Girl in a jacket

Daily Archives: May 27, 2021

ವಿರೂಪಾಕ್ಷ ಬೀದಿಯ ಮಂಟಪಗಳ ಕುರಿತ ಬಜಾರುಗಳ ಅಧ್ಯಯನ

ವಿರೂಪಾಕ್ಷ ಬೀದಿಯ ಮಂಟಪಗಳ ಕುರಿತ ಬಜಾರುಗಳ ಅಧ್ಯಯನ ಹಂಪೆಯ ವಿರೂಪಾಕ್ಷ ದೇವಾಲಯದ ಮುಂದಿನ ಬೀದಿಯನ್ನು ವಿರೂಪಾಕ್ಷ ಬೀದಿ, ಪಂಪಾ ರಥವೀದಿ, ಹಂಪೆ ಬಜಾರು ಎಂದೆಲ್ಲಾ ಕರೆಯಲಾಗುತ್ತದೆ. ಇದು ಪಂಪಾವಿರೂಪಾಕ್ಷರ ರಥೋತ್ಸವಕ್ಕಾಗಿ ನಿರ್ಮಿಸಿದ್ದ ರಥವೀದಿ. ಈ ಬೀದಿಯ ಇಕ್ಕೆಲಗಳಲ್ಲಿ ಸಾಲುಮಂಟಪಗಳಿದ್ದು, ಇವು ಅಂದಿನ ವ್ಯಾಪಾರ-ವಾಣಿಜ್ಯದ ಮಳಿಗೆಗಳೂ ಆಗಿದ್ದವು. ಇದು ಸುಮಾರು ಒಂದು ಕಿ.ಮೀ ದೂರವಿದ್ದು, ಎದುರು ಬಸವಣ್ಣ ಮಂಟಪದವರೆಗೂ ವಿಸ್ತರಿಸಿತ್ತು. ಬೀದಿಯ ಕೊನೆಗೆ ಎಡಭಾಗದಲ್ಲಿ ವಿಸ್ತಾರವಾಗಿರುವ ಅನೇಕ ಮಂಟಪಗಳಿವೆ. ಈ ಮಂಟಪಗಳು ಹಿಂದೆ ಬಹುದೊಡ್ಡ ಮಠವೇ ಆಗಿದ್ದವು. ಈ…

ವಿಷಾದ ಗಾಥೆ

ವಿಷಾದ ಗಾಥೆ 1 ಬೇಯುತಿದೆ ಕಾಲ ಜೀವಾತ್ಮಗಳಲಿ ಹರಿದಿದೆ ಹಾಲಾಹಲ ಬೇಗುದಿಯಲಿ ಭವದ ಬವಣೆ ನರಳುತ್ತಿದೆ ದಾರಿ ಸವೆಯುತ್ತಿಲ್ಲ ಬಹುದೂರ ಇದೆ ಪಯಣ ಕೈದೀವಿಗೆಗೆ ಹಾದಿಯ ಅರಿವಿಲ್ಲ ವಿಷಾದ ಗಾಥೆ 2 ಕಡಲ ದೇವಿಯೆ ನೀನೇಕೆ ಹೀಗೆ ಮೊರೆಯುತ್ತೀಯ ಇಷ್ಟೇಕೆ ನೀನು ಉಪ್ಪಾಗಿದ್ದೀಯಾ ಕೇಳು ಮಗು ನಿನ್ನಪ್ಪ ಕಿನಾರೆಯಲಿ ಮುಳುಗಿಹೋದ ನಿನ್ನಮ್ಮನ ಕಣ್ಣೀರು ನನ್ನೊಡಲಸೇರುತಲೇಯಿದೆ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ 9448970731

