Girl in a jacket

Daily Archives: June 13, 2021

ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಕ ಸುಧಾರಣೆ ಅಗತ್ಯ-ಕಪಿಲ್ ಸಿಬಲ್

ನವದೆಹಲಿ,ಜೂ,೧೩:ಕಾಂಗ್ರೆಸ್ ಪಕ್ಷ ಜಡತ್ವವನ್ನು ಬಿಟ್ಟು ಸಕ್ರಿಯ ರಾಜಕಾರಣದತ್ತ ಮುಖಮಾಡಬೇಕು ಮತ್ತು ಸಂಘಟನಾ ವಲಯದಲ್ಲಿ ವ್ಯಾಪಕ ಸುಧಾರಣೆಗಳ ಅಗತ್ಯವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ಭಾರತಕ್ಕೆ ಪುನಃ ಚೇತರಿಸಿಕೊಂಡ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ಅದಕ್ಕಾಗಿ ಜಡತ್ವವನ್ನು ಬಿಟ್ಟು ಸಕ್ರಿಯವಾಗಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವ ಮನಸ್ಥಿತಿ ಇದೆ ಎಂದು ಇದು ಸಂಭವಿಸಬೇಕಾದರೆ ಕೇಂದ್ರ ಹಾಗೂ ರಾಜ್ಯ ಸಂಘಟನಾ ವಲಯದಲ್ಲಿ ವ್ಯಾಪಕ ಸುಧಾರಣೆಗಳನ್ನು ಮಾಡಬೇಕಿದೆ. ಈ ಮೂಲಕ ಪಕ್ಷವು ಸಂಘಟನಾ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡಬೇಕು ಎಂದಿದ್ದಾರೆ…

ನಟ ಸಂಚಾರಿ ವಿಜಯ್‌ಗೆ ಅಫಘಾತ-ಗಂಭೀರ ಗಾಯ

ಬೆಂಗಳೂರು,ಜೂ,೧೩: ನಟ ಸಂಚಾರಿ ವಿಜಯ ಬೈಕ್ ಅಫಘಾತದಲ್ಲಿ ಗಂಭಿರಗಾಯಗಳಾಗಿದ್ದು ಬನ್ನೇರುಘಟ್ಟ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವರ ರಾತ್ರಿ ಬೈಕ್‌ನಲ್ಲಿ ರೈಡ್ ಮಾಡುವಾಗ ಅಫಘಾತ ಸಂಭವಿಸಿದೆ ಮೆದುಳಿನ ಬಲ ಬಾಗ ರಕ್ತಸ್ರಾವವಾಗಿದ್ದು,ತೊಡೆಗೆ ಗಂಭೀರಗಾಯಗಳಾಗಿವೆ. ನಿನ್ನೆ ರಾತ್ರಿಯೇ ಅವರಿಗೆ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಪಿಸ್ತೂಲು ಮಾರಾಟದಡಿ ರೌಡಿ ಬಂಧನ

ಬೆಂಗಳೂರು,ಜೂ,೧೩:ಜಪ್ತಿ ಮಾಡಲಾದ ಪಿಸ್ತೂಲ್‌ಕಾಡುಬೀಸನಹಳ್ಳಿ ಸೋಮ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಹಾಗೂ ಸಹಚರರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ರೌಡಿ ಲೋಹಿತ್‌ಗೆ ಪಿಸ್ತೂಲ್ ಮಾರಿದ್ದ ಆರೋಪದಡಿ ಕಲಬುರ್ಗಿ ರೌಡಿ ಸುಂಕರಿ ಅಲಿಯಾಸ್ ಮಾರ್ಕೇಟ್ ಸತೀಶ್‌ನನ್ನೂ ಸೆರೆ ಹಿಡಿದಿದ್ದಾರೆ. ‘ಹತ್ಯೆ ಸಂಚು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ರೌಡಿ ಸತೀಶ್, ಅಕ್ರಮವಾಗಿ ರಾಜ್ಯದಲ್ಲಿ ನಾಡ ಪಿಸ್ತೂಲ್ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಜೊತೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ ೩ ನಾಡ…

