Girl in a jacket

Daily Archives: September 4, 2021

ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ

ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ ಹಂಪೆಯ ಬಜಾರುಗಳ ಅಧ್ಯಯನ ಸಂದರ್ಭದಲ್ಲಿ ವಿಜಯನಗರ ರಾಜಧಾನಿ ಪಟ್ಟಣವನ್ನು ಕುರಿತು ವಿದೇಶಿ ಪ್ರವಾಸಿಗರ ವರದಿ ಮತ್ತು ಶಾಸನಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳುವ ಸಂದರ್ಭ ಅನಿವಾರ್ಯವಾಗಿ ಪುರಪಟ್ಟಣದ ಅನೇಕ ವಿಷಯಗಳು, ಅವುಗಳ ಸ್ಥಳನಾಮಗಳು ಕಣ್ಮುಂದೆ ಬಂದು ಹೋಗುತ್ತಿದ್ದವು. ಅವುಗಳಲ್ಲಿ ಗೋರಿಕೆಳಗಣ ಗ್ರಾಮ ಎಂಬ ಸ್ಥಳನಾಮವು ವಿಶೇಷವಾಗಿ ನನ್ನ ಗಮನವನ್ನು ಸೆಳೆಯಿತು. ಇದರ ಜಾಡನ್ನು ಹಿಡಿದು ಹೊರಟಾಗ ವಿಜಯನಗರ ಸಾಮ್ರಾಜ್ಯದಲ್ಲಿ ಮುಸ್ಲಿಮರು ಸೇನಾಯೋಧರಾಗಿ, ಅಶ್ವಾಳು-ಬಿಲ್ಲಾಳುಗಳಾಗಿ, ದಂಡನಾಯಕರಾಗಿ, ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಿದ ಸಂಗತಿ ಅತ್ಯಾಕರ್ಷಕವಾಗಿ ಗೋಚರಿಸಿತ್ತು.…

ಸಂನ್ಯಾಸಿಯ ಸಹವಾಸ ಸಂನ್ಯಾಸಿಯನ್ನೇ ಮಾಡದು!

ಸಂನ್ಯಾಸಿಯ ಸಹವಾಸ ಸಂನ್ಯಾಸಿಯನ್ನೇ ಮಾಡದು! ಎಳೆಯ ವಯಸ್ಸಿನಲ್ಲಿಯೇ “ಮನೆಯನ್ನು ತೊರೆದು ಗುರುಶೋಧನೆಗೆ ಹೊರಟಿರುವೆ” ಎಂಬ ಸಿದ್ಧನ ಮಾತನ್ನು ಕೇಳಿ ಮಿತ್ರರಾದ ಸೋಮ-ಭೀಮರು ವಿರೋಧಿಸಿದರು “ನಮ್ಮನ್ನು ಹೆತ್ತ ತಂದೆ ತಾಯಿಗಳೇ ನಮಗೆ ದೇವರು! ಅವರನ್ನು ಬಿಟ್ಟು ತೆರಳುವುದು ಸರಿಯಲ್ಲ. ಇದು ಮುಪ್ಪಾವಸ್ಥೆಯಲ್ಲಿ ಮಾಡಬೇಕಾದ ಕೆಲಸ”-ಎಂದರು. ಆಗ ಸಿದ್ಧನು ತನ್ನ ವಿಚಾರವನ್ನು ಹೀಗೆ ಮಂಡಿಸಿದ: ನೀವು ಹೇಳುವುದು ಸರಿಯಾಗಿದೆ. ಇದನ್ನು ಹತ್ತಾರು ಸಾವಿರ ವರ್ಷಗಳ ಹಿಂದೆಯೇ ವೇದವೇ ಸಾರಿದೆ, “ಮಾತೃದೇವೋ ಭವ,ಪಿತೃದೇವೋ ಭವ” ತಾಯಿ ದೇವರೆಂದು ತಿಳಿದು ನಡೆದುಕೋ, ತಂದೆ…

ಚಿತ್ತವಿನ್ನಲುಗದೆಂಬಾ ಜಂಬ ಬೇಡ!

ಸಿದ್ಧಸೂಕ್ತಿ :       ಚಿತ್ತವಿನ್ನಲುಗದೆಂಬಾ ಜಂಬ ಬೇಡ!  ಚಿತ್ತ=ಮನಸ್ಸು, ಬುದ್ಧಿ. ಮನ ಮಂಗ ಬಲು ಚಂಚಲ. ಒಂದೆಡೆ ನಿಲ್ಲದು! ಸತ್ಯ ಅಸತ್ಯ, ಒಳಿತು ಕೆಡುಕುಗಳ ಸರಿ ತಿಳುವಳಿಕೆ, ತ್ಯಾಗ, ಒಳ ಹೊರ ಇಂದ್ರಿಯ ನಿಗ್ರಹ, ಪೂಜೆ ಧ್ಯಾನ ಜಪ ತಪ ತಪ ನಿಯಮ ಸತತ ಸಾಧನೆಗಳಿಂದ ಮನ ಗೆಲ್ಲಬಹುದು. ಅದು ಒಂದೆಡೆ ನಿಲ್ಲಬಹುದು. ಆದರದು ಎಂದಿಗೂ ಹಾಗೇ ಉಳಿವುದೆಂದು ಒಪ್ಪಲಾಗದು! ಮನಕೆ ರೂಪವಿಲ್ಲ. ಅದು ಸುತ್ತಲು ರಸ್ತೆ ವಾಹನ ಹಣ ಬೇಕಿಲ್ಲ! ತಡೆಗೋಡೆ…

Girl in a jacket