Girl in a jacket

Author kendhooli_editor

ಐತಿಹಾಸಿಕ ವಿಭಿನ್ನ ಚಿತ್ರ ‘ಅಲ್ಲಮ ಪ್ರಭು’

12ನೇ ಶತಮಾನದ ಇತಿಹಾಸವುಳ್ಳ ಶ್ರೀ ಅಲ್ಲಮಪ್ರಭು ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿತು. ಡಾ.ಸಂಜಯ್ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ‌ ಅಭಿನಯಿಸಿದ ವಿಭಿನ್ನವಾದ ಹಾಡನ್ನು ಚಿತ್ರೀಕರಣದ ಕೊನೆಯ ಭಾಗವಾಗಿ ಬೆಂಗಳೂರಿನಲ್ಲಿ ಚಿತ್ರಿಸಲಾಯಿತು. ಚಿತ್ರವು ಕನ್ನಡ ಮಾತ್ರವಲ್ಲದೆ‌ ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವುದಾಗಿ ನಿರ್ಮಾಪಕರಲ್ಲೊಬ್ಬರಾದ‌ ಮಾಧವಾನಂದ‌.ವೈ ತಿಳಿಸಿದ್ದಾರೆ. ಇವರಿಗೆ ಮಹಾವೀರಪ್ರಭು‌ ನಿರ್ಮಾಣದಲ್ಲಿ ಜೊತೆಗೂಡಿದ್ದಾರೆ. ಈ ಚಿತ್ರವನ್ನು ಶರಣ್ ಗದ್ವಾಲ್ ನಿರ್ದೇಶನ ಮಾಡುತ್ತಿದ್ದು, ಆರ್.ಗಿರಿ ಛಾಯಾಗ್ರಾಹಕರಾಗಿದ್ದಾರೆ. ಕುಮಾರ್ ಈಶ್ವರ್‌ ಸಂಗೀತ, ಬಿ.ಎಸ್.ಕೆಂಪರಾಜ್ ಸಂಕಲನ, ರಮೇಶ್ ಬಾಬು ವರ್ಣಾಲಂಕಾರ, ಬೆಳ್ಳಿ ಚುಕ್ಕಿ…

ಮುಜರಾಯಿ ಇಲಾಖೆಯ ಅರ್ಚಕರು ,ನೌಕರರಿಗೆ 6ನೇ ವೇತನ ಆಯೋಗ ಜಾರಿಗೆ ಕ್ರಮ:ಶಶಿಕಲಾ ಜೊಲ್ಲೆ

ಬೆಂಗಳೂರು,ಅ,12:ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ಸಚಿವರು ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ ಹಜ್ ಮತ್ತು ವಕ್ಪ್ ‌ ಸಚಿವರಾದ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯಲ್ಲಿ ಜಾರಿಗೆ ತಂದ ಹೊಸ ಯೋಜನೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ…

ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ

ಮಂಗಳೂರು, ಅ, ೧೨: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಮೃತವರ್ಷಿಣಿ, ರಾಯಲ್ ಸಿದ್ಧಾರ್ಥ, ಚಿಂತನ್, ಭೂಮಿ ಎಂಬ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಿಂದ ಸ್ಲಿಪರ್ ಬಸ್‌ನಲ್ಲಿ ಮಂಗಳೂರು ತಲುಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿಗೆ ಬಂದಿಳಿದ ಮಕ್ಕಳ ಬಗ್ಗೆ ಅನುಮಾನಗೊಂಡ ಆಟೋ ರಿಕ್ಷಾ ಚಾಲಕರು, ಮಕ್ಕಳನ್ನು ಕರೆತಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ಬಿಟ್ಟಿದ್ದಾರೆ. “ಮೊದಲು ರೈಲು ಮೂಲಕ ಬೆಳಗಾವಿಗೆ ಹೋಗಿದ್ದೆವು. ಅಲ್ಲಿಂದ ಮೈಸೂರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗಿ ಸೋಮವಾರ ಸಂಜೆ ಮೆಜೆಸ್ಟಿಕ್‌ನಿಂದ ಮಂಗಳೂರಿಗೆ…

