Girl in a jacket

Daily Archives: July 15, 2021

ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿದ ಭಗೀರಥ ಬಯಕಾರ ರಾಮಪ್ಪಯ್ಯ

ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿದ ಭಗೀರಥ ಬಯಕಾರ ರಾಮಪ್ಪಯ್ಯ ಮಳೆಕೊಯ್ಲು ಎಂಬ ಪದ್ಧತಿ ಪ್ರಾಚೀನವೆಂಬುದು ತಿಳಿದ ಸಂಗತಿ. ಮಳೆಯ ನೀರನ್ನು ಅಡ್ಡಗಟ್ಟಿ ತಡೆದು ವರ್ಷಪೂರ್ತಿ ಬಳಸಿಕೊಂಡ ಪ್ರಾಚೀನರ ತಿಳುವಳಿಕೆ ಅಪರಿಮಿತವಾದದ್ದು, ವಿಜಯನಗರ ಕಾಲದಲ್ಲಿ ಇದು ಸ್ವಲ್ಪ ಹೆಚ್ಚೇ ಇತ್ತು. ಇದಕ್ಕೆ ಸಾಮ್ರಾಜ್ಯದ ಹರಹು, ವಿಸ್ತಾರ ಮತ್ತು ಸಂಪನ್ಮೂಲಗಳು ಕಾರಣವಿರಬೇಕು, ಈ ಅವಧಿಯಲ್ಲಿ ಅರಸ ಸಾಮಂತ, ಮಾಂಡಲಿಕ, ಅಧಿಕಾರಿಗಳಿಂದ ಅನೇಕ ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ, ಇದಕ್ಕೆ ಲಕ್ಷ್ಮೀಧರನ ಶಾಸನದಲ್ಲಿರುವ “ಕೆರೆಯಂ ಕಟ್ಟಿಸು ಭಾವಿಯಂ ಸವೆಸು ದೇವಾಗಾರಮಂ ಮಾಡಿಸು ಸೆರೆಯೊಳ್…

2022 ಮಾರ್ಚ್ 5 ರಂದು ಖೇಲೋ ಇಂಡಿಯಾ ಎರಡನೇ ಆವೃತ್ತಿಗೆ ಚಾಲನೆ

ಬೆಂಗಳೂರು, ಜು. 15:ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ ನ ಎರಡನೇ ಆವೃತ್ತಿಯನ್ನು 2022 ರ ಮಾರ್ಚ್ 5 ರಿಂದ ಆರಂಭಿಸಲು ದಿನಾಂಕ ನಿಗದಿ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನ ಮಂತ್ರಿಯವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಡಿಸಿಎಂ ಡಾ. ಅಶ್ವಥನಾರಾಯಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. 158 ಯುನಿವರ್ಸಿಟಿಯಿಂದ…

ಡಿಸೆಂಬರ್ ವರೆಗೂ ಜಿ.ಪಂ.ತಾಲೂಕು ಪಂಚಾಯ್ತಿ ಚುನಾವಣೆ ಇಲ್ಲ

ಬೆಂಗಳೂರು,ಜು,15:ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಡಿಸೆಂಬರ್​ವರೆಗೂ ನಡೆಸುವುದು ಬೇಡ ಎಂಬ ತೀರ್ಮಾನವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿ ಗೋಷ್ಠಿಯಲ್ಲಿ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳ ಕುರಿತು ವಿವರ ನೀಡಿದರು. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಡಿಸೆಂಬರ್‌ವರೆಗೂ ನಡೆಸುವುದು ಬೇಡ ಎಂಬ ತೀರ್ಮಾನಕ್ಕೆ…

ಅಂದು ಅವನೊಡನೆ ಠೂ ಬಿಟ್ಟಿದ್ದು

ಅಂದು ಅವನೊಡನೆ ಠೂ ಬಿಟ್ಟಿದ್ದು ನಮ್ಮೂರಿನ ಆ ಸುಂದರ ಪರಿಸರ ನನ್ನ ಇರುವಿನವರೆಗೂ ಕಣ್ಣಮುಂದೆಯೇ ಇರುತ್ತದೆ. ಏಕೆಂದರೆ ಚಿಕ್ಕಂದಿನಲ್ಲಿ ಮಕ್ಕಳ ಮನಸ್ಸು ಅರಳುವಾಗ ಜೇಡಿಮಣ್ಣಿನಂತೆ ಮೃದುವಾಗಿರುತ್ತದೆ. ಅದನ್ನು ಹೇಗೆ ಬೇಕಾದರೂ ವಿನ್ಯಾಸಗೊಳಿಸಬಹುದು. ಬಿಳಿಯ ಹಾಳೆಯಂತೆ ನಿರ್ಮಲವಾಗಿರುತ್ತದೆ ಅದರ ಮೇಲೆ ಏನು ಬರೆದರೂ ಅಳಿಸಿಹೋಗದು. ಅಂತೆಯೇ ಆ ಸುಂದರ ಸೊಬಗಿನ ಪರಿಸರ ನನ್ನ ಮನಸ್ಸಿನಿಂದ ಎಂದೂ ದೂರಾಗದು. ‘ಒಡಲನೂಲಿನಿಂದ ಜೇಡ ಜಾಲ ನೇಯುವಂತೆ’ ಎಂಬ ಬೇಂದ್ರೆಯವರ ತೋಂತನದಂತೆ ಒಡಲು ಇರುವವರೆಗೂ ಬಾಲ್ಯದ ನೋಟದ ಜಾಲ ನೇಯುತ್ತಲೇ ಇರುತ್ತದೆ. ನಮ್ಮೂರಿನ…

