ಬೆಂಗಳೂರು,ಜೂ,28:ಪಂಜಾಬ್ ನ ಪಾಟಿಯಾಲದಲ್ಲಿ ನಡೆದ 60ನೇ ಅಂತ ರಾಜ್ಯ ಹಿರಿಯರ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡದ ಕ್ರೀಡಾಪಟು ಬಿ. ಕೆ. ಕುಮಾರ್ ಸ್ವಾಮಿಪುರುಷರ 800 ಮೀಟರ್ ಓಟದಲ್ಲಿ ಐದನೇ ಸ್ಥಾನಗಳಿಸಿದ್ದಾರೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪುರುಷರ 800 ಮೀಟರ್ ಓಟದಲ್ಲಿ 1 ನಿಮಿಷ 51.86 ಸೆಕೆಂಡ್ ಗಳಲ್ಲಿ ಗುರಿತಲುಪಿ ಉತ್ತಮ ಸಮಯವನ್ನು ನೀಡುವುದರ ಮೂಲಕ 5ನೇ ಸ್ಥಾನ ಪಡೆದು ರಾಜ್ಯಕ್ಕೆ 2 ಅಂಕಗಳನ್ನು ತಂದು ಕೊಟ್ಟು ಕರ್ನಾಟಕದ ಕೀರ್ತಿ ಪತಾಕೆಯನ್ನು ಅಂತಾರಾಜ್ಯ ಕ್ರೀಡಾಂಗಣದಲ್ಲಿ ಹಾರಿಸಿದ್ದಾರೆ.. ತರಬೇತುದಾರ ಮಂಜು ರವರು ಕ್ರೀಡಾಪಟು ಬಿ.ಕೆ.ಕುಮಾರ ಸ್ವಾಮಿರವರಿಗೆ ವಿಶೇಷ ತರಬೇತಿಯನ್ನು ನೀಡಿ ಕರ್ನಾಟಕಕ್ಕೆ ಕೀರ್ತಿ ತರಲು ಶ್ರಮಿಸಿದ್ದಾರೆ.
ಕ್ರೀಡಾಪಟುವಿನ ಸಾಧನೆ ಮೆಚ್ಚಿ ಚೇರ್ಮನ್ ರಾಜ್ಯ ಪೋಲಿಸ್ ಕ್ರೀಡಾಭಿವೃದ್ದಿ ಮಂಡಳಿ ಅಧ್ಯಕ್ಷ ಆಲೋಕ್ ಕುಮಾರ್ ಹಾಗೂ ಕಮಾಂಡೆಂಟ್ 3ನೇ ಪಡೆ ಹಾಗೂ ಸಹಾಯಕ ಕಾರ್ಯದರ್ಶಿ ಎಂ.ವಿ. ರಾಮಕೃಷ್ಣ ಪ್ರಸಾದ್ ರವರು ಪ್ರಸಂಶಿಸಿ, ಅಭಿನಂದಿಸಿದ್ದಾರೆ.