
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ:
ಕ್ರಿಯಾ ಕೇವಲಮುತ್ತರಮ್.
ಕ್ರಿಯೆಯೇ ಉತ್ತರವಾಗಬೇಕು.ಹೇಗಿದ್ದರೂ ಟೀಕೆ ನಿಂದೆ ತಪ್ಪಿದ್ದಲ್ಲ. ಆ ಕುರಿತ ಚಿಂತೆ, ಪ್ರತಿಮಾತುಗಳು ಸ್ವಲ್ಪಮಟ್ಟಿನ ಫಲ ನೀಡಬಹುದು. ಆದರೆ ಸಾಧನೆಯೇ ಅದಕ್ಕೆ ಸರಿಯಾದ ಪ್ರತ್ಯುತ್ತರ. ಅಸಾಧ್ಯವಾದುದನ್ನು ಸಾಧಿಸಿದಾಗ ಟೀಕೆಕಾರರೂ ಹೊಗಳುವವರಾಗುತ್ತಾರೆ. ಮಾತಿಗಿಂತ ಕೃತಿ ಮುಖ್ಯ. ಮಾತು ಕಡಿಮೆ ದುಡಿಮೆ ಹೆಚ್ಚಿರಲಿ. ಮಾತಾಡುವವರಾಗುವುದಕ್ಕಿಂತಲೂ ಹೆಚ್ಚಾಗಿ ಮಾಡುವವರಾಗೋಣ.ಮಾತಿನ ಮಲ್ಲರಾಗದಿರೋಣ. ಉತ್ತರಕುಮಾರನ ಪೌರುಷ ತೋರದಿರೋಣ!!
*ನವಾಙ್ ಮಾತ್ರೇಣ ಪೌರುಷ್ಯಂ ಕ್ರಿಯಾ ಕೇವಲಮುತ್ತರಮ್|*
*ಬಲಾಬಲೇ ಪರೀಕ್ಷ್ಯಂತಾಂ ದೇವಾಶ್ಚೇಂದ್ರಪುರೋಗಮಾಃ||*