ಬೆಡ್ ಬ್ಲಾಕಿಂಗ್; ವಾರ್‌ ರೂಮ್‌ ಇಬ್ಬರು ನೌಕರರ ಬಂಧನ

ಬೆಂಗಳೂರು,ಮೇ27: ಬೆಡ್ ಬ್ಲಾಕಿಂಗ್ ಮಾಡಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ವಾರ್‌ ರೂಮ್ ನ ಇಬ್ಬರು ನೌಕರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆರೊನಾ ಸೋಂಕಿತರ ಹೆಸರಲ್ಲಿ ಬೆಡ್ ಬ್ಲಾಕ್ ಮಾಡಿ ಇತರರಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದರು ಈ ಆರೋಪದಡಿ ವಾರ್‌ ರೂಮ್ ನೌಕರ ವರುಣ್ ಹಾಗೂ ಆತನ ಸ್ನೇಹಿತ ಯಶವಂತ ನನ್ನು ಬಂಧಿಸಲಾಗಿದೆ. ಗುಣಮುಖವಾಗುತ್ತಿದ್ದ ಹಾಗೂ ಮೃತರಾಗುತ್ತಿದ್ದ ಕೊರೊನಾ ಸೋಂಕಿತರ ಹಾಸಿಗೆಗಳ ಬಗ್ಗೆ ವರುಣ್ ಮಾಹಿತಿ ಪಡೆಯುತ್ತಿದ್ದ. ಜೊತೆಗೆ, ಹಾಸಿಗೆ ಬೇಕೆಂದು ಹೇಳಿ ವಾರ್ ರೂಮ್‌ಗೆ ಕರೆ ಮಾಡುತ್ತಿದ್ದ…

ಶಿಕ್ಷಕರ ನಿಧಿಯಿಂದ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯಮಾಡಲು ರಾಜ್ಯಪಾಲರಿಗೆ ಮನವಿ

ಬೆಂಗಳೂರು,ಮೇ:೨೭: ಕೊರೋನಾ ಸಂಕಷ್ಟದ ಕಾಲದಲ್ಲಿ ಅನುದಾನ ರಹಿತ ಶಾಲೆಗಳು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ ಹೀಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ನಿಧಿಯಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯ ಅನುದಾನ ರಹಿತ ರಾಜ್ಯಪಠ್ಯಕ್ರಮದ ಶಾಲೆಗಳ ಶಿಕ್ಷಕರಿಗೆ 2020-21 ನೇ ಸಾಲಿಗೆ ಆರ್ಥಿಕ ಸಹಾಯ ಮಾಡುವಂತೆ ಈಜಿಪುರದ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆ ರಾಜ್ಯಪಾಲರಲ್ಲಿ ಮನವಿ ಮಾಡಿದೆ. ಈ ಕುರಿತಂತೆ ಸುಧೀರ್ಘ ಮನವಿ ಪತ್ರವನ್ನು ನೀಡಿರುವ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆಯ ಕಾರ್ಯದರ್ಶಿ ಡಾ.ವಿ.ರಾಘವೇಂದ್ರರಾವ್ ಅವರು, ಅನುದಾನರಹಿತ ಶಾಲೆಗಳು ರಾಜ್ಯದಲ್ಲಿ ಹಲವಾರು ತೊಂದರೆಗಳನ್ನು…

ಮೇಕೆದಾಟು ಯೋಜನೆ ವಿವಾದ; ಕಾನೂನು ಹೋರಾಟಕ್ಕೆ ನಿರ್ಧಾರ;ಬೊಮ್ಮಾಯಿ

ಬೆಂಗಳೂರು,ಮೇ,27:ಮೇಕೆದಾಟು ಯೋಜನೆಯಲ್ಲಿ ಪರಿಸರ ನಾಶ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸಮೀತಿ ರಚನೆ ಮಾಡಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಪ್ರಶ್ನಿಸುವ ಮೂಲಕ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಈ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ…

ಹಾವೇರಿಯ ಜಂಗಮನಕೊಪ್ಪದಲ್ಲಿ ಹಾಲು ಸಂಸ್ಕರಣಾ ಡೇರಿ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ;ಬೊಮ್ಮಾಯಿ

ಬೆಂಗಳೂರುು,ಮೇ,27:ಧಾರವಾಡ ಹಾಲು ಒಕ್ಕೂಟದ ವತಿಯಿಂದ ಹಾವೇರಿ ಜಿಲ್ಲೆಯ ಜಂಗಮನಕೊಪ್ಪ ಗ್ರಾಮದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕವನ್ನು 90 ಕೋಟಿ ರೂಪಾಯಿ ವೆಚ್ಚದಲ್ಲಿ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು  ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ತಿಳಿಸಿದರು. ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾವೇರಿ ಜಿಲ್ಲೆಯ ಹಾಲು ಉತ್ಪಾದಕರ…

