ವಿಧಾನಸೌಧ ಮೆಟ್ಟಿಲ ಮೇಲಿನ ಆರ್ಸಿಬಿ ಸಂಭ್ರಮಾಚರಣೆಗೆ ರಾಜ್ಯಪಾರನ್ನು ಅಹ್ವಾನಿಸಿದ್ದು ಡಿಕೆಶಿಗೆ ಗೊತ್ತಿಲ್ವಂತೆ

Share

ನವದೆಹಲಿ, ಜೂ,09-ಆರ್ ಸಿಬಿ ಗೆಲುವಿನ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ವಿಧಾನಸೌದದ ಮೆಟ್ಟಿಲಗಳ ಮೇಲೆ ಏರ್ಪಡಿಸಿದ್ದ ಸಂಭ್ರಮಾಚರಣೆಗೆ ರಾಜ್ಯಪಾರನ್ನು ಯಾರು ಅಹ್ವಾನಿಸಿದ್ದರು ಎನ್ನುವಿದು ಗೊತ್ತಿಲ್ಲ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ 11 ಜನ ಸಾವನ್ನಪ್ಪಿದ ಬೆನ್ನಲ್ಲೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಆರ್ ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮದ ಬಗ್ಗೆ ಭಾರಿ ವಿವಾದ ಉಂಟಾಗಿದ್ದು ಸರ್ಕಾರದ ನಡೆಗೆ ವಿಪಕ್ಷಗಳು ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಅವರೂ ಭಾಗವಹಿಸಿದ್ದರು.

ಈ ಹಿನ್ನೆಲೆಯಲ್ಲಿ ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, ವಿಧಾನಸೌಧದ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ದು ಯಾರು ಅಂತಾ ಗೊತ್ತಿಲ್ಲ,ರಾಜ್ಯಪಾಲರಿಗೆ ಆಹ್ವಾನ ನೀಡಿದ್ದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ರಾಜ್ಯಪಾಲರನ್ನೇ ಭೇಟಿಯಾಗಿ ಕೇಳಿ ಎಂದರು.

ಇನ್ನು ಈ ಬಾರಿ ಹೈಕಮಾಂಡ್ ಭೇಟಿ ಆಗೋಕೆ ಸಾಧ್ಯವಾಗಿಲ್ಲ. ಎತ್ತಿನ ಹೊಳೆ ಕುರಿತು ಸಭೆ ಇರುವುದರಿಂದ ಇಂದೇ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದೇನೆ. ಜೂನ್ 18 ರಂದು ಮತ್ತೊಮ್ಮೆ ದೆಹಲಿಗೆ ಬರುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Girl in a jacket
error: Content is protected !!