Browsing: Featured

Flash News

ಗುರು

      ಸಿದ್ಧಸೂಕ್ತಿ :                                                                                    ಗುರು. ಜ್ಞಾನದಾತಾ.ವೀರಶೈವ ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಅರಿವೇ ಗುರು. ಒಂದಕ್ಷರ ಕಲಿಸಿದಾತ, ಒಂದಿನಿತು ಜ್ಞಾನ ನೀಡಿದಾತ. ಗುರುತರ ಹೊಣೆಗಾರ. ಎಲ್ಲರಿಗೂ ಶ್ರೇಷ್ಠ, ಎಲ್ಲರಿಗೂ ಬೇಕು! ಗುರುವಿದ್ದರೆ ಗುರಿ, ಇಲ್ಲದಿದ್ದರೆ ಕುರಿ! ಗುರುಗಳನೇಕರು. ನಿಜಗುಣ ಶಿವಯೋಗಿಗಳ ಪ್ರಕಾರ ಆರು ವಿಧ. ಹಣ ಕೀಳುವ ಗುರುಗಳು ಬಹಳ. ಹೃದಯ-ಭವತಾಪ ಕಳೆಯುವ ಗುರು ವಿರಳ. ಕಳ್ಳತನ ಕಲಿಸಿದರೆ ಕಳ್ಳ ಗುರು. ಒಳಿತನ್ನು ಕಲಿಸಿದರೆ ಉತ್ತಮ ಗುರು. ಆತ್ಮ ವಿದ್ಯೆಯನ್ನು ಧಾರೆಯೆರೆದು ಮುಕ್ತಿಸುಖವನ್ನು ಉಣಿಸಿ ಜನ್ಮ…

ಪ್ರಸಾದ

ಸಿದ್ಧಸೂಕ್ತಿ : ಪ್ರಸಾದ. ದೇವರಿಗೆ ನೈವೇದ್ಯ ಮಾಡಿ ಸ್ವೀಕರಿಸುವ, ಗುರು ಹಿರಿಯ ಅರ್ಚಕ ನೀಡುವ, ಹೂ ಹಣ್ಣು ಕಾಯಿ ಅನ್ನ ಪ್ರಸಾದ. ದೇವಸ್ಥಾನ ಮಠ ಮಂದಿರಾದಿಗಳಲ್ಲಿನ ಶುದ್ಧ ತ್ಯಾಗ ಭಾವದಿಂದ ಮಾಡುವ, ಭಿಕ್ಷಾಟಣೆಯಿಂದ ಸಂಗ್ರಹಿಸಿದ ದಾಸೋಹ ಭೋಜನ.ಭಗವಂತನ, ಗುರು ಹಿರಿಯರ ಅನುಗ್ರಹದಿಂದ ಪ್ರಾಪ್ತವಾದುದನ್ನು ಅವರಿಗರ್ಪಿಸಿ ಅವರ ಸ್ಮರಣೆಯೊಂದಿಗೆ ಸೇವಿಸುವ ಪ್ರಸಾದದಿಂದ ಶರೀರ ಪವಿತ್ರ! ಮನಸ್ಸು ಪ್ರಸನ್ನ! ಇದು ಸರ್ವದುಃಖಗಳನ್ನೂ ನಾಶಗೊಳಿಸುವುದು. “ನೈವೇದ್ಯ ಮಾಡದೇ, ಪರರಿಗೆ ಅರ್ಪಿಸದೇ ತನಗಾಗಿ ಬೇಯಿಸಿಕೊಂಡು ಉಣ್ಣುವವ ಪಾಪ ಉಂಡಂತೆ, ಅವನು ಕಳ್ಳ!”…

ತೀರ್ಥದ ಪ್ರಯೋಜನ

‌‌‌                   ಸಿದ್ಧಸೂಕ್ತಿ :                        ತೀರ್ಥದ ಪ್ರಯೋಜನ ತೀರ್ಥ =ಪವಿತ್ರ, ಪುಣ್ಯಕ್ಷೇತ್ರ, ನದೀ ಕೆರೆ ಕಲ್ಯಾಣಿ, ದೇವರ ತೀರ್ಥ, ಪಾದೋದಕ ಇತ್ಯಾದಿ.ತಾಪ ದುಃಖ ಕಷ್ಟಗಳನ್ನು ದಾಟಿಸುವುದು ತೀರ್ಥ. ಸಂಸಾರ ಸಾಗರ ಮುಳುಗಿಸುವುದು. ಪುಣ್ಯ ಕ್ಷೇತ್ರಗಳ ಕೆರೆ ಕಲ್ಯಾಣಿಗಳ ಸ್ನಾನ ದೇಹ ಕೊಳೆ ತೊಳೆಯುವುದು, ಮನ ಮಾಲಿನ್ಯ ತೆಗೆದು ಭಾವ ಶುದ್ಧಗೊಳಿಪುವುದು. ಕಷ್ಟ…

