ಕರ್ನಾಟಕದಲ್ಲಿ ನಕ್ಸಲ್ ಇನ್ನೂ ಜೀವಂತವಾಗಿದೆಯೇ?

Share

ಕರ್ನಾಟಕದಲ್ಲಿ ನಕ್ಸಲ್ ಇನ್ನೂ ಜೀವಂತವಾಗಿದೆಯೇ?

-ಶರತ್ ನಾಗನೂರು

ಚಿಕ್ಕಮಗಳೂರು,ಜ.೨೯- ಕರ್ನಾಟಕದಲ್ಲಿ ನಕ್ಸಲ್ ಚಳವಳಿಗೆ ಮುಕ್ತಿ ದೊರಕಿತು ಎನ್ನುವಾಗಲೇ ಮತ್ತೊಂದು ಶಾಕ್ ನ್ಯೂಸ್ ಇಲ್ಲಿದೆ. ಸರ್ಕಾರ ಇತ್ತೀಚೆಗೆ ನಕ್ಸ್‌ಲ್‌ರನ್ನು ಶರಣಾಗತಿ ಮಾಡಿಸಿಕೊಂಡು ಅವರಿಗೆ ಪರಿಹಾರ ಪ್ಯಾಕೇಜ್ ಕೊಟ್ಟಿತು. ಇದರಿಂದ ಕರ್ನಾಟಕದಲ್ಲಿ ನಕ್ಸಲ್ ಕೊನೆಗೊಂಡಿತು ಎಂದು ಸರ್ಕಾರ ಎದೆ ತಟ್ಟಿಕೊಂಡಿತು.
ನಿಜ ಹೇಳಬೇಕೆಂದರೆ ನಕ್ಸಲ್‌ರು ಇನ್ನೂ ಚಿಕ್ಕಮಗಳೂರು ಸುತ್ತಮುತ್ತಲಿನ ಗುಡ್ಡಗಾಡಿನ ಪ್ರದೇಶದಲ್ಲಿ ನುಸುಳಿದ್ದಾರೆ ಎನ್ನುವ ಅಚ್ಚರಿ ಸಂಗತಿಯೊಂದು ಹೊರಬಿದ್ದಿದೆ.
ಇತ್ತೀಚೆಗೆ ಆರು ಮಂದಿ ನಕ್ಸಲರನ್ನೇನೋ ಶರಣಾಗತಿ ಮಾಡಿಕೊಂಡುಅವರನ್ನು ಜೈಲಿನಲ್ಲಿಟ್ಟಿದೆ ಅಲ್ಲಿಗೆ ನಕ್ಸಲ್ ಚಳವಳಿ ಮುಕ್ತಾಯಗೊಂಡಿತು ಎನ್ನುವ ಅವರ ಮುಗಳುನಗೆಯ ಮೇಲೆಯೇ ಆತಂಕವೂ ಶುರುವವಾಗಿದೆ.
ಹೌದು ಮಲೆನಾಡಿನ ಲ್ಲಿ ಇನ್ನೂ ನಕ್ಸಲ್ ಸಂಘಟನೆ ಕೊನೆಗೊಂಡಿಲ್ಲ ಎನ್ನುವುದಕ್ಕೆ ಸರ್ಕಾರದ ನಡೆಯೇ ಕಾರಣ.. ಸಂಘಟನೆಯ ರವೀಂದ್ರನನ್ನು ವಶಕ್ಕೆ ಪಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಪೊಲೀಸರು ಮಫ್ತಿಯಲ್ಲಯ ಹುಡುಕಾಡುತ್ತಿದ್ದಾರೆ.
ಈ ಅಂಶವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರೊಬ್ಬರು ತಿಳಿಸಿದ್ದಾರೆ

ಮಲೆನಾಡು ಮತ್ತು ಕರಾವಳಿಯಲ್ಲಿ ಇನ್ನು ನಾಲ್ಕೈದು ಮಂದಿ ನಕ್ಸಲರು ಬೀಡು ಬಿಟ್ಟಿದ್ದು ಕೇರಳ ಮತ್ತು ತಮಿಳುನಾಡಿನ ಸಂಪರ್ಕವೂ ಇದೆ ಎನ್ನಲಾಗುತ್ತಿದೆ ಈ ನಿಟ್ಟಿನಲ್ಲಿ ಸಂಘಟನೆ ಮತ್ತಷ್ಟು ಬಲಗೊಳಿಸುವ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದ್ದು ಅದೇ ಕಾರಣಕ್ಕೆ ನಕ್ಸಲ್‌ನ ರವೀದ್ರ ತಲೆಮರೆಸಿಕೊಂಡಿದ್ದು ಸಂಘಟನೆಯನ್ನು ಮತ್ತಷ್ಟು ಚಾಲನೆಗೊಳಿಸಲುತ್ತಿದ್ದಾರೆ ಎನ್ನುವ ಅಂಶವನ್ನು ಪೊಲೀಸ್‌ಮೂಲಗಳಿಗೆ ದೊರೆತ ಕಾರಣ ಆತನಿಗಾಗಿ ತೀವ್ರ ಶೋಧ ನಡೆಸುತ್ತಿವೆ.

