Girl in a jacket

Daily Archives: June 26, 2021

ಓಲಂಪಿಕ್ ಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ 10 ಲಕ್ಷ ರೂ ಘೋಷಣೆ

ಬೆಂಗಳೂರು, ಜೂನ, 26:ಟೋಕಿಯೋ ಓಲಂಪಿಕ್ ಗೆ ರಾಜ್ಯದ ಐವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನಪಡೆದಿದ್ದು, ಆಯ್ಕೆಯಾಗುವ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹ ಧನ ಘೋಷಿಸಿ ಆದೇಶ ಹೊರಡಿಸಲಾಗಿದೆ. 2020 ರ ಓಲಂಪಿಕ್ ಕ್ರೀಡಾಕೂಟವು ಜಪಾನ್ ಟೋಕಿಯೋದಲ್ಲಿ ಜುಲೈ 23 ರಿಂದ ಸೆಪ್ಟಂಬರ್ 5 ರ ವರೆಗೆ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಕ್ರೀಡಾಪಟುಗಳಿಗೆ ಅಗತ್ಯ ನೆರವು ನೀಡುವುದು…

ರದ್ದಾದ ಟಿ.20 ಅ.7ರಂದು ಯುಎಇ ನಲ್ಲಿ ನಡೆಸಲು ನಿರ್ಧಾರ

ನವದೆಹಲಿ,ಜೂ,26:ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾದ ಕಾರಣ ಟಿ-20 ವಿಶ್ವಕಪ್ ಟೂರ್ನಿ ರದ್ದಾಗಿದ್ದು ಈಗ ಅಕ್ಟೋಬರ್ 17 ರಂದು ಯುಎಇಯಲ್ಲಿ ನಡೆಸಲು ನಿರ್ದರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚಿಸಿದೆ ಎಂದು ಹೇಳಲಾಗಿದೆ. ಟಿ–20 ವಿಶ್ವಕಪ್ ಪಂದ್ಯಗಳು ಅಬುದಾಭಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದ್ದು, ಕ್ವಾಲಿಫಯರ್ ಸುತ್ತಿನ ಪಂದ್ಯಗಳನ್ನು ಒಮಾನ್ ಆಯೋಜಿಸಲಿದೆ. ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದಿದ್ದರೆ ಯುಎಇಯಲ್ಲಿ ನಡೆಸುವುದಾಗಿ ಬಿಸಿಸಿಐ ಈ ಹಿಂದೆಯೇ ತಿಳಿಸಿತ್ತು. ಟೂರ್ನಿಯ…

ಜಿಲ್ಲಾ ,ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ದರಾಗಲು ಸಿಎಂ ಕರೆ

ಬೆಂಗಳೂರು,ಜೂ,೨೬: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆಳಿಗೆ ಪಕ್ಷದ ಎಲ್ಲಾ ಕಾರ್ಯಕರ್ತರು ಸಿದ್ದರಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಟಾಟಿಸಿ ಮಾತನಾಡಿದ ಅವರು,’ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನಗಳಿಂದಲೂ ಹಲವು ಸವಾಲುಗಳು ಎದುರಾಗಿವೆ. ಎಲ್ಲವನ್ನೂ ದಿಟ್ಟವಾಗಿ ಎದುರಿಸಿ, ಅಭಿವೃದ್ಧಿ ಯೋಜನೆಗಳನ್ನು ಮುನ್ನಡೆಸಲಾಗುತ್ತಿದೆ’ ಎಂದು ಹೇಳಿದರು. ಆರಂಭದಲ್ಲೇ ಪ್ರವಾಹದಿಂದ ತೊಂದರೆ ಆಗಿತ್ತು. ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟವಿದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಆರ್ಥಿಕ ಸಂಕಷ್ಟದ ನಡುವೆಯೂ…

ಪ್ರಾದೇಶಿಕ ಪಕ್ಷಗಳತ್ತ ಜನರ ಒಲವು-ಕುಮಾರಸ್ವಾಮಿ

ಚನ್ನಪಟ್ಟಣ ,ಜೂ. 26: ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನರು ಈಗಾಗಲೇ ರೋಸಿ ಹೋಗಿದ್ದಾರೆ, ಇದೇ ಕಾರಣ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿಯೂ ಕೂಡ ಜನರು ಪ್ರಾದೇಶಿಕ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಕಾಂಗ್ರೆಸ್- ಬಿಜೆಪಿ ಆಡಳಿತ ಕಂಡು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಪಂಚ ರಾಜ್ಯಗಳ ಚುನಾವಣೆಯಲ್ಲೂ ಇದು ಸ್ಪಷ್ಟವಾಗಿದೆ. ಈ ಅಲೆಯನ್ನು ಗಮನಿಸಿದರೆ, ೨೦೨೩ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಜನರು ಮಣೆ ಹಾಕುವುದು…