ನಾಳೆಯಿಂದ ಅನ್ ಲಾಕ್ ;ಜನರಿಗೆ ರಲೀಫ್

ಬೆಂಗಳೂರು,ಜೂ,13: ಕಳೆದ ಒಂದೂವರೆ ತಿಂಗಳಿಂದ ಲಾಕ್ ಡೌನ್ ನಿಂದ ಮನೆಯೊಳಗಿದ್ದ ಜನರಿಗೆ ರಿಲ್ಯಾಕ್ಷ ಸಿಗಲಿದೆ. ಹೌದು ನಾಳೆಯಿಂದ ಅನ್ ಲಾಕ್ ಆಗಲಿರುವ ಕೆಂಗೆಟ್ಟ ಜನರಿಗೆ ಅರ್ಧ ರಿಲೀಫ್ ಸಿಗಲಿದೆ.ನಾಳೆಯಿಂದ ಕೆಲ ಜಿಲ್ಲೆಗಳಿಗೆ ಲಾಕ್ಡೌನ್ನಿಂದ ಮುಕ್ತಿ ಕೊರೊನಾ ಕಡಿಮೆ ಮಾಡಲು ಕಳೆದೆರಡು ತಿಂಗಳಿಂದ ಜಾರಿಮಾಡಲಾಗಿರೋ ಲಾಕ್ಡೌನ್ಗೆ ನಾಳೆಯಿಂದ ಮೊದಲ ಹಂತದ ರಿಲೀಫ್ ಸಿಗಲಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಿರೋ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಹಾಫ್ ಅನ್ಲಾಕ್ಗೆ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು, ಇದರನ್ವಯ ನಾಳೆ ಬೆಳಗ್ಗೆ…

ಶುಲ್ಕವಿವಾದ: ಸಚಿವರ ದ್ವಂದ್ವ ಹೇಳಿಕೆಗೆ ಪೋಷಕರ ಅಳಲು

ಬೆಂಗಳೂರು,೧೩:ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಅಹಂಕಾರದ ಎಲ್ಲೆ ಮೀರಿದಂತೆ ಕಾಣುತ್ತಿದೆ ಅಥವಾ ಶಿಕ್ಷಣ ವ್ಯವಸ್ಥೆಯನ್ನೇ ಒಂದು ರೀತಿ ಕುಲಗೆಡುವ ವ್ಯವಸ್ಥಿತಿ ಸಂಚು ಎನ್ನುವಂತಿದೆ ಅವರ ನೀಡುವ ಪ್ರತಿ ಹೇಳಿಕೆಗಳು. ಹೌದು ಸುರೇಶ್ ಕುಮಾರ್ ಅವರ ಪ್ರತಿಬಾರಿಯ ಹೇಳಿಕೆಗಳು ಶಿಕ್ಷಣಕ್ಕೆ ಮಾದರಿಯಾಗುವ ಬದಲು ದ್ವಂದ್ವನಿಲುವುಗಳಾಗಿವೆ ಒಂದು ಬಾರಿ ಹೇಳಿದ ಹೇಳಿಕೆಗೂ ಇನ್ನೊಂದು ಬಾರಿ ನೀಡುವ ಹೇಳಿಕೆಗೂ ಗೊಂದಲಗಳು ಸೃಷ್ಟಿಯಾಗುತ್ತಿವೆ ಇದರಿಂದ ಸಾರ್ವಜನಿಕ ಶಿಕ್ಷಣಾಧಿಕಾರಿಗಳು ಕೂಡ ಒಂದು ರೀತಿ ಗರಬಡದವರಂತಾಗಿದ್ದಾರೆ. ರಾಜಧಾನಿಯ ಪ್ರತಿಷ್ಠಿತ ಶಾಲೆಗಳ ಶುಲ್ಕ ವಿಚಾರವಾಗಿ ಸಾರ್ವನಿಕರು…

ಸಿಡಿ ಪ್ರಕರಣ-ಸ್ಟ್ರಿಂಗ್‌ಗೂ ಮುನ್ನವೇ ರಾಸಲೀಲೆ ವೀಡಿಯೋ ಆಗಿತ್ತು

ಬೆಂಗಳೂರು,ಜೂ,೧೨: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ.ಈಗ ಮತ್ತೊಂದು ಸತ್ಯ ಬಯಲಾಗಿದೆ. ಸ್ಟ್ರಿಂಗ್ ಮಾಡುವ ಮೊದಲೇ ರಾಸಲೀಲೆ ವೀಡಿಯೋ ಆಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೌದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಮತ್ತು ಶ್ರವಣ್ ಅವರನ್ನು ವಿಚಾರಣೆಗೊಳಪಡಿಸಿದಾಗ ಈ ಸತ್ಯವನ್ನು ಬಾಯಿಬಿಟ್ಟಿದ್ದಾರೆ, ರಾಸಲೀಲೆ ವಿಡಿಯೋ ಮಾಡುವ ಸಂಬಂಧ ಯುವತಿಗೆ ಸ್ಟಿಂಗ್ ಕ್ಯಾಮರ ಕೊಡಿಸಿದ್ದು ನಾವು ಎಂದು ಶ್ರವಣ್ ಒಪ್ಪಿಕೊಂಡಿದ್ದಾನೆ. ಅವರು ಹೇಳಿರುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಸ್ಟಿಂಗ್ ಕ್ಯಾಮರದಲ್ಲಿ ವಿಡಿಯೋ…

