Girl in a jacket

Daily Archives: October 1, 2021

ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಡಾ.ಕಾಂತರಾಜ್ ಆಯೋಗದ ವರದಿ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ. ಅದನ್ನು ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸುವ ಕೆಲಸವನ್ನು ಆಯೋಗದ ಅಧ್ಯಕ್ಷರು ಆಗ ಮಾಡಲಿಲ್ಲ. ವರದಿಯಲ್ಲಿರುವ ಶಿಫಾರಸುಗಳ ವಿರುದ್ಧ ಹೈಕೋರ್ಟ್‌ನಲ್ಲಿ ಖಟ್ಲೆ ದಾಖಲಾಗಿರುವುದರಿಂದ ಅದು ಇತ್ಯರ್ಥವಾಗುವರೆಗೆ ಕಾಯಬೇಕಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ ಜಾತಿ ಸಮೀಕ್ಷೆ ಆಗಬೇಕೆಂಬ ಆಗ್ರಹಕ್ಕೆ ಬಹುದೊಡ್ಡ ಬೆಂಬಲ ದೇಶವ್ಯಾಪಿ ವ್ಯಕ್ತವಾಗುತ್ತಿದೆ. ಕರ್ನಾಟಕ…

ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

ಜೈನ ಜಿನಾಲಯಗಳು ದೇವಾಲಯಗಳಾದದ್ದು. . . ಜೈನಧರ್ಮವು ಭಾರತದ ಪ್ರಾಚೀನ ಧರ್ಮಗಳಲ್ಲೊಂದು. ಇದು ಕರ್ನಾಟಕಕ್ಕೆ ಸಂಪ್ರತಿ ಚಂದ್ರಗುಪ್ತ ಹಾಗೂ ಭದ್ರಬಾಹುವಿನಿಂದ ಬಂತೆಂಬುದು ವಿದ್ವಾಂಸರ ಅಭಿಮತ. ಅಂದಿನಿಂದ ಜೈನ ಧರ್ಮವು ವಿಕಸನಗೊಳ್ಳುತ್ತಾ ರಾಷ್ಟ್ರಕೂಟ, ಗಂಗ, ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ಮನೆತನಗಳು ಹಾಗೂ ಆಳರಸರ ಅವಧಿಯಲ್ಲಿ ಕರ್ನಾಟಕದಾದ್ಯಂತ ಉಜ್ವಲವಾಗಿ ಬೆಳೆದುದನ್ನು ಕಾಣುತ್ತೇವೆ. ಈ ನಡುವೆ ಸಾಕಷ್ಟು ಏರಿಳಿತಗಳನ್ನೂ ಈ ಧರ್ಮವು ಕಂಡಿದೆ. ಆದರೆ ಕುಮ್ಮಟದ ಅರಸರು, ವಿಜಯನಗರ ಹಾಗೂ ನಂತರದ ಅವಧಿಯಲ್ಲಿ ಈ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯದೆ…

ಊಟ ಊಟಗಳನ್ನ ಸುತ್ತಿ…

ಊಟ ಊಟಗಳನ್ನ ಸುತ್ತಿ… ಹಸಿವೆಂಬ ಹೆಬ್ಬಾವು ಬಸಿರ ಹಿಡಿದರೆ ವಿಷವೇರಿತ್ತಯ್ಯ ಆಪಾದ ಮಸ್ತಕಕೆ ಹಸಿವಿಗನ್ನವನಿಕ್ಕಿ ವಿಷವನಿಳಿಸಬಲ್ಲಡೆ ವಸುಧೆಯೊಳಗೆ ಆತನೇ ಗಾರುಡಿಗ ಕಾಣಾ ರಾಮನಾಥ. ಚುಮು ಚುಮು ಬೆಳಕರಿದು ನೆಲಕೆ ಮುಗಿಲ ಕಣ್ಣೀರು ಇಬ್ಬನಿಯಾಗಿ ಬೀಳುವಾಗಲೇ ತಿರುಕವ್ವ, ಬಸವ್ವ,ಚೌಡವ್ವರೆಂಬ ಧರೆಯ ಹಳ್ಳಿ ಮನೆಗಳ ಹೊಲೆ ಹೊತ್ತಿ ರೊಟ್ಟಿಯ ಸಪ್ಪುಳವು ಮೊಳಗುತಿತ್ತು. ಮನೆ ಮುಂದೆ ಇಂಡಿ ದುಂಡಿಯ ನಾದ ಬಳೆಗಳೊಂದಿಗೆ ತೂಗುತಿತ್ತು.ಅಂಗಳದ ಕೋಳಿ ಪುಟ್ಟಿಯಲ್ಲಿ ಹುಂಜಗಳು ಬೆಳಕಾತ್ರಲೇ… ಎಂದು ಕೂಗುತ್ತಲೇ ಈಚಲ ಚಾಪೆಗಳಲ್ಲಿ ಅಡ್ಡಾದ ಮಕ್ಕಳು ಅವ್ವನ ಕೂಗಿಗೆ…