ಬಾಯಿ ಬಿಟ್ಟರೆ ಬಣ್ಣಗೇಡಿ

ಸಿದ್ಧಸೂಕ್ತಿ :                  ಬಾಯಿ ಬಿಟ್ಟರೆ ಬಣ್ಣಗೇಡಿ. ಮಾತನಾಡಿದರೆ ಮರ್ಯಾದೆ ಹೋಯಿತು. ಮಾತು ಮಾಣಿಕ್ಯ-ಜ್ಯೋತಿರ್ಲಿಂಗ-ಬೆಳಕು.ಮಾನವನಿಗೆ ದೇವ ನೀಡಿದ ವರದಾನ. ಮಾತಿಲ್ಲದಿರೆ ಜಗ ಕತ್ತಲೆ. ಮಾತು ಸಂಬಂಧ ಬೆಳೆಸುವುದು, ಹಣ ಗಳಿಸುವುದು. “ನಾನಿರುವೆ” ಎಂಬೊಂದಭಯ ಮಾತು ಜೀವ ಉಳಿಸುವುದು! ಮಾತು ಅರಿತಾಡಬೇಕು. ಮಾತಿನ ಮರ್ಮವರಿಯದೇ ಎಲುಬಿಲ್ಲದ ನಾಲಿಗೆ ವಿರಾಮ-ಸಂಬಂಧವಿರದ ಬಿಟ್ಟಿ ಮಾತನು ಸುರಿಸುವುದು. ಕೆಲವರದು ಬಾಯಿ ತೆರೆದರೆ ಏಕವಚನ, ಅಶ್ಲೀಲ ಮಾತು, ಚುಚ್ಚಿ ಸಾಯಿಸುವ ಬಿರುನುಡಿ! ಅಂಥವರೆದುರು…

ಗೌರವವೇ ಮುನುಷ್ಯನ ಮುಖಟ ಪ್ರಾಯ

ಸಿದ್ಧಸೂಕ್ತಿ                                ಗೌರವ ಗುರೋಃ ಭಾವಃ ಗೌರವಂ=ಗುರು ಹಿರಿಯ ಬಂಧು ಮಿತ್ರ ಹಿತೈಷಿ ವಸ್ತು ಶ್ರೇಷ್ಠ ಎಂದು ತೋರುವ ಸದ್ಭಾವ. ಇದು ಭಾವನಾತ್ಮಕ. ಹಣ ವಸ್ತುಗಳಿಂದ ಅಳೆಯಲಾಗದು. ಗಳಿಸುವುದು ನೀಡುವುದು ಕಷ್ಟ. ಕಳೆಯುವುದು ಕಳೆದುಕೊಳ್ಳುವುದು ಸುಲಭ! ಹೆಸರು ಸಣ್ಣಕ್ಷರ/ ದಪ್ಪಕ್ಷರದಲ್ಲಿರಬಹುದು, ಮೇಲಿರಬಹುದು ಕೆಳಗಿರಬಹುದು. ಹಾರ ಶಾಲು ದೊಡ್ಡ /ದುಬಾರಿಯದ್ದಿರಬಹುದು, ಸಣ್ಣ /ಅಗ್ಗದ್ದಿರಬಹುದು,ಇಲ್ಲದೆಯೂ ಇರಬಹುದು. ಅದು ಮುಖ್ಯವೆನಿಸದು!…

ಎಲ್ಲೋ ಇರಬೇಕಿತ್ತು!

