Girl in a jacket

Daily Archives: August 28, 2021

ಜಮೀನು ವಿವಾದಕ್ಕೆಒಂದೇ ಕುಟುಂಬದ ನಾಲ್ವರು ಹತ್ಯೆ

ಬಾಗಲಕೋಟೆ,ಆ,28: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಹತ್ಯೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಜಮೀನು ವಿಚಾರಕ್ಕೆ ಎರಡು ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮುದರೆಡ್ಡಿ ಎಂಬುವರ ಕುಟುಂಬದ ನಾಲ್ವರನ್ನು ಮತ್ತೊಂದು ಕಡೆಯವರು ಹತ್ಯೆ ಮಾಡಿದ್ದಾರೆ. ಹನುಮಂತ (48), ಮಲ್ಲಪ್ಪ (44), ಈಶ್ವರ (40) ಹಾಗೂ ಬಸವರಾಜ್ (36) ಎಂಬುವರು ಕೊಲೆಗೀಡಾಗಿದ್ದಾರೆ.ಪುಠಾಣಿ ಎಂಬ ಕುಟುಂಬಸ್ಥರು ಈ ನಾಲ್ವರನ್ನು ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಸ್ಥಳಕ್ಕೆ ಜಮಖಂಡಿ…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟೆ ಮತ್ತು ಕಾಲುವೆಗಳಿಗೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಆದರೆ ವಿಜಯನಗರ ಕಾಲz ಮೊದಲ ಅಣೆಕಟ್ಟೆಯಾಗಿ ನಿರ್ಮಾಣಗೊಂಡದ್ದು ಹಂಪೆಯ ಬಳಿಯ ತುರ್ತು ಅಣೆಕಟ್ಟು. ಇದನ್ನು ಶಾಸನದಲ್ಲಿ “ಚಿಂತಾಯಕ ದೇವಂಣನು ಕಟ್ಟಿಸಿದ ಕಟ್ಟೆ ಶ್ರೀ ವಿರೂಪಾಕ್ಷ ಸದಣೂ ಬೊಮೋಜ ಮಾಡಿದ ಎಂದಿದೆ. ವಿರೂಪಾಕ್ಷ ಕ್ಷೇತ್ರದಲ್ಲಿ ಚಿಂತಾಯಕ ದೇವಂಣನು ಬೊಮ್ಮೋಜನಿಂದ ಇದನ್ನು ನಿರ್ಮಿಸಿದ ಎಂಬುದು ಶಾಸನಸ್ಥ ಸಂಗತಿ. ಬುಕ್ಕರಾಯನ ಕಾಲದಲ್ಲಿ ಇದು ನಿರ್ಮಾಣವಾಯಿತೆಂದು ಹೇಳಲಾಗುತ್ತದೆ. ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ .…

ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು..

ಆಧುನಿಕ ಮನುಷ್ಯನೆಂದಾಗ ಸಂಪ್ರದಾಯದ ಕೊಂಡಿಗಳನ್ನು ಸಡಿಲಿಸಿಕೊಂಡವರು ಎಂಬ ಅರ್ಥ ಹೊಳೆದರೆ, ಆಧುನಿಕ ಆಲೋಚನೆ ಎಂದಾಗ ಸಂಪ್ರದಾಯದ ಜುಗುಟುತನಗಳನ್ನು ಮೀರಿ ವೈಚಾರಿಕವಾಗಿ ಯೊಚಿಸುವುದು ಎಂದರ್ಥವಾಗುತ್ತದೆ. ಆಧುನೀಕರಣ ಎಂದರೆ ಹೊಸ ಹೊಸ ಆಲೋಚನೆ, ನಮ್ಮಲ್ಲೇ ಪೂರ್ವದಿಂದಲೂ ಇರುವ ಜಾನಪದ ಜ್ಞಾನವನ್ನು ತಳ್ಳಿಕೊಂಡು ಬಂದ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಬಲವನ್ನು ಬಿಂಬಿಸುತ್ತದೆ. ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು.. ಆಧುನಿಕ ಈ ಪದದ ಬಳಕೆ ಅನೇಕ ರೀತಿಗಳಲ್ಲಿ ನಮ್ಮಲ್ಲಿ ಬಳಕೆಯಾಗುತ್ತಲಿದೆ. ಒಂದು ರೀತಿಯಲ್ಲಿ ಆಧುನಿಕ ಅನ್ನುವ ಪದವೇ ಕೆಲವರಿಗೆ ಆಶಾವಾದದ…