ಸಿಎಂ ಬದಲಾವಣೆ ಮಾಡುವಷ್ಟು ಶಕ್ತಿ ನನಗಿಲ್ಲ-ಯೋಗೇಶ್ವರ್

ಬೆಂಗಳೂರು, ಮೇ ೨೭; ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ ಇದಕ್ಕೆ ಪುಷ್ಟಿ ನೀಡುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದು ಚರ್ಚೆಗೆ ಮತ್ತಷ್ಟು ಗ್ರಾಸವಾಗಿತ್ತು ಆದರೆ ಯೋಗೇಶ್ವರ್ ಅವರು ಈಗ ದೆಹಲಿ ಭೇಟಿ ಕುರಿತು ವಿವರಣೆ ನೀಡಿದ್ದಾರೆ. ನಮ್ಮ ಉದ್ದೇಶ ಮುಖ್ಯಮಂತ್ರಿ ಬದಲಾವಣೆ ಯಲ್ಲ ಅವರನ್ನು ಬದಲಾಯಿಸುವಷ್ಟು ಶಕ್ತಿಯೂ ನನ್ನಲ್ಲಿಲ್ಲ ಆದರೆ ಅವರ ಪುತ್ರ ಅವತ ಹಸ್ತಕ್ಷೇಪ ಕುರಿತು ನಮ್ಮ ಅಸಮಾಧಾನ ಎಂದಿದ್ದಾರೆ. ದೆಹಲಿಗೆ ನನ್ನ ವೈಯಕ್ತಿಕ ವಿಚಾರಕ್ಕೆ ಆಗಾಗ ಹೋಗುತ್ತಿರುತ್ತೇನೆ.…

ಜಿಂದಾಲ್‌ಗೆ ನೀಡಿದ್ದ ಭೂಮಿ ವಾಪಾಸ್

ಬೆಂಗಳೂರು, ಮೇ ೨೭: ಜಿಂದಾಲ್ ಕಂಪನಿಗೆ ನೀಡಲಾಗಿದ್ದ ಭೂಮಿಯನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯಲು ಇಂದು ನಡೆದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಬಳ್ಳಾರಿಯ ಜಿಂದಾಲ್ ಕಂಪನಿಗೆ ೩,೬೬೭ ಎಕರೆ ಭೂಮಿಯನ್ನು ಮಾರಾಟ ಮಾಡಿತ್ತು, ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭೂಮಿಯನ್ನು ಹಿಂಪಡೆಯುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಈ ಸಂಸ್ಥೆಯಿಂದ ರಾಜ್ಯ ಸರ್ಕಾರಕ್ಕೆ ೧೦೭೮ ಕೋಟಿ ರೂ.ಗಳ ರಾಜಧನ ಬರಬೇಕಾಗಿದೆ ಎಂದು ತಿಳಿದುಬಂದಿದೆ, ಈ ಕುರಿತು ಹೈಕೋರ್ಟ್ , ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ…

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

ಚೆನ್ನೈ, ಮೇ ೨೭; ತಮಿಳುನಾಡಿನಲ್ಲಿ ಯಾವುದೇ ಸರ್ಕಾರಗಳು ಬಂದರು ಮೊದಲು ಕರ್ನಾಟಕದ ಆಣೆಕಟ್ಟುಗಳ ಮೇಲೆಯೇ ಕಣ್ಣು, ಕಾವೇರಿ,ಮೇಕೆದಾಟು ಹೀಗೆ ಕರ್ನಾಟಕದ ಯೋಜನೆಗಳನ್ನು ವಿರೋಧಿಸುತ್ತಲೇ ಅಲ್ಲಿನ ಜನರ ವಿಶ್ವಾಸ ಪಡೆಯುವ ತಂತ್ರಗಾರಿಕೆ ಮಾಡುತ್ತವೆ ಹೀಗೂ ಕೂಡ ಅದೇ ದಾರಿಯಲ್ಲಿ ಹೊಸ ಸರ್ಕಾರ ಸಾಗಿದೆ ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿರುವ ಹೊಸ ಸರ್ಕಾರ ಯಾವುದೆ ಕಾರಣಕ್ಕೂ ಆಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಖ್ಯಾತೆ ತಗೆದಿದೆ ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಈ ಕುರಿತು ಮಾತನಾಡಿದ್ದಾರೆ. ಮೇಕೆದಾಟು…