ಹುಡುಗಿಯರು ಹೆಚ್ಚು ಮದುವೆಯಾದರೆ ತಪ್ಪೇನು-ಶಫಾಲಿ ಪ್ರಶ್ನೆ

`ಹುಡುಗರು’ ಸಿನಿಮಾದ ಮೂಲಕ ‘ತೊಂದ್ರೆ ಇಲ್ಲ ಪಂಕಜಾ’ ಹಾಡಿಗೆ ಬೈ ಬಳುಕಿಸಿದ ನಟಿ ಈಗ ಮಾಧ್ಯಗಳ ಎದುರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಶೆಫಾಲಿ ೨೦೦೪ರಲ್ಲಿ ಹರ್ಮಿತ್ ಸಿಂಗ್ ಅವರನ್ನು ವಿವಾಹವಾದರು. ಆದರೆ ೨೦೦೯ರ ವೇಳೆ ಈ ಜೋಡಿ ವಿಚ್ಚೇಧನದ ಮೂಲಕ ಬೇರೆ ಬೇರೆಯಾದರು. ಆ ಬಳಿಕ ಪ್ರಯಾಗ್ ತ್ಯಾಗಿ ಅವರನ್ನು ೨೦೧೪ರಲ್ಲಿ ವಿವಾಹವಾಗಿದ್ದಾರೆ ಮೊದಲ ಮದುವೆ ಮುರಿದು ಬಿದ್ದಾಗ ಜೀವನ ಮುಗಿಯಿತು ಎಂದು ಅಂದುಕೊಳ್ಳುತ್ತೇ. ಆದರೆ ಅದು ನಿಜಕ್ಕೂ ಕಷ್ಟವೇ. ನಾನು ಚಿಕ್ಕ ವಯಸ್ಸಿನಲ್ಲಿ ಮದುವೆಯಾದೆ.…

ಕೋಲಾರ,ಬೀದರ್ ಮನೆ ಮೇಲೆ ದಾಳಿ,೯೧ ಕೆಜಿ ಡ್ರಗ್ಸ್ ವಶ

ಬೆಂಗಳೂರು,ಜೂ,೨೬: ಕಾರ್ಖಾ ನೆಗಳಲ್ಲಿ ಅಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ ಮತ್ತು ಬೀದರ್ ಮಾಲೀಕರ ಮನೆ ಮೇಲೆ ದಾಳಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ ೯೧ ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಬೀದರ್ ಕಾರ್ಖಾನೆ ಹಾಗೂ ಮನೆಗಳ ಮೇಲೆ ಎನ್‌ಸಿಬಿ ದಾಳಿ ಮಾಡಿದೆ.ಕಾರ್ಖಾನೆಯಲ್ಲಿ ಆಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು ದರ್ ಕೈಗಾರಿಕೆಯಲ್ಲಿ ಡ್ರಗ್ಸ್ ಉತ್ಪಾದಿಸಲಾಗುತ್ತಿತ್ತು. ಆರೋಪಿ ಎನ್.ವಿ. ರೆಡ್ಡಿ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ. ಆತನ ನಿವಾಸದ ಮೇಲೂ ದಾಳಿ ಮಾಡಿ…

ದೆಹಲಿಗೆ ಹಾರಿದ ಯೋಗೇಶ್ವರ್-ಮತ್ತೇ ನಾಯಕತ್ವ ಗೊಂದಲ

ಬೆಂಗಳೂರು,ಜೂ,೨೬: ನಾಯಕತ್ವ ಬದಲಾವಣೆಯ ಪ್ರಶ್ನೆಯೆ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರ್ಯದಲ್ಲಿ ಹಲವಾರು ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯುತ್ತಲೇ ಇವೆ. ಹೌದು ಇದಕ್ಕೆ ಪುಷ್ಟಿ ಕೊಡುವಂತೆ ಮೊನ್ನೆಯಷ್ಟೆ ಸಿಎಂ ಪುತ್ರ ವಿಜಯೇಂದ್ರ ಮತ್ತು ರಾಘವೇಂದ್ರ ದೆಹಲಿಗೆ ದೌಡಾಯಿಸಿದ್ದರು ಈಗ ನಿನ್ನೆ ರಾತ್ರಿ ದಿಡೀರ್ ಸಿ.ಪಿ.ಯೋಗೇಶ್ವರ್ ದೆಹಲಿಗೆ ತೆರಳುವ ಮೂಲಕ ಬಿಜೆಪಿಯ ಆಂತರ್ಯದಲ್ಲಿ ಎದ್ದಿರುವ ಬಿಸಿ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಗೋಚಿರಿಸುತ್ತಿವೆ. ನಿನ್ನೆಯಷ್ಟೆ ಸಿ.ಪಿ.ಯೋಗೇಶ್ವರ್ ಅವರು ಸಿ.ಎಂ.ನಾಯಕತ್ವ ಕುರಿತಂತೆ ಇದೀಗ ಪರೀಕ್ಷೆ ಬರೆದಿದ್ದೇವೆ…

