Girl in a jacket

Daily Archives: May 21, 2021

ಮತ್ತೆ 14 ದಿನ ಲಾಕ್ ಡೌನ್ ವಿಸ್ತರಣೆ

ಬೆಂಗಳೂರು, ಮೇ 21: ಕೊರೊನಾ ಸೋಂಕಿತ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ 14 ಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಲಾಗಿದೆ. ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಜ್ಞರ ನೀಡಿರುವ ಮಾಹಿತಿ ಆದರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದ ಅವರು, ಲಾಕ್‌ಡೌನ್ ಜೂನ್ 7ರ ಬೆಳಗಿನ ಜಾವ 6 ಗಂಟೆಯವರೆಗೆ ಜಾರಿಯಲ್ಲಿರಲಿದೆ ಎಂದರು. ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ದಿನಾಂಕ 24.ರಿಂದ ಜೂನ್ 7ರ ಬೆಳಿಗ್ಗೆ 6 ಗಂಟೆಯವರೆಗೆ…

ಕಳೆದ 24 ಗಂಟೆಯಲ್ಲಿ52,581 ಕೋವಿಡ್ ಹೊಸ ಪ್ರಕರಣಗಳು ದಾಖಲು

ಬೆಂಗಳೂರು, ಮೇ,21:ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 52,581 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ,353 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ,32,218 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 23,67,742 ಕ್ಕೆ ಏರಿಕೆಯಾಗಿದೆ. ಆ ಪೈಕಿ 24,207 ಮಂದಿ ಸಾವಿಗೀಡಾಗಿದ್ದಾರೆ. ಸೋಂಕು ಕಾಣಿಸಿಕೊಂಡಾಗಿನಿಂದ ಇದುವರೆಗೆ 18,29,276 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 5,14,238 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಇಂದು 9,591 ಹೊಸ ಪ್ರಕರಣಗಳು ವರದಿಯಾಗಿದ್ದು, 129 ಮಂದಿ ಮೃತಪಟ್ಟಿದ್ದಾರೆ.…

ಆರ್ ಬಿ ಐ ಹೆಚ್ಚುವರಿ ಹಣ 99,122 ಕೋಟಿ ರೂ ಕೇಂದ್ರಕ್ಕೆ ವರ್ಗಾವಣೆ

ನವದೆಹಲಿ, ಮೇ,21:ಆರ್ ಬಿ ಐ ಹೆಚ್ಚುವರಿ ಹಣ 99,122 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಒಪ್ಪಿಗೆ ನೀಡಿದೆ. ಈ ಸಂಬಂಧ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಆರ್ ಬಿ ಐ ಮಂಡಳಿ ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆರ್‌ಬಿಐ ಮಂಡಳಿಯ ಪ್ರಕಾರ, ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ದೇಶೀಯ ಸವಾಲುಗಳು ಮತ್ತು ಕೋವಿಡ್ ಎರಡನೇ ಅಲೆ ಆರ್ಥಿಕತೆಯ ಮೇಲೆ ಉಂಟು ಮಾಡಿರುವ ಪ್ರತಿಕೂಲ ಪರಿಣಾಮವನ್ನು ತಗ್ಗಿಸುವ ಸಲುವಾಗಿ…

ಮಾಜಿ ಸ್ಪೀಕರ್ ಕೃಷ್ಣ ನಿಧನ-ಕಂಬನಿ ಮಿಡಿದ ಗಣ್ಯರು

ಬೆಂಗಳೂರು,ಮೇ,೨೧;ನಾಡಿನ ಹಿರಿಯ ಮುತ್ಸುದ್ದಿ ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಅವರು ಇಂದು ನಿಧರಾಗಿದ್ದಾರೆ. ಅವರಿಗೆ೮೧ ವರ್ಷ ವಯಸ್ಸಾಗಿತ್ತು. ಲಿವರ್ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದ ಅವರು ಚೈನೈ ಆಪಲೋಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗಿದೆ ಅಸುನೀಗಿದ್ದಾರೆ. ಪತ್ನಿ ಇಂದ್ರಮ್ಮ,ಪುತ್ರಿಮಂಜುಳಾ ಅಳಿಯ ಶ್ರೀಧರ್ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಎಸ್.ಆರ್.ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರೇಷ್ಮೆ ಸಚಿವರಾಗಿದ್ದ ಕೃಷ್ಣ ಮೂರು ಅವಧಿಕೆ ಕೆ.ಆರ್. ಪೇಟೆ ಶಾಸಕರಾಗಿದ್ದರು. ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.…

