Girl in a jacket

Author kendhooli_editor

ರೈತನ ಬೆತ್ತಲೆ ಮಾಡಿ ಪುಟಗೋಸಿ ಎಸೆವ ಪ್ರಧಾನಿ

ರೈತನ ಬೆತ್ತಲೆ ಮಾಡಿ ಪುಟಗೋಸಿ ಎಸೆವ ಪ್ರಧಾನಿ ವಿಶ್ವದ ಗಮನ ಸೆಳೆದ ರೈತ ಆಂದೋಲನಕ್ಕೆ ವರ್ಷ ತುಂಬುವ ಹೊತ್ತಿನಲ್ಲಿ ಮೂರು ಕೃಷಿ ಕಾಯಿದೆಗಳನ್ನು ರದ್ದು ಮಾಡುವ ವಚನ ನೀಡಿದ್ದಾರೆ ಪ್ರಧಾನಿ. ’ಛಪ್ಪನ್ನೈವತ್ತಾರು’ ಇಂಚಿನ ಎದೆಗಾರಿಕೆಯ ಪ್ರಧಾನಿ ತಾವು ಆಡಿರುವ ಈ ನುಡಿಯನ್ನು ನಿರ್ವಂಚನೆಯಿಂದ ನಡೆಸಿಕೊಡಲಿ. ಮುಂಬರುವ ದಿನಗಳಲ್ಲಿ ಇವೇ ಕಾಯಿದೆಯ ಅನಿಷ್ಟಗಳು ಛದ್ಮ ವೇಷ ಹೊದ್ದು ಪ್ರತ್ಯಕ್ಷವಾಗದಿರಲಿ. ಒಂದು ಸಂದೇಹವನ್ನು ಮೋದಿಯವರು ಮತ್ತು ಅವರ ಪಕ್ಷ ನಿವಾರಿಸಬೇಕಿದೆ. ತಮ್ಮ ಮಾತುಗಳ ಕನ್ನಡಿಯಲ್ಲಿ ತಮ್ಮದೇ ಮುಖ ನೋಡಿಕೊಳ್ಳಬೇಕಿದೆ. ದೇಶದ…

ಕನ್ನಡ ಸಾಹಿತ್ಯಕ್ಕೆ ಕೀರ್ತನೆಗಳು ನೀಡಿದ ಕನಕದಾಸರು

-ಜಿ ಕೆ ಹೆಬ್ಬಾರ್ ಶಿಕಾರಿಪುರ ಕನ್ನಡ ಸಾಗಿತ್ಯಕ್ಕೆ ಕೀರ್ತನೆಗಳು ನೀಡಿದ ಕನಕದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ      ಕೊಡುಗೆ ಕೊಟ್ಟವರು ಕನಕದಾಸರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. . ಕನ್ನಡ ಸಾಹಿತ್ಯಕ್ಕೆ ತಮ್ಮದೆ ಕೀರ್ತನೆಗಳ ಮೂಲಕ ಅನರ್ಘ್ಯ…

ಬಗೆ ಬಗೆಯ ಆನಂದ!

ಬಗೆ ಬಗೆಯ ಆನಂದ! ತೈತ್ತಿರೀಯ ಉಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿ ಬಗೆ ಬಗೆಯ ಆನಂದಗಳನ್ನು, ಅವುಗಳ ಅಂತಸ್ಸತ್ತ್ವವನ್ನು ಸೊಗಸಾಗಿ ವಿವರಿಸಲಾಗಿದೆ. ಗುರು ವೈಶಂಪಾಯನನು ಶಿಷ್ಯ ಯಾಜ್ಞವಲ್ಕ್ಯನಿಗೆ ಏಳನೆಯ ಅನುವಾಕದಲ್ಲಿ ಹೀಗೆ ವಿವರಿಸಿದ್ದಾನೆ: ರಸೋ ವೈ ಸಃ. ರಸಗ್ಂ ಹ್ಯೇವಾಯಂ ಲಭ್ಧ್ವಾನಂದೀ ಭವತಿ. ಅವ್ಯಕ್ತಸ್ವರೂಪದ ಪರಮಾತ್ಮನು ವ್ಯಕ್ತಸ್ವರೂಪನಾಗಿ ತನ್ನಿಂದ ತಾನೇ ಆವಿರ್ಭಾವಗೊಂಡನು. ಇಂಥ ಈ ಪರಮಾತ್ಮನೇ ಸಕಲಸ್ವರೂಪದ ‘ರಸ’ ವಾಗಿದ್ದಾನೆ. ಇಂಥ ಪರಮಾತ್ಮನನ್ನು ತಿಳಿಯುವುದರಿಂದ ಮಾತ್ರವೇ ಆನಂದವನ್ನು ಹೊಂದುತ್ತಾನೆ. ಎಂಟನೆಯ ಅನುವಾಕದಲ್ಲಿ “ಸೈಷಾ ಆನಂದಸ್ಯ ಮೀಮಾಂಸಾ ಭವತಿ = ಇದು…