ನಾಯಕತ್ವ ಬದಲಾವಣೆ ಗೆ ಮುಂದಾದವರಿಗೆ ಬಿಎಸ್‌ವೈ ಕೊಟ್ಟ ಏಟು

ಬೆಂಗಳೂರು,ಮೇ,೨೭: ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಕುರಿತಂತೆ ಭಾರಿ ಸುದ್ದಿಯಲ್ಲಿದ್ದು ಇದಕ್ಕೆ ಸಂಬಧಿಸಿದಂತೆ ಪ್ರತಿಕ್ರಿಯಿಸಿರುವ ಬಿಎಸ್‌ವೈ ಯಾರೋ ಎಲ್ಲಿಗೋ ಹೋದವರಿಗೆ ಉತ್ತರ ಸಿಕ್ಕಿದೆ .ಅಲ್ಲಿಯೇ ಉತ್ತರ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ವಿರೋಧಿ ಗುಂಪಿಗೆ ಟಾಂಗ್ ನೀಡಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಯಡಿಯುರಪ್ಪ,, ದೆಹಲಿಗೆ ಹೋಗಿ ಬಂದರೆ ಅರ್ಥವಿಲ್ಲ. ದೆಹಲಿಗೆ ಹೋದವರಿಗೆ ಉತ್ತರ ಕೊಟ್ಟು ಕಳಿಸಿದ್ದಾರೆ. ಕೊರೋನಾ ನಿಯಂತ್ರಿಸುವುದಷ್ಟೇ ನನ್ನ ಗುರಿ. ಸದ್ಯ ನನ್ನ ಆದ್ಯತೆ ಕೋವಿಡ್ ನಿಯಂತ್ರಣಕ್ಕಷ್ಟೇ ಆಗಿದೆ. ಬೇರೆ ವಿಷಯ…

ಆಯಾ ಪ್ರದೇಶದ ಕಾನೂನು ಪಾಲನೆ-ಗೂಗಲ್

ನವದೆಹಲಿ,ಮೇ,೨೭:ಆಯಾ ಪ್ರದೇಶದ ಕಾನೂನುಗಳನ್ನು ಪಾಲಿಸಲು ನಾವು ಸಿದ್ದರಿದ್ದೇವೆ ಅಲ್ಲದೆ ಸರ್ಕಾರಗಳು ಜನತೆ ಉತ್ತಮ ಸಂಬಂಧದೊಂದಿಗೆ ಕಾರ್ಯನಿರ್ವಹಿಸುತ್ತೇವೆ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಂದರ್ ಪಿಚೈ ತಿಳಿಸಿದ್ದಾರೆ ಕಂಪನಿ ಯಾವಾಗಲೂ ಸರ್ಕಾರದ ಕೋರಿಕೆಗಳನ್ನು ಪರಿಗಣಿಸುತ್ತದೆ ಅಲ್ಲದೆ ಸ್ಪಷ್ಟವಾದ ಪಾರದರ್ಶಕ ವರದಿಗಳನ್ನು ಹೊಂದಿದೆ ಎಂದು ಏಷ್ಯಾ ಪೆಸಿಫಿಕ್‌ನ ಆಯ್ದ ವರದಿಗಾರರ ಜತೆ ನಡೆದ ವರ್ಚುವಲ್ ಕಾನ್ಫೆರೆನ್ಸ್‌ನಲ್ಲಿ ಅವರು ತಿಳಿಸಿದ್ದಾರೆ.ಉಚಿತ ಮತ್ತು ಮುಕ್ತ ಇಂಟರ್‌ನೆಟ್ ಮೌಲ್ಯವನ್ನು ನಾವು ಅರಿತಿದ್ದೇವೆ. ಜತೆಗೆ, ಇದರ ಪ್ರಯೋಜನಗಳ ಅರಿವು ಇದೆ. ಇದೇ ನೀತಿ ಅನುಸರಿಸಬೇಕು ಎಂದು…

