Girl in a jacket

Daily Archives: October 22, 2021

ಜಿಲ್ಲೆಗೊಂದು `ಮಾದರಿ ಎಂಜಿನಿಯರಿಂಗ್ ಕಾಲೇಜು’

ಬೆಂಗಳೂರು,ಅ,22: ರಾಜ್ಯದ ಪ್ರತೀ ಜಿಲ್ಲೆಯಲ್ಲೂ ತಲಾ ಒಂದು ಮಾದರಿ ಎಂಜಿನಿಯರಿಂಗ್ ಕಾಲೇಜ ಅನ್ನು ಉತ್ಕೃಷ್ಟ ಗುಣಮಟ್ಟದಲ್ಲಿ  ಅಭಿವೃದ್ಧಿಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಸಂಬಂಧವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಶುಕ್ರವಾರ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. `ಸೂಪರ್-30 ಎಂಜಿನಿಯರಿಂಗ್ ಕಾಲೇಜು’ ಎನ್ನುವ ಈ ವಿಶಿಷ್ಟ ಪರಿಕಲ್ಪನೆಯ ಯೋಜನೆಗೆ, ಈಗಾಗಲೇ ಅಸ್ತಿತ್ವದಲ್ಲಿದ್ದು ಶೈಕ್ಷಣಿಕವಾಗಿ…

ಕಟೀಲ್ ಗೆ ಸೀರೆ ಉಡಿಸಿದರೆ ಹೆಣ್ಣೂ ಅಲ್ಲಾ ಗಂಡೂ ಅಲ್ಲಾ- ಬೇಳೂರು

ಶಿವಮೊಗ್ಗ, ಅ ೨೨: ಹಾನಗಲ್,ಸಿಂಧಿಗಿ ಉಪ ಚುನಾವಣೆಯ ಪ್ರಚಾರದವೇಳೆ ನಡೆಯುತ್ತಿರುವ ನಾಯಕರುಗಳ ವ್ಯಯಕ್ತಿಕ ಹೇಳಿಕೆಗಳಿಗೆ ಈಗ ದಿಕ್ಕು ತಪ್ಪುತ್ತಿದೆ ದಿನಕ್ಕೊಬ್ಬರು ತೀರ ವೈಯಕ್ತಿಕ ಹೇಳಿಕೆಗಳ ಮೂಲಕ ಪ್ರಚಾರಕ್ಕಿಂತ ಹೆಚ್ಚಾಗಿ ವಾಗ್ದಾಳಿಗಳೇ ಮುಂದುವರೆಯುತ್ತಿವೆ. ತೀರ ಕೆಳಹಂತದ ಮಾತುಗಳಿದಿದ್ದಾರೆ. ಬಿಜೆಪಿ ಎಚ್‌ಡಿಕೆ ಕುಮಾರಸ್ವಾಮಿ ಅವರ ದ್ವಿಪತ್ನಿತ್ವದ ಬಗ್ಗೆ ಪ್ರಸ್ತಾಪ ಮಾಡಿದ್ದರೆ ಡಿಕೆಶಿ ರಮೇಶ್ ಜಾರಕಿಹೊಳಿ ಮಂಚದ ಪ್ರಸ್ತಾಪ ಮಾಡಿದ್ದರು ಕಟೀಲು ರಾಹುಲ್ ಗಾಂಧಿ ವಿರುದ್ಧ ಡ್ರಗ್ಸ್‌ಪೆಂಡರ್ ಎಂದು ಹೇಳಿದ್ದರು ಹೀಗೆ ದಿನ ಒನ್ನೊಂದು ರೀತಿಯ ಅಸಹ್ಯ ರೀತಿಯಲ್ಲಿ ಹೇಳಿಕೆಗಳು ಹರಿದು…

