Browsing: ಸಿನೆಮಾ

ಸಿನೆಮಾ

ಕ್ರೈಂ ಥ್ರಿಲ್ಲರ್ ಮಾರಿಗೋಲ್ಡ್..!

ಆರಂಭದಿಂದಲೂ ತನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ‍, ತೀರ್ಥಳ್ಳಿ ಹುಡುಗ ದಿಗಂತ್‌ ಅಭಿನಯದ ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್‌ ‌ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತ ಅಳವಡಿಕೆ ಕೊನೇ ಹಂತದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ದವಾಗಿರುವ ‘ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾನಕ‌ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ರಾಘವೇಂದ್ರ ನಾಯಕ್…

ಬಿಗ್‌ಬಾಸ್ ಸೀಸನ್ ೮ ರ ವಿನ್ನರ್ ಆಗಿ ಪಾವಗಡ ಮಂಜು

ಬಿಗ್ ಬಾಸ್ ಸೀಸನ್ ೮ ರ ವಿನ್ನರ್ ಲ್ಯಾಗ್ ಮಂಜು ಅಲಿಯಾಸ್ ಮಂಜು ಪಾವಗಡ ಹೊರಹೊಮ್ಮಿದ್ದಾರೆ. ಅವರಿಗೆ ೪೫,೦೩,೪೯೫ ಮತಗಳು ಬಿದ್ದರೆ, ರನ್ನರ್ ಅಪ್ ಅರವಿಂದ್ ಅವರಿಗೆ ೪೩,೩೫,೯೫೭ ಮತಗಳು ಬಿದ್ದಿವೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆಯಾಗಿದೆ. ರಂಗಭೂಮಿ ಹಿನ್ನಲೆಯುಳ್ಳ ಮಂಜು, ತಮ್ಮ ಹಾಸ್ಯ ಪ್ರಜ್ಞೆ ಮೂಲಕ ಮನೆಯ ಎಲ್ಲ ಸದಸ್ಯರು ಮತ್ತು ವೀಕ್ಷಕರ ಮನ ಗೆದ್ದಿದ್ದರು. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಜೊತೆಗಿನ ಕೆಲ ಗದ್ದಲಗಳನ್ನು ಬಿಟ್ಟರೆ ಬೇರಾವ ಜಗಳದಲ್ಲೂ ಮಂಜು ಕಾಣಿಸಿಕೊಂಡವರಲ್ಲ.ಹಾಸ್ಟೆಲ್ ಟಾಸ್ಕ್…

ರಶ್ಮಿಕ ಮಂದಣ್ಣರ ಬಣ್ಣದ ಬದುಕಿನ ಮಾತು…!

ಭಾರತೀಯ ಚಿತ್ರರಂಗದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಲವು ವರ್ಷಗಳ ನಂತರ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಹಂಚಿಕೊಂಡ ರಶ್ಮಿಕಾ ಟ್ರೋಲ್ ಪೇಜ್‌ಗಳನ್ನು ಎದುರಿಸಿದ್ದು ಹೇಗೆ ಎಂದು ರಿವೀಲ್ ಮಾಡಿದ್ದಾರೆ. ರಶ್ಮಿಕಾ ವೃತ್ತಿ ಜೀವನದ ಗ್ರಾಫ್ ಎತ್ತರಕ್ಕೆ ಏರುತ್ತಿದೆ ಆದರೆ ಒಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಟ್ರೋಲ್‌ಗೆ ಗುರಿಯಾದರು. ಈ ಪರಿಸ್ಥಿತಿಯನ್ನು ಪೋಷಕರ ಜೊತೆ ಎದುರಿಸಿದ್ದ ರಶ್ಮಿಕಾ ಮಂದಣ್ಣ ಹೇಗೆ ನಿಭಾಯಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ’ಪ್ರಾರಂಭದಲ್ಲಿ ಇದು ತುಂಬಾನೇ ಕಷ್ಟವಾಗಿತ್ತು.…