ಗರ್ಭಾವಸ್ಥೆಯಲ್ಲಿ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಲಹೆಗಳು

ಡಿ.ಆರ್.ರಾಧಾ ಎಸ್ ರಾವ್ ಎಂಬಿಬಿಎಸ್, ಎಂಎಸ್, ಎಂಆರ್‌ಸಿಒಜಿ ಸೀನಿಯರ್ ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ , ಜಯನಗರ ಗರ್ಭಾವಸ್ಥೆಯಲ್ಲಿ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಲಹೆಗಳು ಗರ್ಭಿಣಿಯರಲ್ಲಿ ಕಂಡುಬರುವ ಮಧುಮೇಹವನ್ನು ಗರ್ಭಧಾರಣೆಯ ಮಧುಮೇಹ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ, ದೇಹವು ಇನ್ಸುಲಿನ್ ಅನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬ ಬದಲಾವಣೆಗಳಿಂದಾಗಿ, ಗರ್ಭಾವಸ್ಥೆಯಲ್ಲಿ ಅಧಿಕ ರಕ್ತಸಕ್ಕರೆ ಬೆಳೆಯುತ್ತದೆ. ಈ ಹಾರ್ಮೋನ್/ ಜೀವಕೋಶಗಳು ದೇಹದಲ್ಲಿನ ಶಕ್ತಿಗಾಗಿ ಸಕ್ಕರೆ ಅಥವಾ ಗ್ಲುಕೋಸ್ ಅನ್ನು ಹೀರಿಕೊಳ್ಳಲು…

ಆನೇಕಲ್;೫೬ ಆರೋಪಿಗಳ ಬಂಧನ ೭೪ ಲಕ್ಷ ಅಧಿಕ ಮೌಲ್ಯದ ವಸ್ತುಗಳ ವಶ

ನೇಕಲ್,ಜು.೧೫: ಸುಲಿಗೆ ಕಳ್ಳತನ ಸೇರಿದಂತೆ ೩೭ ಪ್ರಕರಣಗಳಲ್ಲಿ ಭಾಗಿಯಾಗಿದ್ದ ೫೬ ಆರೋಪಿಗಳನ್ನು ಬಂಧಿಸಿರುವ ಆನೇಕಲ್ ಉಪ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಈ ಸಂಬಂಧ ೭೪ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ವರವಲಯದ ಸುತ್ತ ಹಲವಾರು ರಾಬರಿಗಳು ಮತ್ತು ಕಳ್ಳತನಗಳು ನಡೆಯುತ್ತಿದ್ದವು ಕೆಲವು ಕ್ಲಿಸ್ಟ್ ಪ್ರಕರಣಗಳನ್ನು ಬೆನ್ನು ಹತ್ತಿ ಪೊಲಿಸುರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ . ಹಲವು ಕ್ಲಿಷ್ಟ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ…

ಮೂಲ ದೇವರಿಗೆ ಮೂರೇ ಕಾಲು…!?

ಮೂಲ ದೇವರಿಗೆ ಮೂರೇ ಕಾಲು…!? ಬೇಸಿಗೆ ಎಂದರೆ ಶಾಲೆಗೆ ಬಿಡುವು ‘ಇನ್ನೇನು ಎಲ್ಲಾ ಅರಾಮು’ ಎಂಬುದು ನಗರದ ಮಕ್ಕಳ ಹೇಳಿಕೆಯಾದರೆ,ಹಳ್ಳಿಯ ಒಕ್ಕಲ ಮಕ್ಕಳಿಗೆ ಹಲವು ತಯಾರಿಗಳ ಕಾಲ.ಹೊತ್ತೇರುವ ತನಕ ರೈತರು ಕೃಷಿ ಪರಿಕರಗಳನ್ನ ಹೊತ್ತು ಬಡಿಗೇರು,ಕಮ್ಮಾರು ಅಂತ ತಿರುಗಾಡುತ್ತಾ,ಎತ್ತುಗಳಿಗೆ ಲಾಲ್ ಕಟ್ಟಿಸುವುದು,ಹೊಲ ಹಸನು ಮಾಡುವುದು, ಗೊಬ್ಬರ ಹೇರುವುದು,ಮೇರೆಯ ಬದಿ ಕಳ್ಳಿ ಸಾಲು,ಮುಳ್ಳು ಬೇಲಿಗಳ ಸಮ ಮಾಡಿ ಏನು ಬಿತ್ತುವುದು ಎಂದು ತಯಾರಾದರೆ,ಅಪ್ಪ ಅವ್ವರಿಗೆ ಸಹಾಯಕರಾಗುವ ಕೆಲಸ ಮಕ್ಕಳದೇ.ದನ, ಎಮ್ಮೆ ಮೇಯಿಸಲು ಹೋಗುವವರು,ಕುರಿ ಆಡುಗಳನ್ನ ಕಾಯುವವರು ಇವರೇ!ಮನೆಯ ರಾಸುಗಳಿಗೆ…