ಸಿದ್ದಸೂಕ್ತಿ ಎಲ್ಲೋ ಇರಬೇಕಿತ್ತು! ಆಗಾಗ ವರು ನನಗೆ ಹೇಳುವರು, “ನೀವು ಎಲ್ಲೋ ಇರಬೇಕಿತ್ತು. ವಿದ್ಯೆ, ಕಾನೂನು ಆಡಳಿತ ಲೋಕಾನುಭವ ಅರಿವು, ಮಾತು ಬರಹ ಜಾತಿ ಏನೆಲ್ಲ ಉಂಟು! ಕುಲಪತಿ ಅಧಿಕಾರಿ ಮಂತ್ರಿ ಜಗದ್ಗುರುವಾಗಬೇಕಿತ್ತು. ಏನಿಲ್ಲದಂತೆ ಇರುವಿಕೆ! ಕಸ, ಅಡುಗೆ, ಜನ-ಹಸು ಸೇವೆ, ಗಾರೆ ಸಹಾಯ, ವಾಹನ ಚಾಲನೆ, ಬರಹ ಓದು ಪಾಠ ಪ್ರವಚನ ಸಂಘಟನೆ ಎಲ್ಲಕ್ಕೂ ನೀವೇ!” ಕಾಲಿಗೊಬ್ಬ ಕೈಗೊಬ್ಬ, ಬೆಳ್ಳಿ ಬಂಗಾರದ ಎತ್ತರದ ಪೀಠ ಸಿಂಹಾಸನ, ಝಗ ಝಗಿಸುವ ವೇಷ ಭೂಷಣ, ಮುಗಿಬಿದ್ದ ಜನ…

  ಸಿದ್ಧಸೂಕ್ತಿ ;ಅಮೃತ.

                                                                                 ಸಿದ್ಧಸೂಕ್ತಿ-ಅಮೃತ. ಸಾಯದಿರುವುದು ಸಾವಿಲ್ಲದ್ದು ಸಾವನ್ನು ದೂರ ದೂಡುವುದು ಅಮೃತ. ಸಮುದ್ರ ಮಥನದಿಂದ ದೊರೆತುದು ಅಮೃತ, ಅದನ್ನು ಕುಡಿದ ದೇವತೆಗಳು ಅಮರರು. ಇದು ಪೌರಾಣಿಕ ಕಾಲ್ಪನಿಕ. ಕಠಿಣ ಪರಿಶ್ರಮದ ಆರಂಭದಲ್ಲಿ ಕಹಿ ಫಲ, ಮುಂದುವರೆದಲ್ಲಿ ಸಿಹಿ ಫಲ, ಅದರಿಂದ ತೃಪ್ತಿ! ಇದು ಸತ್ಯ ತತ್ತ್ವ! ಕುಡಿಯಲು ಬಾಯುಂಟು, ಕಡೆಯಲು ಕೈ ಕಾಲುಂಟು! ಹುಟ್ಟಿದ್ದು ತೋರಿದ್ದು ನಾಮ ರೂಪದ್ದು ಅಳಿಯಲೇಬೇಕು! ಅದ್ಹೇಗೆ ಅಮರರು? ದೀರ್ಘ ಬಾಳಿಕೆಯೇ ಅಮರತ್ವ! ಚಿರಕಾಲ ಹೆಸರುಳಿಸುವ ಸಾಧನೆಗೈದವರು ರಾಜ ಮಹಾರಾಜರು ಸಂತ ಮಹಾತ್ಮರು…

ಅಳಿಯ ಮನೆಯ ತೊಳಿಯ

ಸಿದ್ಧಸೂಕ್ತಿ :                  ಅಳಿಯ ಮನೆಯ ತೊಳಿಯ. ಅಳಿಯನಾದವನು ಮಾವನ ಮನೆಯ ಸ್ವಚ್ಛ ತೊಳೆಯುವನು ಖಾಲಿಗೊಳಿಸುವನು ಎಲ್ಲ ಬಾಚುವನು. ವರದಕ್ಷಿಣೆ ಮದುವೆ ಖರ್ಚು ಆ ಈ ನೆಪದಲಿ ಹಣ ಆಸ್ತಿ ವಸ್ತ್ರ ಆಭರಣ ವಾಹನ ವಗೈರೆ ಕೀಳುವನು ಸುಲಿಗೆ ಮಾಡುವನು! ಇಲ್ಲದಿರೆ ಹೆಂಡತಿಗೆ ಪರಿ ಪರಿ ಹಿಂಸೆ ನಿಂದನೆ ತವರುಮನೆಯ ವಾಸ! ಗಂಡನ ಮನೆಯ ಗಂಡು ಹೆಣ್ಣುಗಳೂ ಅಲ್ಲಿ ಶಾಮೀಲು! ಪತಿ ಕುಡುಕನಾದರಂತೂ ಕಥೆ ಮುಕ್ತಾಯ!…

ಬಾಯಾಗ ಬಸಪ್ಪ ಹೊಟ್ಯಾಗ ವಿಷಪ್ಪ!