ರಮೇಶ್‌ಜಾರಕಿಹೊಳಿಗೆ ಬಿಜೆಪಿ ಸಂಸ್ಕೃತಿ ಒಗ್ಗೊತ್ತಿಲ್ಲ-ಬಯ್ಯಾಪುರ

ಕೊಪ್ಪಳ,ಜೂ,೨೬: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿ ಸಂಸ್ಕೃತಿ ಒಗ್ಗುತ್ತಿಲ್ಲ ಅಲ್ಲಿಯನ ಗರ್ಭಗುಡಿಯ ಚಟವಟಿಕೆಗಳು ಸರಿಹೊಂದುತ್ತಿಲ್ಲ ಎನ್ನುವುದು ಅವರ ಇತ್ತೀಚಿನ ನಡವಳಿಕೆಗಳಿಂದ ಅರ್ಥವಾಗುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಇತ್ತೀಚೆಗೆ ಕೆಲವರೊಂದಿಗೆ ಮುಂಬೈಗೆ ಹೋಗಿರುವುದನ್ನು ನೋಡಿದರೆ ಅವರು ಬಿಜೆಪಿ ತೊರೆಯುವ ಸಾಧ್ಯತೆ ಇದೆ. ಅವರೊಂದಿಗೆ ಕೆಲವರು ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಮತ್ತೆ ಸೇರುವ ಸಾಧ್ಯತೆ ಇದೆ. ಒಂದು ವೇಳೆ ಅವರು ವಾಪಸ್ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ…

ಮಕ್ಕಳಮಾನಸಿಕಆರೋಗ್ಯದಬಗ್ಗೆನಿರ್ಲಕ್ಷಿಸಲೇಬಾರದ ೫ ಚಿಹ್ನೆಗಳು

ಸುಸಾನ್ಸ್ಟೀಫನ್ಸ್ ಸೀನಿಯರ್ಕೌನ್ಸಿಲರ್ಮತ್ತುಪಿಸಿಕೋಥೆರಪಿಸ್ಟ್ ಮೆಡಾಲ್ಮೈಂಡ್ ಮಕ್ಕಳಮಾನಸಿಕಆರೋಗ್ಯದಬಗ್ಗೆನಿರ್ಲಕ್ಷಿಸಲೇಬಾರದ ೫ ಚಿಹ್ನೆಗಳು ಕೋವಿಡ್ ನ ಈ ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳು ಮೊಬೈಲ್, ಕಂಪ್ಯೂಟರ್ ಮುಂತಾದ ವಿದ್ಯುನ್ಮಾನ ಯಂತ್ರಗಳೊಂದಿಗೆ ಮಕ್ಕಳು ತಲ್ಲೀನರಾದಾಗಲೂ ಪೋಷಕರು ಗಮನಹರಿಸಬೇಕು. ಬಾಲ್ಯವುಪ್ರತಿಯೊಬ್ಬರ ಜೀವನದಅತ್ಯಗತ್ಯಭಾಗವಾಗಿದೆ. ಇದುವ್ಯಕ್ತಿಯಅಭಿವೃದ್ಧಿಮತ್ತುಅವರ ಒಟ್ಟಾರೆಕಾರ್ಯನಿರ್ವಹಣೆಯನ್ನುನಿರ್ಧರಿಸುತ್ತದೆ. ಬಾಲ್ಯದ ಮಾನಸಿಕ ಆರೋಗ್ಯವು ಅವರು ಕುಟುಂಬದೊಂದಿಗೆ ಹೊಂದಿದ್ದ ಸಕಾರಾತ್ಮP ಸಂಬಂಧವನ್ನು ಸೂಚಿಸುತ್ತದೆ.ಹಾಗಿದ್ದಾಗ ಮಾತ್ರ ಮಕ್ಕಳು ಅಭಿವೃದ್ಧಿಯಮೈಲಿಗಲ್ಲುಗಳನ್ನು ದಾಟುತ್ತಾರೆ; ನಾವು ಇಂದು ಮಕ್ಕಳ ಸುತ್ತಲೂಕೌಶಲ್ಯಗಳನ್ನು ನಿಭಾಯಿಸುವ, ಬೆಂಬಲಿಸುವ ಆರೋಗ್ಯಕರವಾತಾವರಣವನ್ನು ಕಲ್ಪಿಸ ಬೇಕಾಗಿದೆ. ಇವುಗಳಲ್ಲಿ ಯಾವುದೊಂದೂ ಅಥವಾ ಹೆಚ್ಚಿನಅಂಶಗಳನ್ನು ಪೂರೈಸದಿದ್ದಾಗ, ಮಗುವಿನಮಾನಸಿಕಆರೋಗ್ಯಕಾಳಜಿಗಳನ್ನು ನಿರ್ವಹಿಸುವ…

