Girl in a jacket

Daily Archives: August 10, 2021

ಸರ್ಕಾರ ಜನರ ಜೀವನದ ಜೊತೆಚಲ್ಲಾಟವಾಡುತ್ತಿದೆ-ಡಿಕೆಶಿ

ಬೆಂಗಳೂರು,ಆ,೧೦: ಕೋವಿಡ್ ೨ನೇ ಅಲೆಯಲ್ಲಿ ಆಗಿರುವ ನಷ್ಟಕ್ಕೆ ರೈತರಿಗೆ ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ. ಬೆಳೆಗೆ ಬೆಲೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಸರ್ಕಾರ ಇದ್ಯಾವುದರ ಬಗ್ಗೆಯೂ ಚಿಂತಿಸದೇ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಹೊಸ ಸರ್ಕಾರ ಬಂದಿದೆ, ಜನರ ರಕ್ಷಣೆ ಮಾಡುತ್ತದೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ. ಹಾರ-ತುರಾಯಿ ಹಾಕಿಸಿಕೊಳ್ಳುವವರಿಗೆ ನಾನು ಬೇಡ ಎನ್ನುವುದಿಲ್ಲ. ಕೋವಿಡ್ ಸೋಂಕು…

ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಹೂ ಗುಚ್ಚ,ಹಾರ – ಶಾಲು ನೀಡಲು ನಿಷೇಧಿಸಿದ ಸಿಎಂ

ಬೆಂಗಳೂರು,ಆ.೧೦: ರಾಜ್ಯ ಸರ್ಕಾರದ ಸಭೆ ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ಶಾಲುಗಳನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿಂದು ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಹೂಗುಚ್ಚ ಸ್ವೀಕರಿಸಲು ನಿರಾಕರಿಸಿದ ಮುಖ್ಯಮಂತ್ರಿ, ಇದು ಅನಾವಶ್ಯಕ ವೆಚ್ಚ. ಇನ್ನು ಮುಂದೆ ಸಭೆ-ಸಮಾರಂಭಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಚ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಈ ಸಂಪ್ರದಾಯವೇ ಬೇಡ ಎಂದು ಸೂಚಿಸಿದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸರ್ಕಾರ ಮತ್ತು…

ಸುಳ್ಳು ಕೇಸ್ ವಾಪಾಸ್ ವಿಚಾರ ; ನ್ಯಾಯಲಯಗಳ ನಿರ್ದೇಶನದಂತೆ ಕ್ರಮ-ಸಿಎಂ

ಬೆಂಗಳೂರು,ಆ,೧೦: ಸುಳ್ಳು ದಾವೆಗಳ ವಾಪಸು ವಿಚಾರದಲ್ಲಿ ನ್ಯಾಯಾಲಯಗಳ ನಿರ್ದೇಶನಗಳಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು . ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರ ವಿರುದ್ದದ ಹಳೆಯ ಸುಳ್ಳು ಕೇಸುಗಳನ್ನು ಹಿಂಪಡೆಯಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋರಿದ್ದಾರೆ. ಬಿ.ಎಸ್. ಯಡಿಯೂರಪ್ಪ…

ಕ್ರಿಮಿನಲ್ ಅಭ್ಯರ್ಥಿ ವಿವರ ಅಯ್ಕೆಯಾದ ೪೮ ಗಂಟೆಯೊಳಗೆ ಪ್ರಕರಟಿಸಲು ಸುಪ್ರೀಂ ನಿರ್ದೇಶನ

ನವದೆಹಲಿ, ಆ. ೧೦: ಚುನಾವಣೆ ಘೋಷಣೆಯಾದ ಬಳಿಕ ರಾಜಕೀಯ ಪಕ್ಷಗಳು ಅಭ್ಯರ್ಥಿಗಳಲ್ಲಿ ಯಾವುದಾದರೂ ಕ್ರಿಮಿನಲ್ ಕೇಸ್‌ಗಳು ಇದ್ದರೆ ಅದನ್ನ ಆ ಅಭ್ಯರ್ಥಿಯ ಆಯ್ಕೆಯಾದ ೪೮ ಗಂಟೆಯೊಳಗೆ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಹೊರಡಿಸಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಇದೇ ವಿಚಾರದಲ್ಲಿ ಇದೇ ರೀತಿಯ ತೀರ್ಪು ನೀಡಿತ್ತು. ರಾಜಕೀಯ ಪಕ್ಷಗಳು ಅಭ್ಯರ್ಥಿಯಲ್ಲಿ ಕ್ರಿಮಿನಲ್ ಕೇಸ್ ಇದ್ದರೆ ಅದರ ಮಾಹಿತಿಯನ್ನ ೪೮ ಗಂಟೆಯೊಳಗೆ ಪ್ರಕಟಿಸಬೇಕು. ಅಥವಾ ನಾಮಪತ್ರ ಸಲ್ಲಿಕೆಯ ದಿನಕ್ಕೆ ೨ ವಾರ ಮುಂಚಿತವಾಗಿ…