ವಿದೇಶಾಂಗ ಕಾರ್ಯದರ್ಶಿ ಯನ್ನು ಭೇಟಿ ಮಾಡಿದ AISECC ಸದಸ್ಯೆ ಆರತಿ ಕೃಷ್ಣ

ನವದೆಹಲಿ,ನ,22:AISECC(Non profit organization dealing with climate issues) ಯ ಸಲಹಾ ಸಮಿತಿಯ ಸದಸ್ಯೆ ಆರತಿ ಕೃಷ್ಣ ಅವರು ವಿದೇಶಾಂಗ ಕಾರ್ಯದರ್ಶಿ   ಹರ್ಷ ಶ್ರೀಂಗ್ಲ ರವರನ್ನು ಭೇಟಿ ಮಾಡಿ ವಾಯು ಮಾಲಿನ್ಯ ಮತ್ತು ಹೆಚ್ಚಾಗುತ್ತಿರುವ ಹವಾಮಾನ ಸಮಸ್ಯೆಗಳಿಗೆ ಪರಿಹಾರವಾಗಿ ಸ್ಮಾರ್ಟ್ ವಿಲೇಜ್ ಎಂಬ ಪ್ರಸ್ತಾವನೆ ಚರ್ಚಿಸಿದರು. ಭಾರತ-ಅಮೆರಿಕ ದ್ವಿಪಕ್ಷೀಯ ಒಪ್ಪಂದದ ಈ ಯೋಜನೆಯು ಇಂಗಾಲದ ತಟಸ್ಥ ಕೃಷಿ, ಜೈವಿಕ ಅನಿಲ ಉತ್ಪಾದನೆ, ವರ್ಮಿಕಲ್ಚರ್, ಶಾಖದ ಒತ್ತಡ ನಿರೋಧಕ ಬಿತ್ತನೆ, ನೀರಿನ ಸಂರಕ್ಷಣೆ ಮತ್ತು ಮುಂತಾದವುಗಳನ್ನು ಕಾರ್ಯಗತಗೊಳಿಸಲು ಪೂರಕವಾಗಿದೆ.…

ಶೌಕತ್ ಆಲಿಯ ಮುಗ್ದಮನಸ್ಸಿನ ಸುತ್ತಲ ನೆನಪುಗಳು

ಶೌಕತ್ ಆಲಿಯ ಮುಗ್ದಮನಸ್ಸಿನ ಸುತ್ತಲ ನೆನಪುಗಳು… ಅದು ನಾನು ಆರನೇ ತರಗತಿಯಲ್ಲಿದ್ದಾಗಿನ ಸೆಪ್ಟೆಂಬರ್ ತಿಂಗಳ ಒಂದು ದಿನ ಅನ್ನಿಸುತ್ತದೆ, ನಮ್ಮ ಅಂದಿನ ವಿಜ್ಞಾನ ಪಿರಿಯಡ್ ಆ ದಿನದ ಕೊನೇ ಅವಧಿಯಾಗಿತ್ತು. ಪಿರಿಯಡ್ ಮುಗಿಯುದಕ್ಕೆ ಇನ್ನೇನು ಒಂದು ಹದಿನೈದು ನಿಮಿಷ ಬಾಕಿ ಎನ್ನುವಾಗಲೇ ಜವಾನ ತಮ್ಮಯ್ಯ ಒಂದು ಸಣ್ಣಗಾತ್ರದ ನೋಟ್ ಬುಕ್ ನೊಂದಿಗೆ ನಮ್ಮ ತರಗತಿಯ ಒಳಗೆ ಕಾಲಿಟ್ಟ. ತಮ್ಮಯ್ಯನ ನಿರೀಕ್ಷೆಯನ್ನು ನಾವು ದಿನದ ಮೊದಲನೇ ಪಿರಿಯಡ್ ನಿಂದಲೂ ಮಾಡುತ್ತಲೇ ಬಂದಿದ್ದೆವು. ಸಪೂರ ದೇಹದ, ಆರೋಗ್ಯಕರ ಕಂದು ದೇಹವರ್ಣದ,…