ಸಿದ್ಧಸೂಕ್ತಿ : ಬಾಯಾಗ ಬಸಪ್ಪ ಹೊಟ್ಯಾಗ ವಿಷಪ್ಪ(ಹೊರಗ ಬಸಪ್ಪ ಒಳಗ ವಿಷಪ್ಪ) ಬಾಯಲ್ಲಿ ಬಸವ! ಶಿವ! ಹರಿ! ವಿಷ್ಣು! ಗೋವಿಂದ! ರಾಮ! ಕೃಷ್ಣ! ಎಂದು ಜಪಿಸುವರು ಹಲರು! ಅಂತರಂಗವೂ ಹಾಗಿದ್ದರೆ ಬಲು ಚೆನ್ನ! ಅಂಥವರ ತನು ಭಾವ ಶುದ್ಧ! ಹಾಗಿರರು ಕೆಲರು. ಹೊರಗೆ ಗುರು ದೇವರ ಜಪಃ! ಒಳಗೆ ವಿಷ ಸಂಚಿನ ತಪಃ! ತೋರಿಕೆಗೆ ಮಠ ಮಂದಿರ ಮಸೀದಿ ಚರ್ಚ್ ಗೆ ನುಗ್ಗುವರು, ತಲೆ ಬಾಗುವರು. ಕುಂಕುಮ ಟೋಪಿ ಶಿಲುಬೆ ವೇಷ ಧರಿಸುವರು, ಪೂಜೆ…

ಬಡವನ ಸಿಟ್ಟು ದವಡೆಗೆ ಮೂಲ

ಸಿದ್ಧಸೂಕ್ತಿ :             ಬಡವನ ಸಿಟ್ಟು ದವಡೆಗೆ ಮೂಲ. ಬಡವ= ಹಣ ಅಧಿಕಾರ ಶಕ್ತಿ ಬೆಂಬಲ ಇಲ್ಲದವ, ದುಡಿಯುವವ. ಸಿರಿವಂತ ತದ್ವಿರುದ್ಧ. ಬಡವ ಸಿರಿವಂತ ಪ್ರವಾಹದ ವಿರುದ್ಧ ಸಿಟ್ಟಾಗಿ ತಿರುಗಿಬಿದ್ದರೆ, ಸಿರಿವಂತನು ಬಡವನ ವಿರುದ್ಧ ಕೋಪದಿ ದವಡೆಹಲ್ಲ ಕಡಿಯುವನು. ಬಡವನ ಸೋಲು ಖಚಿತ. ಬಡವ ಸಿಟ್ಟಾಗದೇ ದೌರ್ಜನ್ಯ ಸಹಿಸಬೇಕೆಂದಿಲ್ಲ. ದೌರ್ಬಲ್ಯವನ್ನು ಕಿತ್ತೆಸೆಯಬೇಕು. ಬಲಿಷ್ಠರಾಗಬೇಕು, ಅಲ್ಲಿಯವರೆಗೆ ತಾಳಬೇಕು. ಸಿಟ್ಟು ಉತ್ತಮ ಫಲ ನೀಡುವಂತೆ ಸಜ್ಜಾಗಬೇಕು. ಬುದ್ಧಿಶಕ್ತಿ ಹಣ ಅಧಿಕಾರ ಜನಬಲ…

