ಹಿರಿಯ ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನಿಧನ

Share

ಬೆಂಗಳೂರು, ಮೇ,7-ಸಾಹಿತಿ, ವಿಮರ್ಶಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜಿ.ಎಸ್.ಸಿದ್ದಲಿಂಗಯ್ಯ(94) ಅವರು ಇಂದು ನಿಧನರಾದರು.

ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ತುಮಕೂರು ಜಿಲ್ಲೆ ಬೆಳ್ಳಾವಿಯವರಾದ ಸಿದ್ದಲಿಂಗಯ್ಯ ಅವರು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದರು.

ಕುವೆಂಪು ಅವರ ನೆಚ್ಚಿನ ಶಿಷ್ಯರೊಳೊಗೊಬ್ಬರಾಗಿದ್ದ ಜಿಎಸ್ ಸಿದ್ದಲಿಂಗಯ್ಯ ನಿಧನಕ್ಕೆ ಕನ್ನಡ ಸಾರಸ್ವತ ಲೋಕ ಕಂಬನಿ ಮಿಡಿದಿದೆ.
.ಎಸ್.ಸಿದ್ದಲಿಂಗಯ್ಯನವರು ಹುಟ್ಟಿದ್ದು ಫೆಬ್ರವರಿ ೧೯೩೧ ರಲ್ಲಿ. ತುಮಕೂರು ಜಿಲ್ಲೆಯ ಬೆಳ್ಳಾವೆ ಗ್ರಾಮ ಅವರ ಹುಟ್ಟೂರು. ವಿದ್ಯಾಭ್ಯಾಸ ತುಮಕೂರು ಮತ್ತು ಮೈಸೂರುಗಳಲ್ಲಾಯಿತು. ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಬಿಸಿದ ಇವರು ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ಕೊನೆಗೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ನಿವೃತ್ತರಾದರು. ವಿದ್ವಾಂಸರಾದ ಸಿದ್ದಲಿಂಗಯ್ಯನವರು ಬೆಂಗಳೂರು ಮೈಸೂರು, ಕರ್ನಾಟಕ, ಮಂಗಳೂರು, ಮುಂಬೈವಿಶ್ವವಿದ್ಯಾಲಯಗಳ ವಿಚಾರ ಸಂಕೀರ್ಣಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕವಿಗೋಷ್ಟಿ ಹಾಗೂ ವಿದ್ವತ್ ಗೋಷ್ಟಿಗಳ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಮಹಾನುಭಾವ ಬುದ್ಧ, ಬಸವಣ್ಣ, ವಿರತಿಯಸಿರಿ ಸಣ್ಣಪ್ಪನವರು, ಡಾ.ಸಿದ್ದಯ್ಯ ಪುರಾಣಿಕ- ಇವು ಇವರು ರಚಿಸಿರುವ ಜೀವನ ಚರಿತ್ರೆಗಳು.

ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡಕಾವ್ಯ, ರತ್ನಾಕರವರ್ಣಿ, ವಚನಸಾಹಿತ್ಯ; ಒಂದು ಇಣುಕುನೋಟ, ವಚನ ವ್ಮಾಯ ಮತ್ತು ಭಾಷೆ, ಹರಿದಾಸ ಸಾಹಿತ್ಯ ಪರಂಪರೆ, ಶೂನ್ಯಸಂಪಾದನೆ-ಒಂದು ಮರುಚಿಂತನೆ, ವಿಮರ್ಶೆಯ ಕೃತಿಗಳು ಶೂನ್ಯಸಂಪಾದನೆನೆಗಳು-ಒಂದು ಅವಲೋಕ, ಇವರ ಮಹತ್ವದ ವಿಮರ್ಶಾಗ್ರಂಥ ಬಿಂದುವಿನಿಂದ, ಎಂಬುದು ಚಿಂತನೆಗಳ ಸಂಕಲನ. ಕವಿ, ವಿಮರ್ಶಕ, ವಿದ್ವಾಂಸ, ವಾಗ್ಮಿ, ದಕ್ಷ ಆಡಳಿತಗಾರ- ಹೀಗೆ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರು ಬಹುಮುಖ ಪ್ರತಿಭೆಯುಳ್ಳವರು ೧೯೮೯ ರಿಂದ ಮೂರು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ  ನಿರ್ವಹಿಸಿದ ಸೇವೆ ಅವಿಸ್ಮರಣೀಯ.

Girl in a jacket
error: Content is protected !!