ಮಕ್ಕಳ ಸ್ಕೂಲ್‌ಮನೇಲಲ್ವೇ..

ಮಕ್ಕಳ ಸ್ಕೂಲ್‌ಮನೇಲಲ್ವೇ.. ” ನೋಡ್ರಿ ನಮ್ಮ ಹುಡುಗ ಹೆಂಗ ಇಂಗ್ಲೀಷ್‌ಮಾತಾಡುತ್ತೇ..” ” ರೀ ನಮ್ಮ ಹುಡುಗಿ ಮೊಬೈಲ್‌ಹೆಂಗ ಆಪರೇಟ್‌ಮಾಡುತ್ತೆ ಗೊತ್ತಾ..” ” ರೀ ನಮ್ಮ ಹುಡುಗ ನಮ್ಮ ರಿಲೇಟಿವ್ಸ ನೊಳಗೇ ಪಸ್ಟ ಗೊತ್ತಾ..” ಬನ್ನಿ ಬನ್ನಿ ಸಾರ್‌ಲೇ.. ಮಗನ್ನ ಕರಿಯೇ..! ಸರ್‌ನೋಡಿ ಇವನು ಎಲ್‌ಕೆ ಜಿ ಆಗಲೇ ಎಲ್ಲಾ ರೈಮ್ಸ ಹೇಳ್ತಾನೆ.ವರ್ಡ್ಸ ಎಲ್ಲಾ ಹೇಳ್ತಾನೆ.ನೋಡಿ ಟಾರ್ಟಾಯಿಸ್‌ಅಂದ್ರೇನೋ..? ಪಿಕಾಕ್‌ಅಂದ್ರೇನೋ..? ಫೆದರ್‌ಅಂದ್ರೇನೋ..?ಹೀಗೆ ಹೋದವರು ಬಂದವರ ನಡುವೆ ಮಗನನ್ನ ನಿಲ್ಲಿಸಿ ಪ್ರಶ್ನೆಗಳ ಸುರಿಮಳೆಗೈವವರಿಗೆ ಮಗುವಿಗಿಂತಲೂ ತಮ್ಮ ಪ್ರಿಸ್ಟೇಜ್‌ಹೆಚ್ಚಿದ ಖುಷಿ! ಮನೆಯಲ್ಲಿ ಮೊಬೈಲ್‌ಹಿಡಿದರೆ…

