರ್ನಾಟಕದ ಇತಿಹಾಸಕ್ಕೆ ಹಲವು ಪ್ರಥಮಗಳನ್ನು ನೀಡಿದುದು ತಿಳಿದ ವಿಷಯ. ಅಂತೆಯೇ ಈ…

Girl in a jacket