ಹುಟ್ಟು ಗುಣ ಸುಟ್ಟರೂ ಹೋಗದು
ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹುಟ್ಟು ಗುಣ ಸುಟ್ಟರೂ ಹೋಗದು. ವ್ಯಕ್ತಿ ವಸ್ತು ಜೀವಿಯ ಬಾಲ್ಯ ಆರಂಭದ ಗುಣ ಸ್ವಭಾವ ಸುಟ್ಟರೂ ಏನೇ ಮಾಡಿದರೂ ಬದಲಾಗದು. ಮಾಂಸ ಮುಟ್ಟುವುದಿಲ್ಲ ಎಂಬ ಷರತ್ತು ಒಪ್ಪಿ ದೇವರ ಅನುಗ್ರಹದಿಂದ ನಾಯಿ ರಾಜನಾಗಿ ಸಿಂಹಾಸನ ಏರಿತಂತೆ! ಸಭೆ ನಡೆಯುತ್ತಿರಲು ಮೂಳೆ ಕಂಡೊಡನೆ ಮಾತು ಮರೆತ ನಾಯಿ ಸಿಂಹಾಸನದಿಂದ ಜಿಗಿದು ಮೂಳೆ ಕಚ್ಚಿತಂತೆ! ಹಾಗೆಂದು ಆರಂಭಿಕ ಗುಣ ಸ್ವಭಾವ ಪರಿವರ್ತನೆ ಅಸಾಧ್ಯವೆಂದಲ್ಲ.ಹಾಗಿದ್ದಲ್ಲಿ ಶಿಕ್ಷಣ ತರಬೇತಿಯ ಅಗತ್ಯ ಏನು? ಸುಲಿಗೆ ದರೋಡೆ ಮಾಡುತ್ತಿದ್ದ…