ತರಾಸು ಸಂಭಾಷಣೆ ರಚಿಸಿದ ಶಿವಲಿಂಗ ಸಾಕ್ಷಿ ನಟವರಗಂಗಾಧರಗೀತೆ ರಚಿಸಿದಕರೀಂಖಾನ್

ತರಾಸುಸಂಭಾಷಣೆರಚಿಸಿದ ಶಿವಲಿಂಗ ಸಾಕ್ಷಿ ನಟವರಗಂಗಾಧರಗೀತೆ ರಚಿಸಿದಕರೀಂಖಾನ್ ಶಿವಲಿಂಗ ಸಾಕ್ಷಿ:ಪ್ರಸಿದ್ಧ ಕಾದಂಬರಿಕಾರ ತ.ರಾ.ಸು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ ಕಪ್ಪು-ಬಿಳುಪು ಭಕ್ತಿಪ್ರಧಾನಚಿತ್ರ ಶಿವಲಿಂಗಲಿಂಗ ಸಾಕ್ಷಿ ವೀನಸ್ ಫಿಲಂಎಕ್ಸ್‌ಛೇಂಜ್ ಲಾಂಛನದಲ್ಲಿ ೧೯೬೦೬ಲ್ಲಿ ತೆರೆಗೆ ಬಂದಿತು. ಡಿ.ಶಂಕರ್‌ಸಿಂಗ್ ನಿರ್ಮಾಣ ಮಾಡಿದಚಿತ್ರವನ್ನುಅವರೇಚಂದ್ರಮೋಹನ್ ಹೆಸರಿನಲ್ಲಿ ನಿರ್ದೇಶಸಿದರು. ಪ್ರತಿಮಾದೇವಿ, ರಮಾದೇವಿ, ಅಶ್ವತ್, ಉದಯಕುಮಾರ್, ಬಾಲಕೃಷ್ಣ್ಣ, ಚಿತ್ರದಲ್ಲಿ ಅಭಿನಯಿಸಿದರು.ಚಿತ್ರದ ಹಾಸ್ಯ ಸಂಭಾಷಣೆಯನ್ನು ನಟ ಟಿ.ಎನ್.ಬಾಲಕೃಷ್ಣ ಬರೆದರು. ಪಿ.ಶಾಮಣ್ಣ ಸಂಗೀತ ನೀಡಿದಚಿತ್ರದಲ್ಲಿ ಅಳವಡಿಸಿದ್ದ ೯ ಹಾಡುಗಳನ್ನು ಎಸ್.ಕೆ.ಕರೀಂಖಾನ್ ರಚಿಸಿದರು.ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿಚಿತ್ರಚಿತ್ರೀಕರಣಗೊಂಡಿತು.ಕೈಲಾಸದರುದ್ರಕನ್ಯ ಹಾಗೂ ಅವಳ ಪ್ರಿಯಕರ ಶಿವನಿಂದ…

ಪಿಎಮ್ಮೊ ಸಿಎಮ್ಮೊ? ಯಾರು ಸತ್ಯ ಯಾರು ಮಿಥ್ಯ?

ಬಿಟ್ ಕಾಯಿನ್ ಹಗರಣ ರಾಜ್ಯ ಸಕಾರವನ್ನು ಆತಂಕದ ಮಡುವಿಗೆ ದೂಡಿದೆ. ತಪ್ಪು ತಮ್ಮದಲ್ಲ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ಸು ಮನಸ್ಸು ಕದಡಿ ಹೋಗಿರುವ ಜನಕ್ಕೆ ಸಮಾಧಾನ ತರುವಲ್ಲಿ ಸೋಲುತ್ತಿವೆ. ದಿನದಿನವೂ ಹೊಸ ಹೊಸ ಬಗೆಯ ತಿರುವನ್ನು ಪಡೆಯುತ್ತಿರುವ ಪ್ರಕರಣದಲ್ಲಿ ನಿಜ ಆರೋಪಿಗಳಿಗೆ ಶಿಕ್ಷೆ ಆಗುತ್ತದೆಯೇ ಅಥವಾ ಬಹುತೇಕ ಹಗರಣಗಳಂತೆ ಇದೂ ಕೂಡಾ ಗೋರಿಯಲ್ಲಿ ಹೂತು ಹೋಗುತ್ತದೆಯೆ? ಪಿಎಮ್ಮೊ ಸಿಎಮ್ಮೊ? ಯಾರು ಸತ್ಯ ಯಾರು ಮಿಥ್ಯ? ಈ ಪ್ರಶ್ನೆ ಈ ಹೊತ್ತು ಭಾರತದಲ್ಲಿ ಬಹುದೊಡ್ಡ ಸಂಚಲನವನ್ನೇ ಮಾಡುತ್ತಿದೆ.…