ಆಮೇಲೆ ಕಚ್ಚಾಟ ಮೇಲು ಕೀಳೆಂದು

ಸಿದ್ಧಸೂಕ್ತಿ :      ಆಮೇಲೆ ಕಚ್ಚಾಟ ಮೇಲು ಕೀಳೆಂದು. ಕುವೆಂಪುರವರ ಈ ಮಾತು ಮಾರ್ಮಿಕ! ನಾನು ಈ ಜಾತಿಯವ. ನೀನು ಆ ಜಾತಿಯವ. ನನ್ನ ಜಾತಿ ಶ್ರೇಷ್ಠ. ನಿನ್ನ ಜಾತಿ ಕನಿಷ್ಠ. ನನ್ನ ಧರ್ಮ ಸರಿ. ನಿನ್ನದು ಧರ್ಮವೇ ಅಲ್ಲ. ನನ್ನ ದೇವರೇ ದೊಡ್ಡವ! ಹೀಗೆ ನಡೆದಿದೆ ವಾದ ದ್ವೇಷ ರಕ್ತಪಾತ! ಬ್ರಾಹ್ಮಣನು ಹುಟ್ಟುವಾಗ ಜನಿವಾರವಿಲ್ಲ. ಲಿಂಗಾಯತ ಹುಟ್ಟುವಾಗ ಲಿಂಗ ಶಿವದಾರವಿಲ್ಲ. ಕ್ರೈಸ್ತ ಮುಸ್ಲಿಂ ಯಾರೇ ಆಗಲಿ ಹುಟ್ಟುವಾಗ ಎಲ್ಲ ಬೆತ್ತಲೆ! ದೇಹ ಅಂಗಾಂಗ…

ಪಾಲಿಗೆ ಬಂದದ್ದು ಪಂಚಾಮೃತ

ಸಿದ್ಧಸೂಕ್ತಿ :                  ಪಾಲಿಗೆ ಬಂದದ್ದು ಪಂಚಾಮೃತ. ನ್ಯಾಯ – ಪರಿಶ್ರಮದಿಂದ ದೊರೆತದ್ದು ಪಂಚಾಮೃತ.ಇಲ್ಲದ್ದರ ಕೊರಗಿಗಿಂತ ಇರುವುದರ ತೃಪ್ತಿ ಮೇಲು. ಅರಸನೊಬ್ಬ ಮಕ್ಕಳಿಲ್ಲವೆಂದು ಸೊರಗಿದ. ಅನಾಥ ಬಡ ಹುಡುಗನೊಬ್ಬ ಪ್ರಕೃತಿ ಸೊಬಗ ಸವಿದು ಮನದುಂಬಿ ಹಾಡಿದ! ತೃಪ್ತಿ ಮಾನಸಿಕ. ವಸ್ತು ಪ್ರೇರಕ. ವಸ್ತು ತೃಪ್ತಿಯಲ್ಲ. ಒಂದರಂತೆ ಒಂದು, ಒಬ್ಬರಂತೆ ಒಬ್ಬರು ಇಲ್ಲ ಜಗದಲಿ.ಚೆಲುವು, ವಿದ್ಯೆ, ಆಸ್ತಿಗಳಲಿ ಏರುಪೇರಿದ್ದರೂ ಹೊಂದಿಕೆಯ ಕುಟುಂಬದ ತೃಪ್ತಿ ಅಪಾರ! ಅಂಬಲಿ ಉಣ್ಣುವ…

ನಾ ನಿನಗಾದರೆ,ನೀ ನನಗೆ

ಸಿದ್ಧಸೂಕ್ತಿ :                   ನಾ ನಿನಗಾದರೆ, ನೀ ನನಗೆ. ನೀ=ನೀ, ಪರ, ಸಮಾಜ. ಪರಸ್ಪರ ಸಹಕಾರ ಜಗದ ಅಗತ್ಯ.ಕಿವಿ ಕೇಳುವುದು, ಕಣ್ಣು ನೋಡುವುದು, ಬಾಯಿ ಮಾತನಾಡುವುದು, ಕಾಲು ಹೋಗುವುದು,ಕೈ ತೆಗೆದುಕೊಳ್ಳುವುದು. ಪರಸ್ಪರ ಸಹಕಾರ ಇಲ್ಲದಿರೆ ಇವು ನಡೆಯವು. ಕಿವಿ ಅಹಂಕಾರಿಯಾದರೆ, ಕಣ್ಣೆತ್ತಿ ನೋಡದು, ಕಾಲು ಹೊರಡದು! ಬೆರಳುಗಳು ಹೇಳುತ್ತವೆ “ಹಿರಿ ಕಿರಿದಾದರೂ ಹೊಂದಿ ಒಂದಾದರೆ, ಅದ್ಭುತದ ಸಾಧನೆ”. ನನಗಿರುವುದು ನಿನಗಿಲ್ಲ, ನಿನಗಿರುವುದು ನನಗಿಲ್ಲ. ನಿನ್ನದು ನನಗೆ…

ಹೀಗಿರಲಿ ವಿದ್ಯೆ ಸೇವೆಗೆ ಮನ್ನಣೆ!