ಚಿತ್ರಕಲಾ ಪರಿಷತ್ತಿನಲ್ಲಿ ದೀಪಾವಳಿ ದೀಪಗಳ ಉತ್ಸವ – ಬೆಂಗಳೂರು ಉತ್ಸವಕ್ಕೆ ಚಾಲನೆ

ಬೆಂಗಳೂರು ಅ, 22: ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲ್ಪಡುವ ದೀಪಾವಳಿ ಹಬ್ಬಕ್ಕೆ ಭಾರತೀಯರ ಜೀವನದಲ್ಲಿ ಬಹಳ ಮಹತ್ವವಾದ ಸ್ಥಾನವಿದೆ. ಅದರಲ್ಲೂ ಅಂಧಕಾರವನ್ನು ಹೋಗಲಾಡಿಸುವ ದೀಪಗಳಿಗೆ ಅವುಗಳದೇ ಆದ ವೈಶಿಷ್ಟ್ಯತೆ ಇದೆ. ದೇಶದ ವಿವಿಧ ಭಾಗಗಳಲ್ಲಿ ತಯಾರಿಸಲಾಗುವ ದೀಪಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಲಾಗಿರುವ ದೀಪಗಳ ಉತ್ಸವ – ಬೆಂಗಳೂರು ಉತ್ಸವಕ್ಕೆ ನಟಿಯರಾದ ದೀನಶ್ರೀ ಹಾಗೂ ಪೂರ್ಣಿಮಾ ಪ್ರಭಾಕರ್‌ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ…

ದೇವ -ದೇವರ ನಡುವೆ

ದೇವ -ದೇವರ ನಡುವೆ ಹೌದು ಹಳ್ಳಿ ಅವ್ವನೆಂಬ ಶಕ್ತಿಯ ತವರು.ಅಪ್ಪನೆಂಬ ಬೆವರಿನ ತಾಣ.ಅನೇಕರ ಬಾಲ್ಯದ ತಾಯಿಬೇರುಗಳ ಹಲವು ಕವಲುಗಳ ಈ ಊರ ನೆನಪುಗಳು ಇವತ್ತಿಗೂ ವಿಶಿಷ್ಟ.ಈಗ ಊರುಗಳು ಮೆಲ್ಲಗೆ ತನ್ನ ಹಳ್ಳಿತನ ಕಳಚಿಕೊಂಡು ನಿಧಾನಕ್ಕೆ ನಗರದಂತೆ ಮೇಕಪ್ ಮಾಡಿಕೊಳ್ಳುತ್ತಿವೆ.ಇಲ್ಲಿ ಹಳೆಯ ಧೂಳು ತುಂಬಿದ ಕಾಲುದಾರಿಗಳು ನಾಶವಾಗಿವೆ.ಚರಂಡಿಗಳಲ್ಲದ ಓಣಿಗಳಲ್ಲಿ ಈಗ ಪಂಚಾಯ್ತಿಗಳಿಂದ ಬದಲಾಗಿವೆ. ತಳವರ್ಗಗಳನ್ನ ಕೇರಿಗಳೆಂದು ದೂರ ವಿಟ್ಟಿದ್ದ ಜನರು ಈಗ ಅವುಗಳ ಪಕ್ಕ ಪಕ್ಕದಲ್ಲೇ ಬಣ್ಣ ಬಣ್ಣದ ರಂಗಿನ ಬೆಡಗಿಯರಂತಹ ಮನೆಗಳನ್ನ ಕಟ್ಟಿಕೊಂಡಿದ್ದಾರೆ.ಕೂಲಿ ಜನರ…

ಸ್ಮಾರಕ ಪರಂಪರೆ ಮತ್ತು ಸಾಂಸ್ಕೃತಿಕ ಸಂಗತಿಗಳು

ಸ್ಮಾರಕ ಪರಂಪರೆ ಮತ್ತು ಸಾಂಸ್ಕೃತಿಕ ಸಂಗತಿಗಳು ಚರಿತ್ರೆಯ ರಚನೆಯಲ್ಲಿ ಆಕರಗಳ ಪಾತ್ರ ಬಹುಮುಖ್ಯ. ಆಕರಗಳನ್ನು ಸಾಹಿತ್ಯಕ ಮತ್ತು ಪುರಾತತ್ವೀಯ ಆಕರಗಳೆಂದು ವಿಭಾಗಿಸಲಾಗಿದೆ. ಪುರಾತತ್ವೀಯ ಆಕರಗಳಲ್ಲಿ ಸ್ಮಾರಕಗಳಿಗೆ ವಿಶೇಷ ಮಹತ್ವವಿದೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ರಚನೆಗೆ ನೆರವಾಗುವ ಆಕರ ಸಾಮಗ್ರಿಗಳಲ್ಲಿ ಸ್ಮಾರಕಗಳಿಗಿಂತ ಪ್ರಮುಖ ಸಾಧನ ಮತ್ತೊಂದಿಲ್ಲ. ಅವುಗಳಲ್ಲಿ ಪ್ರಾಗಿತಿಹಾಸ ಕಾಲದ ಶಿಲಾ ಉಪಕರಣ-ಬೃಹತ್ ಶಿಲಾಸಮಾಧಿಗಳಿಂದ ಹಿಡಿದು ದೇವಾಲಯ, ಮಸೀದಿ, ಚರ್ಚು, ಕೋಟೆ-ಕೊತ್ತಲ, ಅರಮನೆ, ಮಹಲ್ ಇತ್ಯಾದಿ ಸೇರಿವೆ. ಈ ಬಗೆಯ ಸ್ಮಾರಕಗಳು ಪ್ರಾಚೀನ ಪರಂಪರೆಯ ಧ್ಯೋತಕಗಳು. ಇವು ಪ್ರಾಚೀನರ…

ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದರಾಜಕುಮಾರ್‌ಅಭಿನಯದಜಗಜ್ಯೋತಿ ಬಸವೇಶ್ವರ

ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದರಾಜಕುಮಾರ್‌ಅಭಿನಯದಜಗಜ್ಯೋತಿ ಬಸವೇಶ್ವರ ಶಶಿಕಲಾ ಚಿತ್ರ ಲಾಂಛನದಲ್ಲಿಐತಿಹಾಸಿಕ ಕಪ್ಪು-ಬಿಳುಪು ಚಿತ್ರಜಗಜ್ಯೋತಿ ಬಸವೇಶ್ವರ ೧೯೫೯ರಲ್ಲಿ ತೆರೆಗೆ ಬಂದಿತು. ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನದಚಿತ್ರಕ್ಕೆ ಜಿ.ವಿ. ಅಯ್ಯರ್ ಹಾಗೂ ಭಗವಾನ್ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು.ಈ ಚಿತ್ರ ರಾಷ್ಟ್ರಪತಿಗಳ ಅರ್ಹತಾಪತ್ರ ಪ್ರಶಸ್ತಿಗೆ ಭಾಜನವಾಯಿತು.ದೊರೆ ಭಗವಾನ್‌ಖ್ಯಾತಿಯ ಭಗವಾನ್ ಈ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿಚಿತ್ರರಂಗ ಪ್ರವೇಶಿಸಿದರು. ಹೊನ್ನಪ್ಪ ಭಾಗವತರ್, ರಾಜಕುಮಾರ್, ಅನಿಲ್‌ಕುಮಾರ್, ಚಿ.ಉದಯಶಂಕರ್, ಚಂದ್ರಯ್ಯಸ್ವಾಮಿ, ಕೆ.ಎಸ್.ಅಶ್ವತ್, ಬಿ.ಸರೋಜಾದೇವಿ, ಟಿ.ಎನ್.ಬಾಲಕೃಷ್ಣ, ಜಿ.ವಿ.ಅಯ್ಯರ್, ಸಂಧ್ಯಾ, ಲೀಲಾವತಿ, ಚಿ.ಸದಾಶಿವಯ್ಯ, ನರಸಿಂಹರಾಜು, ಹೆಚ್.ರಾಮಚಂದ್ರಶಾಸ್ತ್ರಿ, ಈಶ್ವರಪ್ಪ, ವೀರಭದ್ರಪ್ಪ, ವೆಂಕಟಸುಬ್ಬಯ್ಯ, ಆರ್.ಎನ್.ಮಾಗಡಿ, ಹುಲಿಮನೆಸೀತಾರಾಮಶಾಸ್ತ್ರಿ,…