ಬೆಂಗಳೂರಲ್ಲಿ ಇಂದು ೫,೯೭೭ ಸೋಂಕಿತರು ಪತ್ತೆ

ಬೆಂಗಳೂರು,ಮೇ,೨೭: ಕೊರೊನಾ ಸಂಕಷ್ಟ ಎದುರಿಸಲು ಸರ್ಕಾರ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ ಇದರ ಪರಿಣಾಮವಾಗಿ ಸೋಂಕಿತರ ಸಂಖ್ಯೆ ಇಳಿಕೆ ಕಾಣುತ್ತಿದೆ ಬಂಗಳೂರಿನಲ್ಲಿ ಇಂದು ೫೯೭೭ ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನ ವಿವಿಧ ವಾರ್ಡ್‌ಗಳಲ್ಲಿನ ಸೋಂಕಿತರ ಸಂಖ್ಯೆ ಈ ರೀತಿ ಇದೆ: ಬೊಮ್ಮನಹಳ್ಳಿಯಲ್ಲಿ-೫೪೭, ದಾಸರಹಳ್ಳಿ-೨೧೫, ಬೆಂಗಳೂರು ಪೂರ್ವ-೭೮೩, ಮಹಾದೇವಪುರ-೯೮೭, ಆರ್‌ಆರ್ ನಗರ-೪೪೨, ಬೆಂಗಳೂರು ದಕ್ಷಿಣ-೬೧೬, ಬೆಂಗಳೂರು ಪಶ್ಚಿಮ-೪೭೯, ಯಲಹಂಕ-೪೬೪, ಹೊರವಲಯದ ತಾಲೂಕುಗಳಲ್ಲಿ ೪೪೮ ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು ೬೧೧ ಮಂದಿ ಕೋವಿಡ್ ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ…

ಮತ್ತೇ ತೈಲೋತ್ಪನ್ನಗಳ ದರ ಏರಿಕೆ

ನವದೆಹಲಿ,ಮೇ,೨೭: ಕಳೆದ ಎರಡು ದಿನ ತೈಲೋತ್ಪನ್ನಗಳ ದರ ಏರಿಕೆಯಾಗಿರಲಿಲ್ಲ ಇಂದು ಮತ್ತೇ ದಿಡೀರ್ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ ೨೫ ಪೈಸೆ , ಡೀಸೆಲ್ ೩೦ ಪೈಸೆ ಎರಿಕೆ ಕಂಡಿದೆ ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ ೧೦೦ ರೂ ಗಡಿದಾಟಿದೆ. ಕಳೆದೊಂದು ವಾರದ ಅಂತರದಲ್ಲಿ ಸತತ ೬ನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡಲಾಗಿದೆ. ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ೯೩.೭೪ರೂ ಮತ್ತು ಡೀಸೆಲ್ ೮೪.೬೭ರೂ ಗೆ ಏರಿಕೆಯಾಗಿದೆ.…

ಮತ್ತೆ ಆ ದಿನಗಳು ಬಂದಾವೇ?

ಮತ್ತೆ ಆ ದಿನಗಳು ಬಂದಾವೇ? ಆಗ ನಮ್ಮ ಮನೆಯಲ್ಲಿ ಹಿತ್ತಾಳೆ, ತಾಮ್ರ, ಮತ್ತು ಅಲ್ಯೂಮಿನಿಯಂ ಪಾತ್ರೆಗಳೇ ಹೆಚ್ಚು. ಮನೆಯಲ್ಲಿ ಸಹ ಅಮ್ಮ ಮಾಡುತ್ತಿದ್ದ ಮುದ್ದೆ ಪಾತ್ರೆ ತಾಮ್ರದ್ದು, ಸಿಹಿ ನೀರು ತುಂಬುವ ಕೊಳಗ ತಾಮ್ರದ್ದೇ. ಕೆರೆಯ ಕಟ್ಟೆಯ ಮೇಲಿದ್ದ ಬಾವಿಯಿಂದ ಸಿಹಿನೀರು ತರುತ್ತಿದ್ದ ಅಕ್ಕಂದಿರು ತಲೆಯ ಮೇಲೆ ಹೊರುತ್ತಿದ್ದ ಗುಂಡಿ ಮತ್ತು ಕಂಕುಳಲ್ಲೊಂದು ಹೊತ್ತು ತರುತಿದ್ದ ಬಿಂದಿಗೆ ಹಿತ್ತಾಳೆಯವು. ಇವು ಖಾಲಿ ಇದ್ದರೂ ಹೊರಲು ಸ್ವಲ್ಪ ತೂಕವೇ ಇರುತ್ತವೆ. ನನ್ನ ಅಕ್ಕಂದಿರೊಡನೆ ನಾನು ಮತ್ತು ತಂಗಿ ನೀರು…

