ಬೆಂಗಳೂರು,ಜೂ,೧೩:ಜಪ್ತಿ ಮಾಡಲಾದ ಪಿಸ್ತೂಲ್ಕಾಡುಬೀಸನಹಳ್ಳಿ ಸೋಮ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಹಾಗೂ ಸಹಚರರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ರೌಡಿ ಲೋಹಿತ್ಗೆ ಪಿಸ್ತೂಲ್ ಮಾರಿದ್ದ ಆರೋಪದಡಿ ಕಲಬುರ್ಗಿ ರೌಡಿ ಸುಂಕರಿ ಅಲಿಯಾಸ್ ಮಾರ್ಕೇಟ್ ಸತೀಶ್ನನ್ನೂ ಸೆರೆ ಹಿಡಿದಿದ್ದಾರೆ.
‘ಹತ್ಯೆ ಸಂಚು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ರೌಡಿ ಸತೀಶ್, ಅಕ್ರಮವಾಗಿ ರಾಜ್ಯದಲ್ಲಿ ನಾಡ ಪಿಸ್ತೂಲ್ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಜೊತೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ ೩ ನಾಡ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು೪ ಕೊಲೆ ಪ್ರಕರಣಗಳು, ಕೊಲೆ ಯತ್ನ, ಅಪಹರಣ, ಜೀವ ಬೆದರಿಕೆ ಸೇರಿದಂತೆ ೩೦ಕ್ಕೂ ಹೆಚ್ಚು ಪ್ರಕರಣದಲ್ಲಿ ಸತೀಶ್ ಭಾಗಿಯಾಗಿದ್ದ. ಇತ್ತೀಚೆಗೆ ಅಪರಾಧ ಕೃತ್ಯಗಳಿಂದ ದೂರವಾಗಿದ್ದ. ಅದರ ಬದಲು, ಶಸ್ತ್ರಾಸ್ತ್ರ ಮಾರಾಟ ದಂಧೆಗೆ ಇಳಿದಿದ್ದ.’‘ಮಧ್ಯಪ್ರದೇಶದ ಶಸ್ತ್ರಾಸ್ತ್ರ ತಯಾರಿಸುವವರ ಜೊತೆ ನಂಟು ಹೊಂದಿ, ಅವರಿಂದ ಪಿಸ್ತೂಲ್ ಖರೀದಿಸುತ್ತಿದ್ದ. ಅದನ್ನೇ ರಾಜ್ಯದ ರೌಡಿಗಳು ಹಾಗೂ ಅವರ ಗ್ಯಾಂಗ್ಗಳಿಗೆ ಮಾರಾಟ ಮಾಡುತ್ತಿದ್ದ. ಅದೇ ಪಿಸ್ತೂಲ್ ಇಟ್ಟುಕೊಂಡು ರೌಡಿ ಗ್ಯಾಂಗ್ಗಳು ಸಾರ್ವಜನಿಕರನ್ನು ಬೆದರಿಸುತ್ತಿದ್ದವು’ ಎಂದೂ ತಿಳಿಸಿದರು.
ಶಸ್ತ್ರಾಸ್ತ್ರ ಮಾರಾಟ ದಂಧೆಯಿಂದಲೇ ಆರೋಪಿ, ಲಕ್ಷಾಂತರ ರೂಪಾಯಿ ಹಣ ಸಂಪಾದಿಸಿದ್ದಾನೆ. ಬೇನಾಮಿ ಹೆಸರಿನಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಂಡಿರುವ ಮಾಹಿತಿ ಇದೆ’ ಎಂದೂ ಹೇಳಿದರು.ಜೈಲಿನಲ್ಲಿ ಪರಿಚಯ: ‘ಅಪರಾಧ ಕೃತ್ಯದಲ್ಲಿ ಬಂಧಿತರಾಗಿದ್ದ ರೌಡಿ ಲೋಹಿತ್ ಹಾಗೂ ಸತೀಶ್, ಜೈಲಿನಲ್ಲಿಯೇ ಭೇಟಿಯಾಗಿದ್ದರು. ತಾನು ಪಿಸ್ತೂಲ್ ಮಾರಾಟ ಮಾಡುತ್ತಿರುವುದಾಗಿ ಸತೀಶ್ ಹೇಳಿಕೊಂಡಿದ್ದ. ಜಾಮೀನು ಮೇಲೆ ಇಬ್ಬರೂ ಹೊರಗೆ ಬಂದಿದ್ದರು’ ಎಂದೂ ಹೇಳಿದರು.ಸೋಮನನ್ನು ಹತ್ಯೆ ಮಾಡಲು ಮುಂದಾಗಿದ್ದ ರೋಹಿತ್, ಸತೀಶ್ಗೆ ೨ ಲಕ್ಷ ಕೊಟ್ಟು ಪಿಸ್ತೂಲ್ ಪಡೆದುಕೊಂಡಿದ್ದ’ ಎಂದೂ ತಿಳಿಸಿದರು.
ಪಿಸ್ತೂಲು ಮಾರಾಟದಡಿ ರೌಡಿ ಬಂಧನ
Share