ಬಚ್ಚಲ ಮನೆಯಲ್ಲಿ ಬಿದ್ದು ನಟಿ ಲೀಲಾವತಿಗೆ ಸೂಂಟ ಮುರಿತ

ಬೆಂಗಳೂರು, ಆ, 07: ಹಿರಿಯ ನಟಿ ಲೀಲಾವತಿ ಅವರು ಬಚ್ಚಲ ಮನೆಯಲ್ಲಿ ಕಾಲು ಜಾರಿಬಿದ್ದು ಕಾಲು ಮತ್ತು ಸೊಂಟಕ್ಕೆ ಪೆಟ್ಟುಬಿದ್ದಿದೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡದಿದ್ದು ತಕ್ಷಣ ಅವರನ್ನು ಸಮೀಪದ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಒಂದು ತಿಂಗಳು ವಿಶ್ರಾಂತಿ ತಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ. ಬಚ್ಚಲು ಮನೆಯಲ್ಲಿ ಬಿದ್ದ ತಕ್ಷಣ ಲೀಲಾವತಿ ಅವರಿಗೆ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ ಸುಮಾರು ಒಂದು…

ಥ್ರಿಲ್ಲರ್ ಸಸ್ಪೆನ್ಸ್ ಚಿತ್ರ ಟಿಟಿ#೫೦

ಎಲ್. ಕೃಷ್ಣ ಚೊಚ್ಚಲ ನಿರ್ದೇಶನದ ಟಿಟಿ#೫೦ ಕನ್ನಡ ಸಿನಿಮಾವನ್ನು ಆಗಸ್ಟ್ ೧೩ ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೊಸ ಪ್ರತಿಭಾನ್ವಿತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾವಾಗಿದ್ದು ದಂಪತಿಗಳ ಸುತ್ತ ಕಥೆ ಹೆಣೆಯಲಾಗಿದೆ. ಐಷಾರಾಮಿ ಜೀವನಕ್ಕಾಗಿ ಮಾಡುವ ಪ್ರಯತ್ನಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕೃಷ್ಣ ಕಥೆ ಬರೆದಿದ್ದು ಎಸ್ ಅಂಡ್ ಎಸ್ ಹೋಮ್ ಬ್ಯಾನರ್ ಎಸ್ ಅಂಡ್ ಎಸ್ ಪ್ರೊಡಕ್ಷನ್ ನಲ್ಲಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಧಾರಾವಾಹಿ ನಟ ಕರ್ಣ ಎಸ್ ರಾಮಚಂದ್ರ…

ಸಾಹಸಿ ಯುವಕನ ‘ಕಲಿವೀರ

posted by naveen ಈ ಹಿಂದೆ ಕನ್ನಡ ದೇಶದೊಳ್ ಎಂಬ ಚಿತ್ರ ಮಾಡಿದ್ದ ಅವಿರಾಮ್ ಕನ್ನಡಿಗ ಈಗ ಕಲಿವೀರ ಎಂಬ ಮತ್ತೊಂದು ಚಿತ್ರ ನಿರ್ದೇಶಿಸಿದ್ದಾರೆ. ಸಾಹಸಿ ಯುವಕನೋರ್ವನ ಹೋರಾಟದ ಕಥನ ಹೊಂದಿದ ಆ ಚಿತ್ರದ ಹೆಸರು ಕಲಿವೀರ. ಕೊರೋನಾ ಎರಡನೇ ಲಾಕ್‌ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಿದ್ದು, ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಛೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ನಾಯಕ…

ತಂದೆ ಹುಟ್ಟೂರು ಗಾಜನೂರಿಗೆ ಭೇಟಿ ನೀಡಿದ ಶಿವಣ್ಣ,ಪುನೀತ್

ಚಾಮರಾಜನಗರ,ಜು,೩೧: ತಮ್ಮ ತಂದೆ ವರನಟ ಡಾ.ರಾಜ್‌ಕುಮಾರ್ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಿದ ಖ್ಯಾತ ನಟರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್,ಸೋದರತ್ತೆ ನಾಗಮ್ಮ ಅವರ ಕುಟುಂಬದೊಂದಿಗೆ ಸಮಯ ಕಳೆದರು. ನಾಗಮ್ಮ ಅವರ ಆರೋಗ್ಯ ವಿಚಾರಿಸಲು ತಮ್ಮ ಕುಟುಂಬದೊಂದಿಗೆ ಬಂದಿದ್ದ ಶಿವಣ್ಣ ಹಾಗೂ ಅಪ್ಪು ಅವರು, ಗಾಜನೂರಿನಲ್ಲಿ ಡಾ.ರಾಜ್‌ಕುಮಾರ್ ಅವರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದರು. ಎಲ್ಲರೂ ಜೊತೆಯಾಗಿ ಮಧ್ಯಾಹ್ನದ ಭೋಜನ ಸವಿದರು. ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮನೆಯವರಿಗೂ ತಿಳಿಸಿದೆ ಅವರು ನೇರವಾಗಿ ಗಾಜನೂರಿಗೆ ಬಂದಿದ್ದರು.…