ಡಿಸಿಗಳಿಂದ ಮಾಹಿತಿ ಸಂಗ್ರಹಿಸಲು ಅಡ್ಡಿ :ಹಕ್ಕುಚ್ಯುತಿ ನಿರ್ಣಯ ಮಂಡಿಸಲು ನಿರ್ಧಾರ-ಸಿದ್ದು

ಬೆಂಗಳೂರು ,ಮೇ,21: ಕೊರೊನಾದಿಂದ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಮತ್ತು ಸೋಂಕಿತರ ಪ್ರಾಣರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ತಡೆಯೊಡ್ಡಿರುವ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕೊರೊನಾದಿಂದಾಗಿ ರಾಜ್ಯ…

ಪ್ರಣೀತಾ ಹೊಸ ಚಿತ್ರ ಒಟಿಟಿಯಲ್ಲಿ ರಿಲೀಜ್ ಆಗಲಿದೆ

ಪ್ರಣೀತಾ ಸುಭಾಷ್? ಪ್ರಾಣಿ, ಪಕ್ಷಿಗಳು ಹಾಗೂ ಪರಿಸರ ಸೇರಿದಂತೆ ಇತರೆ ಸಾಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಣೀತಾ ಫೌಂಡೇಶನ್ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಅಭಿವೃದ್ಧಿಗಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಪ್ರಣೀತಾ ಸುಭಾಷ್. ಸದ್ಯ ಕೊರೋನಾ ಎರಡನೇ ಅಲೆಯಿಂದಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ ಪ್ರಣೀತಾ ಸುಭಾಷ್‌ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದು, ಅದು ತೆರೆ ಕಾಣುವ ಹೊಸ್ತಿಲಲ್ಲಿದೆ. ಶಿಲ್ಪಾ ಶೆಟ್ಟಿ, ಪರೇಶ್ ರಾವಲ್ ನಟಿಸಿರುವ ಹಂಗಾಮ ೨ ಸಿನಿಮಾದಲ್ಲಿ ಪ್ರಣೀತಾ ನಟಿಸಿದ್ದಾರೆ. ಈ ಸಿನಿಮಾ ಲಾಕ್‌ಡೌನ್‌ನಿಂದಾಗಿ ಈಗ ಒಟಿಟಿ…

ದೊಡ್ಡಸವಾಲಾಗಿರುವ ಬ್ಲ್ಯಾಕ್ ಫಂಗಸ್ ನಿರ್ವಹಣೆಗೆ ಸಜ್ಜಾಗಲು ಮೋದಿ ಕರೆ

ಕೊರೊನಾ ನಮ್ಮಿಂದ ಹಲವರನ್ನು ಕಿತ್ತುಕೊಂಡಿದೆ; ಭಾವುಕರಾದ ಮೋದಿ ನವದೆಹಲಿ, ಮೇ ೨೧:ಕೊರೊನಾ ಎರಡನೇ ಅಲೆ ನಮಗೆ ಅತೀ ದೊಡ್ಡ ಸವಾಲನ್ನೇ ಒಡ್ಡಿದೆ ಅಲ್ಲದೆ ಇದೇ ವೇಳೆ ಕೊರೊನಾ ರೋಗಿಗಳಲ್ಲಿ ಕಾನಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಮತ್ತೊಂದು ಸವಾಲನ್ನು ಹೊಡ್ಡಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ವಿಷಾಧ ವ್ಯಕ್ತಪಡಿಸಿದರು. ಕೊರೊನಾ ನಿರ್ವಹಣೆ ಸಂಬಂಧ ಶುಕ್ರವಾರ ಉತ್ತರ ಪ್ರದೇಶದ ವಾರಾಣಸಿಯಲ್ಲಿನ ಆರೋಗ್ಯ ಕಾರ್ಯಕರ್ತರು, ವೈದ್ಯರೊಂದಿಗೆ ವರ್ಚುಯಲ್ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದರು. ಕೊರೊನಾ ನಿರ್ವಹಣೆಯಲ್ಲಿ…

