Girl in a jacket

Daily Archives: May 30, 2021

ಕೊಲೆ ಯತ್ನ-ನಾಲ್ವರು ರೌಡಿಶೀಟರ್‌ಗಳ ಬಂಧನ

ಬೆಂಗಳೂರು,ಮೇ,೩೦: ತನ್ನ ಎದುರಾಳಿ ತಂಡದ ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ರೌಡಿಶೀಟರ್ ಗಳಾದ ಸೋಮ, ಮಧು, ಸುಮಂತ್ ಹಾಗೂ ಮುನಿಮಲ್ಲಪ್ಪ ಬಂಧಿತ ಆರೋಪಿಗಳು. ಬಂಧಿತರು ವಿರೋಧಿ ಬಣದಲ್ಲಿದ್ದ ರೌಡಿಶೀಟರ್ ರೋಹಿತ್ ಹತ್ಯೆಗೆ ಸಂಚುರೂಪಿಸಿದ್ದರು. ರೋಹಿತ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು. ವರ್ತೂರು ಕೆರೆ ಕೊಡಿ ಬಳಿ ರೋಹಿತ್ ಬರಲಿದ್ದಾನೆ ಎಂಬ ಮಾಹಿತಿ ಅರಿತ ಆರೋಪಿಗಳು ಮಾರಕಾಸ್ತ್ರ ಹಿಡಿದು ಕೊಲೆಗೆ ಸಂಚು ರೂಪಿಸಿದ್ದರು. ಈ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ…

ಮತ್ತೇ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವ ಶಶಿಕಲಾ

ಚೆನ್ನೈ,ಮೇ,೩೦: ತಮಿಳುನಾಡಿನಲ್ಲಿ ಎಐಡಿಎಂಕೆ ಪಕ್ಷದಲ್ಲಿ ಆಂತರಿಕ ಕಿತ್ತಾಟಗಳ ಈ ಸಂದರ್ಭದಲ್ಲಿ ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದು ಇದಕ್ಕೆ ಸಂಬಂಧಿಸಿದ ಆಡಿಯೋ ಒಂದು ಬಹಿರಂಗವಾರುವುದು ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಪಕ್ಷದಲ್ಲಿ ಆಗಿರುವ ಎರಡು ಬಣಗಳಿಂದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ ಹೀಗಾಗಿ ರಾಜ್ಯದಲ್ಲಿ ಮತ್ತೇ ಪಕ್ಷವನ್ನು ಸರಿದಾರಿಗೆ ತರಬೇಕು ಎಂದರೆ ಅದಕ್ಕೆ ಶಶಿಕಲಾಗೆ ಮಾತ್ರ ಸಾದ್ಯ ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಮಾತನಾಡಿರುವ ಆಡಿಯೋ ಕ್ಲಿಪ್ ಈಗ ಬಹಿರಂಗವಾಗಿದೆ. ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ…

ಜೆ.ಎಚ್.ಪಟೇಲ್ ಸಿಎಂ ಆದ ಘಟನೆಯ ನೆನಪು…

ದೇವೇಗೌಡರು ಪ್ರಧಾನಿ ಪಟ್ಟ ಏರುವುದು ಖಚಿತವಾಗುತ್ತಿದ್ದಂತೆ ರಾಜ್ಯದಲ್ಲಿ ಅವರ ಉತ್ತರಾಧಿಕಾರಿಯಾಗಲು ನಡೆದ ಆ ಘಟನಾವಳಿಗೆ ಇಂದಿಗೆ ೨೫ ವರ್ಷವಾಗಿದೆ ಅದರ ನೆನಪು ಮತ್ತು ಅಂದು ನಡೆದ ಆ ರಾಜಕೀಯ ನಡುವಳಿಗಳ ಕುರಿತು ಹಿರಿಯ ಪತ್ರಕರ್ತರಾದ ಸಿ. ರುದ್ರಪ್ಪ ಅವರು ಕಟ್ಟಿಕೊಟ್ಟಿದ್ದಾರೆ. ಸಿ. ರುದ್ರಪ್ಪ.ಹಿರಿಯ ಪತ್ರಕರ್ತರು ಇಪ್ಪತ್ತೈದು ವರ್ಷಗಳ ಹಿಂದಿನ ಇಂದಿನ ಕಾಲಮಾನ ರಾಜ್ಯ ರಾಜಕಾರಣದಲ್ಲಿ ಒಂದು ಪ್ರಮುಖ ಕಾಲಘಟ್ಟ.ಕನ್ನಡಿಗರೊಬ್ಬರು ಪ್ರಧಾನಿ ಪಟ್ಟಕ್ಕೇರಿದ ಕ್ಷಣ.ಮುಖ್ಯಮಂತ್ರಿಯಾಗಿದ್ದ ಎಚ್ ಡಿ ದೇವೇಗೌಡರು ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಅವರ ಉತ್ತರಾಧಿಕಾರಿಯಾಗಲು ನಡೆದ ಪೈಪೋಟಿ,ದೇವೇ ಗೌಡರ…

ಆಂಗ್ಲಭಾಷೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನ!

