ಸಿನೆಮಾ
ಭೂದಾನಚಿತ್ರದಲ್ಲಿರಾಜಕುಮಾರ್ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು
ಭೂದಾನಚಿತ್ರದಲ್ಲಿರಾಜಕುಮಾರ್ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು ರಾಜಕುಮಾರ್, ಕಲ್ಯಾಣಕುಮಾರ್ ಹಾಗೂ ಉದಯಕುಮಾರ್ ಮೂರೂ ಮಂದಿ ನಾಯಕ ನಟರು ಪೂರ್ಣ ಪ್ರಮಾಣದಲ್ಲಿಒಂದೇಚಿತ್ರದಲ್ಲಿಅಭಿನಯಿಸಿದ ಭೂದಾನ ಕಪ್ಪುಬಿಳುಪು ಸಾಮಾಜಿಕಕಥಾ ಹಂದರದಚಿತ್ರಅನಂತಲಕ್ಷ್ಮೀ ಪಿಕ್ಚರ್ ಲಾಂಛನದಲ್ಲಿ೧೯೬೨ರಲ್ಲಿತೆರೆಕಂಡಿತು. ಪಿ.ಎನ್.ಗೋಪಾಲಕೃಷ್ಣ ಹಾಗೂ ಜಿ.ವಿ.ಅಯ್ಯರ್ಜಂಟಿಯಾಗಿ ನಿರ್ಮಾಣ ಮಾಡಿದ ಈ ಚಿತ್ರವನ್ನು ಮೊದಲ ಬಾರಿಗೆ ಜಿ.ವಿ.ಅಯ್ಯರ್ ನಿರ್ದೇಶಿಸಿದರಲ್ಲದೆ, ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು. ಎಸ್.ಕೆ.ಭಗವಾನ್ ಹಾಗೂ ರಾಮಚಂದ್ರ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು. ಉಳಿದಂತೆ ಅಶ್ವತ್, ನರಸಿಂಹರಾಜು, ಬಾಲಕೃಷ್ಣ, ಹೆಚ್.ರಾಮಚಂದ್ರಶಾಸ್ತ್ರಿ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ ಮುಂತಾದವರುಅಭಿನಯಿಸಿದರು.ಜಿ.ಕೆ.ವೆಂಕಟೇಶ್ ಸಂಗೀತ ನೀಡಿದಚಿತ್ರದಲ್ಲಿ ಪುರಂದರದಾಸರಭಾಗ್ಯಾದ…


