ಎರಡನೇ ಲಸಿಕೆ ಸದ್ಯದ ಮಾರ್ಗಸೂಚಿ ಅನುಸರಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು,ಮೇ, ೨೧: ಕೋವಿಡ್-೧೯ ಎರಡನೇ ಲಸಿಕೆ ಪಡೆಯಲು ಅರ್ಹರಾಗಿರುವ ನಾಗರಿಕರಿಗೆ ಸದ್ಯ ಚಾಲ್ತಿಯಲ್ಲಿರುವ ಮಾರ್ಗಸೂಚಿಯನ್ನು ಅನುಸರಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ ಈ ಕುರಿತಂತೆ ತರ್ಕಬದ್ಧ ಮತ್ತು ನ್ಯಾಯಯುತ ನೀತಿಯನ್ನು ರೂಪಿಸುವಂತೆ ಅದು ಸರಕಾರಕ್ಕೆ ಹೇಳಿದ್ದು, ಇಂತಹ ಪರಿಸ್ಥಿತಿಯಲ್ಲಿ ಮೊದಲ ಡೋಸ್ ಲಸಿಕೆ ನೀಡಲು ಖಾಸಗಿ ಏಜನ್ಸಿಯವರಿಗೆ ಅನುಮತಿ ಇದೆಯೇ ಎಂದು ಸೂಚಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನಿರ್ದೇಶನ ನೀಡಿತು. ಸದ್ಯ ರಾಜ್ಯದಲ್ಲಿ ಲಭ್ಯವಿರುವ ೯೭,೪೪೦…

ಮದ್ಯಸಾರವೇನು ಕಡಿಮೆ ಗಮನಕೊಡಿ ಅತ್ತಲೂ…

ಲೇಖಕರ ಪರಿಚಯ ಡಾ,ಶಿವಕುಮಾರ್ ಕಂಪ್ಲಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಅಧ್ಯಯನ ಮಾಡಿ ,ತೆಲುಗು ಕವಿ ಶ್ರೀ ಶ್ರೀ ಮತ್ತು ಕನ್ನಡದಲ್ಲಿ ಸಿದ್ದಲಿಂಗಯ್ಯ ಅವರ ಕುರಿತು ತೆಲುಗು ಮತ್ತು ಕನ್ನಡ ತೌಲನಿಕ ಅಧ್ಯಯನಕ್ಕೆ ಪಿಎಚ್‌ಡಿ ಪದವಿ ದೊರೆತಿದೆ,ಅಗ್ನಿ ಮತ್ತು ಕಿರೀಟ ಕವನ ಸಂಕಲ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ಅನುವಾದ ಕವನ ಸಂಕಲನ ಪುಸ್ತಕಗಳು ಹೊರಬಂದಿದ್ದು,ಹಲವಾರು ತೆಲುಗು ಕಥೆಗಳನ್ನು ಅನುವಾದ ಮಾಡಿದ್ದಾರೆ, ಅಲ್ಲದೆ ಅವರ ಹಲವಾರು ವಿಮರ್ಶೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಪ್ರಸ್ತುತ ಕೆಂಧೂಳಿ ವಾರಪತ್ರಿಕೆಯಲ್ಲಿ ಅಂಕಣಕಾರರಾಗಿರುವ ಇವರು…

ಶಿಕಾರಿಪುರ-ಅಂಗಡಿಗಳ ತೆರವುಗೊಳಿಸಲು ಮೀನಾ-ಮೇಷ!

by Gopolkrishna hebbar shikaripura ಶಿಕಾರಿಪುರ,ಮೇ,೨೧: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಂಭಾಗ ಆಲದ ಮರದಹತ್ತಿರದಿಂದ ಮುಭಾಗದ ಗೇಟಿನ ಬಳಿ ಇರುವ ಅಂಗಡಿಗಳನ್ನು ತೆರವು ಗೊಳಿಸಲು ಪುರಸಭೆ ಇನ್ನೂ ಮಿನ -ಮೇಷ ಎಣಸುತ್ತಿದೆ. ಆಡಳಿತ ವೈದ್ಯಧಿಕಾರಿ ಗಳ ಮೇಲೆ ಪುರಸಭೆಯವರು. ಪುರಸಭೆ ಮೇಲೆ ವೈದ್ಯಾಧಿಕಾರಿಗಳು. ಹೀಗೆ ಒಂದು ವರ್ಷಗಳೇ ಕಳೆದು ಈಗ ಕೂ ರೋ ನಾ ವಕ್ಕರಿಸಿದೆ. ಇದರ ನಡುವೆ ಸಾರ್ವಜನಿಕರ ಆರೋಗ್ಯ ವೈದ್ಯರ ಆರೋಗ್ಯದ ದೃಷ್ಟಿ ಯಿಂದ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಆಗಲೆಂದು ಪುರಸಭೆ ಹಾಗೂ ವೈದ್ಯ…

