ನೂತನ ಸಚಿವರಿಗೆ ಖಾತೆ ಹಂಚಿಕೆ ಅರಗ ಜ್ಙಾನೇಂದ್ರರಿಗೆ ಗೃಹ,ಸುನೀಲ್ ಕುಮಾರ್ ಗೆ ಇಂಧನ ಖಾತೆ

Share

ಬೆಂಗಳೂರುಆ,07: ಭಾರೀ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆಯಸಗಿದೆ.
29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ.

ಇನ್ನು ಸಂಪುಟದಲ್ಲಿ ಮೊದಲ ಬಾರಿ ಸಚಿವರಾದವರಿಗೆ ಪ್ರಭಾವಿ ಖಾತೆ ನೀಡಿದ್ದರೆ, ಸಚಿವೆ ಶಶಿಕಲಾ ಜೊಲ್ಲೆಗೆ ಮುಜರಾಯಿ, ಹಜ್ ಇಲಾಖೆ ಜವಾಬ್ದಾರಿ ವಹಿಸಿರುವುದು ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ.

ಯಾರಿಗೆ ಯಾವ ಖಾತೆ?

* ಗೋವಿಂದ ಕಾರಜೋಳ: ಜಲಸಂಪನ್ಮೂಲ ಖಾತೆ

* ಕೆ.ಎಸ್.ಈಶ್ವರಪ್ಪ: ಗ್ರಾಮೀಣ ಅಭಿವೃದ್ಧಿ

* ಆರ್‌. ಅಶೋಕ್: ಕಂದಾಯ ಇಲಾಖೆ

* ಶ್ರೀರಾಮುಲು: ಸಾರಿಗೆ ಖಾತೆ

* ವಿ. ಸೋಮಣ್ಣ: ವಸತಿ, ಮೂಲಭೂತ ಅಭಿವೃದ್ಧಿ ಖಾತೆ

* ಉಮೇಶ್ ಕತ್ತಿ: ಅರಣ್ಯ ಹಾಗೂ ಆಹಾರ

* ಎಸ್‌. ಅಂಗಾರ: ಮೀನುಗಾರಿಕೆ

* ಜೆ. ಸಿ. ಮಾಧುಸ್ವಾಮಿ: ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ

* ಅರಗಜ್ಞಾನೇಂದ್ರ: ಗೃಹ ಇಲಾಖೆ

* ಡಾ. ಅಶ್ವತ್ಥ್ ನಾರಾಯಣ್: ಉನ್ನತ ಶಿಕ್ಷಣ ಸಚಿವ, ಐಟಿಬಿಟಿ

* ಸಿ. ಸಿ. ಪಾಟೀಲ್: ಲೋಕೋಪಯೋಗಿ ಇಲಾಖೆ

* ಆನಂದ್ ಸಿಂಗ್: ಪರಿಸರ, ಪ್ರವಾಸೋದ್ಯಮ ಖಾತೆ

* ಕೋಟಾ ಶ್ರೀನಿವಾಸ ಪೂಜಾರಿ: ಸಮಾಜ ಕಲ್ಯಾಣ, ಹಿಂದುಳಿದ ವರ್ಗ

* ಪ್ರಭು ಚೌಹಾಣ್: ಪಶು ಸಂಗೋಪನೆ

* ಮುರುಗೇಶ್ ನಿರಾಣಿ: ಬೃಹತ್ ಕೈಗಾರಿಕೆ

* ಶಿವರಾಮ್ ಹೆಬ್ಬಾರ್: ಕಾರ್ಮಿಕ ಇಲಾಖೆ

* ಎಸ್‌. ಟಿ. ಸೋಮಶೇಖರ್: ಸಹಕಾರ ಖಾತೆ

* ಬಿ. ಸಿ. ಪಾಟೀಲ್: ಕೃಷಿ ಖಾತೆ

* ಭೈರತಿ ಬಸವರಾಜ್: ನಗರಾಭಿವೃದ್ಧಿ

* ಡಾ. ಕೆ. ಸುಧಾಕರ್: ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ

* ಗೋಪಾಲಯ್ಯ: ಅಬಕಾರಿ ಖಾತೆ

* ಶಶಿಕಲಾ ಜೊಲ್ಲೆ: ಮುಜರಾಯಿ, ಹಜ್, ವಕ್ಫ್ ಖಾತೆ

* ಎಂಟಿಬಿ ನಾಗರಾಜ್: ಪೌರಾಡಳಿತ ಖಾತೆ

* ನಾರಾಯಣಗೌಡ: ರೇಷ್ಮೆ, ಕ್ರೀಡೆ, ಯುವ ಸಬಲೀಕರಣ

* ಬಿ. ಸಿ. ನಾಗೇಶ್: ಶಿಕ್ಷಣ ಇಲಾಖೆ

* ಸುನಿಲ್ ಕುಮಾರ್: ಇಂಧನ, ಕನ್ನಡ, ಸಂಸ್ಕೃತಿ ಇಲಾಖೆ

* ಹಾಲಪ್ಪ ಆಚಾರ್: ಗಣಿ, ಭೂ ವಿಜ್ಞಾನ, ಮಹಿಳಾ- ಮಕ್ಕಳ ಕಲ್ಯಾಣ

* ಶಂಕರ್ ಪಾಟೀಲ್ ಮುನೇನಕೊಪ್ಪ: ಜವಳಿ, ಸಕ್ಕರೆ ಖಾತೆ

* ಮುನಿರತ್ನ: ತೋಟಗಾರಿಕೆ ಇಲಾಖೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖಿಕ.

ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿದರೆ ಬಹುತೇಕ ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿದ್ದ ಸಚಿವರಿಗೆ ಅದೇ ಖಾತೆಗಳನ್ನೇ ನೀಡಲಾಗಿದೆ.

Girl in a jacket
error: Content is protected !!