ತಂದೆ ಮಗನ ವಿರುದ್ಧ ಮತ್ತೆ ತರಾಟೆಗೆ ತಗೆದುಕೊಂಡ ಯತ್ನಾಳ್
by -ಕೆಂಧೂಳಿ
ವಿಜಯಪುರ.ಫೆ.೦೪-ಸದ್ಯ ಬಿಜೆಪಿ ಬೀದಿ ರಂಪಾಟ ನಿಲ್ಲುವ ಲಕ್ಷಣಗಳಂತೂ ಗೋಚರಿಸಿದಂತೆ ಕಾಣುತ್ತಿಲ್ಲ ,ದಿನ ದಿನಕ್ಕೂ ಅದು ಮತ್ತಷ್ಟು ವ್ಯಾಪಿಸುತ್ತಿದೆ ಅಪ್ಪ-ಮಗಳ ವಿರುದ್ಧ ಶಾಸಕ ಬಸವರನಗೌಡ ಪಾಟೀಲ್ ಯತ್ನಾಳ್ ಮತ್ತೆ ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ.
ಈಗ ಈ ಭಿನ್ನರ ತಂಡ ದೆಹಲಿಯಾತ್ರೆ ಕೈಗೊಳ್ಳಲಿದ್ದು ಹೈಕಮಾಂಡ್ಗೆ ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸಿ ಅವರ ಕರ್ಮಕಾಂಡವನ್ನು ವಿವರಿಸುತ್ತೇವೆ ಎಂದು ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ನಡೆಯುತ್ತಿರೋ ಭಾರತೀಯ ವಿಕಾಸ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬಳಿಕ ಅಲ್ಲಿಂದ ದೆಹಲಿಗೆ ಹೋಗುತ್ತೇವೆ. ಮಹಾಭ್ರಷ್ಟ ಕುಟುಂಬ ಬೇಕೆ?, ಪ್ರಮಾಣಿಕರು ನಿಷ್ಟಾವಂತರು ಪಕ್ಷದ ಕಾರ್ಯಕರ್ತರು ಬೇಕೆ ಎಂದು ಹೈ ಕಮಾಂಡ್ನ್ನು ನಾವು ಪ್ರಶ್ನಿಸುತ್ತೇವೆ. ಬಿಜೆಪಿಯಲ್ಲಿನ ಕುಟುಂಬಶಾಹಿ ರಾಜಕೀಯ ಕೊನೆಗೊಳ್ಳಬೇಕು. ಭ್ರಷ್ಟಾಚಾರಿಗಳ ಕುಟುಂಬವನ್ನು ರಾಜ್ಯದಿಂದ ಕಿತ್ತು ಹೋಗಬೇಕು. ಹಿಂದುತ್ವ ಪರವಾಗಿರುವಂತಹ ವ್ಯಕ್ತಿಗಳ ಕೈಯಲ್ಲಿ ಪಕ್ಷದ ಮಾತ್ರ ನಾಯಕತ್ವ ಇರಬೇಕೆಂದು ಹೇಳಿದರು.

Adavategement
೮-೧೦ ದಿನಗಳಲ್ಲಿ ಎಲ್ಲ ಸರಿಯಾಗುತ್ತದೆ, ನಾನು ರಾಜ್ಯಾಧ್ಯಕ್ಷನಾಗೋ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿಕೆಗೆ ಟಾಂಗ್ ನೀಡಿದ ಅವರು, ಯಾರಾದರೇನು ನಾನೇ ಆಗಬೇಕು ಎನ್ನಬೇಕಾಗುತ್ತದೆ. ಡಿಪಾಸಿಟ್ ಜಪ್ತಿ ಹೋದವರೂ ಸಹಿತ ನಾನೇ ಆರಿಸಿ ಬರುತ್ತೇನೆಂದು ಹೇಳುತ್ತಾರೆ ಎಂದರು.