ನಿರುದ್ಯೋಗ ಸಮಸ್ಯೆಯ ಮೂಲ ಹುಡುಕಾಟ…

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ನಿರುದ್ಯೋಗ ಸಮಸ್ಯೆ ಕುರಿತು ಬರೆದಿದ್ದಾರೆ. ನಿರುದ್ಯೋಗ ಸಮಸ್ಯೆಯ ಮೂಲ ಹುಡುಕಾಟ… ನಿರುದ್ಯೋಗ ಸಮಸ್ಯೆ ಕುರಿತು ಕಳೆದ ಎರಡು ಕಂತುಗಳ ಹಲವಾರು ಮಾಹಿತಿಗಳನ್ನು ತಿಳಿಸಲಾಗಿತ್ತು…

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ: ಎಕ್ಸ್‌ಕ್ಲೂಸಿವ್ ಅಥವಾ ಇನ್‌ಕ್ಲೂಸಿವ್?

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ: ಎಕ್ಸ್‌ಕ್ಲೂಸಿವ್ ಅಥವಾ ಇನ್‌ಕ್ಲೂಸಿವ್? -ಮಾನಸ,ಬೆಂಗಳೂರು.        ಉದಾರೀಕರಣದ ನಂತರದ ಭಾರತವು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹೊಸ ಮಧ್ಯಮ ವರ್ಗದ ಹೊರಹೊಮ್ಮುವಿಕೆಯನ್ನು ಕಂಡಿತು.  ಈ ಹೊಸ ಮಧ್ಯಮ ವರ್ಗವು ಮೆಟ್ರೋಪಾಲಿಟನ್ ನಗರಗಳಿಗೆ ಸೇರಿತು ಅಥವಾ ಉತ್ತಮ ಭವಿಷ್ಯಕ್ಕಾಗಿ ಗಲ್ಫ್ ದೇಶಗಳಿಗೆ ದಾರಿ ಮಾಡಿಕೊಟ್ಟಿತು.  ಎರಡೂ ವಿದ್ಯಮಾನವು ರವಾನೆ ಆರ್ಥಿಕತೆಯ ಪರಿಕಲ್ಪನೆಯನ್ನು ಸೃಷ್ಟಿಸಿತು, ಇದು ಇಡೀ ಮುಸ್ಲಿಂ ಸಮುದಾಯದ ಒಳಿತಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿಕೊಳ್ಳುವ ಅನೇಕ ಗುಂಪುಗಳನ್ನು ಹುಟ್ಟುಹಾಕಿತು. …

ನಿವೃತ್ತರಾಗಿಬಿಡಬೇಕಿತ್ತು  ಜವಾಹರಲಾಲ ನೆಹರೂ

ನಿವೃತ್ತರಾಗಿಬಿಡಬೇಕಿತ್ತು  ಜವಾಹರಲಾಲ ನೆಹರೂ ತಾಯಿ ಭಾರತಿಯ ಹೆಮ್ಮೆಯ ಪುತ್ರ ರತ್ನವೆಂದು ನರೇಂದ್ರ ಮೋದಿಯವರನ್ನೂ,  ಜವಾಹರಲಾಲ್ ನೆಹರೂ ಎಂದರೆ ಯಾರದು ಎಂದು ಕೇಳುವಂತಹ ಭವಿತವ್ಯವನ್ನೂ ಜೊತೆ ಜತೆಗೆ ರೂಪಿಸುವ ಘನ ಪ್ರಯತ್ನ ದೇಶದಲ್ಲಿ ಹಗಲಿರುಳು ಜರುಗಿದೆ. ಅವರ ತಪ್ಪುತಡೆಗಳನ್ನಷ್ಟೇ ಎತ್ತಿ ಭೂತಗಾಜಿನಡಿ ಇರಿಸಿ ತೋರಲಾಗುತ್ತಿದೆ. ತಪ್ಪುಗಳ ಮಾಡದಿರುವ ನಾಯಕನಿದ್ದಾನೆಯೇ? ಅವರು ಮಾಡಿದ ದೊಡ್ಡ ತಪ್ಪುಗಳ ಪೈಕಿ ದೀರ್ಘಕಾಲ ಅಧಿಕಾರಕ್ಕೆ ಅಂಟಿಕೊಂಡದ್ದೂ ಒಂದು. ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಕಾಂಗ್ರೆಸ್ ಸಮಾಜವಾದೀ ಹಾದಿಯಲ್ಲಿ ನಡೆಯಬೇಕಿದೆ ಎಂಬ ಮಾತನ್ನು ನೆಹರೂ 1930ರಲ್ಲೇ…