ಇನ್ನೂ ಬದುಕಿನಿಂದ ಮಿಸ್ ಆದ ಜಯಂತಿ

ಬೆಂಗಳೂರು, ಜು,26: ಕನ್ನಡ ಚಿತ್ರರಂಗದ ಖ್ಯಾತ ನಟಿ ಅಭಿನವ ಶಾರದೆ ಜಯಂತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 76 ವರ್ಷವಾಗಿತ್ತು. ಬಳ್ಳಾರಿ ಯಲ್ಲಿ ಜನಸಿದ್ದ ಅವರು ಜಗದೇಕ ವೀರ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಅವರು ಜೇನುಗೂಡು ಚಿತ್ರದಲ್ಲಿ ನಾಯಕಿ ಪಾತ್ರಮಾಡುವ ಮೂಲಕ ಅದ್ಬುತ ನಟನೆಗೆ ಹಲವಾರು ಜನ ಮನಸೋತಿದ್ದರು.500 ಚಿತ್ರಗಳಲ್ಲಿ ನಟಿಸಿದ ಅವರು ಬಹುಭಾಷೆ ನಟಿ ಕೂಡ. ಜಯಂತಿ ಅವರು ಇಡೀ ದಕ್ಷಿಣ ಭಾರತದಲ್ಲೇ ಮೇರುನಟಿ ಎನಿಸಿಕೊಂಡಾಕೆ. ಜಯಂತಿ ಎಂದ ಕೂಡಲೇ…

‘ಅದೊಂದಿತ್ತು ಕಾಲ’ದಲ್ಲಿ ನಿರ್ದೇಶಕನಾದ ವಿನಯ್

‘ಅದೊಂದಿತ್ತು ಕಾಲ ಚಿತ್ರದಲ್ಲಿ ವಿನಯ್‌ರಾಜ್‌ಕುಮಾರ್ ನಿರ್ದೇಶಕನ ಪಾತ್ರ ಮಾಡಲಿದ್ದಾರೆ. ನಿರ್ದೇಶಕ ಕತೆ ಹೊಂದಿರುವ ಈ ಚಿತ್ರ ಅವರ ಕಷ್ಟ-ನಷ್ಟಗಳ ಕುರಿತ ಎಳೆ ಈ ಚಿತ್ರದಲ್ಲಿದೆ. ಕೊವಿಡ್ ಕಾರಣದಿಂದ ಶೂಟಿಂಗ್ ನಿಂತಿದ್ದವು. ಈಗ ಮತ್ತೆ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ಅವರು ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಓರ್ವ ನಿರ್ದೇಶಕನ ಜೀವನವನ್ನು ಈ ಸಿನಿಮಾ ಹೇಳಲಿದೆ. ಈ ಸಿನಿಮಾ ಬಗ್ಗೆ ವಿನಯ್ ರಾಜ್‌ಕುಮಾರ್ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಈ ಸಿನಿಮಾ ಕೆಲಸಗಳು ನಿಂತಿದ್ದವು. ಈಗ ಮತ್ತೆ ಶೂಟಿಂಗ್…

