Girl in a jacket

Daily Archives: September 5, 2021

ಬಿಎಸ್‌ವೈ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ ಬೊಮ್ಮಾಯಿ

ಬೆಂಗಳೂರು, ಸೆ.೫:ಬರುವ ಏಳರಂದು ಮುಖ್ಯಮಂತ್ರಿ ಬಸವಾರಾಜ್ ಬೊಮ್ಮಾಯಿ ದಹೆಲಿಗೆ ತೆರಳಿ ಮುಖಂಡರನ್ನು ಭೇಟಿ ಮಾಡುವ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಮಹತ್ವದ ಮಾತುಕತೆ ನಡೆಸಿದರು. ಈ ಬಾರಿ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗಲಿರುವ ಬೊಮ್ಮಾಯಿ ಅವರು ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿ, ನಿಗಮ-ಮಂಡಳಿಗಳಿಗೆ ನೇಮಕಾತಿ,ಕೆಲವು ಸಚಿವರ ಖಾತೆ ಬದಲಾವಣೆಯಂತಹ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.…

ಗುರು ದೇವೋ ಮಹೇಶ್ವರಃ

ಗುರು ದೇವೋ ಮಹೇಶ್ವರಃ ಗುರು ಸೃಷ್ಟಿ , ಸ್ಥಿತಿ, ಲಯಕಾರನು. ಶಿಕ್ಷಕ ಅಥವ ಗುರು ಭೌತಿಕವಾಗಿ ಏನೂ ತಯಾರಿಸಲಾರದಿರಬಹುದು. ಆದರೆ ಹೀಗಿತ್ತು. ಹೀಗಿದೆ, ಹೀಗಿರಬೇಕು ಎಂದು ಕಲಿಸುತ್ತಾ ವಿದ್ಯಾರ್ಥಿಗಳನ್ನು ಗುರುಯತ್ತ ಕೊಂಡೊಯ್ಯುವ ಮಾರ್ಗವನ್ನು, ಧ್ಯೇಯವನ್ನು ವಿದ್ಯಾರ್ಥಿಗಳ ಮನದಲ್ಲಿ ಆಸಕ್ತಿಯನ್ನು ಮೂಡುವಂತೆ ಮಾಡುತ್ತಾನೆ. ಮಕ್ಕಳ , ವಿದ್ಯಾರ್ಥಿಗಳ ಮನದಲ್ಲಿನ ತಪ್ಪು ಕಲ್ಪನೆಗಳನ್ನು, ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಒಳಿತಿನೆಡೆಗೆ ಸಾಗಿಸುತ್ತಾನೆ. ಏನೂ ಕಾಣದ , ಅರಿಯದ ಅಂಧಕಾರದ ಮನಸ್ಸಿನಲ್ಲಿ ಬೆಳಕನ್ನು ಚೆಲ್ಲಿ ಒಂದು ಅಭೂತಪೂರ್ವವಾದ ಸಂಚಲನವನ್ನು ಉಂಟುಮಾಡುತ್ತಾನೆ. ಗುರುವಿಗೆ…

ನೀಲಕಂಠಪ್ಪನ ವ್ಯಕ್ತಿತ್ವ ಮತ್ತು ಆತನ ಕಾಯಕ ನಿಷ್ಠೆ

ನೀಲಕಂಠಪ್ಪನ ವ್ಯಕ್ತಿತ್ವ ಮತ್ತು ಆತನ ಕಾಯಕ ನಿಷ್ಠೆ ಹಿಂದಿನ ಸಂಚಿಕೆಯ ಮುಂದುವರೆದ ಭಾಗ ಶಿವಣ್ಣ ಅವರ ಅದ್ಭುತ ಗಮಕಕಲೆಯನ್ನು ಕೇಳಿಯೇ ಅನುಭವಿಸಬೇಕು. ಅಷ್ಟೇನೂ ಹೆಚ್ಚು ಓದಿರದಿದ್ದ ಶಿವಣ್ಣ ಅವರ ಸ್ಪಷ್ಟ ಉಚ್ಚಾರದ ಪಾರಾಯಣ ಅವರ ಗಮಕಕಲೆಯ ಹೆಗ್ಗುರುತು ಎನ್ನಬಹುದು. ಇನ್ನು ಕುಂಬಾರ ಏಕಾಂತಪ್ಪನವರ ಅರ್ಥಗಾರಿಕೆಯಂತೂ ಪುರಾಣಕಥೆ ಆಲಿಸುವವರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಷ್ಟು ಶಕ್ತಿಶಾಲಿಯಾಗಿತ್ತು. ಇಡೀ ದಿನ ಹೊಲಗದ್ದೆಗಳಲ್ಲಿ ದುಡಿದು ಸಂಜೆಯ ವೇಳೆಯಲ್ಲಿ ಇಂತಹ ಧಾರ್ಮಿಕ ಪ್ರವಚನಗಳಿಗೆ ಕಿವಿಯಾಗುತ್ತಿದ್ದ ನನ್ನೂರವರು ಆ ಹೊತ್ತಿನಲ್ಲಿ ಅನಾಯಾಸವಾಗಿ ಸಂಪಾದಿಸುತ್ತಿದ್ದ ಕೋಟಿಪುಣ್ಯ ಇಂದೂ…

ದೇಶ ಸುತ್ತಿ ನೋಡು, ಕೋಶ ಓದಿ ನೋಡು

ಸಿದ್ಧಸೂಕ್ತಿ :       ದೇಶ ಸುತ್ತಿ ನೋಡು, ಕೋಶ ಓದಿ ನೋಡು. ನೋಡು=ತಿಳಿ. ಕೋಶ=ಶಬ್ದಕೋಶ, ಗ್ರಂಥ. ಮನುಷ್ಯ ಬುದ್ಧಿಜೀವಿ. ತಿಳಿಯಲೇಬೇಕು. ಇಲ್ಲದಿರೆ ಪಶು. ಹುಟ್ಟಿದಾಗ ಮಾನವ ಸಚೇತನ ಮಾಂಸಪಿಂಡ. ಅದ್ಭುತ ಜ್ಞಾನಗ್ರಹಿಕೆಗೆ, ಕಾರ್ಯಸಾಧನೆಗೆ ಅಗತ್ಯ ಅಂಗಾಂಗ ರಚನೆಯ ಬಳಿಕವೇ ಭುವಿಗವತರಣ. ಜ್ಞಾನ ಗಳಿಸಿದಂತೆ, ಮಾನವ ದೇವಮಾನವ! ಪ್ರತಿ ವ್ಯಕ್ತಿ ವಸ್ತು ಜೀವಿ ಪರಿಸರ ಪ್ರತಿಕ್ಷಣ ಪಾಠ ಕಲಿಸುವುದು! ಗಾಳಿಗೆ ಕಿಡಕಿ ಬಾಗಿಲ ತೆರೆಯಬೇಕು. ಮನ ಇಂದ್ರಿಯಗಳ ತೆರೆದು ಸದಾ ಪಾಠ ಕಲಿಯಬೇಕು! ಬಲ್ಲ…

Girl in a jacket