ನವದೆಹಲಿ,ಜೂ,೦೧-ಪಾಕ್-ಭಾರತ ಸಂಘರ್ಷದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿ ಪರಿಣಾಮ ಭಾರತೀಯ ಸೇನೆ ಜೆಟ್ಗಳು ನಷ್ಟವಾಗಿದೆ ಎನ್ನುವುದನ್ನು ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ ಒಪ್ಪಿಕೊಂಡಿದ್ದಾರೆ.
ಆದರೆ ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾ ಹೇಳಿರುವುದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ ಬ್ಲೂಮಬರ್ಗ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಲೋಪಗಳನ್ನು ಸರಿಪಡಿಸಿಕೊಂಡು ಭಾರತೀಯ ಮಿಲಟರಿ ಪಡೆ ತಕ್ಕ ಶಾಸ್ತಿ ಮಾಡಿತು ಎಂದು ಅವರು ಹೇಳಿದ್ದಾರೆ,
ಈ ವೇಳೆ ಎಷ್ಟು ವಿಮಾನಗಳು ಯುದ್ಧದಲ್ಲಿ ಕಳೆದುಕೊಳ್ಳಲಾಯಿತು ಎನ್ನುವ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿರುವ ಅವರು ಆದರೆ ಪಾಕಿಸ್ತಾನದ ಗಡಿಯ ಒಳಗೆ ಹೆಚ್ಚು ನಿಖರವಾದ ದಾಳಿಯನ್ನು ಭಾರತ ನಡೆಸಿದೆ ಎಂಬುದನ್ನು ತಿಳಿಸಿರುವ ಚೌವಾಣ್ ಪಾಕಿಸ್ತಾನದ ಜೊತೆಗೆ ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತಕ್ಕೆ ಆದ ಹಾನಿಯ ಬಗ್ಗೆ ದೇಶದ ಮಿಲಟಿಯ ಅತ್ಯಂತ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದು ಇದೇ ಮೊದಲು ಎನ್ನುವುದು ಇಲ್ಲಿ ಬಹುಮುಖ್ಯವಾಗಿದೆ.
ಪಾಕಿಸ್ತಾನದ ಜೊತೆಗಿನ ಸಂಘರ್ಷದಲ್ಲಿ ಭಾರ ಯುದ್ಧ ವಿಮಾಗಲನ್ನು ಕಳೆದುಕೊಂಡಿಏಎಂಬ ಪ್ರಶ್ನೆಯನ್ನು ಚೌವಾಣ್ ಅವರು ಮುಂದಿರಿಸಲಾಗಿತ್ತು, ಒಳ್ಳೆಯ ಸಂಗತಿ ಎಂದರೆ ಕಾರ್ಯತ್ರದಲ್ಲಿ ಆದ ಲೋಪವನ್ನು ನಾವು ಅರ್ಥಮಾಡಿಕೊಂಡೆವು, ಎರಡು ದಿನಗಳ ನಂತರ ಪರಿಷ್ಕೃತ ಕಾರ್ಯತಂತ್ರವನ್ನು ಜಾರಿಗೆ ತಂದೆವು, ನಮ್ಮ ಯುದ್ಧ ವಿಮಾನಗಳನ್ನು ಹಾರಿಸಿ ಗುರಿಗಳ ಮೇಲೆ ದೊರದಿಂದಲೇ ದಾಳಿ ನಡೆಸಿದೆವು ಎಂದು ಚೌವಾಣ್ ಅವರು ಮಾಹಿತಿ ನೀಡಿದ್ದಾರೆ.