ಯಾರಿಗೆ‘ ಲಗಾಮ್ ಹಾಕಲಿದ್ದಾರೆ ಉಪೇಂದ್ರ

ಹಲವು ಯಶಸ್ವಿ ಚಿತ್ರ ನೀಡಿರುವ ನಿರ್ದೇಶಕ ಮಾದೇಶ್,ಇದೇ ಮೊದಲ ಬಾರಿಗೆ ನಟ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ ಹಾಗೆ ‘ಲಗಾಮ್ ಎನ್ನುವ ಸಾಮಾಜಿಕ ಕಳಕಳಿಯ ಕಥಾ ಹಂದರವಿರುವ ಈ ಚಿತ್ರ . ಚಿತ್ರದಲ್ಲಿ ನಾಯಕ ಯಾರಿಗೆ,ಯಾವ ಕಾರಣಕ್ಕೆ ಲಗಾಮ್ ಹಾಕುತ್ತಾನೆ ಎನ್ನುವುದು ಒಂದು ಎಳೆಯ ಕಥಾಹಂದರವಿದೆ. ಚಿತ್ರದಲ್ಲಿ ಉಪೇಂದ್ರ ಅವರ ಜೋಡಿಯಾಗಿ ನಟಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಬ್ಬರ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಕುತೂಹಲ ಹೆಚ್ಚುವಂತೆ…

ಈಗ ಡೆಡ್ಲಿ ಭಾಗ ೩

ರವಿ ಶ್ರೀವಾತ್ಸವ ನೇತೃತ್ವದಲ್ಲಿ ತೆರೆಗೆ ಬಂದಿದ್ದ ಡೆಡ್ಲಿ ಸೋಮ,ಮತ್ತು ಡೆಡ್ಲಿ-೨ ಚಿತ್ರದ ಬಳಿಕ ಈಗ “ಡೆಡ್ಲಿ-೩ ” ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಡೆಡ್ಲಿ-೩ ಚಿತ್ರಕ್ಕೆ ಹೊಸ ನಿರ್ಮಾಪಕರು ಮತ್ತು ನಾಯಕ ನಟನ ಪ್ರವೇಶವಾಗಿದೆ. ಉಳಿದಂತೆ ಹಿಂದಿನ ಚಿತ್ರಗಳಲ್ಲಿ ಇದ್ದ ಕೆಲ ಕಲಾವಿದರು ” ಡೆಡ್ಲಿ-೩ “ಚಿತ್ರದಲ್ಲಿ ಮುಂದುವರೆಯಲಿದ್ದಾರೆ. ನಿರ್ಮಾಪಕ ಶೋಭಾ ರಾಜಣ್ಣ ಬಂಡವಾಳ ಹಾಕಿ ಪುತ್ರ ದೀಕ್ಷಿತ್ ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ “ಎಂ.ಆರ್ ” ಚಿತ್ರ ಕೈಗೆತ್ತಿಕೊಂಡಿದ್ದ ನಿರ್ದೇಶಕ ರವಿ ಶ್ರೀವಾಸ್ತವ ಅದನ್ನು ಅಲ್ಲಿಗೆ ಬಿಟ್ಟು…

ನಟ ಬಾಲಕೃಷ್ಣ ಹಾಸ್ಯ ಸಂಭಾಷಣೆ ಬರೆದಚಿತ್ರದೈವಸಂಕಲ್ಪ

ನಟ ಬಾಲಕೃಷ್ಣ ಹಾಸ್ಯ ಸಂಭಾಷಣೆ ಬರೆದಚಿತ್ರದೈವಸಂಕಲ್ಪ ಎಂ.ಬಿ.ಗಣೇಶ್ ನಿರ್ದೇಶನದ, ಮಹಾತ್ಮ ಪಿಕ್ಚರ್ ಲಾಂಛನದಡಿ ಡಿ.ಶಂಕರಸಿಂಗ್ ನಿರ‍್ಮಾಣ ಮಾಡಿದದೈವಸಂಕಲ್ಪಕಪ್ಪು-ಬಿಳುಪು ಸಾಮಾಜಿಕಚಿತ್ರ ೧೯೫೬ರಲ್ಲಿ ತೆರೆಕಂಡಿತು. ಉದಯಕುಮಾರ್, ಸೂರ್ಯಕಲಾ, ರಾಜಕುಮಾರಿ, ಹೆಚ್.ಪಿ.ಸರೋಜಾ, ಸರೋಜಮ್ಮ, ಲಕ್ಷ್ಮೀದೇವಿ, ಎಂ.ಎಸ್.ಸುಬ್ಬಣ್ಣ, ಟಿ.ಎನ್. ಬಾಲಕೃಷ್ಣ, ಹನುಮಂತಾಚಾರ್, ಮಾ. ಹಿರಣ್ಣಯ್ಯ ಅಭಿನಯಿಸಿದರು.ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ಎಂ.ನರೇಂದ್ರಬಾಬು ರಚಿಸಿದರು. ಸಂಭಾಷಣೆಯಲ್ಲಿ ಹಾಸ್ಯಜೋಡಣೆಯನ್ನು ನಟ ಟಿ.ಎನ್.ಬಾಲಕೃಷ್ಣ ಬರೆದುಕೊಟ್ಟರು. ಪಿ.ಶಾಮಣ್ಣ ಸಂಗೀತ ನಿರ್ದೇಶನ ಮಾಡಿದಚಿತ್ರದಲ್ಲಿ ೧೦ ಹಾಡುಗಳನ್ನು ಆಳವಡಿಸಲಾಗಿತ್ತು.ಚಿತ್ರ ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿಚಿತ್ರೀಕರಣಗೊಂಡಿತು. ತಾನೊಂದು ಬಗೆದರೇದೈವತಾ ಬೇರೊಂದ ಬಗೆವುದು ಎಂಬ…

