Girl in a jacket

Daily Archives: July 27, 2021

ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ

ಬೆಂಗಳೂರು,ಜು,೨೭: ಬಿಜೆಪಿಯ ಮಹತ್ತರ ಬೆಳವಣಿಗೆಯಲ್ಲಿ ಗೃಹಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಈಮೊದಲೇ ದೆಹಲಿಯಿಂದ ಬಂದಿದ್ದ ವೀಕ್ಷಕರು ಅವರ ಹೆಸರನ್ನೇ ಅಂತಿಮ ಮಾಡಿದ್ದರು ಆದರೆ ಸಂಪ್ರದಾಯದಂತೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವರ ಹೆಸರನ್ನು ಆಯ್ಕೆ ಮಾಡಬೇಕಿತ್ತು ಅದರಂತೆ ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಸವರಾಜ್ ಬೊಮ್ಮಾಯಿ ಅವರ ಹೆಸರನ್ನು ಪ್ರಸ್ತಾಪಿಸಿದರು ಅದಕ್ಕೆ ಗೋವಿಂದ್ ಕಾರಜೋಳ ಅವರು ಅನುಮೋದನೆ ನೀಡಿದರು. ಈ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿ…

ಇಂದೇ ನೂತನ ಸಿಎಂ ಆಯ್ಕೆ ಖಚಿತ

ಬೆಂಗಳೂರು,ಜು,೨೭: ಬಿಎಸ್‌ವೈ ನಂತರ  ಮುಖ್ಯಮಂತ್ರಿ ಯಾರು ಎನ್ನುವುದಕ್ಕೆ ಉತ್ತರ ಇಂದು ಸಂಜೆಯೇ ಹೊರಬೀಳುವ ಸಾಧ್ಯತೆಗಳಿವೆ. ಹೌದು ಇಂದು ಸಂಜೆ ೭ ಗಂಟೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ  ಬಿಜೆಪಿ ಶಾಸಕಕಾಂಗ ಸಭೆ ನಡೆಯಲಿದೆ ಈ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣ, ಕೇಂದ್ರೀಯ ವೀಕ್ಷಕ ಕಿಶನ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಿಂದಲೇ ಶಾಸಕಾಂಗ ಸಭೆ ಬಗ್ಗೆ ಸೂಚನೆ…

ಬಿಎಸ್‌ವೈ ರಾಜೀನಾಮೆ;ಮನನೊಂದ ಅಭಿಮಾನಿ ಆತ್ಮಹತ್ಯೆ!

ಗುಂಡ್ಲುಪೇಟೆ.ಜು,೨೭: ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೊಮ್ಮಲಪುರದಲ್ಲಿ ಜರುಗಿದೆ. ಗ್ರಾಮದ ರ.ವಿ ( ೩೫) ಎಂಬಾತ ನಿನ್ನೆ ಸಂಜೆ ತಮ್ಮ ಅಂಗಡೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಬಿಎಸ್‌ವೈ ಅಪ್ಪಟ ಅಭಿಮಾನಿಯಾಗಿದ್ದ ರವಿಯನ್ನು ಗ್ರಾಮದಲ್ಲಿ “ರಾಜಾಹುಲಿ” ಎಂದು ಅಡ್ಡ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದರು. ನಿನ್ನೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಬೇಸರಗೊಂಡು ಅತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸಾಲದಿಂದ ಬೇಸತ್ತು..? ರವಿ ಸಾಲ ಮಾಡಿದ್ದ ಒತ್ತಡ…

