ರಾಜ್ಯ ಸರ್ಕಾರ ಸತ್ತೇ ಹೋಗಿದೆ-ಸಿದ್ದು ಲೇವಡಿ

Share

ಕೋಲಾರ,ಮೇ೧೭:ತಜ್ಞರು ಕೊರೊನಾ ಎರಡನೇ ಅಲೆ ಕುರಿತು ವರದಿ ಕೊಟ್ಟರು ಎಚ್ಚೆತ್ತುಕೊಳ್ಳದೆ ಸರ್ಕಾರ ಸತ್ತು ಹೋಗಿದೆ ಇಂತಹ ಮನಗೆಟ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದ್ದಾರೆ
ಕೋಲಾರ ಜಿಲ್ಲೆ ಕೆಜಿಎಫ್ ನಗರದ ಮುನ್ಸಿಪಲ್ ಮೈದಾನದಲ್ಲಿ ನಡೆದ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರಕ್ಕೆ ಕೊರೊನಾ ಎರಡನೇ ಅಲೆ ಬರುವ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಾನಗೆಟ್ಟ ಸರ್ಕಾರವನ್ನು ನಾನು ನೋಡಿರಲಿಲ್ಲ. ಸುಳ್ಳೇ ಅವರ ಮನೆ ದೇವರು, ಸರ್ಕಾರ ನಡೆಸಕ್ಕಾಗಲ್ಲ ಎಂದರೆ ಬಿಟ್ಟು ಹೋಗಿ ಎಂದಿದ್ದೆ. ಆದರೆ ಬಿಟ್ಟು ಹೋಗಿಲ್ಲ ಇಂತಹ ಸತ್ತಿರುವ ಸರ್ಕಾರವನ್ನು ನಾನು ನೋಡಿರಲಿಲ್ಲ ಎಂದು ಗುಡುಗಿದ್ದಾರೆ.
ನಮಗೆ ಆಕ್ಸಿಜನ್ ೧೭೦೦ ಮೆಟ್ರಿಕ್ ಟನ್ ಬೇಕು. ಅಷ್ಟು ನಮಗೆ ಸಿಗುತ್ತಿಲ್ಲ. ಸರ್ಕಾರ ಸತ್ತುಹೋಗಿದೆ ಯಡಿಯೂರಪ್ಪ ಒಬ್ಬ ಅಸಮರ್ಥ ಮುಖ್ಯಮಂತ್ರಿ. ಇಂಥ ಬಂಡರನ್ನು ನೋಡಿಲ್ಲ, ನಿಮ್ಮ ಕೈಲಿ ಆಗೋದಿಲ್ಲ ಅಂದ್ರೆ ಬಿಡಿ. ನೀವು ಅದನ್ನು ಮಾಡುತ್ತಿಲ್ಲ. ನಾವಾದ್ರು ಬಂದು ಏನಾದ್ರು ಮಾಡುತ್ತೇವೆ ಎಂದು ಲೇವಡಿ ಮಾಡಿದರು.
ಕೊರೊನಾ ಹಳ್ಳಿಗಳಿಗೂ ಹಬ್ಬಿದೆ. ಹಾಗಾಗಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ರೋಗವನ್ನ ತಡೆಗಟ್ಟಬೇಕು ಎಂದರೆ ಎಲ್ಲರೂ ವ್ಯಾಕ್ಸಿನ್ ಮಾಡಿಸಿಕೊಳ್ಳಬೇಕು. ವ್ಯಾಕ್ಸಿನ್ ಮನೆ ಮನೆಗೆ ಹೋಗಿ ಕೊಡಬೇಕು ಅದಕ್ಕಾಗಿ ಸುಮಾರು ೧೦ ಪತ್ರ ಬರೆದಿದ್ದೇನೆ. ಪ್ರತಿಯೋಬ್ಬರು ಮಾಸ್ಕ್ ಹಾಕಿಕೊಳ್ಳಿ ಸಾಧ್ಯವಾದ್ರೆ ಎರಡು ಮಾಸ್ಕ್ ಹಾಕಿಕೊಳ್ಳಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು

Girl in a jacket
error: Content is protected !!