Girl in a jacket

Daily Archives: July 1, 2021

ಈಸಬೇಕು ,ಇದ್ದು ಜಯಿಸಬೇಕು

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಈಸಬೇಕು, ಇದ್ದು ಜಯಿಸಬೇಕು. ಹಳ್ಳ ನದಿ ಕೆರೆ ನೀರ ದಾಟಲು ಈಸಬೇಕು. ಈಜು ಬಾರದವರು ನೀರಲಿ ಬಿದ್ದರೆ ಕಷ್ಟ.ಮುಳುಗಿದರೆ ಮುಗಿದಂತೆ! ಈಸಿ ದಾಟಿದರೆ ಮುಂದೆ ಸುಂದರದ ಬದುಕು! ಪ್ರಪಂಚ ಸಾಗರ! ದಾಟಲು ಈಸಬೇಕು, ನಿರಂತರ ಹೋರಾಡಬೇಕು! ಆಗಲೇ ಗೆಲುವು! ಗೆದ್ದವರಿಗಿದೆ ನೀರಾಚೆಯ ಸುಖ ಸಾಗರ! ಸವಿಯಲು ಇರಬೇಕು, ಇದ್ದು ಜಯಿಸಬೇಕು! ಇಲ್ಲದವರಿಗೆ ಏನಿಲ್ಲ. ಬದುಕುವಾಶೆಯುಂಟು! ಎದುರಾಗುವ ರೋಗ ಬಡತನ ಸಾಲ ಹಗೆ ಧಗೆ ಕಾಲೆಳೆತ ವಿಷಸಂಕೋಲೆಗೆ ಸುಸ್ತಾಗಿ ಕೊನೆಯಾಗುವರು ಕೆಲರು!…

ಜ್ಞಾನ – ವಿಜ್ಞಾನ

ಪರಿಚಯ: ಕವಯತ್ರಿಯಾಗಿ ಕನ್ನಡಸಾಹಿತ್ಯದಲ್ಲಿ ಗುರುತಿಸಿಕೊಂಡು ಹಲವು ಪ್ರಾಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶಿಕ್ಷಕಿ ವಿಶಾಲಾ ಆರಾಧ್ಯ ಅವರು ಕನ್ನಡ ಎಂ. ಎ. ಪದವೀಧರರು. ಮೂಲತ: ಬೆಂಗಳೂರಿನವರಾದ ಇವರು ಸಮಾಜದ ಸಮಸ್ಯೆಗಳು, ಮನುಷ್ಯನ ಸಂಬಂಧಗಳು, ಮಕ್ಕಳ ಒಳಮನಸ್ಸನ್ನು ಒಳಹೊಕ್ಕು ನೋಡುವ ದೃಷ್ಠಿಯುಳ್ಳವರು. ೩೦ ವರ್ಷಗಳಿಂದ ಅಕ್ಷರಲೋಕದ ಒಡನಾಟದಲ್ಲಿರುವ ಇವರ ಸಾಹಿತ್ಯ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗಿದ್ದರೂ ಅವರ ಮೊದಲ ಪುಸ್ತಕ ಬಿಡಿಗಡೆಯಾಗಿದ್ದು ೨೦೧೭ ರಲ್ಲಿ. ಇದುವರೆವಿಗೂ ೫ ಪುಸ್ತಕಗಳನ್ನು ಕನ್ನಡನಾಡಿಗೆ ನೀಡಿರುವ ಇವರ ಪುಸ್ತಕಗಳು ‘ಕಸಾಪ’ ದ…

Girl in a jacket