ಆಡಿದ ಮಾತೇ ತಿರುಗುಬಾಣ

ದೇವಸ್ಥಾನ, ಚರ್ಚು, ಗುರುದ್ವಾರ ಹೀಗೆ ಯಾವುದಕ್ಕೂ ಅವರವರ ಭಾವಕ್ಕೆ ಅನುಗುಣವಾಗಿ ಅದನ್ನು ಹೋಲಿಸಿಕೊಳ್ಳಬಹುದು. ಶಾಸಕ ಪಾಟೀಲರು ಈ ಬಗೆಯ ಭಾನಗಡಿಗಳನ್ನು ಮಾಡಿಕೊಳ್ಳುವುದಕ್ಕೆ ಹೊಸಬರೇನೂ ಅಲ್ಲ. ನಾನು ಬಾದಶಹಾ ಎಂಬ ಸಿನಿಮೀ ಶೈಲಿಯ ಡೈಲಾಗ್‌ನಲ್ಲಿ ಹೇಳಿರುವಂತೆ ಅವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಗೊತ್ತಿಲ್ಲದೇ ಇರುವುದು ಎಂದರೆ ತಾವು ಏನನ್ನು ಮಾಡಬಾರದು; ಏನನ್ನು ಹೇಳಬಾರದು ಎನ್ನುವುದು. ಆಡಿದ ಮಾತೇ ತಿರುಗುಬಾಣ ನಾನು ಬಾದಶಹಾ ಇದ್ದೀನಿ. ಕಾರ್ಪೊರೇಟರು, ಕೌನ್ಸಿಲರುಗಳು ಏನೂ ಅಲ್ಲ. ಏನು ಮಾಡಬೇಕು ಎನ್ನುವುದು ನನಗೆ ಗೊತ್ತಿದೆ…. ಇದು…

ಕಲ್ಲು ಎತ್ತಿಹಾಕಿ ಇಬ್ಬರ ಕೊಲೆ

ಆನೇಕಲ್, ಅ,23 ಇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ಇಲ್ಲಿನ ಅತ್ತಿಬೆಲೆ- ಟಿವಿಎಸ್ ರಸ್ತೆಯಲ್ಲಿ ತಡರಾತ್ರಿಯಲ್ಲಿ  ನಡೆದಿದೆ. ಕೊಲೆಯಾದವರನ್ನು ಅತ್ತಿಬೆಲೆಯ ದೀಪಕ್ ಹಾಗೂ ಮಾಯಸಂದ್ರದ ಬಾಸ್ಕರ್ ಎಂದು ಗುರುತಿಸಲಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಗಲಾಟೆ ನಡೆದು ಮತ್ತೊಂದು ಕಡೆಯವರು ಈ ಇಬ್ಬರನ್ನು ಅಟ್ಟಾಡಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದವರುಈ ಬಗ್ಗೆ ಮಾಹಿತಿ ತಿಳಿದ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಮೃತದೇಹಗಳ ಪಕ್ಕದಲ್ಲಿ ಎರಡು ಬೈಕ್​ಗಳು…

ಮಗನಿಂದಲೇ ತಂದೆ ಅತನಜೊತಗಿದ್ದ ಮಹಿಳೆಯನ್ನು ಕೊಲೆ ಮಾಡಿದ ಮಗ

ಮೈಸೂರು,ಅ,22:ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತಂದೆ ಮತ್ತು ಆತನ ಜೊತೆಯಿದ್ದ ಮಹಿಳೆಯನ್ನು ಮಗ ಬರ್ಭರವಾಗಿ ಹತ್ಯೆ ಮಾಡಿದ ಘಟನೆ ಸಾಂಸ್ಕೃತಿಕ ನಗರ ಮೈಸೂರಿನ ಹೊರವಲಯದಲ್ಲಿ ನಡೆದಿದೆ. ಮೈಸೂರಿನ ಶ್ರೀ ನಗರದಲ್ಲಿ ಈ ಘಟನೆ ನಡೆದಿದೆ. ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ ಸಾಗರ್ ನಾಪತ್ತೆ ಯಾಗಿದ್ದಾನೆ. ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿಯಾಗಿದ್ದು, ಲತಾ ಮೈಸೂರಿನ ಶ್ರೀನಗರದಲ್ಲಿ ವಾಸಿಸುತ್ತಿದ್ದರು. ಈ ನಡುವೆ ಲತಾ ಮನೆಗೆ ನುಗ್ಗಿದ ಸಾಗರ್ ಮೊದಲು ತಂದೆಯನ್ನ ಮಚ್ಚಿನಿಂದ ಕೊಲೆ ಮಾಡಿದ್ದಾನೆ. ನಂತರ…