ಭಾರತೀಯ ಸಶಸ್ತ್ರ ಪಡೆಗಳು: ಮುಸ್ಲಿಂ ಯುವಕರಿಗೆ ಅವಕಾಶಗಳು

-ಮಾನಸ,ಬೆಂಗಳೂರು ಭಾರತೀಯ ಸಶಸ್ತ್ರ ಪಡೆಗಳು: ಮುಸ್ಲಿಂ ಯುವಕರಿಗೆ ಅವಕಾಶಗಳು ಇಸ್ಲಾಂನಲ್ಲಿ ತಾಯ್ನಾಡಿಗೆ ನಿಷ್ಠೆಯು ನಂಬಿಕೆಯ ಒಂದು ಭಾಗವಾಗಿರುವ ಇಸ್ಲಾಂ ಅನ್ನು ಧರ್ಮವಾಗಿ ಅನುಸರಿಸುವುದಕ್ಕೂ ಮತ್ತು ಆ ದೇಶಕ್ಕೆ ನಿಷ್ಠೆಯನ್ನು ಹೊಂದಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಖುರಾನ್ ಹೇಳುತ್ತದೆ, “ಓ ನಂಬುವವರೇ, ದೇವರಿಗೆ ವಿಧೇಯರಾಗಿರಿ ಮತ್ತು ಪ್ರವಾದಿಗೆ ವಿಧೇಯರಾಗಿರಿ ಮತ್ತು ನಿಮ್ಮಿಂದ ಅಧಿಕಾರದಲ್ಲಿರುವವರಿಗೆ ವಿಧೇಯರಾಗಿರಿ (೪:೬೦). ಅವರ ಸ್ವಂತ ದೇಶ ಮತ್ತು ಅವರ ಜನರನ್ನು ಪ್ರೀತಿಸು ಒಳ್ಳೆಯ ಮುಸ್ಲೀಮರ ಲಕ್ಷಣವಾಗಿದೆ. ಪ್ರೊಫೆಟ್ ಹಜರತ್ ಮುಹಮದ್ ಹೇಳಿದರು: ’ನಿಮ್ಮ ದೇಶವನ್ನು ಪ್ರೀತಿಸುವುದು…

ಜಂಗಮ

ಜಂಗಮ ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಜನನ ಮರಣ ರಹಿತ ತತ್ತ್ವ, ಬ್ರಹ್ಮ ಪರಮಾತ್ಮಾ ದೇವರು ಇತ್ಯಾದಿ. ಹುಟ್ಟುವುದು, ಸಾಯುವುದು. ನಾಮ ರೂಪಾತ್ಮಕ ವ್ಯಕ್ತಿ – ವಸ್ತುಗಳೆಲ್ಲೆಡೆ ಸೂಕ್ಷ್ಮರೂಪದಿಂದ ವ್ಯಾಪಿಸಿದ ತತ್ತ್ವ ಜಂಗಮ. ನಿರ್ದಿಷ್ಟ ನಾಮ ರೂಪ ಅದಕ್ಕಿಲ್ಲ.ಎಲ್ಲ ನಾಮ ರೂಪವೂ ಅದರದ್ದೇ. ಹೀಗೆ ಅದು ಜನನ ಮರಣ ರಹಿತ. ನೀರು ಗುಳ್ಳೆಯಾಗುವುದು, ಒಡೆಯುವುದು. ಉಬ್ಬಿದ ರೂಪ, ಗುಳ್ಳೆ ನಾಮ, ಒಡೆದ ಬಳಿಕ ಇಲ್ಲ. ಮೊದಲೂ ನೀರು, ಒಡೆದ ಮೇಲೂ ನೀರು! ಬಂಗಾರದಿಂದ ಬಗೆ ಬಗೆ ಆಭರಣ.…

Girl in a jacket