ಟೂಲ್ ಪ್ಲಾಜಾದಲ್ಲಿ ಕ್ಯೂ ಜಾಸ್ತಿ ಇದ್ದರೆ,ಟೂಲ್ ಕಟ್ಟಬೇಕಿಲ್ಲ

ನವದೆಹಲಿ,ಮೇ,27: ವಾಹನ ಚಾಲಕರಿಗೆ ಇದೊಂದು ಗುಡ್ ನ್ಯೂಸ್, ಇನ್ನೂ ಮುಂದೆ ಟೂಲ್ ಪ್ಲಾಜಾಗಳಲ್ಲಿ ಕ್ಯೂ ಜಾಸ್ತಿ ಇದ್ದರೆ ಟೂಲ್ ಶುಲ್ಕ ಕಟ್ಟುವ ಹಾಗಿಲ್ಲ. ಈ ಬಗ್ಗೆ ಶೀಘ್ರ ಹೊಸ ರೂಲ್ಸ್ ಜಾರಿಯಾಗಲಿದ್ದು, 100 ಮೀಟರ್ ಕ್ಯೂ ಇದ್ದರೆ ಟೋಲ್ ಶುಲ್ಕ ಕಟ್ಟಬೇಕಾಗಿಲ್ಲಟ್ರಾಫಿಕ್ ಜಾಮ್ ತಪ್ಪಿಸಲು ಈ ಮಾರ್ಗ ಹುಡುಕಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರವೇ ಹೊಸ ನಿಯಮ ಜಾರಿಗೊಳಿಸಲಿದ್ದು, ಹೆದ್ದಾರಿಗಳ ಪ್ಲಾಜಾದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಕ್ರಮ ಕೈಗೊಂಡಿದೆ. ಪ್ಲಾಜಾದಿಂದ 100 ಮೀಟರ್ ದೂರದಲ್ಲಿ ಹಳದಿ ಗೆರೆ…

ಬೆಕ್ಕಿಗೆ ಚೆಲ್ಲಾಟ :ಇಲಿಗೆ ಪ್ರಾಣ ಸಂಕಟ.

ಶ್ರೀ ಡಾ.ಆರೂಢಭಾಸರತೀ ಸ್ವಾಮೀಜಿ ಸಿದ್ಧಸೂಕ್ತಿ : ಬೆಕ್ಕಿಗೆ ಚೆಲ್ಲಾಟ :ಇಲಿಗೆ ಪ್ರಾಣ ಸಂಕಟ ಬೆಕ್ಕು ಇಲಿಯ ಕಚ್ಚಿ ಕಚ್ಚಿ ಆಡಿ ನಲಿಯುವುದು,ಇಲಿ ಸಂಕಟದಿ ಒದ್ದಾಡುವುದು! ಚಿರತೆಯಿಂದ ಪಾರಾಗಲು ನಾಯಿ ಶೌಚಾಲಯಕ್ಕೆ ನುಗ್ಗಿತು. ಚಿರತೆಯೂ ಅಲ್ಲಿ ಹೊಕ್ಕಿತು! ಹೊರಗೆ ಮಾಲೀಕ ಕೊಂಡಿ ಹಾಕಿದ. ನಾಯಿಯ ಸಂಕಟ ದೇವರೇ ಬಲ್ಲ! ಚಿರತೆಗೂ ಸಂಕಟ ತಪ್ಪಿದ್ದಲ್ಲ! ಹಿಂಸೆ ನೀಡುವವಗೊಬ್ಬ ಬಲಿಷ್ಠ ಹಿಂಸಕ! ತಿನ್ನುವ ಆಶೆಗೆ ಹಸುವನು ಕುರಿಯನು ಕೊಚ್ಚುವನು, ತಾಜಾ ಮಾಂಸವ ನೋಡುತ ಬಹಳ ಸುಖಿಸುವನು. ಅಂಬಾ ಬ್ಯಾ ಎಂದರಚುತಲಿ…

Girl in a jacket