ದೇಶಕ್ಕೆ ದೊಡ್ಡ ಗುರಿ ಸೃಷ್ಟಿಸಿ ,ಸಾಧಿಸುವುದು ತಿಳಿದಿದೆ;ಮೋದಿ

ನವದೆಹಲಿ,ಅ,22: ಭಾರತಕ್ಕೆ ದೊಡ್ಡ ಗುರಿಗಳನ್ನು ಸೃಷ್ಟಿಸಿ ಅದನ್ನು ಸಾಧಿಸುವುದು ತಿಳಿದಿದೆ. ಆದರೆ ಈ ಸಂದರ್ಭದಲ್ಲಿ ನಾವು ಜಾಗರೂಕರಾಗಿರಬೇಕು. ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು ಎಂದು ಪ್ರಧಾನಿ ನರೇಂಪರೋಕ್ಷವಾ ಟೀಕಿಸುವವರಿಗೆ ಪರೋಕ್ಷವಾಗ ಉತ್ತರ ನೀಡಿದ್ದಾರೆ. ಇಂದು ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶ 100 ಕೋಟಿ ಲಸಿಕೆ ಗುರಿಯನ್ನು ಸಾಧಿಸಿದ ಸಂತೋಷವನ್ನು ಹಂಚಿಕೊಂಡರು. ಇದು ಎಲ್ಲರ ಸಾಧನೆ, ಹೃದಯಪೂರ್ವಕವಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ವ್ಯಾಕ್ಸಿನೇಷನ್ ನಲ್ಲಿ ಭಾರತ ಜಗತ್ತಿನಲ್ಲಿಯೇ 2ನೇ ಸ್ಥಾನದಲ್ಲಿದೆ. ಲಸಿಕೆ ನೀಡಿಕೆಯಲ್ಲಿ ಇಂದು ಭಾರತ…

ಇಷ್ಟು ದಿನ ಹಾನಗಲ್ ಕಂಡಿರಲಿಲ್ವ ಸರ್ಕಾರದ ವಿರುದ್ದ ಸಿದ್ದು ಕಿಡಿ

ಹುಬ್ಬಳ್ಳಿ, ಅ,22ನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ, ಇಷ್ಟು ದಿನ ಏಕೆ ಹಾನಗಲ್ ಅವರಿಗೆ ಕಂಡಿರಲಿಲ್ಲ? ಬಡವರಿಗೆ ಒಂದು ಮನೆಯಾದ್ರೂ ಕೊಟ್ಟಿದ್ದಾರಾ? ಅಭಿವೃದ್ಧಿ ಎಂದರೆ ಏನು ಗೊತ್ತಾ? ಬರೀ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲೋದು ಗೊತ್ತು ಅವರಿಗೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿಕಾರಿದರು. ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಹಾನಗಲ್ ಕ್ಷೇತ್ರಕ್ಕೆ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀನಿ ಎಂದು ಹಿಂದಿನ…

              ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಂ

ಸಿದ್ಧಸೂಕ್ತಿ:               ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಂ ವಿದ್ಯಾರ್ಥಿಯು ಸುಖವನ್ನು ತ್ಯಜಿಸಬೇಕು. ಆರೋಗ್ಯವನ್ನು ರಕ್ಷಿಸಿಕೊಂಡು ತಾಯಿ ತಂದೆ ಗುರುಹಿರಿಯರಿಗೆ ದೈವಪ್ರಕೃತಿಗಳಿಗೆ ವಿನಮ್ರವಾಗಿದ್ದು ಪಂಚೇಂದ್ರಿಯ ಸುಖಗಳಿಂದ ದೂರವಿರಬೇಕು.ಕಣ್ಣಿಗೆ ಚಿತ್ರೋದ್ಯಾನಮಾಲ್! ನಾಲಿಗೆಗೆ ಪಬ್ಬಾರ್ದರ್ಶಿನಿ ತಿಂಡಿ ತೀರ್ಥ! ಕಿವಿಗೆ ಮೊಬೈಲ್ ಕುಣಿಕೆ! ಮೂಗಿಗೆ ಅತ್ತರ್! ಚರ್ಮಕೆ ಸಂಗಾತಿ! ಎಂದರೆ ವಿದ್ಯೆ ಎಲ್ಲಿ? ಹರಟೆ ರುಚಿ ಅತಿನಿದ್ರಾಲಸ್ಯ ತೊರೆದು ತಪಸ್ವಿಯಂತೆ ಏಕಾಗ್ರತೆಯಿಂದ ಕಠಿಣ ಅಧ್ಯಯನ ಮಾಡಿದರೆ ಮಾತ್ರ ವಿದ್ಯೆ. ಸುಖಾರ್ಥಿಗೆ ವಿದ್ಯೆ ಇಲ್ಲ.ಸುಖವೇ ಬೇಕೆಂದರೆ…

Girl in a jacket