ಸಿದ್ಧಸೂಕ್ತಿ :              ಹೀಗಿರಲಿ ವಿದ್ಯೆ ಸೇವೆಗೆ ಮನ್ನಣೆ! ಬಹುತೇಕರು ನಾವು ಹೆಚ್ಚು ಬೆಲೆ ಕೊಡುವುದು ಹಣ ಆಸ್ತಿಗೆ. ಸುಳ್ಳು ಮೋಸ ಅಕ್ರಮದಿಂದ ಗಳಿಸುವೆವು! ಆದರ್ಶ ಮೌಲ್ಯ ಸಂಸ್ಕೃತಿ ಭಾವಗಳ ಕಡೆಗಣಿಸುವೆವು! ಸರಿದಾರಿಯಲಿ ಇಲ್ಲದಿದ್ದರೂ ಹಣ ಆಸ್ತಿಗರನು ಗೌರವಿಸುವೆವು,ಹಿಂಬಾಲಿಸುವೆವು! ಆದರ್ಶ ವಿದ್ಯೆ ಸಂಸ್ಕಾರವುಳ್ಳವರನು ನಿರ್ಲಕ್ಷ್ಯಿಸುವೆವು, ಅವಮಾನಿಸುವೆವು, ಗೌರವಿಸೆವು, ಪ್ರೋತ್ಸಾಹಿಸೆವು! ಪರಿಣಾಮ ಸಮಾಜದ ಮೇಲೆ ಕರಿ ನೆರಳು! ಮನೆ ಮನೆಯಲಿ ಹಣ ಆಸ್ತಿ ಲೆಕ್ಕಾಧಾರದ ಸಂಬಂಧ! ಕೆಟ್ಟ ಮೇಲೆ ಬುದ್ಧಿ!…

ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು

ಸಿದ್ಧಸೂಕ್ತಿ : ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು. ನಾವು ಆಳವಾಗಿ ಯೋಚಿಸುತ್ತೇವೆ, ಯೋಜಿಸುತ್ತೇವೆ! ಸಾಧಕ ಬಾಧಕಗಳ ಅಳೆದು ತೂಗಿ ನಿರ್ಣಯಿಸುತ್ತೇವೆ. ಗೌರವಿಸುವ ಬದಲು ಅನುಮಾನಿಸುತ್ತೇವೆ. ಕಳ್ಳ ಸುಳ್ಳ ನಕಲಿ ಇರಬಹುದೇ? ಎಂದು ಪರೀಕ್ಷಿಸುತ್ತೇವೆ! ಆದರೂ ಬಹುತೇಕ ನಕಲಿ ಪಾಸ್! ಅದು ಮೆರೆಯುವುದು, ಹಲ್ಲು ಕಿರಿಯುವುದು. ಅಸಲಿ ಸೋತು ಸೊರಗುವುದು, ಮೂಲೆ ಸೇರುವುದು! ನೋಡಿಕೊಂಡವರ ಕಾರ್ಯವೆಸಗಲು, ನಿಯಮ ಬಾಹಿರ ಕಾಣದು! ಕಂಡರೂ ಅಡ್ಡಿಯಾಗದು! ದೂರ ಸರಿಯುವುದು! ನೋಡಿಕೊಳ್ಳದವರ ಕಾರ್ಯವೆಸಗಲು, ಇರುವ ಪೂರಕ ನಿಯಮವೂ ಅಡ್ಡಿಯಂತೆ ಕಾಮಣಿ! ಸಾಗುವ ಬಾಳುವ…