ನಕಲಿ ಛಾಪಾ ಕಾಗದದ ನೆಟ್ವರ್ಕ್ ಜಾಲ  ರೀ ಆಕ್ಟೀವ್..!

writing-ಪರಶಿವ ಧನಗೂರು ನಕಲಿ ಛಾಪಾ ಕಾಗದದ ನೆಟ್ವರ್ಕ್ ಜಾಲ  ರೀ ಆಕ್ಟೀವ್ ದೇಶದ ಆರ್ಥಿಕತೆಯನ್ನೆ ಬುಡಮೇಲು ಮಾಡಲು ಹೊರಟಿದ್ದ, ಭಾರತವನ್ನೇ ಬೆಚ್ಚಿ ಬೀಳಿಸಿದ್ದ ಬಹುಕೋಟಿ ಛಾಪಾ ಕಾಗದದ ಹಗಹರಣವೂ 2001ರಲ್ಲಿ ಬೆಳಕಿಗೆ ಬಂದದ್ದು ಬೆಂಗಳೂರಿನಲ್ಲೇ! ಸುಮಾರು ಹತ್ತು ವರ್ಷಗಳ ಕಾಲ ಸಿಬಿಐ ಮತ್ತು ಹಲವು ರಾಜ್ಯಗಳ ಪೊಲೀಸರಿಂದ ತನಿಖೆ ಗೊಳಪಟ್ಟಿದ್ದ 20.000 ಕೋಟಿ ರೂಪಾಯಿಗಳ ಮೌಲ್ಯದ ಈ ನಕಲಿ ಛಾಪಾ ಕಾಗದದ ಹಗಹರಣದ ರೂವಾರಿ ಬೆಳಗಾವಿ ಜಿಲ್ಲೆಯ ಖಾನಾಪುರ ಮೂಲದ ಅಬ್ದುಲ್ ಕರೀಂ ಲಾಲಾ ತೆಲಗಿ.…

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ‌ಘೋಷಣೆ

ಬೆಂಗಳೂರು,ನ,16:  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ  ಇಂದು ನಡದ ಪನೀತ್ ನಮನ ಕಾರ್ಯಕ್ರರಮದಲ್ಲಿ ಘೋಷಿಸಿದರು ಮುಂದುವರೆದು ಮಾತನಾಡಿದ ಬೊಮ್ಮಾಯಿ   ಹಾಗೆಯೇ ಡಾ.ರಾಜ್ ಕುಮಾರ್ ಸ್ಮಾರಕದಂತೆಯೇ ಅಪ್ಪು ಸ್ಮಾರಕ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ನಾನು ಬಾಲ್ಯದಿಂದ ಪುನೀತ್ ರಾಜ್ ಕುಮಾರ್  ನೋಡಿದ್ದೇನೆ. ಅವರು ನಮಗೆ ಬಹಳ ಆತ್ಮೀಯರಾಗಿದ್ದರು.  ಬಾಲ ನಟನಿದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದರು.  ಇಂತಹ ಕಾರ್ಯಕ್ರಮ ಮಾಡುತ್ತೇವೆ ಎಂದುಕೊಂಡಿರಲಿಲ್ಲ.…

ಇಂದು ಪುನೀತ್ ನುಡಿನಮನ ಕಾರ್ಯಕ್ರಮ

ಬೆಂಗಳೂರು,ನ,೧೬: ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ನಮನ ಸಲ್ಲಿಸಲಿದೆ ಇಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಜ್ಜಾಗಿದ್ದು ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಆರು ಗಂಟೆಯವರೆಗೂ ನಡೆಯಲಿದೆ ಪುನೀತ್ ನಮನ ಕಾರ್ಯಕ್ರಮದ ರೂಪು-ರೇಷೆಗಳು ಈಗಾಗಲೇ ಫೈನಲ್ ಆಗಿದೆ. ಡಾ. ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ ಗುರುಕಿರಣ್ ರಾಗ ಸಂಯೋಜಿಸಿದ್ದಾರೆ. ಈ ಗೀತೆಯ ಮೂಲಕವೇ ಪುನೀತ್ ನಮನ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಯಾಂಡಲ್‌ವುಡ್…

