ಕೀರ್ತನಾ ವೈದ್ಯಕೀಯ ನೆರವಿಗೆ ಮೋಹನ್ ದಾಸ್ ಪೈ, ರವಿ ಪೈ ಗೆ ಜಮೀರ್ ಅಹಮದ್ ಮನವಿ

Share

ಬೆಂಗಳೂರು,ಜೂ,11-ಅನುವಂಶೀಯ ಅಸ್ವಸ್ಥತೆ ಕಾಯಿಲೆಯಿಂದ ಬಳಲುತ್ತಿರುವ ಮೈಸೂರಿನ ನಾಗಶ್ರೀ – ಕಿಶೋರ್ ದಂಪತಿಯ ಎರಡು ವರ್ಷದ ಮಗು ಕೀರ್ತನಾ ಗೆ ಸಿ ಎಸ್ ಆರ್ ನಿಧಿಯಡಿ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವಂತೆ ಸಚಿವ ಜಮೀರ್ ಅಹಮದ್ ಖಾನ್ ಅವರು, ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ಮುಖ್ಯಸ್ಥ ಮೋಹನ್ ದಾಸ್ ಪೈ ಹಾಗೂ ಸೆಂಚುರಿ ಬಿಲ್ಡರ್ಸ್ ನ ರವಿ ಪೈ ಅವರಿಗೆ ಮನವಿ ಸಲ್ಲಿಸಿದರು.

ಕೀರ್ತನಾ ವೈದ್ಯಕೀಯ ಚಿಕಿತ್ಸೆಗೆ 16 ಕೋಟಿ ರೂ. ವೆಚ್ಚ ಆಗಲಿದ್ದು ಜಮೀರ್ ಅಹಮದ್ ಖಾನ್ ಅವರು ಈಗಾಗಲೇ ವೈಯಕ್ತಿಕವಾಗಿ 25 ಲಕ್ಷ ರೂ. ನೀಡಿದ್ದಾರೆ. ಜತೆಗೆ
ಕಾರ್ಪೂರೇಟ್ ಕಂಪನಿಗಳಿಗೆ ನೆರವಿಗಾಗಿ ಮನವಿ ಮಾಡುತ್ತಿದ್ದಾರೆ. ಇತ್ತೀಚಿಗೆ ಇಂಡಿಯಾ ಬಿಲ್ಡರ್ಸ್ ನ ಜಿಯಾವುಲ್ಲಾ ಅವರಿಗೂ ಮನವಿ ಮಾಡಿದ್ದರು.

Girl in a jacket
error: Content is protected !!