ದೇಶದಲ್ಲಿಯೇ ಪ್ರಥಮ ಬಾರಿಗೆ ಉದ್ಯೋಗ ನೀತಿ ಜಾರಿ: ಸಿಎಂ ಬೊಮ್ಮಾಯಿ

ಬೆಂಗಳೂರು, ಅ, 11 : ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ರೂಪಿಸಲಾಗುವುದು. ಈ ನೀತಿಯ ಅಡಿ ಉದ್ಯೋಗ ಸೃಜನೆ ಆಧಾರದ ಮೇಲೆ ಹೆಚ್ಚು ಪ್ರೋತ್ಸಾಹ ಸವಲತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರು ಅರಮನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಿರುವ ” ಉದ್ಯಮಿಯಾಗು – ಉದ್ಯೋಗ ನೀಡು” ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಉದ್ಯೋಗ ನೀತಿಯ ರಚನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸದ್ಯದಲ್ಲಿಯೇ ಈ…

ಸ್ವಚ್ಚ,ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಶ್ರೀರಾಮುಲು ಕರೆ

ಚಿತ್ರದುರ್ಗ. ಅ. 11: ಮೊಳಕಾಲ್ಮೂರಿನಲ್ಲಿಂದು ಕಸಸಂಗ್ರಹಣಾ ವಾಹನಗಳಿಗೆ ಸ್ವಯಂ ವಾಹನ ಚಲಾಯಿಸುವ ಮೂಲಕ ಚಾಲನೆ ನೀಡಿದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ  ಬಿ. ಶ್ರೀರಾಮುಲು, ಸಾರ್ವಜನಿಕರು ಸ್ಚಚ್ಚತೆಯನ್ನು ಮೈಗೂಡಿಸಿಕೊಂಡು ಸ್ವಚ್ಚ, ಸುಂದರ ಹಾಗೂ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿ, ಜಾಗೃತಿ ಮೂಡಿಸಿದರು. ಮೊಳಕಾಲ್ಮೂರಿನಲ್ಲಿಂದು ಪಟ್ಟಣ ಪಂಚಾಯಿತಿ ಯು ಆಯೋಜಿಸಿದ್ದ ಕಸಸಂಗ್ರಹಣಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಚಚ್ಚ ಭಾರತ ಸ್ವಾಥ್ಯ ಭಾರತವಾಗಿದೆ. ಮಹಾತ್ಮ ಗಾಂಧಿಜಿಯವರ ಆಶಯವೂ ಇದಾಗಿತ್ತು.…

ನಶ್ವರ ಬದುಕಿಗೆ ಅತಿ ಚಿಂತೆ ಬೇಡ

ನಶ್ವರ ಬದುಕಿಗೆ ಅತಿ ಚಿಂತೆ ಬೇಡ. ಗುರುವಿಗೆ ಶರಣಾಗಿ ಆತ್ಮತತ್ತ್ವವನ್ನು ತಿಳಿಯುವುದು ಬಾಲ್ಯದಲ್ಲಿಯೇ ಸೂಕ್ತ ಎಂಬ ಸಿದ್ಧನ ಮಾತನ್ನು ಮಿತ್ರರಾದ ಸೋಮ ಭೀಮರು ಒಪ್ಪಿದರು.ಸಿದ್ಧನೊಂದಿಗೆ ಅವರೂ ಗುರು ಶೋಧನೆಗೆ ಹೆಜ್ಜೆ ಹಾಕಿದರು. ಮೂವರೂ ಚಳಕಾಪುರದಿಂದ ನಡೆಯುತ್ತಾ ಅಂದಾಜು ಒಂದು ಹರದಾರಿ (೫ ಕಿ. ಮೀ) ದೂರದ ಗ್ರಾಮ(ಸದಾಶಿವ ಪೇಟೆ) ವನ್ನು ತಲುಪಿದರು.ಸೋಮ ಭೀವರು ಹಸಿದು ಬಳಲಿದ್ದರು.ಊಟಕ್ಕಾಗಿ ಅಂಗಲಾಚಿದರು.ಆಗ ಸಿದ್ಧನು ಅವರಿಗೆ ಹೀಗೆ ಹೇಳಿದನು: ದೇಹದ ಚಿಂತೆಯನ್ನು ಮಾಡಬೇಡಿರಿ. ಹೃದಯದಲ್ಲಿ ಅಖಂಡವಾಗಿ ಪರಮಾತ್ಮನ ಧ್ಯಾನವನ್ನು ಮಾಡಿರಿ. ಆ ಸುಖಾಮೃತದ…