ಮೀಸಲಾತಿ ನೀತಿಗೆ ಕಾಯಕಲ್ಪದ ಅಗತ್ಯ

ಮೀಸಲಾತಿಯನ್ನು ಇದುವರೆಗೆ ಅನುಭವಿಸಿರುವವರು ಇತರರಿಗೆ ದಾರಿ ಮಾಡಿಕೊಡುವ ಔದಾರ್ಯದ ನಡವಳಿಕೆಗೆ ಇಂದಲ್ಲ ನಾಳೆ ಚಾಲನೆ ದೊರೆಯಬೇಕಿದೆ. ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸುವುದು ಅಸಾಧ್ಯ. ಮೀಸಲಾತಿ ನೀತಿ ಜಾರಿಗೆ ಬಂದ ನಂತರದಲ್ಲಿ ಅದರ ಲಾಭ ಪಡೆದಿರುವ ಉದ್ಯೋಗಸ್ಥರು, ರಾಜಕಾರಣಿಗಳು, ಅಧಿಕಾರಿ ನೌಕರ ಸಮುದಾಯ ಇತ್ಯಾದಿ ಮೂರುಮೂರು ಪೀಳಿಗೆ ಜನ ತ್ಯಾಗಕ್ಕೆ ಮುಂದಾಗಬೇಕಿದೆ. ಮೀಸಲಾತಿಯಿಂದ ಅನುಕೂಲದ ಹಂತ ಏರಿದವರನ್ನು ಪಟ್ಟಿಯಿಂದ ತೆಗೆದುಹಾಕಿ ಅವಕಾಶ ವಂಚಿತರಿಗೆ ಜಾಗ ಕಲ್ಪಿಸಬೇಕೆಂಬ ಒತ್ತಾಯದ ಜನಾಂದೋಳನ ಹಿಂದೊಮ್ಮೆ ನಡೆದಿತ್ತು. ಅಂಥದೇ ಆಂದೋಲನಕ್ಕೆ ಜನ…

ಮೈಸೂರು ಐವರು ಅತ್ಯಾಚಾರ ಆರೋಪಿಗಳ ಬಂಧನ

ಬೆಂಗಳೂರು, ಆ,೨೮: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿನಡೆದಿದ್ದ, ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ತಮಿಳುನಾಡಿನಲ್ಲಿಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಘಟನೆ ನಡೆದ ಐದು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಘಟಮಾ ಸ್ಥಳದಲ್ಲಿ ತಮಿಳುನಾಡು ಬಸ್‌ಟಿಕೆಟ್ ದೊರೆತ ಹಿನ್ನೆಯಲ್ಲಿ ಅದೇ ಜಾಡು ಹಿಡಿದು ತನಿಖಾ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾದರೆ, ಓರ್ವನನ್ನು ಚಾಮರಾಜನಗರದವನು ಎಂದು ಹೇಳಲಾಗುತ್ತಿದೆ. ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಗಳು ನಿರಂತರವಾಗಿ ಓಡಾಡುತ್ತಿದ್ದರು.…

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು ನಮ್ಮೂರು ಒಂದು ಮುನ್ನೂರು ಮನೆಗಳಿದ್ದ ಊರಾಗಿತ್ತು. ಅಲ್ಲಿ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ಇತ್ತು, ಪ್ರಾಣಿಗಳ ಆಸ್ಪತ್ರೆ ಇತ್ತು, ಸರ್ಕಾರಿ ಶಾಲೆ ಹತ್ತನೇ ತರಗತಿವರೆಗೆ ಇತ್ತು. ಮತ್ತು ಮಂದಿರ ಮಸೀದಿ ಇದ್ದವು. ಈ ಊರೊಂದು ಅದ್ಭುತವಾಗಿತ್ತು. ಯಾವುದೇ ಜಗಳವಿಲ್ಲ , ಗಲಾಟೆಯಿರಲಿಲ್ಲ. ಇವೆಲ್ಲದರೊಂದಿಗೆ ಒಂದು ಟೆಂಟ್ ಸಹ ಇತ್ತು. ನಾ ಮೊದಲೇ ಒಮ್ಮೆ ನಿಮಗೆ ಹೇಳಿದ್ದೆ. ಟೆಂಟ್ ಗೇಟ್ ಕೀಪರ್ ಖಾದರ್ ತಾತ ಅಂತ. ಆ ಟೆಂಟ್ ಕೆಲವು ವರ್ಷಗಳ ನಂತರ…

ಏನು ಹಗೆ! ಏನು ಧಗೆ!

ಸಿದ್ಧಸೂಕ್ತಿ :                    ಏನು ಹಗೆ! ಏನು ಧಗೆ! ಮಾನವ ಸರ್ವಶ್ರೇಷ್ಠ. ವಿಚಾರಪರತೆ ಹೊಣೆಗಾರಿಕೆ ಅತ್ಯದ್ಭುತ! ಆದರೇನು? ಕೆಲರ ವರ್ತನೆ ಅಮಾನುಷ! ಹೃದಯ ವಿದ್ರಾವಕ! ಹಸುಳೆ ವೃದ್ಧರ ಮೇಲೆ ಅತ್ಯಾಚಾರ! ಹಾಡಹಗಲು ನಡುರಸ್ತೆಯಲ್ಲಿ ಜನರೆದುರು ಜನರ ಕಗ್ಗೊಲೆ! ಚೆಂದದ ಬಾಳಿನಲಿ ಸುಳ್ಳು ವಿಷಬೀಜ ಬಿತ್ತಿ ದಾಂಪತ್ಯ ಕೌಟುಂಬಿಕ ಸ್ನೇಹ ಸಂಬಂಧಗಳ ಛಿದ್ರಗೊಳಿಪ ಪಿತೂರಿ! ಕಾಷಾಯ ವೇಷದಿ ದೇವರ ಪ್ರಸಾದದಿ ವಿಷವಿಕ್ಕಿ ಕೊಲ್ಲುವಿಕೆ! ನಂಬಿ ಬಳಿ…

Girl in a jacket