ಮಾನವತೆಯ ಹುಡುಕುತಲಿರುವೆ ……

ನಿಶ್ಯಬ್ದ, ನಿರ್ಜನ ರಸ್ತೆಗಳ ನೀರವತೆಯಲಿ ಮೌನ ಜನನಿಬಿಡ ಗಲ್ಲಿಗಳ ಪಿಸುಮಾತಲಿ ಪೊಲೀಸರ ಬೂಟಿನ ಶಬ್ದದ ಕರತಾಡನದಲಿ ಬಣ್ಣದ ಲಾಠಿಯ ಹೊಡೆತದ ರೌದ್ರಾವತೆಯಲಿ ಮಾನವತೆಯ ಹುಡುಕುತಲಿರುವೆ …… ಹೊಟ್ಟೆಗೆ ಹಿಟ್ಟಿಲ್ಲದ ಸಂತ್ರಸ್ತರ ಕಣ್ಣ ಕಪ್ಪಿನ ಅಂಚಿನಲಿ ವೇತನವಿಲದೆ ಮನೆ ಮಾಲೀಕನ ಕಾಲ ಹಿಡಿವ ನಡುಗುವ ಕೈಗಳ ಅಭದ್ರತೆಯಲಿ ಧ್ವಂಸವಾದ ಭರವಸೆಗಳ ಬೂದಿ ಮಣ್ಣಿನ ತುತ್ತತುದಿಯಲಿ ನಾಳೆಗಳು ಬಾರದಿರಲಿ ಎಂದು ಆಶಿಸುವ ಹೃದಯಗಳಾವರಣದಲಿ ಮಾನವತೆಯ ಹುಡುಕುತಲಿರುವೆ …… ಆಸ್ಪತ್ರೆಯ ಶಿಥಿಲ ಗೋಡೆಗಳ ಬಿರುಕುಗಳಲಿ ಅರಳಿದ ಗಿಡಬಳ್ಳಿಗಳಲಿ ದಾದಿಯರ ಶ್ವೇತವರ್ಣದುಡಿಗೆಯ…

ಮಹಾರಾಷ್ಟ್ರದ ಎಟಪಲ್ಲಿ ಅರಣ್ಯದಲ್ಲಿ 13 ನಕ್ಸಲರ ಹತ್ಯೆ

ಭುವನೇಶ್ವರ,ಮೇ,21:ಕಮಂಡೊ ಪೊಲೀಸರಿಗೂ ನಕ್ಸಲರ ಮಧ್ಯ ನಡೆದ ಗುಂಡಿನ ದಾಳಿಯಲ್ಲಿ 13 ನಕ್ಸಲರು ಹತರಾಗಿದ್ದಾರೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಸುಕಿನ ಜಾವ ನಡೆದ ಭಾರೀ ಎನ್ ಕೌಂಟರ್ ನಲ್ಲಿ ಈ ಘಟನೆ ಜರುಗಿದೆ. ಗಗಡ್ಚಿರೋಲಿ ಅರಣ್ಯ ಪ್ರದೇಶದ ಎಟಪಲ್ಲಿ ಎಂಬಲ್ಲಿ ಸಿ-60 ಕಮಾಂಡೊ ಪೊಲೀಸರು ಮತ್ತು ನಕ್ಸಲೀಯರ ಮಧ್ಯೆ ಭಾರೀ ಗುಂಡಿನ ಚಕಮಕಿ ನಡೆಯಿತು. ಇದರಲ್ಲಿ 13 ಮಂದಿ ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ಗಡ್ಚೊಲಿ ಜಿಲ್ಲೆಯ ಡಿಐಜಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ರೈತ ನಾಯಕ ಹಾಗೂ ಕೇಂದ್ರದ ಮಾಜಿ‌ ಸಚಿವ ಬಾಬಾಗೌಡ ಪಾಟೀಲ ನಿಧನ

