ಹುಬ್ಬಳ್ಳಿ ,ಜು.11: ಸಣ್ಣ ನೀರಾವರಿ ಇಲಾಖೆ ವತಿಯಿಂದ 94 ಲಕ್ಷ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿಯ ಉಣಕಲ್ ಗ್ರಾಮದ ಸುಳ್ಳ ರಸ್ತೆಯಲ್ಲಿನ ಹಳ್ಳದ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸಿದರು.ಬ್ಯಾರೇಜ್ ನಿರ್ಮಾಣದಿಂದ ಸುತ್ತಮುತ್ತಲಿನ ಸುಮಾರು 74 ಎಕರೆ ಕೃಷಿ ಭೂಮಿಗೆ ನೀರು ಲಭಿಸಲಿದೆ. ಸ್ಥಳೀಯ ರೈತರು ಹಳ್ಳವನ್ನು ಹಾದು ಹೊಲಗಳಿಗೆ ತೆರಳಲು ರಸ್ತೆಯ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ್ ಕಲಬುರಗಿ, ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ಉಮೇಶ್ ಕೌಜಗಿ, ಬಸಣ್ಣ ಹೆಬ್ಬಳ್ಳಿ, ಈಶ್ವರಗೌಡ ಪಾಟೀಲ ಹಾಗೂ ಇನ್ನಿತರೆ ಪ್ರಮುಖರು ಹಾಜರಿದ್ದರು.
ರೈತರಿಂದ ಮನವಿ
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ ಗೋಪನಕೊಪ್ಪ ಗ್ರಾಮದ ರೈತರು, ಸುಳ್ಳ ಗ್ರಾಮಕ್ಕೆ ತಲುಪುವ ಜಿ.ಪಂ.ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರೀಕರಣ ಮಾಡುವಂತೆ ಮನವಿ ಸಲ್ಲಿಸಿದರು.