ನನ್ನ ಬಗ್ಗೆ ಮಾತನಾಡಲು ಸೋಮಣ್ಣ ಯಾರು-ಪ್ರೀತಂ ಗೌಡ ಪ್ರಶ್ನೆ

ಹಾಸನ,ಆ,೧೦: ತಮ್ಮ ಬಗ್ಗೆ ಸಚಿವ ಸೋಮಣ್ಣ ಅವರಂತೆ ಇತರೆ ಪಕ್ಷಗಳಿಂದ ಬಂದವನಲ್ಲ ನಾನು ಬಿಜೆಪಿ ಕಟ್ಟಾಳು ಹೊಂದಾಣಿಕೆ ರಾಜಕಾರಣಕ್ಕೆ ಹೊಂದಿಕೊಂಡವರಲ್ಲ ನಾವು ಅಷ್ಟಕ್ಕು ನನ್ನ ಬಗ್ಗೆ ಮಾತನಾಡಲು ಅವರ‍್ಯಾರು ಎಂದು ಶಾಸಕ ಪ್ರೀತಂ ಗೌಡ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಸೋಮಣ್ಣ ಅವರ ಬಗ್ಗೆ ನಾನು ಮಾತನಾಡಿಲ್ಲ ನಾನು ಮಾತನಾಡಿರುವುದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ನಮ್ಮ ಕಾರ್ಯಕರ್ತರ ಧ್ವನಿಯಾಗಿ ಈ ಮಾತನ್ನು ನಾನು ಆಡಿದ್ದೇನೆ ಅದಕ್ಕೆ ಸಿಎಂ ಉತ್ತರ ಕೊಡುತ್ತಾರೆ ಇವತ್ತೋ…

ಪ್ರೀತಂಗೌಡ ಇತಿಮಿತಿಯಲ್ಲಿರಬೇಕು-ಸೋಮಣ್ಣ

ಮಂಡ್ಯ,ಆ,೧೦: ಶಾಸಕ ಪ್ರೀತಂಗೌಡ ಇನ್ನೂ ಹುಡುಗ. ಇನ್ನೂ ಬೆಳೆಯಬೇಕಾದವನು. ಹೀಗಾಗಿ ಅವನು ಇತಿಮಿತಿಯಲ್ಲಿ ಇರಬೇಕು ಎಂದು ಸಚಿವ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ ೫೦ ವರ್ಷದ ರಾಜಕೀಯ ಇತಿಹಾಸವಿದೆ. ನಾನು ಸಚಿವ ಆಗಿದ್ದಾಗ ಪ್ರೀತಂಗೌಡ ಇನ್ನೂ ಹುಟ್ಟಿಯೇ ಇರಲಿಲ್ಲ. ದೇವೇಗೌಡರ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ. ದೇವೇಗೌಡರು ರಾಷ್ಟದ ಪ್ರಧಾನಿಗಳಾಗಿದ್ದಂತವರು, ನಾನು ಕೂಡ ಅವರ ಮನೆಗೆ ಹೋಗಿದ್ದೇನೆ. ಪ್ರೀತಂಗೌಡ ಇನ್ನೂ ಬೆಳೆಯಬೇಕಾದ ಹುಡುಗ, ಸುಮ್ಮನೆ ಹಾಗೆಲ್ಲಾ ಮಾತನಾಡುವುದು…

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

                  ಸಿದ್ಧಸೂಕ್ತಿ :         ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಗಿಡ ಮರದ ಸಸಿ. ಮರ ಬೆಳೆದ ಗಿಡ. ಗಿಡ ಬಾಗುವುದು, ಮುಖ ಬದಲಿಸಬಹುದು. ಮರ ಬಾಗದು,ಮುಖ ಬದಲಿಸಲಾಗದು. ಬಗ್ಗಿಸಿದರೆ ಮುರಿದು ಬೀಳುವುದು! ತಳಪಾಯ ಹಂತದಲಿ ಅದ ಬದಲಿಸಬಹುದಲ್ಲದೇ ಕಟ್ಟಡ ಕಟ್ಟಿದಮೇಲಲ್ಲ! ಸಿಮೆಂಟ್, ಅಂಟು ಹಸಿ ಇದ್ದಾಗ ತಿದ್ದ ಬಹುದು,ಕೀಳಬಹುದು, ಒಣಗಿದರಾಗದು!ಎಳೆಯದ್ದು ಬಾಗುವುದು, ಕಲಿಯುವುದು, ತಿದ್ದಿಕೊಳ್ಳುವುದು! ಮಕ್ಕಳ ದೇಹ ಮೃದು. ಬಾಗಿಸಿದಂತೆ…

Girl in a jacket