ಬೆಳಗಾವಿ,ಮೇ,21:ಸದಾ ರೈತ ಚಳವಳಿ ಮೂಲಕ ರೈತರ ಸಮಸ್ಯೆ ಗಳ ಬಗ್ಗೆ ಧ್ವನಿ ಎತ್ತುದ್ದಿದ್ದ ,ರೈತ ನಾಯಕ ಬಾಬುಗೌಡ ಪಾಟೀಲ್ ಧ್ವನಿ ನಿಂತುಹೋಗಿದೆ. ಅನಾರೋಗ್ಯದಿಂದ ಬಳಲುತ್ತುದ್ದ  ಬಾಬಾಗೌಡ ಪಾಟೀಲ (78)  ಇಲ್ಲಿನ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರಾದ ಅವರು ರೈತ ಸಂಘದ ಮೂಲಕ ಹೋರಾಟ ಆರಂಭಿಸಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 1998ರಲ್ಲಿ ಸ್ಪರ್ಧಿಸಿ ಇಲ್ಲಿ ಬಿಜೆಪಿಯ ಗೆಲುವಿನ ಖಾತೆ ಆರಂಭಿಸಿದ್ದರು.…

ತುಳಸಿ, ಲವಂಗ ಮಿಶ್ರಣ ಶ್ವಾಸಕೋಶದ ಆರೋಗ್ಯಕ್ಕೆ ಸಂಜೀವಿನಿ..!

ಕೊರೋನಾ ಎರಡನೇ ಅಲೆ ಹಲವು ಮಿಲಿಯನ್ ಜನರನ್ನು ಭಾದಿಸುತ್ತಿದೆ. ಭಾರತದಲ್ಲಿ ಎರಡನೆ ಆಲೆಯ ಕೊರೋನಾದಿಂದ ಸಾಯುತ್ತಿರುವ, ಬಳಲುತ್ತಿರುವ ಜನರಿಗೆ ದೇಹದಲ್ಲಿ ಆಮ್ಲಜನಕದ ಕೊರತೆಯಾಗುತ್ತಿದೆ. ಆಮ್ಲಜನಕದ ಕೊರತೆ ಜೀವಹಾನಿಯ ಅಪಾಯವನ್ನು ಸಹ ಉಂಟು ಮಾಡುತ್ತದೆ. ಡಬಲ್ ಮ್ಯುಟೆಂಟ್ ಕೊರೋನಾ ವೈರಸ್ ಶ್ವಾಸಕೋಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ, ಅವುಗಳನ್ನು ದುರ್ಬಲಗೊಳಿಸುತ್ತದೆ. ಈ ಸಂದರ್ಭದಲ್ಲಿ, ರೋಗ ನಿರೋಧಕ ಶಕ್ತಿಯು ಬಲವಾಗಿರಬೇಕು ಮತ್ತು ಶ್ವಾಸಕೋಶ ಬಲವಾಗಿರಬೇಕು. ಆರೋಗ್ಯಕರ ಶ್ವಾಸಕೋಶಗಳು ಅನೇಕ ರೋಗಗಳಿಂದ ಮನುಷ್ಯರನ್ನು ರಕ್ಷಿಸುತ್ತವೆ. ಮತ್ತೊಂದೆಡೆ, ಆರೋಗ್ಯಕರ ಶ್ವಾಸಕೋಶದಿಂದಾಗಿ ಹೃದಯವೂ ಆರೋಗ್ಯಕರವಾಗಿರುತ್ತದೆ.…

ನಾಳೆಯಿಂದ 22-44 ವಯೋಮಾನದವರಿಗೆ ಲಸಿಕೆ

ಬೆಂಗಳೂರು, ಮೇ 21; ನಾಳೆಯಿಂದ ರಾಜ್ಯದಲ್ಲಿ 18-44 ವಯೋಮಿತಿಯವರಿಗೆ ಲಸಿಕೆ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೇ 15ರಂದು ನಡೆದ ರಾಜ್ಯಮಟ್ಟದ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿದಂತೆ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮೇ 22ರ ಶನಿವಾರದಿಂದಲೇ 18-44 ವರ್ಷದೊಳಗಿನ ವಯೋಮಾನದವರಿಗೆ ಕೊರೊನಾ ಲಸಿಕೆ ವಿತರಣೆ ಪುನರಾರಂಭಲಿದೆ. ಮೊದಲಿಗೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ…

Girl in a jacket