ದರ್ಶನ್ ವಿರುದ್ಧ ಹಲ್ಲೆ ಆರೋಪ; ಗೃಹಸಚಿವರಿಗೆ ದೂರು ನೀಡಿದ ಇಂದ್ರಜಿತ್ ಲಂಕೇಶ್

ಬೆಂಗಳೂರು,ಜು,15: ನಟ ದರ್ಶನ್ ಹೆಸರಲ್ಲಿ ವಂಚನೆ ನಡೆದಿದೆ ಎನ್ನುವ ಪ್ರಕರಣ ತಣ್ಣಗಾಗುತ್ತಿದ್ದಂತೆ ,ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್, ದರ್ಶನ್ ಮತ್ತು ಅವರ ತಂಡದ ವಿರುದ್ದ ಹಲ್ಲೆ ಆರೋಪ ಮಾಡಿದ್ದಾರೆ. ಈ ಮೂಲಕ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದಿದ್ದು ದರ್ಶನ್ ಮತ್ತು ಅವರ ತಂಡ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು ಅದನದನು ಮೈಸೂರು ಪೊಲೀಸರು ಒತ್ತಡಕ್ಕೆ ಮಣಿದು ಮುಚ್ಚಿಹಾಕಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೈಯರ್ ಗೆ ನಟ…

ಒಂಬತ್ತು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು, ಜು,15:ಭ್ರಷ ಅಧಿಕಾರಿಗಳಿಗೆ ಸಿಂಹಸ್ವಪ್ನವಾದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಒಂಬತ್ತ ಅಧಿಕಾರಿಗಳ ಮನೆ ,ಕಚೇರಿ ಮೇಲೆ ದಾಳಿ ನಡೆಸಿ ಅಪಾರ ಆಸ್ತಿ ದಾಖಲೆಗಳನ್ನು ಪತ್ತೆ ಹಚ್ಚಿದೆ. ಬೆಂಗಳೂರು, ಕೋಲಾರ, ಮಂಗಳೂರು ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ನೀಡಿದೆ. ಅಧಿಕಾರಿಗಳ ಮನೆ,ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ ಎಸಿಬಿ ತಂಡ ಪರಿಶೀಲನೆಯಲ್ಲಿ ತೊಡಗಿವೆ. ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ಮಾಹಿತಿ ಈ…

ಸಂದಿರುವುದನ್ನ ಋಣ ಮಂಕುತಿಮ್ಮ

ಸಿದ್ಧಸೂಕ್ತಿ : ಸಂದಿರುವುದನ್ನ ಋಣ ಮಂಕುತಿಮ್ಮ. ಅನ್ನ=ಭೋಗ. ಋಣ=ಸಂಬಂಧ. ಪಾರಣಿ/ಣೆ=ವ್ರತ ಉಪವಾಸದ ನಂತರದ ಊಟ. ಬದುಕು ಅನಿಶ್ಚಿತ. ಇವರು ಹೀಗಿರುವರೆಂದು ಹೇಳಲಾಗದು! ಏರಿಳಿವು ತಪ್ಪದು. ಬೆಳಿಗ್ಗೆ ಮದುವೆ, ಸಂಜೆ ಮರಣ! ನಿನ್ನೆ ಹುಟ್ಟು, ಇಂದು ಸಾವು, ನಾಳೆ ಸತ್ತವರ ತಿಥಿ! ಇಂದು ಮೃಷ್ಟಾನ್ನ ಭೋಜನ, ನಾಳೆ ಭಿಕ್ಷಾನ್ನ, ಅನ್ನಕ್ಕೆ ಪರದಾಟ! ಇಂದು ಉಪವಾಸ, ನಾಳೆ ಊಟ! ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ! ಧಾನ್ಯ ಧಾನ್ಯ ಮೇ ಲಿಖಾ ಹೈ ಖಾನೇವಾಲಾ ಕಾ ನಾಮ್! ಬೆಳೆದ ಮಗನ/ಮಗಳ…

Girl in a jacket