`ಟಕೀಲಾ’ ಹಾಡಿಗೆ ದ್ವನಿಮುದ್ರಣ

ಕೊರೊನಾ ಸಂಕಷ್ಟದಲ್ಲಿ ಲಾಕ್‌ಡಾನ್ ಹಿನ್ನೆಲೆಯಲ್ಲಿ ಸ್ತಗಿತಗೊಂಡಿದ್ದ ಚಿತ್ರಗಳ ಚಿತ್ರೀಕರಣ ಮತ್ತೇ ಆರಂಭವಾಗಿವೆ; ಈಗ ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ (ವಿದ್ಯಾರ್ಥಿ, ಮುನಿಯ, ಜನ್‌ಧನ್) ನಿರ್ಮಿಸುತ್ತಿರುವ ಟಕೀಲಾಕ್ಕೆ ಇದೇ ೨೬ ರಿಂದ ೨ನೇ ಹಂತದ ಚಿತ್ರೀಕರಣ ಅಲ್ಲದೇ ನಂದಿನಿ ಬಡಾವಣೆಯ ಟಾಪ್ ಸ್ಟಾರ್ ರೇಣು ಸ್ಟುಡಿಯೋವಿನಲ್ಲಿ ನಿರ್ದೇಶಕ ಕೆ.ಪ್ರವೀಣ್ ನಾಯಕ್ ರಚಿಸಿರುವ ನಿನ್ನ ಕಣ್ಣಿನಲಿ ಕಣ್ಣ ಭಾಷೆಯಲಿ ಬರೆದೆ ಪ್ರಣಯ ಕವಿತೆ, ಮಾತು ಬಾರದೆ ಮೂಕನಾಗಿರಲು ಎದೆಯ ಒಳಗೆ ಅವಿಗೆ ಮತ್ತು ದಂ ಮಾರೋ…

ಪ್ರೇಮಂ ಚಿರಂ ಚಿತ್ರ ಬಿಡುಗಡೆಗೆ ಸಿದ್ದ

ಧೃತಿ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸ್ನೇಹಿತರು ಜೊತೆಗೂಡಿ ನಿರ್ಮಿಸಿರುವ ಪ್ರೇಮಂ ಚಿರಂ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಛಾಯಾಗ್ರಹಣ-ಸಂಗೀತ ರೋಹನ್ ದೇಸಾಯಿ, ಪೋಸ್ಟ್ ಪ್ರೊಡಕ್ಷನ್ಸ್ – ಆರ್.ಡಿ.ಸ್ಟುಡಿಯೋ, ಸಾಹಿತ್ಯ – ಹರ್ಷವರ್ಧನ ಹೆಗಡೆ, ರಜತ್ ಸೂರ್ಯ, ಪಾರ್ವತಿ ಸ್ವಪ್ನ, ಸಿರಿ ಶ್ರೀನಿವಾಸ್, ಸಹನಿರ್ದೇಶನ – ದೇವರಾಜ್ ಎಸ್. ಅಣ್ಣಯ್ಯ, ಸಹನಿರ್ಮಾಪಕರು – ತುಳಜಾರಾಂ ಸಿಂಗ್ ಠಾಕೂರ್, ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಶ್ರೀನಿವಾಸ್, ೫ ವಿಭಿನ್ನ ಪ್ರೇಮಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ – ನೀನಾಸಂ ಠಾಕೂರ್, ಪ್ರೀತಿ ಚೇಷ್ಠ (ಮುಂಬೈ),…

