ಲಸಿಕೆ ವಿಳಂಬ ನೀತಿಯಿಂದ ಹಲವರ ಸಾವಿಗೆ ಕಾರಣರಾದ ಮೋದಿ-ಮಮತಾ ಟೀಕೆ

Share

ಕೋಲ್ಕತ್ತ,ಜೂ,೦೭: ಮೋದಿಯವರು ಈಗ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತದೆಎಂಬ ನಿರ್ಧಾರವನ್ನು ಈ ಹಿಮದೆಯೇ ತಗೆದುಕೊಂಡಿದದರೆ ಜಿವ ಉಳಿಯುತ್ತಿತ್ತು ಇದರಿಂದ ಅನೇಕರ ಸಾವಿಗೆ ಕಾರನವಾಗಿದೆ ಎಂದು ಮೋದಿ ಹೇಳಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದರೆ.
ಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಮ್ಮ ದೀರ್ಘಕಾಲದ ಬೇಡಿಕೆ ಬಗ್ಗೆ ಫೆಬ್ರುವರಿ ೨೧ರಂದು ಮತ್ತು ಹಲವು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೆ. ಇದನ್ನು ಕೇಳಲು ಅವರಿಗೆ ನಾಲ್ಕು ತಿಂಗಳು ಬೇಕಾಯಿತು. ಅಂತಿಮವಾಗಿ, ಬಹಳ ಒತ್ತಡದ ಬಂದ ಮೇಲೆ ಅವರು ನಮ್ಮ ಮಾತನ್ನು ಕೇಳಿದ್ದಾರೆ. ನಾವು ಹೇಳಿರುವುದನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.
ಈ ಸಾಂಕ್ರಾಮಿಕದ ಆರಂಭದಿಂದಲೂ ದೇಶದ ಜನರ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕಿತ್ತು. ದುರದೃಷ್ಟವಶಾತ್, ಮೋದಿಯವರ ವಿಳಂಬದ ನಿರ್ಧಾರವು ಅನೇಕರು ಜೀವ ಕಳೆದುಕೊಳ್ಳಲು ಕಾರಣವಾಯಿತು. ಈ ಬಾರಿ ಲಸಿಕಾ ಅಭಿಯಾನ ಪ್ರಚಾರ ಕೇಂದ್ರೀಕೃತವಾಗಿರದೆ ಜನಪರವಾಗಿರಲಿ ಎಂದು ಆಶಿಸುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ. ಕೇಂದ್ರದಿಂದ ಉಚಿತ ಕೋವಿಡ್ ಲಸಿಕೆ, ಖರೀದಿಸಲೂ ಇದೆ ಅವಕಾಶ: ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಜೂನ್ ೨೧ರಿಂದ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು.

Girl in a jacket
error: Content is protected !!