ಅಸ್ಸಾಂ,ಮಿಜೋರಾಂ ನಡುವೆ ಮತ್ತೆ ಬುಗಿಲೆದ್ದ ಗಡಿ ಸಂಘರ್ಷ

ಗುವಾಹಟಿ,ಜು,೨೭: ಅಸ್ಸಾಂ ಮತ್ತು ಮಿಜೋರಾಂ ನಡುವೆ ಮತ್ತೇ ಗಡಿ ಸಂಘರ್ಷ ಆರಂಭವಾಗಿದೆ.ಈ ಸಂಘರ್ಷಕ್ಕೆ ಐವರು ಪೊಲೀಸರು ಮೃತಪಟ್ಟಿದ್ದು ಐವತ್ತಕ್ಕೂ ಹೆಚ್ಚು ಜನರ ಗಾಯಗೊಂಡಿದ್ದಾರೆ. ಅಸ್ಸಾಂನ ವೈರೆಂಟ್ಗೆ ಪಟ್ಟಣದಲ್ಲಿ ಸೋಮವಾರ ಹಿಂಸಾಚಾರ ತಲೆದೋರಿದೆ. ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಗೃಹ ಸಚಿವ ಅಮಿತ್ ಶಾ ಅವರು ಸಭೆ ನಡೆಸಿದ ಎರಡೇ ದಿನಕ್ಕೆ ಈ ಸಂಘರ್ಷ ನಡೆದಿದೆ. ಲೈಲಾಪುರದಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ನಾಶಪಡಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಮತ್ತು ಸೇನಾ ಶಿಬಿರವೊಂದನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಮಿಜೋರಾಂ ವಿರುದ್ಧ ಅಸ್ಸಾಂ…

ಹಾಕಿ `ಎ’ ಪಂದ್ಯದಲ್ಲಿ ಭಾರತಕ್ಕೆ ಜಯ

ಟೋಕಿಯೊ,ಜು,೨೭: ಇಲ್ಲಿನ ಒಲಿಂಪಿಕ್ಸ್‌ನಲ್ಲಿ ಭಾರತ ಮುನ್ನಡೆಗಳನ್ನು ಸಾಧಿಸುತ್ತಲೇ ಇದೆ ಎ ಗುಂಪಿನ ಹಾಕಿಯಲ್ಲಿ ಸ್ಪೇನ್ ವಿರುದ್ಧ ಭಾರತ ಜಯಗಳಿಸಿದೆ. ಭಾರತ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ರೂಪಿಂದರ್ ಪಾಲ್ ಸಿಂಗ್ ಮತ್ತು ಸಿಮ್ರಾಂಜಿತ್ ಸಿಂಗ್ ಅವರ ಅದ್ಭುತ ಪ್ರದರ್ಶನವೇ ಈ ಗೆಲುವಿಗೆ ಕಾರಣವಾಗಿದೆ. ಮಿಡ್ ಫೀಲ್ಡರ್ ಸಿಮ್ರಾಂಜಿತ್ ೧೩ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ ೧೫ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಎರಡನೇ ಗೋಲು ಬಾರಿಸಿದರು. ೫೧ನೇ ನಿಮಿಷದಲ್ಲಿ ಮತ್ತೊಂದು…

ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಇಲ್ಲಂದ್ರಂತೆ

ಸಿದ್ಧಸೂಕ್ತಿ : ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಇಲ್ಲಂದ್ರಂತೆ! ಅತ್ತೆಗೆ ಹೆದರಿ ಸೊಸೆ ಗುಟ್ಟಲಿ ಹೋಳಿಗೆ ಮಾಡುತ್ತಿದ್ದಳು.ಬೆಲ್ಲದ ಕೊರತೆ! ಹೊರಗೆ ಮಕ್ಕಳಾಡುತ್ತಿದ್ದವು. ಬಾಯಾರಿ ಬಂದ ಮಗು ಹೋಳಿಗೆ ಕಂಡು ಬೇಡಿತು.ಯಾರಿಗೂ ಹೇಳಬೇಡವೆಂದು ಕೈಗಿತ್ತಳು!ತಿಂದು ಸುಮ್ಮನಿರಬೇಕಿತ್ತು. ಬೆಲ್ಲ ಹಾಕಿಲ್ಲವೆಂದು ಗುಟ್ಟಲಿ ಹೇಳಬಹುದಿತ್ತು.ತಿನ್ನುತ್ತ ಹೊರ ಓಡಿ ಹೋಳಿಗೆಗೆ ಬೆಲ್ಲ ಇಲ್ಲವೆಂದು ಕಿರುಚಿತು! ಗುಟ್ಟು ರಟ್ಟಾಯಿತು! ಗುಟ್ಟು ರಟ್ಟಾಗದೇ ಉಳಿಯುವುದು ಕಷ್ಟ.ಕೆಲವು ಗುಟ್ಟು ರಟ್ಟಾಗಬಾರದು. ಗುಟ್ಟು ತಿಳಿದವನು ಹೊಣೆಗೇಡಿಯಾಗಬಾರದು. ಕಂಡವರಿಗೆಲ್ಲ ಯಾರಿಗೂ ಹೇಳಬೇಡವೆನುತ ಗುಟ್ಟು ತಿಳಿಸಬಾರದು. ಖಾಸಗಿತನ ಸಾರ್ವಜನಿಕವಾಗಬಾರದು. ಗುಟ್ಟು…

Girl in a jacket