ದರ್ಶನ್ ವಿರುದ್ಧ ಹಲ್ಲೆ ಆರೋಪ; ಗೃಹಸಚಿವರಿಗೆ ದೂರು ನೀಡಿದ ಇಂದ್ರಜಿತ್ ಲಂಕೇಶ್

ಬೆಂಗಳೂರು,ಜು,15: ನಟ ದರ್ಶನ್ ಹೆಸರಲ್ಲಿ ವಂಚನೆ ನಡೆದಿದೆ ಎನ್ನುವ ಪ್ರಕರಣ ತಣ್ಣಗಾಗುತ್ತಿದ್ದಂತೆ ,ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್, ದರ್ಶನ್ ಮತ್ತು ಅವರ ತಂಡದ ವಿರುದ್ದ ಹಲ್ಲೆ ಆರೋಪ ಮಾಡಿದ್ದಾರೆ. ಈ ಮೂಲಕ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದಿದ್ದು ದರ್ಶನ್ ಮತ್ತು ಅವರ ತಂಡ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು ಅದನದನು ಮೈಸೂರು ಪೊಲೀಸರು ಒತ್ತಡಕ್ಕೆ ಮಣಿದು ಮುಚ್ಚಿಹಾಕಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೈಯರ್ ಗೆ ನಟ…

ರಿಚರ್ಡ್ ಆಂಟನಿಯಾಗಿ ರಕ್ಷಿತ್ ಶೆಟ್ಟಿ

ಹೊಂಬಾಳೆ ಫಿಲಂಸ್‌ನ ಮುಂದಿನ ಚಿತ್ರ ಘೋಷಣೆಯಾಗಿದ್ದು ಇದರ ನಿರ್ದೆಶನದ ಜವಾಬ್ದಾರಿ ಜೊತೆಗೆ ನಾಯಕ ಕೂಡಾ ರಕ್ಷಿತ್ ಶೆಟ್ಟಿ ಜವಾಬ್ದಾರಿ ಹೊತ್ತುಕೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.. ಚಿತ್ರದ ಹೆಸರು ’ರಿಚರ್ಡ್ ಆಂಟನಿ – ಲಾರ್ಡ್ ಆಫ್ ದ ಸೀ’ ಇದು ಚಿತ್ರದ ಟೈಟಲ್ ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರದ ಟೈಟಲ್ ಅಷ್ಟೆ ವಿಶೇಷವಾಗಿ ರಕ್ಷಿತ್ ಶೆಟ್ಟಿ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತು ಅತ್ಯಂತ ಕ್ರಿಯಾಶೀಲತೆಯನ್ನು ಇದರಲ್ಲಿ ತೊಡಗಿಸಲಿದ್ದಾರೆ ಎನ್ನುವುದು ಈಗಿನ ಹೊಸ ಸುದ್ದಿ. ಕೆಜಿಎಫ್, ಸಲಾರ್…

ಶಿವಣ್ಣಗೆ ೫೯ನೇ ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಅತ್ಯಂತ ಬಿಜಿ ನಟ ಎಂದರೆ ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ,ಅವರ ಎನರ್ಜಿ ಇನ್ನೂ ಯುವಕರಂತೆಯೇ ಇದೆ ಅವರ ಚಿತ್ರಗಳಲ್ಲಿ ಅವರ ಲವಲವಿಕೆ ನೋಡಿದರೆ ಹಾಗೆ ಅನಿಸದೆ ಇರಲಾರದು ಸದಾ ನಗು ನಗುತ್ತಲೇ ಇರುವ ಅವರಿಗೆ ಇಂದು ೫೯ ನೇ ಜನ್ಮದಿನದ ವಿಶೇಷ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಅವರು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಅಭಿಮಾನಿಗಳಿಗೂ ಕೂಡ ಯಾರು ಮನೆ ಮುಂದೆ ಬರಬೇಡಿ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ ಅಲ್ಲದೆ. ಎಲ್ಲರಿಗೂ ಅವರ ಆರೋಗ್ಯ…