ಜಿ೭ ಶೃಂಗಸಭೆಯಲ್ಲಿ ಮೋದಿ ಪ್ರಸ್ತಾವನೆಗೆ ಒಪ್ಪಿಗೆ

ನವದೆಹಲಿ, ಜೂ,೧೩: ಜಿ-೭ ಶೃಂಗ ಸಭೆಯಲ್ಲಿ ಪಾಲೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿರುವ ಪ್ರಸ್ತಾವನೆಗೆ ಹಲವಾರು ಮುಖಂಡರು ಒಪ್ಪಿಕೊಂಡಿದ್ದು,ಇದಕ್ಕೆ ದಕ್ಷಿಣ ಆಫ್ರಿಕ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಜೂನ್ ೧೨ ಮತ್ತು ೧೩ ರಂದು ವರ್ಚುವಲ್ ಮಾದರಿಯಲ್ಲಿ ನಡೆಯಲಿರುವ ಜಿ.೭ ಶೃಂಗದ ಬಾಹ್ಯ ಅಧಿವೇಶನ ಹೈಬ್ರೀಡ್ ಮಾದರಿಯಲ್ಲಿ ಆಯೋಜನೆಗೊಂಡಿದೆ. ವಿಶ್ವ ನಾಯಕರು ಕೋವಿಡ್ ೧೯ ವಿರುದ್ಧ ಹೋರಾಡುತ್ತಿರುವ ರಾಷ್ಟ್ರಗಳಿಗೆ ಲಸಿಕೆಯ ೧೦೦ ಕೋಟಿ ಡೋಸ್‌ಗಳನ್ನು ಒದಗಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್…

ಕಾಯಕ ಮತ್ತು ಸತ್ಯದ ಹಾದಿ…

ಕಾಯಕ ಮತ್ತು ಸತ್ಯದ ಹಾದಿ… ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲನೇ ಅಥವಾ ಎರಡನೇ ವಾರದಲ್ಲಿ ನಾನು ಕಳೆದ ಹಲವಾರು ವರ್ಷಗಳಿಂದ ದುಬೈಗೆ ಭೇಟಿ ನೀಡುವ ಒಂದು ಸಂಪ್ರದಾಯವನ್ನು ವ್ರತದ ಹಾಗೆ ಪಾಲಿಸಿಕೊಂಡು ಬಂದಿದ್ದೇನೆ. ದುಬೈ ನಾನಿರುವ ಒಮಾನ್ ದೇಶದ ಪಕ್ಕದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ನ ಒಂದು ಎಮಿರೇಟ್ ನಗರ. ಒಮಾನ್ ರಾಜಧಾನಿ ಮಸ್ಕತ್ ನಗರದಿಂದ ಸುಮಾರು ನಾಲ್ಕು ನೂರಾ ಐವತ್ತು ಕಿಲೋಮೀಟರ್ ದೂರವಿರುವ ದುಬೈ ನಗರವನ್ನು ತಲುಪಲು ಕಾರಿನಲ್ಲಿ ಹೋದರೆ ಸುಮಾರು ಐದು ತಾಸುಗಳ…

ಅಲ್ಪರ ಸಂಗ,ಅಭಿಮಾನ ಭಂಗ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                                            ಸಿದ್ಧಸೂಕ್ತಿ : ಅಲ್ಪರ ಸಂಗ, ಅಭಿಮಾನ ಭಂಗ. ಏಕಾಂಗಿ ಯಾವುದೂ ಇರದು. ಸಂಗ ಬಯಸುವುದು. ಅದಕ್ಕೇ ದೈವ ಲೀಲೆ.ಮರಕ್ಕೆ ಬೇಕು ಭೂಮಿ. ಒಬ್ಬರಿಗೊಬ್ಬರ ಎರವಿರಬೇಕು. ಒಳಿತ ಸಂಗ ಒಳಿತಿಗೆ, ಕೆಡುಕ ಸಂಗ ಕೆಡುಕಿಗೆ. ಬೆಂಕಿಯ ಸಂಗ ಭಸ್ಮ! ನೀರಿನ ಸಂಗ ತಂಪು! ಗಂಧದ…

Girl in a jacket