Girl in a jacket

Daily Archives: September 20, 2021

ಕೃಷ್ಣಮೇಲ್ದಂಡೆ ಯೋಜನೆ ಹಿನ್ನೀರು ಮುಳುಗಡೆ ಜಮೀನು ಮಾರ್ಗಸೂಚಿ ಪರಷ್ಕರಿಸಲು ಮನವಿ

ಬೆಂಗಳೂರು,ಸೆ, 20:ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ 524.256ಮೀ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲೂಕಿನ ಜಮೀನಿನ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಣೆ ಮಾಡಬೇಕು ಎಂದು ಬಬಲೇಶ್ವರ ತಾಲೂಕಿನ ರೈತರ ನಿಯೋಗ ಇಂದು ಕಂದಾಯ ಸಚಿವ ಆರ್.ಅಶೋಕ ಅವರಿಗೆ ಮನವಿ ಸಲ್ಲಿಸಿದರು. ಆಲಮಟ್ಟಿ ಆಣೆಕಟ್ಟು 524.256ಮೀ ಎತ್ತರಿಸಿ, ನೀರು ನಿಲ್ಲಿಸಿದಾಗ ಅಂದಾಜು 75 ಸಾವಿರ ಎಕರೆ ಪ್ರದೇಶದಷ್ಟು ಜಮೀನು ಮುಳುಗಡೆಯಾಗಲಿದ್ದು, ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ 14 ಗ್ರಾಮಗಳು ಮುಳುಗಡೆಯಾಗಲಿವೆ. ಈ ಹಿಂದೆ 2015-16ರಲ್ಲಿ ಮಾರ್ಗಸೂಚಿ ಬೆಲೆಯನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ…

ಬೆಲೆ ಏರಿಕೆ ಟೀಕೆಗೆ ಎದುರೇಟು ನೀಡಿದ ಸಿಎಂ

ಬೆಂಗಳೂರುಸೆ,20: ಬೆಲೆ ಏರಿಕೆ ಎಂಬುದು ನಿರಂತರ ಪ್ರಕ್ರಿಯೆ. ಇದಕ್ಕೆ ಯಾವುದೇ ಸರ್ಕಾರವನ್ನು ನಿರ್ದಿಷ್ಠವಾಗಿ ಬೊಟ್ಟು ಮಾಡಿ ತೋರಿಸಿ ದೂಷಣೆ ಮಾಡುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭೆಯಲ್ಲಿಂದು ನಿಯಮ 69ರ ಅಡಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಸಾರಾಸಗಟಾಗಿ ಅಂಕಿ-ಅಂಶಗಳ ಸಮೇತ ಸದನದ ಮುಂದಿಟ್ಟರು. ಈ ಹಂತದಲ್ಲಿ ಆಡಳಿತರೂಢ ಬಿಜೆಪಿ ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಬಿಜೆಪಿ…

ಸಿಎಂ ಬೊಮ್ಮಾಯಿ ಮಾಡಿದ ಭಾಷಣದ ಮೋಡಿ

ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಬೆಂಗಳೂರು,ಸೆ,20:ಬೆಲೆ ಏರಿಕೆ ನಿಲುವಳಿ ಸೂಚನೆ ಚರ್ಚೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ ಸುಧೀರ್ಘ ಉತ್ತರ ನೀಡಿದರು.ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಸಂಸದೀಯ ಪಟುವಾಗಿ ವಿಜೃಂಭಿಸಿದರು.ಏಟಿಗೆ ಎದಿರೇಟು ;ಪಟ್ಟಿಗೆ ಪ್ರತಿ ಪಟ್ಟು;ಲಯಬದ್ಧ ಮಾತುಗಾರಿಕೆ;ನಾಟಕೀಯ ಸ್ಪರ್ಶ-ಒಟ್ಟಿನಲ್ಲಿ ತಾವೊಬ್ಬ ಪ್ರಚಂಡ ಭಾಷಣಕಾರರೆಂದು ಸಾಬೀತು ಪಡಿಸಿದರು.ಜೆ ಎಚ್ ಪಟೇಲರು ಮುಖ್ಯಮಂತ್ರಿಯಾಗಿ ಮಾಡಿದ ಮೊದಲ ಭಾಷಣವನ್ನು ನೆನಪಿಸುವಂತಿತ್ತು.ಅವರು ಅಡಿಗ-ಕುವೆಂಪು;ಕಾಫ್ಕ-ಕಾಮು;ರಷ್ಯಾ ಕ್ರಾಂತಿ-ಫ್ರೆಂಚ್ ಕ್ರಾಂತಿ ಹೀಗೆ ಪಟೇಲರು ತಮ್ಮ ಭಾಷಣದಲ್ಲಿ ಇಡೀ ಪ್ರಪಂಚದ ಪರ್ಯಟನೆ ಮಾಡಿ ಬಿಟ್ಟಿದ್ದರು.ಆಗ ವಿರೋಧ ಪಕ್ಷದ…

ಈವಾರ ತೆರೆಗೆ,’ ಜನುಮದ ಜಾತ್ರೆ’

ಶ್ರೀ ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ ಲಾಂಛನ ದಲ್ಲಿ ದೊಡ್ಮನೆ ಮಂಜುನಾಥ್ ಎಂ ಅವರ ನಿರ್ಮಾಣದ ಈ ಚಿತ್ರವನ್ನು ಈ ವಾರ ರಾಜ್ಯದ್ಯಂತ ತೆರೆಗೆ ತರುತ್ತಿದ್ದಾರೆ. ಆಟೋ ಚಾಲಕನಾಗಿದ್ದುಕೊಂಡೇ ಜನುಮದಜಾತ್ರೆ ಎಂಬ ಸಿನಿಮಾ ನಿರ್ದೇಶನ ಮಾಡಿರುವ ಆಟೋ ಆನಂದ್ . ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೇಮಕಥೆಯ ಚಿತ್ರ ಇದಾಗಿದ್ದು, ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಪ್ರೇಮ ಕಥೆಗಳ ಹಾಗೆ ಇದೂ ಕೂಡ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ…

ಬಾಯಾಗ ಬಸಪ್ಪ ಹೊಟ್ಯಾಗ ವಿಷಪ್ಪ!

ಸಿದ್ಧಸೂಕ್ತಿ : ಬಾಯಾಗ ಬಸಪ್ಪ ಹೊಟ್ಯಾಗ ವಿಷಪ್ಪ(ಹೊರಗ ಬಸಪ್ಪ ಒಳಗ ವಿಷಪ್ಪ) ಬಾಯಲ್ಲಿ ಬಸವ! ಶಿವ! ಹರಿ! ವಿಷ್ಣು! ಗೋವಿಂದ! ರಾಮ! ಕೃಷ್ಣ! ಎಂದು ಜಪಿಸುವರು ಹಲರು! ಅಂತರಂಗವೂ ಹಾಗಿದ್ದರೆ ಬಲು ಚೆನ್ನ! ಅಂಥವರ ತನು ಭಾವ ಶುದ್ಧ! ಹಾಗಿರರು ಕೆಲರು. ಹೊರಗೆ ಗುರು ದೇವರ ಜಪಃ! ಒಳಗೆ ವಿಷ ಸಂಚಿನ ತಪಃ! ತೋರಿಕೆಗೆ ಮಠ ಮಂದಿರ ಮಸೀದಿ ಚರ್ಚ್ ಗೆ ನುಗ್ಗುವರು, ತಲೆ ಬಾಗುವರು. ಕುಂಕುಮ ಟೋಪಿ ಶಿಲುಬೆ ವೇಷ ಧರಿಸುವರು, ಪೂಜೆ…

Girl in a jacket