ದರ್ಶನ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಮಹಿಳೆ-ದೂರು

ಮೈಸೂರು,ಜು,೧೨: ಚಾಲೇಂಜಿಂಗ್ ಸ್ಟಾರ್ ಸ್ಟಾರ್ ದರ್ಶನ್ ತಮ್ಮ ಹೆಸರಿನಲ್ಲಿ ಮಹಿಳೆಯೊಬ್ಬಳು ವಂಚನೆ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಈ ಮೂಲಕ ದರ್ಶನ್ ಹೆಸರಿನಲ್ಲಿ ಇರುವ ಯಾವ ಆಸ್ತಿ ನಕಲಿ ಮಾಡಲಾಗಿದೆ ಯಾಕೆ ಈ ಘಟನೆ ನಡೆದಿದೆ ಇದರ ಹಿಂದೆ ಇರುವವರು ಯಾರು ಎನ್ನುವ ಕುತೂಹಲ ಕೆರಳಿಸಿದೆ. ೧೫ ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು ೨೫ ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಆಪ್ತ ರಾಬರ್ಟ್…

‘ಟ್ರ್ಯಾಜಿಡಿ ಕಿಂಗ್ ‘ದಿಲೀಪ್ ಕುಮಾರ್

writing-ಎಂ.ಎಸ್.ರಾವ್.ಅಹಮದಾಬಾದ್ ೧೯೯೫ನೇ ಇಸವಿಯಲ್ಲಿ ದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಅಮೆರಿಕಾದ ರಾಯಭಾರಿಯ ಪತ್ನಿ ಅಲ್ಲಿ ಖ್ಯಾತ ನಟ ದಿಲೀಪ್ ಕುಮಾರ್ ರನ್ನು ನೋಡಿದೊಡಡನೆ ಓ ದೇವದಾಸ್ ಎಂದು ಉದ್ವೇಗದಿಂದ ತಾರಕಸ್ವರದಲ್ಲಿ ಬೊಟ್ಟಿಟ್ಟು ಅವರನ್ನು ಆಲಂಗಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.ನನಗೆ ಹಿಂದಿ ಭಾಷೆ ಅರ್ಥವಾಗುವುದಿಲ್ಲ ಆದರೆ ಬದಲಾವಣೆಗೆಂದು ಕಳೆದವಾರ ಪತಿಯೊಂದಿಗೆ ದೇವದಾಸ್ ಚಿತ್ರ ವೀಕ್ಷಿಸಲು ಹೋಗಿದ್ದೆ.ಏನೊಂದು ಶ್ರೇಷ್ಠ ಅಭಿನಯ ನಿಮ್ಮದು,ಶೋಕದ ಸನ್ನಿವೇಶದಲ್ಲಿ ನಿಮ್ಮ ನಟನೆ ನೋಡಿ ಕಣ್ಣಿನಿಂದ ಕರವಸ್ತ್ರ ತಗೆಯಲಿಲ್ಲ ಉತ್ಕ್ರಷ್ಟ ಅಭಿನಯ,ಅದ್ಭುತ, ನಿಮ್ಮನ್ನು ಮುಖತಃ…

ಹಿಂದಿ ಚಿತ್ರರಂಗ ದಿಲೀಪ್ ಕುಮಾರ್ ನಿಧನ

ನವದೆಹಲಿ, ಜು. ೦೭: ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಇಂದು ಬೆಳಗ್ಗೆ ೭:೩೦ಕ್ಕೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ೯೮ ವರ್ಷ ವಯಸ್ಸಿನ ಹಿರಿಯ ನಟ ದಿಲೀಪ್ ಕುಮಾರ್ ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದಿಲೀಪ್‌ರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ ೩೦ ರಂದು ಮುಂಬೈನ ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಇದಕ್ಕೂ ಮೊದಲು ದಿಲೀಪ್ ಕುಮಾರ್ ಅವರು ಜೂನ್ ೬ ರಂದು ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ…

1 4 5 6 7 8
error: Content is protected !!