ಬೆಂಗಳೂರು,ಜೂ,೦೭: ಮಾಜಿ ಸಚಿವ ಪ್ರೊ ಮುಮಾಜ್ ಆಲಿಖಾನ್ ಇಂದು ಬೆಳಿಗ್ಗೆ ನಿಧನಹೊಂದಿದಾರೆ.
ಅವರಿಗೆ ೯೪ ವರ್ಷ ವಯಸ್ಸಾಗಿತ್ತು ಇಂದು ಬಳಿಗ್ಗೆ ಅವರು ಗಂಗಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಯೋಸಹಜ ಕಾಯಿಲಿಯಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಅವರಿಗೆ ಪತ್ನಿ, ಮಗಳು ಇದ್ದಾರೆ. ೨೦೦೮ರಲ್ಲಿ ಬಿ.ಎಸ್. ಯಡಿಯಾರಪ್ಪ ನೇತೃತ್ವದ ಸರ್ಕಾರದಲ್ಲಿ ಅವರು ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
೩೦ ವರ್ಷಗಳಿಂದ ಬೆಂಗಳೂರು ನಗರದ ಆರ್ಟಿನಗರದಲ್ಲಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುತ್ತಿದ್ದು, ಈ ಶಾಲೆಯ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ, ಮಧ್ಯಾಹ್ನ ಉಪಹಾರ, ಪಠ್ಯಪುಸ್ತಕ ಸಮವಸ್ತ್ರಗಳನ್ನು ನೀಡುತ್ತಿದ್ದಾರೆ. ತಮಗೆ ಬರುತ್ತಿದ್ದ ಪಿಂಚಣಿ ಮತ್ತು ಇತರೆ ಸ್ವಂತ ಮೂಲಗಳ ಆದಾಯವನ್ನು ಬಡಮಕ್ಕಳಿಗೆ ವಿತರಿಸುತ್ತಿದ್ದರು. ಅವರ ಪತ್ನಿ ಈ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ೧೯೮೨ರಲ್ಲಿ ಸ್ವಯಂ ನಿವೃತ್ತಿಯಾಗಿದ್ದರು. ತಮ್ಮ ಮೃತ ಮಗನ ಹೆಸರಿನಲ್ಲಿ (ನೂರ್ ಅಹ್ಮದ್ ಅಲಿಖಾನ್ ಸ್ಮಾರಕ ವಿದ್ಯಾಸಂಸ್ಥೆ) ಶಾಲೆ ನಡೆಸುತ್ತಿದ್ದರು. ಆರಂಭದಲ್ಲಿ ಶಾಲೆ ಹೆಸರು ಸಲಾಮತ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಎಂದು ಹೆಸರಿಟ್ಟಿದ್ದರು. ೨೦೦೮ರಲ್ಲಿ &ಟಿbsಠಿ;ಅಪಘಾತದಲ್ಲಿ ಮೃತಪಟ್ಟ ತಮ್ಮ ೧೮ ವಯಸ್ಸಿನ ಮಗನ ಸ್ಮರಣಾರ್ಥ ಶಾಲೆಯ ಹೆಸರು ಬದಲಿಸಿದ್ದರು.
ಮಾಜಿ ಸಚಿವ ಮುಮ್ತಾಜ್ ಅಲಿಖಾನ್ ನಿಧನ
Share