ದುಃಖ

ಸಿದ್ಧಸೂಕ್ತಿ :                               ದುಃಖ. ದುಃಖ ಯಾರಿಗೂ ಬೇಡ. ಆದರೆ ತಪ್ಪದು. ಸುಖಕ್ಕೆ ಕಳೆ ಕಟ್ಟುವುದೇ ದುಃಖ! ಅಜ್ಞಾನ ಅನಾಚಾರ ಅಶುಚಿ ಸುಳ್ಳು ಕಳ್ಳತನ ಲಂಚ ವಂಚನೆ ದುರಾಶೆ ದ್ರೋಹ ದೌರ್ಜನ್ಯ ದೌರ್ಬಲ್ಯ ಆಲಸ್ಯ ಮಾಲಿನ್ಯ ತಪ್ಪು ತಿಳುವಳಿಕೆ ಸ್ವಾರ್ಥ ಕ್ರೋಧ ಮದ ಮತ್ಸರಗಳು ದುಃಖದ ಮೂಲ. ತಿಳಿಯದೇ ಸಹಿ ಮಾಡಿ, ಹಣ ದ್ವಿಗುಣ ತ್ರಿಗುಣದ ದುರಾಶೆಗೊಳಗಾಗಿ…

ಸಿಂದಗಿ ಉಪ ಚುನಾವಣೆ: ಸಿದ್ದರಾಮಯ್ಯ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು

ಬೆಂಗಳೂರು,ಅ,10: ಬುದ್ಧಿವಂತ ಮತದಾರರು ಜೆಡಿಎಸ್‌ ಪಕ್ಷಕ್ಕೆ ಮತ ಹಾಕಲ್ಲ, ಆ ಪಕ್ಷ ಸಿಂದಗಿಯಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಅವರು ದಿವಂಗತ ಎಂಸಿ ಮನಗೂಳಿ ಅವರ ಅನುಕಂಪದ ಅಲೆಯಲ್ಲಿ ಅವರು ತೇಲುತ್ತಿದ್ದಾರೆಂದು ಹೇಳಿದ್ದಾರೆ. “ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡದಿದ್ದರೆ ನಿದ್ದೆ ಬರಲ್ಲ ಅಂತ ಕಾಣತ್ತೆ. ಸಿಂದಗಿ ಕ್ಷೇತ್ರದಲ್ಲಿ ಅವರ ಪಕ್ಷ…

ರಾಜ್ಯವನ್ನು ಆರೋಗ್ಯ ಕರ್ನಾಟಕವನ್ನಾಗಿಸಲು ಸಂಕಲ್ಪ :ಸಿಎಂ ಬೊಮ್ಮಾಯಿ*

ಬೆಂಗಳೂರು, ಅ, 10 : ರಾಜ್ಯವನ್ನು ಆರೋಗ್ಯ ಕರ್ನಾಟಕವನ್ನಾಗಿಸಲು ಸಂಕಲ್ಪ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ತಿಳಿಸಿದರು. ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಎಲ್ ಮಂಡವೀಯ ಅವರೊಂದಿಗೆ ಭಾಗವಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು. ಬೆಂಗಳೂರು ನಗರ ಸೇರಿದಂತೆ ಇಡೀ ಕರ್ನಾಟಕದ ಮೂಲೆ…

ಸ್ವಾತಂತ್ರ್ಯ ಚಳವಳಿ ಮತ್ತು ಹನುಮಕ್ಕಜ್ಜಿಯ ದಿಟ್ಟ ಹೋರಾಟದ ನೆನಪು!