ಲೇಖಕರ ಪರಿಚಯ; ಎನ್.ಸಿ.ಶಿವಪ್ರಕಾಶ್ ಮೂಲ ತುರುವನೂರು ನಿವಾಸಿ,ಅವರು ಆರಿಸಿಕೊಂಡ ವೃತ್ತಿಯಿಂದ ಒಮಾನ್ ದೇಶದ ಮಸ್ಕತ್‌ನಲ್ಲಿ ವಾಸವಾಗಿದ್ದಾರೆ.ಆದರೆ ತಾಯ್ನಾಡಿನ ಮಣ್ಣಿನ ವಾಸನೆಯನ್ನು ಎಂದೂ ಮರೆತವರಲ್ಲ ಅದರಲ್ಲೂ ಆಡಿ-ಬೆಳದ ಗ್ರಾಮದ ವೈಶಿಷ್ಟ್ಯಗಳ ಕುರಿತು ಮೆಲುಕು ಹಾಕುತ್ತಲೆ ಇರುತ್ತಾರೆ, ಯಾಕೆಂದರೆ ಅಲ್ಲಿನ ಭಾವನಾತ್ಮಕ ಸಂಬಂಧಗಳ ಬೆಸುಗೆ ಎಂದೂ ಕಳಚಲಾಗದ ನೆನಪುಗಳು.ಹಾಗಾಗಿಯೇ ಗ್ರಾಮದ ಪ್ರತಿ ನೆನಪು ಅವರಲ್ಲಿ ಮಾಸದೆ ಉಳಿದವೆ.ಆ ನೆನಪುಗಳ ಭುತ್ತಿಯ ಒಂದಿಷ್ಟು ಘಟನೆಳನ್ನು ಇಲ್ಲಿ ಹೇಳಿದ್ದಾರೆ. ಶಿವಪ್ರಕಾಶ್ ಅವರು ಹತ್ತನೇ ತರಗತಿಯವರೆಗೂ ತುರುವನೂರಿನಲ್ಲೇ ಓದಿದ್ದು ನಂತರ ಪಿಯುಸಿ ಚಿತ್ರದುರ್ಗದ ಸರ್ಕಾರಿ…

ಮಾತು ಬೆಳ್ಳಿ, ಮೌನ ಬಂಗಾರ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌   ಸಿದ್ಧಸೂಕ್ತಿ : ‌ಮಾತು ಬೆಳ್ಳಿ, ಮೌನ ಬಂಗಾರ. ಮಾತು ಅಭಿಪ್ರಾಯಸಾಧನ. ನಾಮಪದ ಕ್ರಿಯಾಪದ ಒಳಗೊಂಡ ಪೂರ್ಣಾರ್ಥ ವಾಕ್ಯ. ಅಕ್ಷರ ಶಬ್ದ ಪದ ವಾಕ್ಯದ ಉಚ್ಚಾರ ತಪ್ಪಿರದ ಸ್ಫುಟವಿರಲಿ, ಭಾಷೆ ಕೊಲೆಯಾಗದಿರಲಿ. ಭಾಷೆಯ ಆಳ ವಿಸ್ತಾರ ಅರಿತರೆ ಚೆನ್ನ! ಕೇಳುಗರಿಗೆ ಅರ್ಥವಾಗದ ಮಾತು ಬೇಡ. ಮಗು ಮೊದಲು ಮಾತನಾಡಿದರೆ ಚಪ್ಪಾಳೆ, ಹಿತ ಮಿತ ಮೀರಿ ಆಡಿದರೆ ಸಾಕು ನಿಲ್ಲಿಸುವ ಪೆಟ್ಟು! ಅಗತ್ಯ ಹಿತ ಮಿತದ ಮಾತು ಅಮೃತ, ಅನಗತ್ಯ ಅಹಿತ ಮನಬಂದಂತೆ…

Girl in a jacket