Girl in a jacket

Daily Archives: July 9, 2021

ಇಂಡಿ ತಾಲೂಕಿನ 23 ಕೆರಗಳ ತುಂಬಿಸುವ ಯೋಜನೆಗೆ ಅನುದಾನ ನೀಡಲು ಎಂ.ಬಿ ಪಾಟೀಲ್ ಮನವಿ

ಬೆಂಗಳೂರು,ಜು0 9. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 23 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುದಾನ ಒದಗಿಸುವಂತೆ ಕೋರಿ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ವಿನಂತಿಸಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಚರ್ಚಿಸಿದ ಎಂ.ಬಿ.ಪಾಟೀಲ್‍ರವರು ಭೀಮಾನದಿ ಪಾತ್ರದಲ್ಲಿ ನೀರಿನ ಕೊರತೆಯ ಕಾರಣ ಇಂಡಿ ಭಾಗದ ಕೆಲವು ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೃಷ್ಣಾ ನದಿ ನೀರನ್ನು ಎತ್ತಿ, ಭೀಮಾ ಭಾಗದ ಈ ಹಳ್ಳಿಗಳಿಗೆ…

ಲ್ಯಾಂಡ್ ಡಿಲಿಂಗ್ ಹಿನ್ನಲೆ ಮಾರಕಾಸ್ತ್ರದಿಂದ ಹಲ್ಲೆ: ವ್ಯಕ್ತಿ ಸ್ಥಿತಿ ಗಂಭೀರ…!

ಹುಬ್ಬಳ್ಳಿ,ಜು09: ಲ್ಯಾಂಡ್ ಡಿಲಿಂಗ್ ಹಿನ್ನೆಲೆಯಲ್ಲಿವ್ಯಕ್ತಿಯ ಮೇಲೆ‌ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿಯ ಚಿಕ್ಕು ತೋಟದಲ್ಲಿ ನಡೆದಿದೆ. ವಿರೇಶ ತೆಗಡೆ ಎಂಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಉದಯನಗರದ ರೌಡಿ ಶೀಟರ್ ಅಲ್ತಾಫ್ ಬೇಪಾರಿ ಹಾಗೂ ಆತನ ಸಹಚರರಿಂದ ವೀರೇಶ ನ ಮೇಲೆ ಮನಸ್ಸೋ ಇಚ್ಛೆ ಲಾಂಗ್ ದಾಳಿ ನಡೆದಿದೆ ಎನ್ನಲಾಗಿದೆ. ಹಿನ್ನೆಲೆ: ಎರಡು ಎಕರೆ ಜಮೀನನ್ನು ಬೇರೊಬ್ಬರಿಗೆ ಮಾರಿದ್ದ ಜಮೀನನ್ನು ಖಾಲಿ ಮಾಡಿಸಲು ಅಲ್ತಾಪ ಬೇಪಾರಿ ತನ್ನ ಮಧ್ಯಸ್ತಿಕೆಯಲ್ಲಿ ಡೀಲ್ ಮಾಡುವುದಾಗಿ ಮತ್ತು…

ನದಿ ಶುದ್ಧೀಕರಣಕ್ಕೆ 1500 ಕೋಟಿ: ಸಿ.ಪಿ ಯೋಗೇಶ್ವರ್

ರಾಮನಗರ ಜು 09: ವೃಷಬಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ ರೂ.1500.00 ಕೋಟಿಗಳ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಕೃಷಿಗೆ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಟಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ರವರು ಬಿಡದಿಯ ಈಗಲ್ಟನ್ ರೆಸಾರ್ಟನಲ್ಲಿ ನಡೆದ ಮಾಧ್ಯಮ ಗೋಷ್ಟಿಯಲ್ಲಿ ತಿಳಿಸಿದರು. ಸಚಿವ ಯೋಗೇಶ್ವವರ ರವರು ಇಂದು ಬೆಳಿಗ್ಗೆ ಬೆಂಗಳೂರಿನ ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಬಾವತಿ ನದಿಯನ್ನು…

ಎಲ್ಲಾರ ಮನೆ ದೋಸೆ ತೂತು!

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌        ಸಿದ್ಧಸೂಕ್ತಿ : ಎಲ್ಲಾರ ಮನೆ ದೋಸೆ ತೂತು! ಮನೆ ಯಾರದಾದರೇನು?, ಮಠಕುಟೀರವಾದರೇನು?, ಅಲ್ಲಿ ಮಾಡಿದ ದೋಸೆ ತೂತು! ತೂತಿಲ್ಲದ ದೋಸೆ ಎಲ್ಲಿ? ಕಂಚಿಗೆ ಹೋದರೂ ಮಂಚಕ್ಕೆ ಕಾಲು ನಾಲ್ಕು. ಮೂರೆರಡೈದು ಕಾಲುಳ್ಳದ್ದು ಮಂಚವೆನಿಸದು. ಭಾರತ ಅಮೆರಿಕ ಮತ್ತೊಂದಿರಲಿ, ಹಿಂದು ಮುಸ್ಲಿಂ ಕ್ರೈಸ್ತ ಮತ್ತೊಬ್ಬನಿರಲಿ, ಬಡವ ಶ್ರೀಮಂತನಿರಲಿ, ಸಂಸಾರದಲ್ಲಿ ಜಗಳ ವೈಮನಸ್ಸು ಇದ್ದದ್ದೇ. ಹೆಚ್ಚು ಕಡಿಮೆ, ಹಿಂದೆ ಮುಂದೆ ಇರಬಹುದು. ಇಂಥ ಸಂದರ್ಭದಲ್ಲಿ ಒಬ್ಬರು ಮತ್ತೊಬ್ಬರಿಗೆ ತಿಳಿ…

ಅಂಬರೀಶ್ ಮುಂದೆ ಹೆಚ್ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

ರಾಮನಗರ ಜು 09: ಅಂಬರೀಶ್ ಮುಂದೆ ಕುಮಾರಸ್ವಾಮಿ ಕೈಕಟ್ಟಿ ನಿಂತ ಫೋಟೋ ವೈರಲ್ ವಿಚಾರವಾಗಿ ರಾಮನಗರ ಬಿಡದಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ನಾನು ಸಾರ್ವಜನಿಕರ ಮುಂದೆ ಕೂಡ ಕೈಕಟ್ಟಿ ನಿಲ್ಲೇನೆ. ಅಂಬರೀಶ್ ಗೆ ನಾನೇನು ಗುಲಾಮನಾಗಿದ್ನ ಇಂತಹ ವೈಯಕ್ತಿಕ ವಿಚಾರಗಳ ಬಗ್ಗೆ ಗಮನಕೊಡುವ ಬದಲು ಮಾಧ್ಯಮದ ಮಿತ್ರರು ತೈಲ ಬೆಲೆ ಏರಿಕೆ, ರಾಜ್ಯ ಮತ್ತು ರಾಷ್ಟ್ರದಲ್ಲಿರು ಸಮಸ್ಯೆಗಳ ಬಗ್ಗೆ ಗಮನ ನೀಡುವಂತೆ ಸಲಹೆ ನೀಡಿದರು. ಕೆಲ ವೈಯಕ್ತಿಕ ವಿಷಯಕ್ಕೆ ಮಾಧ್ಯಮದವರು ಹೆಚ್ಚಿನ ಮನ್ನಣೆ ಕೊಡುವ…

Girl in a jacket