ದೇಶ ಸುತ್ತಿ ನೋಡು, ಕೋಶ ಓದಿ ನೋಡು

ಸಿದ್ಧಸೂಕ್ತಿ :      ದೇಶ ಸುತ್ತಿ ನೋಡು, ಕೋಶ ಓದಿ ನೋಡು. ನೋಡು=ತಿಳಿ. ಕೋಶ=ಶಬ್ದಕೋಶ, ಗ್ರಂಥ. ಮನುಷ್ಯ ಬುದ್ಧಿಜೀವಿ. ತಿಳಿಯಲೇಬೇಕು. ಇಲ್ಲದಿರೆ ಪಶು. ಹುಟ್ಟಿದಾಗ ಮಾನವ ಸಚೇತನ ಮಾಂಸಪಿಂಡ. ಅದ್ಭುತ ಜ್ಞಾನಗ್ರಹಿಕೆಗೆ, ಕಾರ್ಯಸಾಧನೆಗೆ ಅಗತ್ಯ ಅಂಗಾಂಗ ರಚನೆಯ ಬಳಿಕವೇ ಭುವಿಗವತರಣ. ಜ್ಞಾನ ಗಳಿಸಿದಂತೆ, ಮಾನವ ದೇವಮಾನವ! ಪ್ರತಿ ವ್ಯಕ್ತಿ ವಸ್ತು ಜೀವಿ ಪರಿಸರ ಪ್ರತಿಕ್ಷಣ ಪಾಠ ಕಲಿಸುವುದು! ಗಾಳಿಗೆ ಕಿಡಕಿ ಬಾಗಿಲ ತೆರೆಯಬೇಕು. ಮನ ಇಂದ್ರಿಯಗಳ ತೆರೆದು ಸದಾ ಪಾಠ ಕಲಿಯಬೇಕು! ಬಲ್ಲ ಅನುಭವಿಕರ…

ತ್ಯಾಗಿಯವನಂತರದಿ ಮಂಕುತಿಮ್ಮ

ಸಿದ್ಧಸೂಕ್ತಿ :              ತ್ಯಾಗಿಯವನಂತರದಿ ಮಂಕುತಿಮ್ಮ ತ್ಯಾಗಿ=ಬಿಟ್ಟವನು. ಪ್ರತಿ ದೇಹಧಾರಿ ಜಗದಲಿ ಎಲ್ಲರಂತೆ. ಆಟೋಟ ಊಟ ಉಸಿರಾಟ ಬಟ್ಟೆ ನೆಲೆ ಜಲ ಜನ ವಸ್ತು ಒಡನಾಟ ಪರಿಸರ ಹಣ ಆಸ್ತಿ ಎಲ್ಲ ಎಲ್ಲರಿಗೂ ಬೇಕು, ಬಿಡಲಾಗದು-ಬಿಟ್ಟಿರಲಾಗದು! ಕಾಡೇನು! ನಾಡೇನು! ಎಲ್ಲ ಎಲ್ಲಿಗೂ ಸುಳಿವುದು! ಹಾಗೆಂದು ಅಂತರ ಕಡಿವಾಣ ಬೇಕಿಲ್ಲ ಎಂದಲ್ಲ! ಎಲ್ಲೆಂದರಲ್ಲಿ ಸಿಕ್ಕಿದ್ದರಲ್ಲಿ ನುಸುಳಬೇಕೆಂದಲ್ಲ! ಬಿಡಬೇಕು, ಬಿಡದಿರೆ ಮನದ ಬಯಕೆ ತೊರೆದಿರಬೇಕು! ನಿಜದ ಅರಿವು ಪಕ್ವವಾದರೆ ಮನ ವಿಶಾಲ!…

ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ

ಸಿದ್ಧಸೂಕ್ತಿ : ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ. ಆಧುನಿಕತೆಯನ್ನೆತ್ತಿ ಪ್ರಾಚೀನತೆಯ ತುಳಿದವ ವೈಚಾರಿಕ! ನೆನಪಿರಲಿ :ಆಧುನಿಕತೆಯ ಬೇರು ಪ್ರಾಚೀನತೆ! ಹಳೆ ಬೇರಿಲ್ಲದೇ ಹೊಸ ಚಿಗುರೆಲ್ಲಿ? ಅಪ್ಪ ಅಮ್ಮ ಇಲ್ಲದ ಮಗುವೆಲ್ಲಿ? ಬೆಳೆದ ಮಗು ವಿಮಾನ ನೌಕೆ ವಾಹನ ಚಲಾಯಿಸಬಹುದು! ಇದು ಸಾಧ್ಯವಾದದ್ದು ಇದನರಿಯದ ಅಪ್ಪ ಅಮ್ಮನ ಹಣ ಪರಿಶ್ರಮದಿಂದ! ಭೂತ ವರ್ತಮಾನಕ್ಕೆ ಅಡಿಪಾಯ, ವರ್ತಮಾನ ಭವಿಷ್ಯತ್ತಿನ ಅಡಿಪಾಯ! ಭೂತವಿಲ್ಲದ ವರ್ತಮಾನ ಇಲ್ಲ! ಇದನ್ನರಿತು ನಮ್ಮ ಪ್ರಾಚೀನ ಸಂಸ್ಕೃತಿ ವೇದ ಶಾಸ್ತ್ರ ಪುರಾಣಾಗಮಾದಿಗಳನ್ನಾದರಿಸಬೇಕು! ಆನೆಯ ತಲೆ…