ಸ್ವಾತಂತ್ರ್ಯ ಚಳವಳಿ ಮತ್ತು ಹನುಮಕ್ಕಜ್ಜಿ ಯ ದಿಟ್ಟ ಹೋರಾಟದ ನೆನಪು! “ತಮ್ಮಾ, ನಿನ್ನ ಎಮ್ಮೆ ಹೊಲಕ್ಕೆ ನುಗ್ಗಿದೆ, ಜಲ್ದಿ ಹೋಗಿ ಹೊರಕ್ಕೆ ಓಡಿಸು, ಮಲ್ಲಣ್ಣ ನೋಡಿದರೆ ಅವಾಂತರವಾದೀತು” ಎನ್ನುವ ಹನುಮಕ್ಕಜ್ಜಿಯ ಕೂಗು ಆಕೆಯೇ ಮಾತುಗಳಲ್ಲಿ ಸೃಷ್ಟಿಸಿದ್ದ ಮೈಸೂರು ದಸರಾದ ಮಾಯದ ಮತ್ತು ಮಾದಕಲೋಕದ ಗುಂಗಿನಿಂದ ನನ್ನನ್ನು ಹೊರತಂದಿತ್ತು. ನೆಲದ ಮೇಲಿದ್ದ ಬಾರುಕೋಲನ್ನು ಎತ್ತಿಕೊಂಡವನು ಓಡಿ ಹೋಗಿ ಬಳ್ಳಾರಿ ರುದ್ರಣ್ಣನವರ ಹೊಲ ಹೊಕ್ಕು ಬೆಳೆದು ನಿಂತಿದ್ದ ಎಳೆಯ ಜೋಳದ ಪೈರುಗಳಿಗೆ ಬಾಯಿ ಹಾಕಿದ್ದ ನನ್ನ ಎಮ್ಮೆಯ ಮೈಮೇಲೆ ಜೋರಾಗಿ…

ಸುಖ

ಸಿದ್ಧಸೂಕ್ತಿ : ಸುಖ. ಸುಖ ಎಲ್ಲರಿಗೂ ಬೇಕು. ಅದಕ್ಕಾಗಿ ನಡೆದಿದೆ ನಿರಂತರ ಪ್ರಯಾಸ. ಯಾರಿಗೆ ಎಲ್ಲಿ ಎಷ್ಟು ಸುಖ ಸಿಕ್ಕಿದೆ? ಅವರವರೇ ಬಲ್ಲರು! ಪಂಚೇಂದ್ರಿಯಸುಖ, ಮನದಾಳದ ಸುಖ, ಸುಖಗಳನಂತ! ಕೆಲರಿಗೆ ಭಕ್ತಿ ಭಜನೆ ಸಂಗೀತ ಹಾಡು ಕಲೆ ಸಾಹಿತ್ಯ ತ್ಯಾಗ ಸೇವೆಯಲ್ಲಿ ಸುಖ! ಬಹುತೇಕರಿಗೆ ಭುಕ್ತಿ ಭೋಗದಲ್ಲಿ ಸುಖ! ಚಟದಾಸರಿಗೆ ತಿಂದು ಕುಡಿದು ಸೇದಿ ತೇಗಿದರೆ ಸುಖ, ಭಿನ್ನರಿಗೆ ಅದಿಲ್ಲದಿರೆ ಸುಖ! ಲೌಕಿಕಗೆ ಜನಮನ್ನಣೆ ಸಂಭ್ರಮ ಸಂಪತ್ತಿನ ಸುಖ, ತ್ಯಾಗಿ ವಿರಕ್ತ ಸಂನ್ಯಾಸಿಗೆ ಲೋಕ…

ಪರಿಶಿಷ್ಟ ಜಾತಿ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧ; ಶ್ರೀರಾಮುಲು

ಯಾದಗಿರಿ.ಅ.9: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ , ಆರ್ಥಿಕ, ಶೈಕ್ಷಣಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ  ಬಿ. ಶ್ರೀರಾಮುಲು ಅವರು ತಿಳಿಸಿದರು. ಯಾದಗಿರಿಯಲ್ಲಿಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಮತ್ತು ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ದವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ…

ದೆಹಲಿ ರೌಡಿಗಳ ಆಳ್ವಿಕೆಗೆ ಗ್ಯಾಂಗ್ ಸ್ಟರ್ ಸಿಂಡಿಕೇಟ್..!!

