ಚಿತ್ರದುರ್ಗ ಜೂ.6- ಪರಿಸರವನ್ನು ಸಂಪೂರ್ಣ ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ನಿಷೇಧ ಮಾಡಿದರೆ ಉತ್ತಮ ಪರಿಸರ ಸಂರಕ್ಷಣೆ ಸಾದ್ಯವೆಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ತ್ಯಾಗರಾಜ್ ಹೇಳಿದರು.
ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ,ಶಾಂತಿ ಮತ್ತು ಸೌಹಾರ್ದ ವೇದಿಕೆ ಇವರವತಿಯಿಂದ ಹಮ್ಮಿಕೊಳ್ಳಲಾಗಿದ್ದ,ವಿಶ್ವ ಪರಿಸರ ದಿನಾಚರಣೆ ಸಮಾರಂಭದಲ್ಲಿ ಸಸಿ ನೆಟ್ಟು ನಂತರ ಮಾತನಾಡಿದರು ಪರಿಸರ,ಶಬ್ದ,ವಾಯು ಮಾಲಿನ್ಯಗಳು ಜನತೆಯನ್ನು ಕಷ್ಟಕ್ಕೆ ಸಿಲುಕಿಸಿದ್ದು,ಪರಿಸರ ಸಂರಕ್ಷಣೆ ಆಗಬೇಕಾದರೆ ಪ್ಲಾಸ್ಟಿಕ್ ನ್ನು ನಿಷೇಧಿಸುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳುವುದು ಸೂಕ್ತವಾದದ್ದು ಎಂದು ಹೇಳಿದ ಅವರು.ಪರಿಸರ ರಕ್ಷಣೆ ಕಾರ್ಯ ವರ್ಷಕ್ಕೂಮ್ಮೆ ಅಷ್ಟೇ ಮಾಡಿದರೆ ಸಾಲದು.ನಿತ್ಯ ನಿರಂತರವಾಗಿ ಸಸಿ ನೆಡುವ ಕಾರ್ಯಕ್ರಮಗಳು ಹಮ್ಮಿಕೊಳ್ಳ ಬೇಕೆಂದು ಸಲಹೆ ನೀಡಿದರು.
ಗಾಳಿ,ನೀರು ಮತ್ತು ಪರಿಸರ ಪರಿಶುದ್ಧವಾಗ ಬೇಕಾದರೆ.ಪ್ಲಾಸ್ಟಿಕ್ ನಿಂದ ಮುಕ್ತಗೊಳಿಸಿದಾಗ ಮಾತ್ರ ಸಾದ್ಯವೆಂದು ಹೇಳಿದರು.
ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ ಮಾತನಾಡಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪರಿಸರವನ್ನು ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಅನ್ನುವ ಮೂಲಕ ಕಾನೂನುಗಳನ್ನು ರೂಪಿಸಿಕೊಟ್ಟಿದ್ದಾರೆ ಎಂದರು.
ಪ್ರತಿಯೊಬ್ಬರು ಗಿಡ,ಮರಗಳನ್ನು ಬೆಳೆಸಿ ಉಳಿಸಿಕೊಳ್ಳಲು ಮುಂದೆ ಬರ ಬೇಕು,ಧಮ್ಮ ಕೇಂದ್ರದಲ್ಲಿ ವಿಶ್ವ ಸಾಗರ್ ದಂಪತಿಗಳು ಪರಿಸರ ಸಂರಕ್ಷಣೆಗಾಗಿ ಹಗಲು-ಇರಳು ಶ್ರಮಿಸುತ್ತಿದ್ದು ನಿಜಕ್ಕೂ ಅವರ ಶ್ರಮ ಸಾರ್ಥಕತೆಯನ್ಮು ಕಂಡುಕೊಂಡಿದೆ ಎಂದರು.
ಪತ್ರಕರ್ತರ ಎಂ.ಎನ್.ಅಹೋಬಲಪತಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದಾಗಿ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು ಹಾಗೆಯೇ ನಗರದ ಸಮೀಪದಲ್ಲಿ ನಗರಸಭೆಯಿಂದ ಕಸ ವಿಲೇವಾರಿ ಘಟಕ ಆರಂಭಿಸಿದ್ದು.ಕಳೆದ ಹತ್ತಾರು ವರ್ಷಗಳಿಂದ ಸಮರ್ಪಕವಾಗಿ ವಿಂಗಡನೆ ಮಾಡುವ ವ್ಯವಸ್ಥೆಯನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು.ಜನರು ಇದನ್ನು ಪ್ರಶ್ನಿಸಿ ಹೋರಾಟ ಮಾಡುವ ಹಂತಕ್ಕೆ ತಲುಪಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯವೆಂದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಇತ್ತೀಚಿನ ಪ್ರಕೃತಿ ವಿಕೋಪಗಳಿಗೆ ಜಾಗತಿಕ ತಾಪಮಾನ ಕಾರಣವಾಗುತ್ತಿದ್ದು.ಗಿಡ,ಮರ,ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದೊಂದು ದಿನ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ನದಿ,ತೊರೆ,ಹಳ್ಳ,ಕೊಳ್ಳ,ಕರೆ,ಕುಂಟೆ ಉಳಿಸಿಕೊಳ್ಳುವುದರೊಂದಿಗೆ ಪರಿಸರ ಉಳಿಸಿಕೊಳ್ಳಲು ಕಿಶೋರಿಯರು ರೂಪಕಗಳನ್ನು ಮಾಡಿ ತೋರಿಸಿದರು.
ಪರಿಸರ ದಿನಾಚರಣೆ ಸಮಾರಂಭದಲ್ಲಿ ಸಂಯೋಜಕರಾದ ನಾಗರತ್ನಮ್ಮ,ಬೀಬಿಜಾನ್,
ಅರಣ್ಯ ಸಾಗರ್’,ನಾಗಪ್ಪ ಮುಂತಾದವರು ಹಾಜರಿದ್ದರು