ಸಿಡ್ನಿ,ಮೇ,೧೪: ಭಾರತದ ಕ್ರಿಕೆಟ್ ತಂಡದಲ್ಲಿ ಪ್ರತಿಭೆಗಳಿಗೆ ಭಂಡಾರವನ್ನೇ ಹೊಂದಿದೆ ಇಂತ ಸುಸ್ತಿತಿಗೆ ರಾಹುಲ್ ದ್ರಾವಿಡ್ ಅವರ ಕೊಡುಗೆಯೇ ಕಾರಣ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೇಗ್ ಚಾಪೆಲ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟ್ ವೆಬ್ ಸೈಟ್ನ ಸಂದರ್ಶನದಲ್ಲಿ ನೀಡಿದ ಹೇಳಿಕೆಯಲ್ಲಿ ಭಾರತೀಯ ಕ್ರಿಕೆಟ್ತಂಡ ಇಂದು ವಿಶ್ವದಲ್ಲಿ ಅನಭಿಶಕ್ತ ದೊರೆಯಾಗಿ ಮೆರೆಯುತ್ತಿದೆಎಂದರೆ ಅದಕ್ಕೆ ದ್ರಾವಿಡ್ ಅವರೇ ಕಾರಣ ಅವರ ನೀಡಿರುವ ತರಬೇತಿ ನಿಜಕ್ಕೂ ಮೆಚ್ಚುವಂತದ್ದು ಎಂದು ಅವರು ಹೇಳಿದ್ದಾರೆ.
’ಆಸ್ಟ್ರೇಲಿಯಾದಲ್ಲಿನ ದೇಶಿ ಕ್ರಿಕೆಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಂದು ಆಸೀಸ್ಗಿಂತಲೂ ಒಂದು ಹೆಜ್ಜೆ ಮುಂದಿವೆ. ಅದರಲ್ಲೂ ಭಾರತ ಇದರ ಹೆಚ್ಚು ಲಾಭ ತೆಗೆದುಕೊಂಡಿದ್ದು, ರಾಹುಲ್ ದ್ರಾವಿಡ್ ನಮ್ಮ ಕಾರ್ಯತಂತ್ರಗಳನ್ನು ಅರ್ಥಮಾಡಿಕೊಂಡ ಪರಿಣಾಮ ಭಾರತದಲ್ಲಿ ಕ್ರಿಕೆಟ್ ಇಷ್ಟು ಅಭಿವೃದ್ಧಿಯಾಗಿದೆ. ನಾವು ಆಸ್ಟ್ರೇಲಿಯಾದಲ್ಲಿ ಏನನ್ನು ಮಾಡುತ್ತಿದ್ದೇವೋ ಅದನ್ನು ಭಾರತದಲ್ಲಿ ಅಳವಡಿಸಿದರು. ಇದರ ಲಾಭ ಇಂದು ಟೀಮ್ ಇಂಡಿಯಾಗೆ ಸಿಗುತ್ತಿದೆ. ಪ್ರತಿಭೆಗಳನ್ನು ಗುರುತಿಸಿ ಪೋಷಿಸುವಲ್ಲಿ ಆಸ್ಟ್ರೇಲಿಯಾ ಮುಂಚೂಣಿಯಲ್ಲಿ ಇದ್ದ ಸ್ಥಾನವನ್ನು ಇಂದು ಕಳೆದುಕೊಂಡಿದೆ. ಇಂಗ್ಲೆಂಡ್ ಈ ವಿಚಾರದಲ್ಲಿ ನಮಗಿಂತಲೂ ಉತ್ತಮ ಕೆಲಸ ಮಾಡುತ್ತಿದೆ. ಭಾರತ ಎಲ್ಲರಿಗಿಂತಲೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಚಾಪೆಲ್ ಹೇಳಿದ್ದಾರೆ.
ಅಂತೆಯೇ, ’ಇತಿಹಾಸವನ್ನು ಗಮನಿಸಿದರೆ ಕೇವಲ ಆಸ್ಟ್ರೇಲಿಯಾದಲ್ಲಿ ಮಾತ್ರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪೋಷಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ಇಂದು ಆಸ್ಟ್ರೇಲಿಯಾದಲ್ಲಿ ಪ್ರತಿಭಾನ್ವಿತ ಆಟಗಾರರು ಕಳೆದುಹೋಗುತ್ತಿದ್ದಾರೆ. ಆಟಗಾರರನ್ನು ಈ ರೀತಿ ಕಳೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ
ಟೀಂ ಇಂಡಿಯಾ ಇಂದಿನ ಸುಸ್ತಿತಿಗೆ ದ್ರಾವಿಡ್ ಕಾರಣ-ಗ್ರೇಗ್ಚಾಪಲ್
Share