Girl in a jacket

Daily Archives: October 9, 2021

ಪರಿಶಿಷ್ಟ ಜಾತಿ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧ; ಶ್ರೀರಾಮುಲು

ಯಾದಗಿರಿ.ಅ.9: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ , ಆರ್ಥಿಕ, ಶೈಕ್ಷಣಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ  ಬಿ. ಶ್ರೀರಾಮುಲು ಅವರು ತಿಳಿಸಿದರು. ಯಾದಗಿರಿಯಲ್ಲಿಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಮತ್ತು ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ದವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ…

ದೆಹಲಿ ರೌಡಿಗಳ ಆಳ್ವಿಕೆಗೆ ಗ್ಯಾಂಗ್ ಸ್ಟರ್ ಸಿಂಡಿಕೇಟ್..!!

ದೆಹಲಿ ರೌಡಿಗಳ ಆಳ್ವಿಕೆಗೆ ಗ್ಯಾಂಗ್ ಸ್ಟರ್ ಸಿಂಡಿಕೇಟ್..!! Writing;ಪರಶಿವ ಧನಗೂರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೌಡಿಗಳ ಗ್ಯಾಂಗ್ ಹಾವಳಿ ಜಾಸ್ತಿಯಾಗಿದ್ದು, ದಶಕಗಳಿಂದಲೂ ಅಂಡರ್ ವರ್ಲ್ಡ್ ಗ್ಯಾಂಗ್ ಸ್ಟರ್ ಗಳು ರಕ್ತದ ಹಸಿವು ಹತ್ತಿಸಿಕೊಂಡು ದೆಹಲಿಯ ಬೀದಿಗಳಲ್ಲಿ ರಕ್ತದ ಕಾಲುವೆ ನಿರ್ಮಾಣ ಮಾಡಿ ಪ್ರತೀಕಾರದ ಹೆಸರಲ್ಲಿ ನಗರವನ್ನು ನರಕಕ ಮಾಡಿಬಿಟ್ಟಿದ್ದಾರೆ! ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ನ್ಯಾಯಾದೀಶರೆದುರು ರೌಡಿಯೊಬ್ಬನನ್ನು ವಿಚಾರಣೆ ನಡೆಸುವಾಗ ಗುಂಡಿಟ್ಟು ಕೊಂದಿರುವ ದಾಖಲೆಯೇ ಬರೆದಿರುವ ನರಹಂತಕ ನಟೋರಿಯಸ್ ದಿಲ್ಲಿಯ ಮಾಫಿಯಾ ಡಾನ್ ಗಳು ಇಡೀ…

೧೧೦ರತ್ತ ಪೆಟ್ರೋಲ್ ಬೆಲೆ,ಡಿಸೆಲ್೧೦೦ರತ್ತ..!

ಬೆಂಗಳೂರು ,ಅ,೦೯: ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸತತ ೧೧ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ೩೧ ಪೈಸೆ ಏರಿಸಿ ೧ ಲೀಟರ್ ಪೆಟ್ರೋಲ್ ಅನ್ನು ೧೦೭.೧೪ ರೂ.ಗೆ ಮಾರಾಟ ಮಾಡಲಾಗಿದ್ದರೆ, ಬಳ್ಳಾರಿ ೧ ಲೀಟರ್ ಪೆಟ್ರೋಲ್‌ಗೆ ೨೨ ಪೈಸೆ ಏರಿಸಲಾಗಿದ್ದು, ಅತ್ಯಧಿಕ ೧೦೯.೧೯ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಪೆಟ್ರೋಲ್…

ಲಖಿಂಪುರ್ ಹಿಂಸಾಚಾರ: ಸಾಕ್ಷ್ಯಗಳಿಲ್ಲದೆ ಬಂಧನ ಸಾಧ್ಯವಿಲ್ಲ- ಯೋಗಿ

ಲಕ್ನೋ, ಅ, ೦೯: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕಷ್ಟಿಗಳಿಲ್ಲದೆ ಬಂಧನ ಸಾಧ್ಯವಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಭಾನುವಾರ ನಡೆದ ಹಿಂಸಾಚಾರದಲ್ಲಿ ೪ ಮಂದಿ ರೈತರು ಸೇರಿ ಒಟ್ಟು ೮ ಮಂದಿ ಮೃತಪಟ್ಟಿದ್ದರು. ಕಾನೂನಿನ ಮುಂದೆ ಎಲ್ಲರೂ ಸಮಾನರು, ಸುಪ್ರೀಂಕೋರ್ಟ್ ಪ್ರಕಾರ ಸಾಕ್ಷ್ಯವಿಲ್ಲದೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಹಾಗೂ ತನಿಖೆ ನಡೆಯುತ್ತಿದೆ. ದೂರು ದಾಖಲಾಗಿದೆ. ತಪ್ಪು ಯಾರದ್ದೇ ಇದ್ದರೂ ಶಿಕ್ಷೆ ನಿಶ್ಚಿತ ಎಂದು ಯೋಗಿ ಹೇಳಿದರು. ಯಾರಿಗೂ…

ವಿದ್ಯಾಧನಂ ಸರ್ವಧನಪ್ರಧಾನಂ

 ಸಿದ್ಧಸೂಕ್ತಿ :                 ವಿದ್ಯಾಧನಂ ಸರ್ವಧನಪ್ರಧಾನಂ ವಿದ್ಯಾಸಂಪತ್ತು ಎಲ್ಲ ಸಂಪತ್ತುಗಳಿಗಿಂತ ಮುಖ್ಯ. ಹಣ,ಚಿನ್ನ, ಬೆಳ್ಳಿ,ಭೂಮಿ,ಕಟ್ಟಡ, ಸ್ತ್ರೀ ಪುರುಷ ,ವಸ್ತು ವಾಹನ ಸಂಪತ್ತನ್ನು ಪರರು ಕದಿಯಬಹುದು.ಸರ್ಕಾರ ವಶಪಡಿಸಿಕೊಳ್ಳಬಹುದು. ಸಹೋದರಾದಿ ವಾರಸುದಾರರಿಗೆ ಹಂಚಿಕೆಯಾಗಬಹುದು. ಅಪಹರಣ ಅತಿಕ್ರಮಗಳಿಗೆ ತುತ್ತಾಗಬಹುದು. ಬಳಸಿದಂತೆ ಸವಕಲು – ಖಾಲಿಯಾಗಬಹುದು.ಹೊರಲು ದೇಹಕ್ಕೆ,ಉಳಿಸಿಕೊಳ್ಳುವ ಕಸರತ್ತು ತಲೆಗೆ ಭಾರವಾಗಬಹುದು. ಆದರೆ ವಿದ್ಯಾಸಂಪತ್ತು ಈ ಯಾವುದಕ್ಕೂ ತುತ್ತಾಗುವುದಿಲ್ಲ ! ಬಳಸಿದಂತೆ ಬೆಳೆದು ಬೆಳಗುತ್ತದೆ ! ಮೆದುಳು ಬಲವಾಗಿರುವವರೆಗೂ ಅಚ್ಚಳಿಯದೇ ನಮ್ಮೊಂದಿಗಿದ್ದು…

Girl in a jacket