ಕಳೆದ ೨೦ ದಿನಗಳ ಹಿಂದೆ ಆರು ಮಂದಿ ನಕಲೀಯರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಸ್ವಾಗತವನ್ನು ಕೋರುವ ಜತೆಗೆ ತಕ್ಷಣಕ್ಕೆ ತಲಾ ೩ ಲಕ್ಷ ರುಪಾಯಿ ಪ್ಯಾಕೇಜ್ ಸಹ ನೀಡಿತ್ತು. ಆದರೆ, ರವೀಂದ್ರ ಅವರನ್ನು ವಶಕ್ಕೆ ಪಡೆಯಬೇಕೆಂಬ ತೀರ್ಮಾನಕ್ಕೆ ಪೊಲೀಸ್ ಇಲಾಖೆ ಬರಲು ಕಾರಣ ಏನು? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಮಲೆನಾಡಿನ ದಾರಿಯಲ್ಲಿ ಪೊಲೀಸರು ಮಾರುವೇಷದಲ್ಲಿ ಓಡಾಡುತ್ತಿದ್ದಾರೆ. ಟೀ ಸ್ಟಾಲ್, ಗೂಡಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಸುತ್ತಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಲೆನಾಡಿನ ಕುಗ್ರಾಮಗಳಲ್ಲಿ ಅಪರಿಚಿತರು ಓಡಾಡುತ್ತಿರುವುದನ್ನು ಸ್ಥಳೀಯರು ತಕ್ಷಣವೇ ಗುರುತಿಸುತ್ತಾರೆ. ಆ ರೀತಿಯ ವ್ಯಕ್ತಿಗಳು ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಂಡು ಬರುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆ ಹೊಂಡ ಗ್ರಾಮದ ರವೀಂದ್ರ (೩೨) ನಕ್ಸಲ್ ಸಂಘಟನೆಯ ಕೊನೆಯ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಆತ ಸಮಾಜದ ಮುಖ್ಯವಾಹಿನಿಗೆ ಬಂದರೆ ಮಲೆನಾಡು ಹಾಗೂ ಕರಾವಳಿಯಲ್ಲಿನ ನಕ್ಸಲ್ ಸಂಘಟನೆ ಕೊನೆಯಾಗಲಿದೆ.

ಕರಾವಳಿ ತಂಡದಲ್ಲಿ ವಿಕ್ರಂಗೌಡ, ರವೀಂದ್ರ, ಕೆ. ವಸಂತ್, ಜಿಷಾ ಇದ್ದರು. ಮಲೆನಾಡಿನ ತಂಡದಲ್ಲಿ ಮುಂಡಗಾರು ಲತಾ, ವನಜಾಕ್ಷಿ, ಮಾರಪ್ಪ ಹಾಗೂ ಸುಂದರಿ ಇದ್ದರು. ಈ ಒಟ್ಟು ೮ ಜನರ ಪೈಕಿ ವಿಕ್ರಂಗೌಡ ಪೊಲೀಸರ ಗುಂಡೇಟಿಗೆ ಬಲಿಯಾದರು. ಇನ್ನು ೬ ಮಂದಿ ಜ.೮ ರಂದು ಶರಣಾಗತಿಯಾಗಿದ್ದಾರೆ. ಉಳಿದುಕೊಂಡಿರುವುದು ರವೀಂದ್ರ ಮಾತ್ರ. ಈಗ ವಿಕ್ರಂಗೌಡ, ರವೀಂದ್ರ, ಕೆ ವಸಂತ್ ಹಾಗೂ ಜಿಷಾ ಅವರು ಒಂದೆ ಕಡೆಯಲ್ಲಿ ಇದ್ದ ದಿನದಂದು ವಿಕ್ರಂಗೌಡ ಎನ್ ಕೌಂಟರ್ ಆಗಿದ್ದು, ಇದನ್ನು ಅತ್ಯಂತ ಸಮೀಪದಿಂದ ಕಣ್ಣಾರೆ ಕಂಡ ರವಿಂದ್ರ ಸ್ಥಳದಿಂದ ಎಸ್ಕೆಪ್ ಆಗಿ ಹೋದವರು ಇಂದಿಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ನಕ್ಸಲ್ ಸಂಘಟನೆಯಲ್ಲಿ ತೊಡಗಿಸಿಕೊಂಡರು ಯಾರೂ ಸಹ ಮೊಬೈಲ್ ಬಳಕೆ ಮಾಡುವುದಿಲ್ಲ, ಏನಾದರೂ ಹೇಳಬೇಕು, ಕೇಳ ಬೇಕೆಂದರೆ ಅತ್ಯಂತ ನಂಬಿಕಸ್ಥರನ್ನು ಸಂಪರ್ಕಿಸಿ ಪತ್ರದ ಮೂಲಕ ಮಾಹಿತಿಯನ್ನು ರವಾನೆ ಮಾಡುತ್ತಾರೆ. ೬ ಮಂದಿ ನಕ್ಸಲಿಯರು ಶರಣಾಗಲು ಗೌರಮ್ಮ ಅವರನ್ನು ಸಂಪರ್ಕಿಸಿದ್ದರು. ಒಮ್ಮೆ ಸಂಪರ್ಕ ಕಡಿದು ಹೋದರೆ ಮತ್ತೆ ಭೇಟಿಯಾಗಬೇಕಾದರೆ ಕನಿಷ್ಠ ೨-೩ ತಿಂಗಳುಗಳಾಗಬಹುದು ಎನ್ನಲಾಗಿದೆ.
ಈ ಕಾರಣಗಳಿಂದ ಇನ್ನೂ ನಕ್ಸಲ್ ಚಳವಳಿ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

 

Girl in a jacket
error: Content is protected !!