ದೆಹಲಿ ರೌಡಿಗಳ ಆಳ್ವಿಕೆಗೆ ಗ್ಯಾಂಗ್ ಸ್ಟರ್ ಸಿಂಡಿಕೇಟ್..!! Writing;ಪರಶಿವ ಧನಗೂರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೌಡಿಗಳ ಗ್ಯಾಂಗ್ ಹಾವಳಿ ಜಾಸ್ತಿಯಾಗಿದ್ದು, ದಶಕಗಳಿಂದಲೂ ಅಂಡರ್ ವರ್ಲ್ಡ್ ಗ್ಯಾಂಗ್ ಸ್ಟರ್ ಗಳು ರಕ್ತದ ಹಸಿವು ಹತ್ತಿಸಿಕೊಂಡು ದೆಹಲಿಯ ಬೀದಿಗಳಲ್ಲಿ ರಕ್ತದ ಕಾಲುವೆ ನಿರ್ಮಾಣ ಮಾಡಿ ಪ್ರತೀಕಾರದ ಹೆಸರಲ್ಲಿ ನಗರವನ್ನು ನರಕಕ ಮಾಡಿಬಿಟ್ಟಿದ್ದಾರೆ! ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ನ್ಯಾಯಾದೀಶರೆದುರು ರೌಡಿಯೊಬ್ಬನನ್ನು ವಿಚಾರಣೆ ನಡೆಸುವಾಗ ಗುಂಡಿಟ್ಟು ಕೊಂದಿರುವ ದಾಖಲೆಯೇ ಬರೆದಿರುವ ನರಹಂತಕ ನಟೋರಿಯಸ್ ದಿಲ್ಲಿಯ ಮಾಫಿಯಾ ಡಾನ್ ಗಳು ಇಡೀ…

೧೧೦ರತ್ತ ಪೆಟ್ರೋಲ್ ಬೆಲೆ,ಡಿಸೆಲ್೧೦೦ರತ್ತ..!

ಬೆಂಗಳೂರು ,ಅ,೦೯: ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸತತ ೧೧ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ೩೧ ಪೈಸೆ ಏರಿಸಿ ೧ ಲೀಟರ್ ಪೆಟ್ರೋಲ್ ಅನ್ನು ೧೦೭.೧೪ ರೂ.ಗೆ ಮಾರಾಟ ಮಾಡಲಾಗಿದ್ದರೆ, ಬಳ್ಳಾರಿ ೧ ಲೀಟರ್ ಪೆಟ್ರೋಲ್‌ಗೆ ೨೨ ಪೈಸೆ ಏರಿಸಲಾಗಿದ್ದು, ಅತ್ಯಧಿಕ ೧೦೯.೧೯ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಪೆಟ್ರೋಲ್…

ಲಖಿಂಪುರ್ ಹಿಂಸಾಚಾರ: ಸಾಕ್ಷ್ಯಗಳಿಲ್ಲದೆ ಬಂಧನ ಸಾಧ್ಯವಿಲ್ಲ- ಯೋಗಿ

ಲಕ್ನೋ, ಅ, ೦೯: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕಷ್ಟಿಗಳಿಲ್ಲದೆ ಬಂಧನ ಸಾಧ್ಯವಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಭಾನುವಾರ ನಡೆದ ಹಿಂಸಾಚಾರದಲ್ಲಿ ೪ ಮಂದಿ ರೈತರು ಸೇರಿ ಒಟ್ಟು ೮ ಮಂದಿ ಮೃತಪಟ್ಟಿದ್ದರು. ಕಾನೂನಿನ ಮುಂದೆ ಎಲ್ಲರೂ ಸಮಾನರು, ಸುಪ್ರೀಂಕೋರ್ಟ್ ಪ್ರಕಾರ ಸಾಕ್ಷ್ಯವಿಲ್ಲದೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಹಾಗೂ ತನಿಖೆ ನಡೆಯುತ್ತಿದೆ. ದೂರು ದಾಖಲಾಗಿದೆ. ತಪ್ಪು ಯಾರದ್ದೇ ಇದ್ದರೂ ಶಿಕ್ಷೆ ನಿಶ್ಚಿತ ಎಂದು ಯೋಗಿ ಹೇಳಿದರು. ಯಾರಿಗೂ…