ಹೊಳೆನರಸೀಪುರದಲ್ಲಿ ಒಬ್ಬ ಸಿಕ್ಕಿದ್ದ ೫೦೦ ಮತಗಳಲ್ಲಿ ಸೋತೆ ಎಂದು ಹೇಳಿದ, ನಂತರ ನೋಡಿದಾಗ ಆತ ಕೇವಲ ೫೦೦ ಮತ ಪಡೆದಿದ್ದ. ಈಗ ಹೈಕಮಾಂಡ್ನಲ್ಲಿ ಮೂರು ವಿಷಯಗಳು ಸ್ಪಷ್ಟವಾಗಬೇಕು. ಭ್ರಷ್ಟಾಚಾರ ವ್ಯಕ್ತಿಯ ಕುಟುಂಬ ದೂರವಿಡಬೇಕು. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ಹಿಂದುತ್ವರಹಿತ ನಾಯಕತ್ವ ಬಿಜೆಪಿಗೆ ಬೇಕು. ಯಾರೂ ಹಿಂದೂತ್ವ ರಕ್ಷಣೆ ಮಾಡಲಿಲ್ಲ, ಹಿಂದೂ ಕಾರ್ಯಕರ್ತರ ಕೊಲೆಯಾದರೆ ಕೇವಲ ಕಠಿಣ ಕ್ರಮವೆಂದು ಮಾತನಾಡಿದರು. ಆದ ಕಾರಣದಿಂದಲೇ ಬಿಜೆಪಿಗೆ ಹೀನಾಯ ಸ್ಥಿತಿ ಆಗಿದೆ. ಕಾರಣ ಹಿಂದುತ್ವ ರಹಿತವಾದ ರಾಜ್ಯ ರಾಜಕಾರಣ ಬೇಕು ಎಂದರು.

ವಿಜಯೇಂದ್ರ
ದೆಹಲಿ ಚಲೋ ತಂಡ ದೊಡ್ಡದಿದೆ
ತಸ್ಥ ಇದ್ದಿದ್ದು ನಿಷ್ಟಾವಂತ ಆಗಿದೆ. ಕನ್ವರ್ಟ್ ಆಗಿದೆ, ಮತಾಂತರ ಆಗಿದೆ, ನಿಷ್ಟಾವಂತ ಮತಾಂತರ ಆಗಿದೆ. ತಟಸ್ಥ ಎಂದು ಎರಡೂ ಕಡೆ ಆಟವಾಡುತ್ತಿದ್ದರು. ವಿಜಯೇಂದ್ರನ ಮುಂದುವರೆಸಿದರೆ ಹೀನಾಯ ಸ್ಥಿತಿ ಎಂದು ಗೊತ್ತಾಗಿದ್ದು, ಎಲ್ಲವೂ ಹೊಂದಾಣಿಕೆಯಿದೆ. ನನ್ನ ಭಿಕ್ಷೆಯಿಂದ ಶಾಸಕನಾಗಿದ್ದು ಎಂದು ಡಿಕೆಶಿ ವಿಜಯೇ೦ದ್ರಗೆ ಹೇಳಿದ. ಅದಕ್ಕೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೊನ್ನೆ ವಿಜಯೇಂದ್ರ ಬಗ್ಗೆ ಹೀನಾಯವಾಗಿ ಬೈಯ್ದರೂ ಉತ್ತರ ಕೊಡಲಿಲ್ಲ. ಕಾಂಗ್ರೆಸ್ನವರು ಯಡಿಯೂರಪ್ಪ ಹಾಗೂ ಮಗನಿಗೆ ಭಯಪಡಿಸಿದ್ದಾರೆ. ನಮ್ಮ ಹಗರಣ ತೆಗೆದರೆ ನಿಮ್ಮದು ಪೋಕೋ ಇದೆ, ನೀನು ನಕಲಿ ಸಹಿ ಮಾಡಿದ್ದು ಇದೆ. ಇದೆಲ್ಲ ತೆಗೆಯುತ್ತೇವೆಂದು ವಿಜಯೇಂದ್ರಗೆ ಹೆದರಿಸಿದ್ದಾರೆ. ಇಂಥ ವ್ಯಕ್ತಿಗಳು ಬೇಕಾ? ಎಂದು ನಾವು ಹೈಕಮಾಂಡ್ ಗೆ ಕೇಳುತ್ತಿದ್ದೇವೆ. ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಬಹಳ ಡ್ಯಾಮೇಜ್ ಆಗಿದೆ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವನೊಬ್ಬ ಜೋಕರ್ ಎಂದು ಯತ್ನಾಳ ಟೀಕಿಸಿದರು.