ಮುಧೋಳ ತಾಲ್ಲೂಕಿನಲ್ಲಿ 6 ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಮಂಜೂರು

ಬೆಂಗಳೂರು,ನ,15: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ 400 ಕಿಲೋ ವ್ಯಾಟ್ನ 1 ವಿದ್ಯುತ್ ಸ್ವೀಕರಣಾ ಕೇಂದ್ರ ಮತ್ತು 110 ಕಿಲೋ ವ್ಯಾಟ್ ಸಾಮಾರ್ಥ್ಯದ 5 ಒಟ್ಟು 6 ವಿದ್ಯುತ್ ವಿತರಣಾ ಕೇಂದ್ರಗಳನ್ನು ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಅನುಮೋದನೆ ನೀಡಿದೆ. ಲೋಕಾಪೂರದಲ್ಲಿ 400 ಕಿ.ವ್ಯಾ ಸಾಮಾರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರ ನಿರ್ಮಾಣವಾಗಲಿದ್ದು, ಹೆಬ್ಬಾಳ, ಮುಗಳಖೋಡ, ಮಾಚಕನೂರು, ಮಲ್ಲಾಪೂರ ಮತ್ತು ಮಂಟೂರು ಕ್ರಾಸ್ಗಳಲ್ಲಿ 110 ಕಿ.ವ್ಯಾ ಸಾಮಾರ್ಥ್ಯದ 5 ವಿದ್ಯುತ್ ವಿತರಣಾ ಕೇಂದ್ರಗಳು ಒಟ್ಟು 60.25 ಕೋಟಿ ರೂ.…

ನದಿಗಳ ಜೋಡಣೆ: ರಾಜ್ಯಗಳಿಗೆ ನೀರು ಹಂಚಿಕೆ ನಂತರ ಡಿಪಿಆರ್- ರಾಜ್ಯದ ಮನವಿ ಪರಿಗಣಿಸಲು ಅಮಿತ್ ಷಾ ಸೂಚನೆ

ಬೆಂಗಳೂರು, ನ,15:ಗೋದಾವರಿ, ಕೃಷ್ಣಾ, ಕಾವೇರಿ ಮತ್ತು ಪಾಲಾರ್ ನದಿ ಜೋಡಣೆ ಡಿಪಿಆರ್ ಸಿದ್ಧ ಪಡಿಸುವ ಮುನ್ನ ರಾಜ್ಯಗಳ ನೀರಿನ ಹಂಚಿಕೆ ಆಗಬೇಕೆಂದು ರಾಜ್ಯ ಸಲ್ಲಿಸಿರುವ ಅಹವಾಲು ಪರಿಗಣಿಸಿ, ಮುಂದುವರೆಯುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಸೂಚನೆ ನೀಡಿದ್ದಾರೆ. ನವೆಂಬರ್ 14ರಂದು ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಪರಿಷತ್ ಸಭೆಯಲ್ಲಿ ಭಾಗವಹಿಸಿ, ಬೆಂಗಳೂರಿಗೆ ಹಿಂದಿರುಗಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಈ ಮಾಹಿತಿ ನೀಡಿದರು.…

