Girl in a jacket

Daily Archives: June 1, 2021

ನಟ್ ಯಶ್‌ನಿಂದ ೩೦೦೦ ಕಾರ್ಮಿಕರಿಗೆ ತಲಾ ೫೦೦೦ ರೂ ಪರಿಹಾರ

ಬೆಂಗಳೂರು,ಜೂ,೦೧; ಕೊರೊನಾ ಅಟ್ಟಹಾಸದಿಂದ ರಾಜ್ಯ ಸರ್ಕಾರ ಲಾಕ್‌ಡೌನ್‌ಮಾಡಿದ ಪರಿಣಾಮ ಚಿತ್ರದ್ಯೋಮ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾವಿರಾರು ಕಲಾವಿದರು ತಂತ್ರಜ್ಞರು,ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಮೂರು ಸಾವಿರ ಕಾರ್ಮಿಕರಿಗೆ ನಟ ಯಶ್ ತಲಾ ೫೦೦೦ ರೂಗಳನ್ನು ಘೋಷಿಸಿದ್ದಾರೆ. ಹೌದು. ಇದು ಬರೀ ಮಾತನಾಡುವ ಸಮಯವಲ್ಲ. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಚಿತ್ರರಂಗದ ೨೧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೩,೦೦೦ಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ ೫ ಸಾವಿರವನ್ನು ನನ್ನ…

ಶ್ರೀ ಈಶ್ವರಾನಂದ ಸ್ವಾಮೀಜಿ ಬ್ರಹ್ಮೈಕ್ಯ

ಬೆಳಗಾವಿ, ಜೂ,01:ಬೆಳಗಾವಿ ಜಿಲ್ಲಾ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದ ಶ್ರೀ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೋ. ಬ್ರ. ಸದ್ಗುರು ಶ್ರೀ ಈಶ್ವರಾನಂದ ಮಹಾಸ್ವಾಮೀಜಿ (65) ಇಂದು ಬೆಳಗಿನ ಜಾವ 2 ಘಂಟೆಗೆ ಬ್ರಹ್ಮಲೀನರಾಗಿದ್ದಾರೆ. ಕಳೆದ ಹದಿನೈದು ದಿನಗಳಿಂದ ಕೋವಿಡ್ ಪೀಡಿತರಾಗಿದ್ದ ಶ್ರೀಗಳು ಕೊಲ್ಲಾಪುರ ಬಳಿಯ ಕಣೇರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅವರನ್ನು ಮಠಕ್ಕೆ ಕರೆತರಲಾಗಿತ್ತು. ಮಠದಲ್ಲಿಯ ಕೊನೆಯುಸಿರೆಳೆದರೆಂದು ಹೇಳಲಾಗಿದೆ. ಹುಕ್ಕೇರಿ ತಾಲ್ಲೂಕಿನ ಕೊಚ್ರಿ ಎಂಬಲ್ಲಿ ಶ್ರೀ ದುಂಡಪ್ಪ ಶ್ರೀಮತಿ ಶಿವಕ್ಕ ಲೋಳಸೂರೆ…

‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರಕಥೆಗೆ ಪ್ರಶಸ್ತಿ

ಕನ್ನಡದ ಚಿತ್ರ ‘ದಾರಿ ಯಾವುದಯ್ಯಾ ವೈಕುಂಠಕೆ ಚಿತ್ರಕಥೆಗೆ ಉತ್ತಮ ಚಿತ್ರಕತೆ ಪ್ರಶಸ್ತಿ ದೊರಕಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಛಪತ್ರಪತಿ ಶಿವಾಜಿ ಅಂತರಾಷ್ಟ್ರೀಯ ಚಲನಚಿತರೋತ್ಸವದಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ ಇದರ ಜೊತೆಗೆ “ಸ್ಪೇನ್” ನಲ್ಲಿ ನಡೆಯುವ ಬಾರ್ಸೆಲೋನಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶನ ಪ್ರಶಸ್ತಿಗಾಗಿ ಬೇರೆ ಬೇರೆ ದೇಶದ ನಿರ್ದೇಶಕರ ಜೊತೆ ಸ್ಪರ್ಧೆಗಿಳಿದು ಕೊನೆಗೂ “ಅತ್ಯುತ್ತಮ ನಿರ್ದೇಶಕ” ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ. “ನಾವ್ಡಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ೧೬೦೦ ಸಿನಿಮಾಗಳ ಪೈಕಿ ನನಗೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿದ್ದು ಹೆಚ್ಚು ಖುಷಿ ತಂದಿತು.…

ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿಅಂಡರ್‌ವರ್ಲ್ಡ್ ಡಾನ್ ಚಿತ್ರ !

ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಬೆಂಗಳೂರಿನ ಅಂಡರ್‌ವರ್ಲ್ಢಡಾನ್ ಚಿತ್ರ ತೆರೆಗೆ ಬರಲಿದೆ. ಹೌದು ಅಗ್ನಿ ಶ್ರೀಧರ್ ಕತೆ ಬರೆದಿರುವ ಈ ಡಾನ್ ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ೬೦ ಮತ್ತು ೭೦ರ ದಶಕದ ಕಥೆಗೆ ಬೆಂಗಳೂರಿನಲ್ಲಿ ಸೂಕ್ತ ಸ್ಥಳ ಹುಡುಕಾಡುವುದೇ ದೊಡ್ಡ ಸವಾಲಾಗಿದೆ ಹಾಗಾಗಿ ಸದ್ಯ ಲೊಕೇಶ್‌ನ ಹುಡುಕಾಟದಲ್ಲಿ ಚಿತ್ರನಿರ್ಮಾಣ ತಂಡ ಬೆಂಗಳೂರಿನಲ್ಲಿ ಆ ರೀತಿಯ ಸ್ಥಳಗಳು ಸಿಗುವುದು ಕಷ್ಟ ಹೀಗಾಗಿ ನಗರದಿಂದ ಹೊರಗೆ ಅಂದರೆ ಕೋಲಾರ ಮತ್ತು ಮೈಸೂರಿನಲ್ಲಿ ಆ ಕಾಲಕ್ಕೆ ತಕ್ಕನಾದ ವಾತಾವಾರಣ ಸೃಷ್ಟಿಸಲು ಯೋಜಿಸಲಾಗುತ್ತಿದೆ.…

ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ೧೨೨ ರೂ ಇಳಿಕೆ

ನವದೆಹಲಿ,ಜೂ,೦೧: ತೈಲ ಬೆಲೆ ಜೊತೆ ಜೊತೆಗೆ ಏರಿಕೆಯಾಗುತ್ತಿದ್ದ ವಾಣಿಜ್ಯ ಅನಿಲ ಸಿಲಿಂಡರ್ ದರ ಇಳಿಕೆಯಾಗಿದೆ.ಆದರೆ ಗೃಹ ಬಳಿಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೊರೊನಾ ಮದ್ಯೆ ಅಗತ್ಯವಸ್ತುಗಳು ಏರಿಕೆ ಕಾಣುತ್ತಿದ್ದವು ಈಗ ಅನಿಲಿ ಸಿಲಿಂಡರ್ ದರ ೧೨೨ ರೂ ಕಡಿತಗೊಳಿಸಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಪ್ರತೀ ಸಿಲಿಂಡರ್ ದರದಲ್ಲಿ ೧೨೨ರೂ ಕಡಿತ ಮಾಡಿದೆ. ಆದರೆ ೧೪.೨ ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಐಒಸಿ…

ಸಿದ್ದರಾಮಯ್ಯಗೆ ಜ್ವರ-ಮೂರು ದಿನ ವಿಶ್ರಾಂತಿ

ಬೆಂಗಳೂರು, ಜೂ, ೦೧: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಸೋಮವಾರ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದೆ, ಈ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಕೂಡ ಮಾಡಿಸಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ವೈದ್ಯ ಡಾ. ರವಿ ಕುಮಾರ್ ಅವರು ಆರೋಗ್ಯ ತಪಾಸಣೆ ನಡೆಸಿದ್ದು, ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ, ಆದರೂ ಜ್ವರ ಇರುವ…

ಆಸ್ತಿಗಾಗಿ ಸಹೋದರರ ನಡುವೆ ಜಗಳ-ಅಣ್ಣನನ್ನೇ ಕೊಂದ ಪಾಪಿ

ಮಂಡ್ಯ,ಜೂ,೦೧: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ನಡೆದ ಜಗಳ ಅಣ್ಣನನ್ನು ಬಲಿತಗೆದುಕೊಂಡ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (೫೪) ಮೃತ ದುರ್ದೈವಿ ಅಣ್ಣನಾಗಿದ್ದು, ಸುರೇಶ್ ಕೊಲೆ ಮಾಡಿದ ತಮ್ಮನಾಗಿದ್ದಾನೆ. ಕೊಲೆಯಾದ ಬಾಲಕೃಷ್ಣ ಮೈಸೂರಿನಲ್ಲಿ ವಾಸ ಮಾಡುತ್ತಿದ್ದು, ಲಾಕ್‌ಡೌನ್ ಆಗಿರುವ ಕಾರಣ ಅರಳಕುಪ್ಪೆ ಗ್ರಾಮಕ್ಕೆ ಬಂದಿದ್ದರು. ಜಮೀನು ವಿಚಾರದಲ್ಲಿ ಬಾಲಕೃಷ್ಣ ಹಾಗೂ ಸುರೇಶ್ ನಡುವೆ ಈ ಹಿಂದೆ ಜಗಳವಾಗಿತ್ತು. ಹೀಗಾಗಿ ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಬೇರೆ ಬೇರೆ…

