ಹೊಸಬರ ತ್ರಿವೇದಂ ಚಿತ್ರದಲ್ಲಿ ಹಲವು ವಿನೂತನಗಳು ಇರುವುದು ವಿಶೇಷ. ಸಾಮಾನ್ಯವಾಗಿ ನೈಜ ಕತೆಯನ್ನು ಆದರಿಸಿದ ಚಿತ್ರಗಳು ಬಂದಿವೆ, ಬರುತ್ತಲೆ ಇದೆ. ಆದರೆ ಇದರಲ್ಲಿ ಮೂರು ಸತ್ಯ ಘಟನೆಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ. ೨೦೧೨ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರು ಆಸುಪಾಸುದಲ್ಲಿ ಜರುಗಿದೆ. ಅಂದರೆ ತ್ರಿವಳಿ ಕತೆಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ. ಹಾಗಂತ ಒಂದಕ್ಕೊಂದು ಸಂಬಂದವಿರುವುದಿಲ್ಲ ಹಾಗೂ ಸಮಾನಾಂತರವಾಗಿ ಸಾಗುತ್ತದೆ. ಎಲ್ಲವು ಪ್ರೀತಿ ಕುರಿತಾಗಿದ್ದು ಇರುತ್ತದೆ. ಅದಕ್ಕಾಗಿ ಕತೆಗೆ ಪೂರಕವಾಗುವಂತೆ ಶೀರ್ಷಿಕೆಯನ್ನು ಇಡಲಾಗಿದೆ. ಸೋಮವಾರದಂದು ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಮೊದಲ ದೃಶ್ಯಕ್ಕೆ ಹಿರಿಯ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಇಪ್ಪತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡಿರುವ ಅರುಣ್ಜಯರಾಂ ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳರಿನ ರಿಯಲ್ ಎಸ್ಟೆಟ್ ಉದ್ಯಮಿ ಆರ್.ಕೆ.ಭವಾನಿ ಹೇಮಂತ್ ಬಂಡವಾಳ ಹೂಡುತ್ತಿರುವುದು ನೂತನ ಅನುಭವ.
ಮೂವರು ನಾಯಕರು ಆಯ್ಕೆಯಾಗಿದ್ದು, ಮೂವರು ನಾಯಕಿಯರ ಶೋಧ ನಡೆಯುತ್ತಿದೆ. ಮೊದಲನೆಯದಲ್ಲಿ ಪ್ರತಾಪ್ನಾರಾಯಣ್ ಕೊರಿಯರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕೊರಿಯರ್ದಲ್ಲಿ ಕೆಲಸ ಮಾಡುವ ಹುಡುಗರನ್ನು ಭೇಟಿ ಮಾಡಿ ಅವರುಗಳಿಂದ ಒಂದಷ್ಟು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಜೀವನದಲ್ಲಿ ಯಾವ ರೀತಿ ಪ್ರೀತಿಗೋಸ್ಕರ ಹೋರಾಡುತ್ತಾನೆ. ಇವರಿಗೆ ಅಂತಲೇ ಮೂರು ಫೈಟ್ಸ್ಗಳು ಎರಡು ಹಾಡುಗಳನ್ನು ಸೃಷ್ಟಿಸಲಾಗಿದೆ. ಎರಡನೆಯದಲ್ಲಿ ಅಚ್ಯುತಕುಮಾರ್. ಕೊನೆಯದರಲ್ಲಿ ರಂಗಭೂಮಿ ಹಿನ್ನಲೆ ಇರುವ ಶಶಿ. ನಾಯಕನ ಗೆಳಯನಾಗಿ ಧರ್ಮಣ್ಣಕಡೂರು ನಟನೆ ಮಾಡುವ ಸಲುವಾಗಿ ಅವಕಾಶಕ್ಕಾಗಿ ಮಂಡ್ಯಾದಿಂದ ಬರುವ ಕಲಾವಿದನಾಗಿ ನಟಿಸುತ್ತಿದ್ದಾರೆ. ಇವರಿಗೆ ಕಾಂಬಿನೇಷನ್ ಓಂಪ್ರಕಾಶ್ರಾವ್ ಇರುತ್ತಾರೆ. ಉಳಿದಂತೆ ಕುರಿಪ್ರತಾಪ್, ಮಳವಳ್ಳಿ ಸಾಯಿಕೃಷ್ಣ, ಗೋಪಾಲ್ದೇಶಪಾಂಡೆ ಮುಂತಾದವರ ತಾರಬಳಗವಿದೆ.
ನಾದಬ್ರಹ್ಮ ಹಂಸಲೇಖಾರ ಶಿಷ್ಯಾ ರಘುಧನ್ವಂತ್ರಿ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಸಿದ್ದಾರೆ. ಛಾಯಾಗ್ರಹಣ ಕಿರಣ್ಹಂಪ್ಲಾಪುರ, ಸಂಕಲನ ವೆಂಕಿ.ಯು.ಡಿ.ವಿ, ಸಾಹಸ ಮಾಸ್ಮಾದ, ಸಾಹಿತ್ಯ ಡಾ.ವಿ.ನಾಗೇಂದ್ರಪ್ರಸಾದ್-ಅರಸುಅಂತಾರೆ-ಗೌಸ್ಪೀರ್, ನೃತ್ಯ ಹೈಟ್ಮಂಜು ಅವರದಾಗಿದೆ. ಜೈ ಸಿಂಹ ಪ್ರೊಡಕ್ಷನ್ಸ್ ಮೂಲಕ ಸಿದ್ದಗೊಳ್ಳುತ್ತಿರುವ ಸಿನಿಮಾದ ಚಿತ್ರೀಕರಣವು ಬುದುವಾರದಿಂದ ಬೆಂಗಳೂರು ಮತ್ತು ಸಕಲೇಶಪುರ ಸುಂದರ ತಾಣಗಳಲ್ಲಿ ನಡೆಸಲು ತಂಡವು ಏರ್ಪಾಟು ಮಾಡಿಕೊಂಡಿದೆ.