ಸಾಹಿತಿ ದೇವು ಪತ್ತಾರ್ ಗೆ ವಿ.ಕೃ. ಗೋಕಾಕ್ ಫೇಲೋಶಿಫ್ ಪ್ರಶಸ್ತಿ

ಬೆಂಗಳೂರು,ನ,15:ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಕೊಡಮಾಡುವ ವಿ. ಕೃ. ಗೋಕಾಕ್ ಫೇಲೋಶಿಫ್ ಗೆ 2021ನೆಯ ಸಾಲಿನಲ್ಲಿ ’ಬುಕ್ ಬ್ರಹ್ಮ’ ಪ್ರಧಾನ ಸಂಪಾದಕ, ಸಾಹಿತಿ ದೇವು ಪತ್ತಾರ ಹಾಗೂ ಪತ್ರಕರ್ತೆ, ಲೇಖಕಿ ವಿದ್ಯಾರಶ್ಮಿ ಆಯ್ಕೆಯಾಗಿದ್ದಾರೆ. ‘ಗೋಕಾಕರ ಮುನ್ನುಡಿಗಳ ಅಧ್ಯಯನಕ್ಕಾಗಿ ದೇವು ಪತ್ತಾರ ಮತ್ತು ‘ಗೋಕಾಕರನ್ನು ಕುರಿತ ಕವಿತೆಗಳ ಅಧ್ಯಯನಕ್ಕಾಗಿ ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ ಗೋಕಾಕ್ ವಾಙ್ಮಯ ಟ್ರಸ್ಟ್ ನೀಡುವ ಪ್ರತಿಷ್ಠಿತ ವಿ. ಕೃ. ಗೋಕಾಕ್ ಫೆಲೋಶಿಫ್‌ನ್ನು ನೀಡಲಾಗಿದೆ. ಪ್ರಶಸ್ತಿಯು 10,000 ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಟ್ರಸ್ಟ್‌ನ…

ಶರಿಯಾದ ಆಯ್ದ ವ್ಯಾಖ್ಯಾನ: ದಿ ನ್ಯೂ ವರ್ಸಸ್ ದಿ ಓಲ್ಡ್ ತಾಲಿಬಾನ್

-ಮಾನಸ,ಬೆಂಗಳೂರು ಶರಿಯಾದ ಆಯ್ದ ವ್ಯಾಖ್ಯಾನ: ದಿ ನ್ಯೂ ವರ್ಸಸ್ ದಿ ಓಲ್ಡ್ ತಾಲಿಬಾನ್ ಶರಿಯಾ ವಿಭಿನ್ನ ವ್ಯಾಖ್ಯಾನಗಳಿಗೆ ಸಾಕಷ್ಟು ನಮ್ಯತೆಯನ್ನು ಒದಗಿಸುತ್ತದೆ. ಈ ಹಿಂದೆ, ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿದ್ದಾಗ, ಅವರು ಶರಿಯಾ ಕಾನೂನನ್ನು ಜಾರಿಗೊಳಿಸುವ ವೇಷದಲ್ಲಿ, ಮಹಿಳೆಯರನ್ನು ಮನೆಯಲ್ಲಿಯೇ ಇರುವಂತೆ ಒತ್ತಾಯಿಸಿದರು ಮತ್ತು ಅವರು ಮನೆಯಿಂದ ಹೊರಗೆ ಹೋಗುತ್ತಿದ್ದರೆ ಅವರನ್ನು ಪುರುಷನ ಬೆಂಗಾವಲು ಮಾಡಿ, ಆ ಮೂಲಕ ಮುಕ್ತ ಸಂಚಾರವನ್ನು ನಿರ್ಮೂಲನೆ ಮಾಡಿದರು ಮತ್ತು ಮಹಿಳಾ ಶಿಕ್ಷಣಕ್ಕೆ ಅಪಾಯವನ್ನುಂಟುಮಾಡಿದರು. ಮುಸ್ಲಿಂ ನ್ಯಾಯಶಾಸ್ತ್ರಜ್ಞರು…

ನಿರುದ್ಯೋಗ ಸಮಸ್ಯೆಗೆ ವ್ಯವಸ್ಥೆ ಬದಲಾವಣೆ ಅಗತ್ಯ

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ನಿರುದ್ಯೋಗ ಸಮಸ್ಯೆ ಕುರಿತು ಬರೆದಿದ್ದಾರ ನಿರುದ್ಯೋಗ ಸಮಸ್ಯೆಗೆ ವ್ಯವಸ್ಥೆ ಬದಲಾವಣೆ ಅಗತ್ಯ ನಾನು, ಹಿಂದಿನ ಲೇಖನದಲ್ಲಿ, ಮನೋಸ್ಥಿತಿ ನಿರ್ಮಾಣಕ್ಕೆ ನಾವು ಸೇವಿಸುವ ವಿಷಯ…

1 63 64 65 66 67 126
Girl in a jacket