Girl in a jacket

Daily Archives: January 21, 2022

ವೀಕೆಂಡ್ ಕರ್ಪ್ಯೂ ರದ್ದು; ಘೋಷಣೆ

ಬೆಂಗಳೂರು,ಜ,21: ಕೊರೋನಾ ಹೆಚ್ಚಳವಾದ ಹಿನ್ನೆಲೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಫ್ಯೂವನ್ನ ರದ್ಧುಗೊಳಿಸಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಘೋಷಣೆ ಮಾಡಿದ್ದಾರೆ. ಕೊರೋನಾ ನಿರ್ವಹಣೆ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಚಿವರು ತಜ್ಞರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ. ಈವಾರದಿಂದಲೇ ವೀಕೆಂಡ್ ಕರ್ಫ್ಯೂ…

ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ

ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ ಯುಜಿಸಿಯು ೨೦೧೦ರ ನಂತರ ಪಿಎಚ್.ಡಿ.ಗೆ ‘ಕೋರ್ಸ್‌ವರ್ಕ್ ಎಂಬ ಅಧ್ಯಯನ ಕ್ರಮವನ್ನು ಅಳವಡಿಸಿತು. ಆದರೆ ಕನ್ನಡ ವಿಶ್ವವಿದ್ಯಾಲಯವು ಈ ಬಗೆಯ ಕೋರ್ಸ್‌ವರ್ಕ್ ಹಾಗೂ ಈಗಿನ ಗುಣಾಂಕ ಪದ್ಧತಿಯನ್ನು ಆರಂಭದಿಂದಲೇ ಅಳವಡಿಸಿಕೊಂಡಿತ್ತೆಂದರೆ ಉತ್ಪ್ರೇಕ್ಷೆಯಲ್ಲ. ಸಂಶೋಧನೆಗೆಂದೇ ಮೀಸಲಾದ ಈ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪ್ರವೇಶ ಪಡೆದ ನಂತರ ಒಂದು ವಾರದ ಸಂಶೋಧನ ಕಮ್ಮಟ, ಅದರಲ್ಲಿ ವಿಷಯತಜ್ಞರ ಮೂಲಕ ಸಂಶೋಧನಾ ತರಬೇತಿ; ಆರು ತಿಂಗಳವರೆಗೆ ಸಂಶೋಧನೆಯ ವಿಧಿ-ವಿಧಾನ, ಅಧ್ಯಯನ ವಿಷಯ, ಅಂತರಶಿಸ್ತು ಮತ್ತು ಬಹುಶಿಸ್ತೀಯ ಅಧ್ಯಯನಗಳ…

ಮಾನವಂತ ಪತ್ರಕರ್ತ ಕಮಾಲ್ ಖಾನ್

ಮಾನವಂತ ಪತ್ರಕರ್ತ ಕಮಾಲ್ ಖಾನ್ ಪತ್ರಿಕಾವೃತ್ತಿಯು ಲಜ್ಜೆಗೆಟ್ಟು ಮಾನ ಕಳೆದುಕೊಂಡಿರುವ ಇಂದಿನ ದಿನಮಾನಗಳ ರೊಜ್ಜಿನ ನಡುವೆ ಕಮಲದಂತೆ ಹೊಳೆದ ಹೃದಯವಂತ ಕಮಾಲ್ ಖಾನ್. ಪತ್ರಿಕಾವೃತ್ತಿ ಜನಪರ ನೆಲೆಯದಾಗಿತ್ತೇ ವಿನಾ ಅಧಿಕಾರಕೇಂದ್ರಿತ ಆಗಿರಲಿಲ್ಲ. ಅವರ ಒಟ್ಟಂದದ ವರದಿಗಾರಿಕೆಯು ಭಾರತದ ಬಹುಮುಖೀ ಸಂಸ್ಖೃತಿ ಮತ್ತು ಗಂಗಾ-ಜಮುನಾ ಸಾಮಾಜಿಕ ಸದ್ಭಾವನೆಯ ಸಮರಸ ಪ್ರತೀಕ. ಗಂಗೆ ಯಮುನೆ ಹರಿಯುವ ಉತ್ತರ ಭಾರತದ ಕೆಲವು ಸೀಮೆಗಳಲ್ಲಿ ‘ಗಂಗಾ- ಜಮುನೀ ತೆಹಜೀಬ್’ ಎಂಬ ಅವಧೀ ನುಡಿಗಟ್ಟಿನ ಕಾವ್ಯಾತ್ಮಕ ರೂಪಕವೊಂದಿದೆ. ಹಿಂದೀಗಿಂತ ಪುರಾತನ ಹಿಂದೀ ನುಡಿಗಟ್ಟು…

Girl in a jacket