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ?

ಸಿದ್ಧಸೂಕ್ತಿ :    ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? ಹುಟ್ಟಿದಾಗ ಹೆಸರಿಲ್ಲ. ಆಮೇಲೆ ಹೆಸರು! ಈ ಹೆಸರಿಗಾಗಿ ಇಲ್ಲ ಸಲ್ಲದ ಕಸರತ್ತು. ಗಿನ್ನಿಸ್ ದಾಖಲೆ! ಇಡ್ಲಿ ಮುದ್ದೆ ಜಿರಲೆ ಹಾವು ತಿನ್ನುವ ಹಿಡಿವ, ಉಗುರು ಮೀಸೆ ಉದ್ದಾಗಿಸುವ ಪೈಪೋಟಿ! ಪ್ರಕೃತಿ ನೀಡಿದ ಅಂಗಾಂಗ ತಾನು ತನ್ನದೆಂಬ ಭ್ರಮೆಯಲಿ ಅರೆಬರೆ ವೇಷದಿ ದರ್ಶಿಸಿ ಖುಷಿಪಡಿಸಿ ಸೌಂದರ್ಯ ಪಟ್ಟ ಗಿಟ್ಟಿಸುವ ಚಪಲ! ಸೇವೆ ದಾನ ಸಹಾಯ ಮಾಡದೆಯೂ ಪತ್ರಿಕೆ ವೇದಿಕೆಯಲ್ಲಿ ಹೆಸರ ಬಯಸುವ ಆಧಿಕಾರಿಕ ದರ್ಪ ಗೀಳು! ಫ್ಯಾನ್…

ತತ್ತ್ವವೊಂದರ ಹಿಡಿತಕ್ಕೊಗ್ಗದಿಹ ಬಾಳೇನು?

   ಸಿದ್ಧಸೂಕ್ತಿ :        ತತ್ತ್ವವೊಂದರ ಹಿಡಿತಕ್ಕೊಗ್ಗದಿಹ ಬಾಳೇನು? ಪ್ರತಿ ಜೀವಿ ವಸ್ತುವಿಗೆ ನಿರ್ದಿಷ್ಟ ತತ್ತ್ವಾದರ್ಶವಿದೆ, ಇರಬೇಕು! ಸೂರ್ಯ ಬೆಂಕಿ ಸುಡುತಿರಬೇಕು. ಚಂದ್ರ ನೀರು ತಂಪಿರಬೇಕು. ಹುಳಿ ಉಪ್ಪು ಕಹಿ ಖಾರ ಸಿಹಿ ವಗರು ತಮ್ಮ ತಮ್ಮಯ ರುಚಿಯನ್ನು ಕೊಡುತಿರಲುಬೇಕು! ಅದರವರ ಗುಣಧರ್ಮ ಕರ್ತವ್ಯ ಅದು ಅವರು ಪಾಲಿಸಲೇಬೇಕು. ಇಲ್ಲದಿರೆ ಬೆಲೆ ಬಾಳು ಅದಕವರಿಗಿಲ್ಲ! ಮದುವೆಯಾದರೆ ಗಂಡು ಗಂಡನಂತಿರಬೇಕು,ಹೆಣ್ಣು ಹೆಂಡತಿಯಂತಿರಬೇಕು. ಸತಿ ಪತಿ ಒಂದಾಗಿ ಬಾಳದಿರೆ ಆ ದಾಂಪತ್ಯವೇಕೆ? ತಂದೆ ತಾಯಿ ಅತ್ತೆ…

1 2 3 4 7
error: Content is protected !!