ಅಹಂಕಾರ-ದುರಹಂಕಾರಗಳ ನಡುವಿನ ತರ್ಕ

ಬಾಲ ಸಿದ್ಧನೊಮ್ಮೆ ತನ್ನ ಮನೆಯ ಎಮ್ಮೆಯ ಮೇಲೆ ಕುಳಿತನು. ಹುಡುಗರನ್ನು ಕೂಗಿ ಕರೆದು “ನಾನು ಆನೆಯ ಮೇಲೆ ಕುಳಿತಿರುವೆನು. ನೀವೆಲ್ಲಾ ಮೆರವಣಿಗೆ ಮಾಡಿರಿ” ಎಂದನು. ಎಮ್ಮೆ ಹೆಜ್ಜೆಯೇ ಇಡಲಿಲ್ಲ. ಸಿದ್ಧ  ಶಪಿಸಿದ. ಎಮ್ಮೆ ಸತ್ತಿತ್ತು! ಎಮ್ಮೆ ಸಾಕಿದ್ದ ತನ್ನ ತಾಯಿ ದೇವಮಲ್ಲಮ್ಮ ಅಳಲಾರಂಭಿಸಿದಳು. ಸಿದ್ಧ‘ಓಂ ನಮಃ ಶಿವಾಯ’ ಎನ್ನುತಾ ಎಮ್ಮೆ ಮುಟ್ಟಿದ. ಎಮ್ಮೆಬದುಕಿತು! ಈ ಘಟನೆಯನ್ನು ಸಿದ್ಧ ಹೀಗೆ ವಿವರಿಸಿದ:  ಅಹಂಕಾರವೇ ಎಮ್ಮೆ. ನಾನು ನಾನು ಎನ್ನುವುದೇ ಅಹಂಕಾರ. ಇದು ಎಲ್ಲರಲ್ಲೂ ಇರುತ್ತದೆ. ಹಡುಗರಿರಲಿ,ವೃದ್ಧರಿರಲಿ ,ಜ್ಞಾನಿಗಳಿರಲಿ, ಅಜ್ಞಾನಿಗಳಿರಲಿ,ಪ್ರತಿಯೊಬ್ಬರಲ್ಲೂ…

ವಿಜಯೇಂದ್ರ ದೆಹಲಿ ಪ್ರಯಾಣ ಸಿಎಂ ಬದಲಾವಣೆ ಸೂಚನೆಯೇ?

ಬೆಂಗಳೂರು,ಜೂ,೦೧:ರಾಜ್ಯ ಬಿಜೆಪಿಯ ಆಂತರ್ಯದಲ್ಲಿ ನಾಯಕತ್ವ ಬದಲಾವಣೆಯ ಧ್ವನಿ ಜೋರಾಗಿಯೇ ಕೇಳಬರುತ್ತಿದೆ. ಬಿಜೆಪಿ ಹಿರಿಯ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಲಾಕ್‌ಡೌನ್ ಮುಂದುವರೆಸುವ ಮೂಲಕ ನಿಮ್ಮ ಸ್ಥಾನ ಉಳಿಸಿಕೊಳ್ಳಲು ಯತ್ನಿಸಬೇಡಿ ಎಂದಿರುವುದು ಮತ್ತು ಲಿಂಗಾಯತ ಮಠಗಳ ಸ್ವಾಮೀಗಳ ಮೂಲಕ ತಮ್ಮನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದೀರಿ ಎನ್ನುವ ಹೇಳಿಕೆ ನಿಜಕ್ಕೂ ಆ ಪಕ್ಷದಲ್ಲಿನ ಆಂತರಿಕ ಭಿನ್ನಮತ ಈಗ ಮತ್ತಷ್ಟು ಬುಗಿಲೆದ್ದಿದೆ ಎಂದು ಹೇಳ ಬಹುದು . ಈ ಹೇಳಿಕೆಗಳನ್ನು ಗಮನಿಸಿದರೆ ಬಹುತೇಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಖಚಿತವೇ ಎನ್ನುವ…

ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ. ಮುಗ್ಗಲಗೇಡಿ=ಸೋಮಾರಿ. ಶಾಸ್ತ್ರ =ವೈರಾಗ್ಯ ಬೋಧಕ ವೇದಾಂತ. ಗುರುಗಳು ಪ್ರವಚನ ಮಾಡುತ್ತಿದ್ದರು:ಹುಟ್ಟು ಸಾವು, ಹಸಿವು ಬಾಯಾರಿಕೆ, ಸುಖ ದುಃಖ, ಇವೆಲ್ಲ ದೇಹಕ್ಕೆ. ಆತ್ಮನಿಗಲ್ಲ. ನಾನು ಆತ್ಮಾ, ದೇಹವಲ್ಲ. ಆತ್ಮಾ ನಿತ್ಯ, ಪರಿಪೂರ್ಣ, ನಿತ್ಯತೃಪ್ತ,ಸದಾ ಪರಿಶುದ್ಧ! ಹತ್ತಿರದ ಹುಟ್ಟು ಸೋಮಾರಿಯ ಕಿವಿಗೆ ಈ ಮಾತು ಬಿತ್ತು! ಪುಳಕಿತಗೊಂಡ, ಸಂತಸಪಟ್ಟ! ಶೌಚದ ನಂತರ ಒತ್ತಾಯಕ್ಕೆ… ತೊಳೆದುಕೊಳ್ಳುತ್ತಿದ್ದ ಆತ ಅಂದಿನಿಂದ ಅದನ್ನು ಬಿಟ್ಟ! “ನಾನು ಆತ್ಮಾ, ಪರಿಶುದ್ಧ” ಎಂದ…

Girl in a jacket