ಬಿಎಸ್‌ವೈ ರಾಜೀನಾಮೆ;ಮನನೊಂದ ಅಭಿಮಾನಿ ಆತ್ಮಹತ್ಯೆ!

Share

ಗುಂಡ್ಲುಪೇಟೆ.ಜು,೨೭: ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೊಮ್ಮಲಪುರದಲ್ಲಿ ಜರುಗಿದೆ.
ಗ್ರಾಮದ ರ.ವಿ ( ೩೫) ಎಂಬಾತ ನಿನ್ನೆ ಸಂಜೆ ತಮ್ಮ ಅಂಗಡೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
ಬಿಎಸ್‌ವೈ ಅಪ್ಪಟ ಅಭಿಮಾನಿಯಾಗಿದ್ದ ರವಿಯನ್ನು ಗ್ರಾಮದಲ್ಲಿ “ರಾಜಾಹುಲಿ” ಎಂದು ಅಡ್ಡ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದರು. ನಿನ್ನೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಬೇಸರಗೊಂಡು ಅತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸಾಲದಿಂದ ಬೇಸತ್ತು..?
ರವಿ ಸಾಲ ಮಾಡಿದ್ದ ಒತ್ತಡ ಹೆಚ್ಚಾಗಿತ್ತು. ೩೫ ವರ್ಷ ವಯಸ್ಸಾಗಿದ್ದರೂ ಮದುವೆ ಆಗಿರಲಿಲ್ಲ. ಈ ಬೇಸರವೂ ರವಿಯನ್ನು ಕಾಡುತಿತ್ತು ಎನ್ನಲಾಗಿದ್ದು, ಸಾಲದ ಒತ್ತಡದಿಂದ ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅದೇ ಗ್ರಾಮದ ಅವರ ಸ್ನೇಹಿತರು, ವಿಸ್ವಾಸಿಗರು ಹೇಳುತ್ತಿದ್ದಾರೆ.

Girl in a jacket
error: Content is protected !!