ರವಿಚೆನ್ನಣ್ಣನವರ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Share

ಬೆಂಗಳೂರು ,ಜೂ. 09: ಕೋವಿಡ್​ ನಿಯಂತ್ರಣದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ನಡೆಸಿದೆ. ರಾಜ್ಯದ 12 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಆದೇಶ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್​ಪಿ ರವಿ ಚೆನ್ನಣ್ಣನವರ್​ ಸೇರಿದಂತೆ ಜಿಲ್ಲಾ ಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ. ಇದೇ ವೇಳೆ ಮೈಸೂರು ಜಿಲ್ಲಾ ನೂತನ ಎಸ್​ಪಿಯಾಗಿ ಆರ್​ ಚೇತನ್​ ಅವರನ್ನು ವರ್ಗಾಯಿಸಲಾಗಿದೆ. ಕೊರೋನಾ ನಿಯಂತ್ರಣದ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾಲ್ಲಿದ್ದು, ಜನರ ಓಡಾಟಕ್ಕೆ ನಿರ್ಭಂದ ಹೇರಿ ಕಾನೂನು ಸುವ್ಯವಸ್ಥೆಯಲ್ಲಿ ಪೊಲೀಸ್​ ಅಧಿಕಾರಿಗಳ ಪಾತ್ರ ಕೂಡ ಮಹತ್ವದಾಗಿದೆ.

ಬೆಂಗಳೂರು CID ಎಸ್ಪಿಯಾಗಿ ರವಿ ಡಿ ಚೆನ್ನಣ್ಣನವರ್​​

ಮೈಸೂರು ಎಸ್ಪಿಯಾಗಿ ಆರ್.ಚೇತನ್

ಸಿ.ಬಿ.ರಿಷ್ಯಂತ್ – ದಾವಣಗೆರೆ ಎಸ್ಪಿ

ಕೋನವಂಶಿ ಕೃಷ್ಣ-ಬೆಂಗಳೂರು ಗ್ರಾ. ಎಸ್ಪಿ

ಅಡ್ಡೂರು ಶ್ರೀನಿವಾಸುಲು- ಕಲಬುರ್ಗಿ ಡಿಸಿಪಿ

ಪ್ರದೀಪ್ ಗುಂಟಿ-DCP, ಮೈಸೂರು ಕಾನೂನು ಸುವ್ಯವಸ್ಥೆ

ಡೆಕ್ಕ ಕಿಶೋರ್ ಬಾಬು- ಕೋಲಾರ ಎಸ್ಪಿ

ಪ್ರಕಾಶ್ ಗೌಡ, ಐಎಸ್​ಡಿ ಎಸ್ಪಿ ಬೆಂಗಳೂರು

ರಾಹುಲ್ ಕುಮಾರ್- ತುಮಕೂರು ಎಸ್ಪಿ

ಕೆ.ಜಿ.ದೇವರಾಜ್​- ಸಿಐಡಿ ಎಸ್ಪಿ

ಹನುಮಂತರಾಯ- ಹಾವೇರಿ ಎಸ್ಪಿ

ಕಾರ್ತಿಕ್​ ರೆಡ್ಡಿ- ಬೆಂಗಳೂರು ವೈರ್​ಲೆಸ್​ ಎಸ್ಪಿ

Girl in a jacket
error: Content is protected !!