ವಿದ್ಯಾಧನಂ ಸರ್ವಧನಪ್ರಧಾನಂ

 ಸಿದ್ಧಸೂಕ್ತಿ :                 ವಿದ್ಯಾಧನಂ ಸರ್ವಧನಪ್ರಧಾನಂ ವಿದ್ಯಾಸಂಪತ್ತು ಎಲ್ಲ ಸಂಪತ್ತುಗಳಿಗಿಂತ ಮುಖ್ಯ. ಹಣ,ಚಿನ್ನ, ಬೆಳ್ಳಿ,ಭೂಮಿ,ಕಟ್ಟಡ, ಸ್ತ್ರೀ ಪುರುಷ ,ವಸ್ತು ವಾಹನ ಸಂಪತ್ತನ್ನು ಪರರು ಕದಿಯಬಹುದು.ಸರ್ಕಾರ ವಶಪಡಿಸಿಕೊಳ್ಳಬಹುದು. ಸಹೋದರಾದಿ ವಾರಸುದಾರರಿಗೆ ಹಂಚಿಕೆಯಾಗಬಹುದು. ಅಪಹರಣ ಅತಿಕ್ರಮಗಳಿಗೆ ತುತ್ತಾಗಬಹುದು. ಬಳಸಿದಂತೆ ಸವಕಲು – ಖಾಲಿಯಾಗಬಹುದು.ಹೊರಲು ದೇಹಕ್ಕೆ,ಉಳಿಸಿಕೊಳ್ಳುವ ಕಸರತ್ತು ತಲೆಗೆ ಭಾರವಾಗಬಹುದು. ಆದರೆ ವಿದ್ಯಾಸಂಪತ್ತು ಈ ಯಾವುದಕ್ಕೂ ತುತ್ತಾಗುವುದಿಲ್ಲ ! ಬಳಸಿದಂತೆ ಬೆಳೆದು ಬೆಳಗುತ್ತದೆ ! ಮೆದುಳು ಬಲವಾಗಿರುವವರೆಗೂ ಅಚ್ಚಳಿಯದೇ ನಮ್ಮೊಂದಿಗಿದ್ದು…

ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್

ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್ ರಾಜಕುಮಾರ್ ಬಿ.ಸರೋಜಾದೇವಿ ಒಟ್ಟಾಗಿ ಅಭಿನಯಿಸಿದ ಮೊದಲ ಚಿತ್ರ ಹಾಗೂ ನಾಯಕ ನಾಯಕಿಯರು ಮೊದಲ ಬಾರಿಗೆ ಗ್ರಾಮ್ಯ ಭಾಷೆಯನ್ನು ಬಳಸಿದ ಕಪ್ಪು-ಬಿಳುಪು, ಸಾಮಾಜಿಕ ಚಿತ್ರ ಅಣ್ಣತಂಗಿ ೧೯೫೮ರಲ್ಲಿ ಗಿರಿಜಾ ಪ್ರೊಡಕ್ಷನ್ಸ್ ಲಾಂಛನದಡಿ ಬಿಡುಗಡೆಗೊಂಡಿತು. ಟಿ.ಎಸ್.ಕರಿಬಸಯ್ಯ ನಿರ್ಮಾಣ ಮಾಡಿದ ಚಿತ್ರವನ್ನು ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದರು. ಕಂದಗಲ್ ವೀರಣ್ಣ ಸಹಾಯಕ ನಿರ್ದೇಶಕರಾಗಿದ್ದರು. ರಾಜಕುಮಾರ್, ಈಶ್ವರಪ್ಪ, ಕೆ.ಎಸ್.ಅಶ್ವತ್, ಟಿ.ಎನ್.ಬಾಲಕೃಷ್ಣ, ನರಸಿಂಹರಾಜು, ಗಣಪತಿಭಟ್, ಆರ್.ಎನ್.ಮಾಗಡಿ, ವಾಸುದೇವ ಗಿರಿಮಾಜಿ, ಗುಗ್ಗು, ಬಿ.ಜಯಮ್ಮ, ಬಿ.ಸರೋಜಾದೇವಿ, ವಿದ್ಯಾವತಿ, ಲಕ್ಷ್ಮೀದೇವಿ ಅಭಿನಯಿಸಿದರು. ತಮಿಳಿನ…

ಜೋಡೆತ್ತು ಮಾಡೀತೆ ಕಸರತ್ತು?

ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಕಸರತ್ತನ್ನು ಜಾತ್ಯತೀತ ಜನತಾ ದಳ ಈಗಾಗಲೇ ಆರಂಭಿಸಿದೆ. ಚುನಾವಣೆಗೆ ಎರಡು ವರ್ಷ ಇರುವಾಗಲೇ ತಾನು ಸಾಗಲಿರುವ ದಾರಿಯ ಸೂಚನೆಯನ್ನು ಅದು ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ನೆಪದಲ್ಲಿ ಕೊಟ್ಟಿದೆ. ಈ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅದರ ತೀರ್ಮಾನ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಸ್ಲಿಂ ಮತಗಳನ್ನು ತನ್ನತ್ತ ಸೆಳೆಯುವ ತಂತ್ರವಾಗಿ ಜೆಡಿಎಸ್ ನಾಯಕತ್ವ ಈ ಹೆಜ್ಜೆ ಇಟ್ಟಿದೆ. ಜೋಡೆತ್ತು ಮಾಡೀತೆ ಕಸರತ್ತು? ಕರ್ನಾಟಕ ವಿಧಾನ ಸಭೆಗೆ…

ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ…

ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ… ಬಾಲ್ಯಕ್ಕೆ ಸಂಭ್ರಮದ ನೂರು ನೆನಪುಗಳಿರುವಂತೆಯೇ ಭಯದ ಹಲವು ಕರಿನೆರಳುಗಳೂ ಇರುತ್ತವೆ.ಮನೆ ಸುತ್ತಲ ದೆವ್ವದ ಮರ.ಓಣಿ ಆಚೆಗಿನ ಹಾಳು ಮನೆ,ಊರ ತುದಿಯ ಸ್ಮಶಾನದ ಗೋರಿಗಳು ಮಕ್ಕಳಿಗೆ ಭಯದ ತಾಣಗಳೂ ಹೌದು.ಇದಕ್ಕೆ ಕಾರಣ ಅಜ್ಜನೋ ಅಜ್ಜಿಯೋ ರಾತ್ರಿಗಳಲ್ಲಿ ಹೇಳುತಿದ್ದ ದೆವ್ವ ಬ್ರಹ್ಮ ರಾಕ್ಷಸರ ಹಲವು ಕಥೆಗಳೇ! ಕಟ್ಟೆಮೇಲೆ ಕುಳಿತ ರಾಟಿ ಮಾವ ಹೇಳುತಿದ್ದ ” ಅಮವಾಸೆ ದಿನ ಚಳ್ಳಿ ಮರದ ದುರ್ಗಮ್ಮನ ಬೇವಿನ ಮರದ ದೆವ್ವ ಜೋಕಾಲಿ ಆಡೋದನ್ನ ನೋಡಿ ಓಡುತ್ತಲೇ ಕಲ್ಲೆಸೆದಾಗ ಅದು…

ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

ಜೈನ ಜಿನಾಲಯಗಳು ದೇವಾಲಯಗಳಾದದ್ದು. . . ಹಿಂದಿನ ಸಂಚಿಕೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ದೇವಾಲಯಗಳಾಗಿ ಪರಿವರ್ತನೆ ಹೊಂದಿದ ಜಿನಾಲಯಗಳು ಕೊಪ್ಪಳವು ಪ್ರಾಚೀನ ಕಾಲದಲ್ಲಿ ಮಹಾಕೊಪಣಾಚಲವಾಗಿದ್ದು, ಇದು ಜೈನರ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿದ್ದಿತು. ಇಲ್ಲಿ ಅನೇಕ ಬಸದಿಗಳು ನೂರಾರು ಶಾಸನಗಳು ಕಂಡುಬಂದಿವೆ. ಇದಕ್ಕೆ ಪೂರಕವಾಗಿ ಸ್ಥಳೀಯರು ಕೊಪ್ಪಳದಲ್ಲಿ ೭೭೨ ಜೈನ ಬಸದಿಗಳಿದ್ದವೆಂಬುದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ಶಾಸನಗಳಲ್ಲಿ ಜಿನಬಸದಿಗಳ ಉಲ್ಲೇಖವಿದ್ದು ಅವುಗಳಲ್ಲಿ ಜಯಧೀರ ಜಿನಾಲಯ, ಪುಷ್ಪದಂತ ತೀರ್ಥಂಕರ ಸೌಧ, ಕುಶ ಜಿನಾಲಯ, ಸಾಂತಲದೇವಿ, ಚಂದ್ರನಾಥ, ನೇಮಿನಾಥ, ಶಾಂತಿನಾಥ, ಕಲ್ಯಾಣಕೀರ್ತಿ,…

1 56 57 58 59 60 113
Girl in a jacket