ಯುವಕನಿಗೆ ಕಿರುಕುಳ; ಕಾಮಕ ಶಿಕ್ಷಕನ ಬಂಧನ

ನೆಲಮಂಗಲ,ಜೂ,26:ಯುವಕನಿಗೆ ನೀಲಿಚಿತ್ರ ತೋರಿಸಿ ಲೈಂಗಿಕ ಕಿರುಕುಳ ಕೊಡುತ್ತಿದ್ದ ಯುವಕನಿಗೆ ನೀಲಿಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಆರೋಪದ ಮೇಲೆ ಶಿಕ್ಷಕನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಮಾರ್ಗದರ್ಶನ ತೋರಬೇಕಿದ್ದ ಶಿಕ್ಷಕನೊಬ್ಬ ಯುವಕನಿಗೆ ಕಾಮುಕನಾಗಿ ಕಾಡಿದ್ದಾನೆ. ಗುರುವಿನ ಸ್ಥಾನದಲ್ಲಿದ್ದ ಶಿಕ್ಷಕ ನೀಲಿ ಚಿತ್ರ ತೋರಿಸಿ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅರೋಪ ಕೇಳಿಬಂದಿದೆ. ಲೈಂಗಿಕ ದೌರ್ಜನ್ಯ ಅರೋಪ ಹಿನ್ನೆಲೆ ರಂಗನಾಥ್ ಎಂಬ ಮುಖ್ಯೋಪಾಧ್ಯಾಯನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಾನಸಿಕ ಅಸ್ವಸ್ಥ ಮಕ್ಕಳ ಧರಿತ್ರಿ…

ಹಿತ್ತಲ ಗಿಡ ಮದ್ದಲ್ಲ

ಶ್ರೀ.ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹಿತ್ತಲ ಗಿಡ ಮದ್ದಲ್ಲ. ಮನೆಯ ಹಿಂಭಾಗದ ಖಾಲಿ ಜಾಗ ಹಿತ್ತಲ. ಹಿಂದಿನ ಕಾಲದಲ್ಲಿ ವಿಶಾಲ ಹಿತ್ತಲ. ಅಲ್ಲಿ ಹೀರೆ, ತಿಪ್ಪರೆ, ಅವರೆ, ಸೌತೆ, ಕುಂಬಳದಂಥ ತರಕಾರಿ ಬಳ್ಳಿ. ಅರಿಷಿಣ, ಶುಂಠಿ, ಪುದಿನ, ಕರಿಬೇವು, ಲಿಂಬೆ, ತುಳಸಿ, ಅಮೃತಬಳ್ಳಿಯಂಥ ಔಷಧೀಯ ಗಿಡಬಳ್ಳಿ! ಅನೇಕ ಕಾಯಿಲೆಗಳಿಗೆ ಮನೆ ಮದ್ದೇ ರಾಮಬಾಣ! ಪಾಶ್ಚಾತ್ಯ ವಿಜ್ಞಾನ ಬೆಳೆದಂತೆ ಭಾರತೀಯ ಆಯುರ್ವೇದ, ಹಿತ್ತಲ ಗಿಡ ಕಡೆಗಣಿಸಲ್ಪಟ್ಟಿತು. ಕೊರೊನಾ ವಕ್ಕರಿಸಿದ್ದೇ ತಡ! ಆಯುರ್ವೇದಕ್ಕೆ, ಹಿತ್ತಲ ಗಿಡಕ್ಕೆ ಬಂತು ದಿಢೀರ್ ಬೆಲೆ!…

Girl in a jacket