ಅಂಕಣ
ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ
ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ ೧೯೯೮ನೇ ಇಸವಿ, ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯಕ್ಕಾಗಿ ಶಿಲ್ಪ, ಶಾಸನ, ವೀರಗಲ್ಲು ಮೊದಲಾದ ಪ್ರಾಚೀನ ವಸ್ತುವಿಶೇಷಗಳನ್ನು ಸಂಗ್ರಹಿಸಿ ತರಲೆಂದೇ ನೇಮಕವಾದ ತಂಡ ನಮ್ಮದು. ತಂಡದಲ್ಲಿ ನನ್ನನ್ನು ಸೇರಿದಂತೆ ವಾಸುದೇವ ಬಡಿಗೇರ, ಎಂ. ಕೊಟ್ರೇಶ ಮತ್ತು ನೆರಗಲ್ಲಪ್ಪ ಸೇರಿದ್ದೆವು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಹಳ್ಳಿಗಳನ್ನು ಸುತ್ತುತ್ತಾ ಅಲ್ಲಿನ ದೇವಾಲಯ, ಮಠ-ಮಂದಿರ, ಕಚೇರಿಗಳನ್ನು ಕಂಡು ಅಲ್ಲಿನ ಮುಖಂಡರು, ಅಧಿಕಾರಿಗಳು ಮತ್ತು ಸ್ಥಳೀಯ ಜನರನ್ನು ಒಪ್ಪಿಸಿ, ಓಲೈಸಿ ವಸ್ತುಗಳನ್ನು ಸಂಗ್ರಹಿಸುವ ಕಾಯಕವದು. ಈ ಸಂದರ್ಭದಲ್ಲಿ…